ಟಿ. ಆರ್. ಅನಂತರಾಮು | |
---|---|
ಜನನ | ೩, ಆಗಸ್ಟ್, ೧೯೪೯ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ತಾಳಗುಂದ |
ವೃತ್ತಿ | ಭೂವಿಜ್ಞಾನಿ, ಅಂಕಣಕಾರ, ವಿಜ್ಞಾನ ಲೇಖಕ & ಸಂಪಾದಕ |
ಭಾಷೆ | ಕನ್ನಡ |
ರಾಷ್ಟ್ರೀಯತೆ | ಭಾರತೀಯ |
ಪೌರತ್ವ | ಭಾರತೀಯ |
ವಿದ್ಯಾಭ್ಯಾಸ | ಭೂವಿಜ್ಞಾನದಲ್ಲಿ ಎಂ.ಎಸ್ಸಿ |
ವಿಷಯ | Arts |
ಪ್ರಮುಖ ಪ್ರಶಸ್ತಿ(ಗಳು) | ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಇತ್ಯಾದಿ |
ಸಹಿ | ಚಿತ್ರ:T.r anantharamu |
ತಾಳಗುಂದ ರಾಮಣ್ಣ ಅನಂತರಾಮು (ಟಿ. ಆರ್. ಅನಂತರಾಮು) ಒಬ್ಬ ಭೂವಿಜ್ಞಾನಿ, ಸಂಶೋಧಕ, ಪರಿಶೋಧಕ, ಜನಪ್ರಿಯ ಅಂಕಣಕಾರ, ವಿಜ್ಞಾನ ಲೇಖಕ ಮತ್ತು ಸಂಪಾದಕ. ಇವರು ಅನೇಕ ಪತ್ರಿಕೆಗಳಲ್ಲಿ, ತಮ್ಮ ಅತ್ಯಂತ ವಿಚಾರಪೂರ್ಣ ಲೇಖನಗಳನ್ನು ಮಂಡಿಸಿದ್ದಾರೆ. ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ವಿವಿಧ ಮಾಧ್ಯಮಗಳ ಮೂಲಕ ವಿಜ್ಞಾನವನ್ನು ಜನಪ್ರಿಯಗೊಳಿಸುವ ಕೆಲಸದಲ್ಲಿ ಹಲವು ದಶಕಗಳಿಂದ ತೊಡಗಿದ್ದಾರೆ. ಭೂವಿಜ್ಞಾನದಂತಹ ವಿಷಯದಲ್ಲಿಯ ಸಂಗತಿಗಳನ್ನು ಜನಸಾಮಾನ್ಯರಿಗೂ ಮನಮುಟ್ಟುವಂತೆ ತಲುಪಿಸಿ ಅವರಲ್ಲಿ ಆಸಕ್ತಿಯನ್ನುಂಟು ಮಾಡಿದ ಕನ್ನಡ-ವಿಜ್ಞಾನ ಲೇಖಕರಾಗಿದ್ದಾರೆ. ಅವರು ವಿಜ್ಞಾನ ಪ್ರಸಾರ, ಗ್ರಂಥ ರಚನೆ ಹಾಗೂ ಗ್ರಂಥ ಸಂಪಾದನೆಯಲ್ಲಿ ತೊಡಗಿಸಿಕೊಂಡಿರುತ್ತಾರೆ. 'ವಿಸ್ಮಯ ವಿಜ್ಞಾನ ಮಾಲಿಕೆ,' ಯಲ್ಲಿ ಕೃತಿಗಳ ಸಂಪಾದನೆ, ಸಾಕ್ಷ್ಯಚಿತ್ರಗಳಿಗೆ ಸಾಹಿತ್ಯ, 'ಕನ್ನಡ ವಿಶ್ವಕೋಶ', 'ಜ್ಞಾನ-ವಿಜ್ಞಾನಕೋಶ', 'ಕಿರಿಯರ ಕರ್ನಾಟಕ', 'ಕರ್ನಾಟಕ ಸಂಗಾತಿ', 'ಕರ್ನಾಟಕ ಕೋಶ' ಮುಂತಾದ, 'ಪರಾಮರ್ಶನ ಗ್ರಂಥ' ಗಳಿಗೆ ಅವರು ಬರೆದಿರುವ ಲೇಖನ ಮುಂತಾದವುಗಳು ಅನಂತರಾಮುರವರನ್ನು ಕನ್ನಡ ವಿಜ್ಞಾನ ಸಾಹಿತ್ಯದ ಒಬ್ಬ ವಿಶಿಷ್ಠ ವ್ಯಕ್ತಿಯನ್ನಾಗಿಸಿವೆ. ನವಕರ್ನಾಟಕ ಪ್ರಕಟನಾ ಸಂಸ್ಥೆಯ 'ಪದ ವಿವರಣಾ ಕೋಶ’ ಮತ್ತು ’ಜ್ಞಾನ -ವಿಜ್ಞಾನ ಕೋಶ’ಗಳಲ್ಲಿ ಸಹಾಯಕ ಸಂಪಾದಕರಾಗಿ ಮಾಡಿದ ಕೆಲಸ ಮಹತ್ವದ್ದೆಂದು ಗುರುತಿಸಲ್ಪಟ್ಟಿದೆ.
ಕನ್ನಡ ವಿಜ್ಞಾನ ಸಾಹಿತ್ಯ ಪ್ರಕಟಣೆಗಳು
ಒಟ್ಟು ಪ್ರಕಟಣೆಗಳು (ಮೇ 2021ವರೆಗೆ): ೧೧೬ ಕೃತಿಗಳು (ಸಂಪಾದಿತ ಕೃತಿಗಳೂ ಸೇರಿದಂತೆ) | |
---|---|
ಸ್ವಂತ ರಚನೆಗಳು | ೫೯ ಕೃತಿಗಳು |
ಅನುವಾದಿತ ಕೃತಿಗಳು | ೧೩ ಕೃತಿಗಳು |
ಸಂಪಾದಿತ ಕೃತಿಗಳು | ೩೩ ಕೃತಿಗಳು |
ಸಂಪಾದನೆ (ಇತರರೊಡನೆ) | ೧೦ ಕೃತಿಗಳು |
ಮಕ್ಕಳ ಸಾಹಿತ್ಯ (ಸಂಪಾದನೆ) | ೩ ಕೃತಿಗಳು |
ಸ್ವಂತ ರಚನೆಗಳು: | |||
---|---|---|---|
ಕ್ರಮ ಸಂಖ್ಯೆ | ಪ್ರಕಟಣೆಯ ವರ್ಷ | ಪುಸ್ತಕ | ಪ್ರಕಾಶನ |
೧ | ೧೯೭೮ | ಕನ್ನಡದಲ್ಲಿ ಭೂವಿಜ್ಞಾನ ಸಾಹಿತ್ಯ | ನಭಶ್ರೀ ಪ್ರಕಾಶನ, ಮೈಸೂರು-೫೭೦೦೦೯ |
೨ | ೧೯೭೯ | ಎಂ.ಎಸ್. ಕೃಷ್ಣನ್ (ಭೂವಿಜ್ಞಾನಿ) | ರಾಷ್ಟ್ತೋತ್ಥಾನ ಸಾಹಿತ್ಯ ಪರಿಷತ್ತು, ಬೆಂಗಳೂರು |
೩ | ೧೯೮೦ | ಭೂಮಿಯ ಅಂತರಾಳ | ಕನ್ನಡ ವಿಜ್ಞಾನ ಪರಿಷತ್ತು, ಬೆಂಗಳೂರು |
೪ | ೧೯೮೦ | ಬಿಸಿನೀರಿನ ಬುಗ್ಗೆಗಳು | ಕನ್ನಡ ಸಾಹಿತ್ಯ ಪರಿಷತ್ತು,ಬೆಂಗಳೂರು |
೫ | ೧೯೮೧ | ಬದಲಾಗುತ್ತಿರುವ ಭೂಮಿ | ಕನ್ನಡ ವಿಕಾಸ, ಮೈಸೂರು |
೬ | ೧೯೮೫ | ಹಿಮದ ಸಾಮ್ರಾಜ್ಯದಲ್ಲಿ | ರಚನಾ ವಾಚನ, ಬೆಂಗಳೂರು |
೭ | ೧೯೯೧ | ಭೂಮಿಯ ವಯಸ್ಸು(೪ನೇ ಮುದ್ರಣ) | ನವಕರ್ನಾಟಕ ಪ್ರಕಾಶನ, ಬೆಂಗಳೂರು |
೮ | ೧೯೯೧ | ಭೂಗರ್ಭ ಯಾತ್ರೆ | ನವಕರ್ನಾಟಕ ಪಬ್ಲಿಕೇಷನ್ಸ್, ಬೆಂಗಳೂರು |
೯ | ೧೯೯೨ | ಬೆಳೆಯುತ್ತಿರುವ ಹಿಮಾಲಯ | ನವಕರ್ನಾಟಕ ಪಬ್ಲಿಕೇಷನ್ಸ್, ಬೆಂಗಳೂರು |
೧೦ | ೧೯೯೨ | ರಾಜರ ಲೋಹ-ಲೋಹಗಳ ರಾಜ: ಚಿನ್ನ | ನವಕರ್ನಾಟಕ ಪಬ್ಲಿಕೇಷನ್ಸ್, ಬೆಂಗಳೂರು |
೧೧ | ೧೯೯೨ | ಜ್ವಾಲಾಮುಖಿ | ನವಕರ್ನಾಟಕ ಪಬ್ಲಿಕೇಷನ್ಸ್, ಬೆಂಗಳೂರು |
೧೨ | ೧೯೯೨ | ಪೆಡಂಭೂತಗಳು ಅಳಿದವೇಕೆ? | ನವಕರ್ನಾಟಕ ಪಬ್ಲಿಕೇಷನ್ಸ್, ಬೆಂಗಳೂರು |
೧೩ | ೧೯೯೨ | ವಿಶ್ವವಿಖ್ಯಾತ ನೈಸರ್ಗಿಕ ವಿಕೋಪಗಳು | ನವಕರ್ನಾಟಕ ಪಬ್ಲಿಕೇಷನ್ಸ್, ಬೆಂಗಳೂರು |
೧೪ | ೧೯೯೪ | ರತ್ನಗಳು | ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು |
೧೫ | ೧೯೯೪ | ಭೂಕಂಪನಗಳು | ಭಾರತೀಯ ಭೂವೈಜ್ಞಾನಿಕ ಸಂಘ, ಬೆಂಗಳೂರು |
೧೬ | ೧೯೯೪ | ಮಳೆ | ಕನ್ನಡ ವಿಶ್ವವಿದ್ಯಾಲಯ, ಹಂಪಿ |
೧೭ | ೧೯೯೫ | ಆಲ್ಫ್ರೆಡ್ ವೆಗೆನರ್ | ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು |
೧೮ | ೧೯೯೬ | ಪೆಡಂಭೂತಗಳು: ಮಕ್ಕಳ ಸಚಿತ್ರಕೋಶ | ನವಕರ್ನಾಟಕ ಪಬ್ಲಿಕೇಷನ್ಸ್ ಬೆಂಗಳೂರು |
೧೯ | ೧೯೯೭ | ಪ್ರಿ ಹಿಸ್ಟಾರಿಕ್ ಅನಿಮಲ್ಸ್ | ನವಕರ್ನಾಟಕ ಪಬ್ಲಿಕೇಷನ್ಸ್ ಬೆಂಗಳೂರು |
೨೦ | ೧೯೯೯ | ಭೂವಿಜ್ಞಾನ | ಸಪ್ನ ಬುಕ್ ಹೌಸ್, ಬೆಂಗಳೂರು |
೨೧ | ೧೯೯೯ | ಅಂಟಾರ್ಕ್ಟಿಕ ಸಚಿತ್ರ ವಿಜ್ಞಾನಕೋಶ | ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ನಿರ್ದೇಶನಾಲಯ, ಬೆಂಗಳೂರು |
೨೨ | ೧೯೯೯ | ಚೌಚೌ ಚಾಕಿ ವಿಜ್ಞಾನ ವಿನೋದ - | ಅಂಕಿತ ಪುಸ್ತಕ, ಬೆಂಗಳೂರು |
೨೩ | ೧೯೯೯ | ಕಾಲಗರ್ಭಕ್ಕೆ ಕೀಲಿಕೈ | ಬ್ಯಾಲದಕೆರೆ ಪ್ರಕಾಶನ, ನಾಗಮಂಗಲ ತಾ. ಮಂಡ್ಯ ಜಿಲ್ಲೆ |
೨೪ | ೧೯೯೯ | ಪ್ರಾಚೀನ ಭಾರತದಲ್ಲಿ ಲೋಹ ತಂತ್ರಜ್ಞಾನ | ಬ್ಯಾಲದಕೆರೆ ಪ್ರಕಾಶನ, ನಾಗಮಂಗಲ ತಾ. ಮಂಡ್ಯ ಜಿಲ್ಲೆ |
೨೫ | ೧೯೯೯ | ಪೆಟ್ರೋಲ್ | ಸಿ.ವಿ.ಜಿ. ಪಬ್ಲಿಕೇಷನ್ಸ್, ಬೆಂಗಳೂರು |
೨೬ | ೨೦೦೦ | ವರಾಹಮಿಹಿರ | ಸಪ್ನ ಬುಕ್ ಹೌಸ್, ಬೆಂಗಳೂರು |
೨೭ | ೨೦೦೦ | ಬಾನಂಗಳದ ಬತ್ತಳಿಕೆಯಲ್ಲಿ | ನೆಲಮನೆ ಪ್ರಕಾಶನ, ರಂಗನಾಥಪುರ, ಶ್ರೀರಂಗಪಟ್ಟಣ, ಮಂಡ್ಯಜಿಲ್ಲೆ, |
೨೮ | ೨೦೦೦ | ಬೀರಬಲ್ ಸಾಹ್ನಿ | ಸಪ್ನ ಬುಕ್ ಹೌಸ್, ಬೆಂಗಳೂರು |
೨೯ | ೨೦೦೨ | ಶಕ್ತಿಸಾರಥಿ ರಾಷ್ಟ್ರಪತಿ: ಅಬ್ದುಲ್ ಕಲಾಂ | ಸಪ್ನ ಬುಕ್ ಹೌಸ್, ಬೆಂಗಳೂರು |
೩೦ | ೨೦೦೨ | ಸೃಷ್ಟಿವಾದಿಗಳ ಮುಷ್ಟಿಯಲ್ಲಿ ಡಾರ್ವಿನ್ | ಸಿ.ವಿ.ಜಿ. ಪಬ್ಲಿಕೇಷನ್ಸ್ ಬೆಂಗಳೂರು |
೩೧ | ೨೦೦೩ | ಕರ್ತಾರನಿಗೊಂದು ಕಿವಿಮಾತು | ಸಿ.ವಿ.ಜಿ. ಪಬ್ಲಿಕೇಷನ್ಸ್ ಬೆಂಗಳೂರು |
೩೨ | ೨೦೦೫ | ಸರಸ್ವತೀ ನದಿ | ನವಕರ್ನಾಟಕ ಪಬ್ಲಿಕೇಷನ್ಸ್, ಬೆಂಗಳೂರ |
೩೩ | ೨೦೦೫ | ದಿವ್ಯನೇತ್ರ | ವರ್ಷಾ ಎಂಟರ್ಪ್ರೆöÊಸಸ್, ಬೆಂಗಳೂರು |
೩೪ | ೨೦೦೬ | ಅಮೂಲ್ಯರೆಡ್ಡಿ | ಸಪ್ನ ಬುಕ್ ಹೌಸ್, ಬೆಂಗಳೂರು |
೩೫ | ೨೦೦೭ | ದಣಿಯಿಲ್ಲದ ಧರಣಿ | ಸುಧಾ ಎಂಟರ್ಪ್ರೆöÊಸಸ್, ಬೆಂಗಳೂರು |
೩೬ | ೨೦೦೮ | ಪಶ್ಚಿಮಮುಖಿ : ಪ್ರವಾಸ ಕಥನ | ನವಕರ್ನಾಟಕ ಪಬ್ಲಿಕೇಷನ್ಸ್, ಬೆಂಗಳೂರು |
೩೭ | ೨೦೦೯ | ಲೋಹವಿದ್ಯಾಪಾರಂಗತ ಕೆ. ನಾಗೇಶರಾವ್ | ಹೊಯ್ಸಳ ಕರ್ನಾಟಕ ಸಂಘ (ರಿ.)ಬೆಂಗಳೂರು |
೩೮ | ೨೦೦೯ | ತಂತ್ರಪ್ರಪಂಚದಲ್ಲಿ ನ್ಯಾನೋ ಮಂತ್ರ | ವಸಂತ ಪಬ್ಲಿಕೇಷನ್ಸ್, ಬೆಂಗಳೂರು |
೩೯ | ೨೦೦೯ | ಸರ್. ಎಂ. ವಿಶ್ವೇಶ್ವರಯ್ಯ : ಸಾಧಕನ ಹೆಜ್ಜೆಗಳು | ನವಕರ್ನಾಟಕ ಪಬ್ಲಿಕೇಷನ್ಸ್, ಬೆಂಗಳೂರು |
೪೦ | ೨೦೦೯ | ಡಾರ್ವಿನ್ ಕಂಡ ಗಲಪಗಾಸ್ ದ್ವೀಪ | ಪ್ರಗತಿ ಗ್ರಾಫಿಕ್ಸ್, ಬೆಂಗಳೂರು |
೪೧ | ೨೦೦೯ | ದೂರದರ್ಶಕ ಕಂಡ ವಿಶ್ವರೂಪ | ಪ್ರಗತಿ ಗ್ರಾಫಿಕ್ಸ್, ಬೆಂಗಳೂರು |
೪೨ | ೨೦೧೦ | ಜೀವಿರಕ್ಷಕ ಓಜೋನ್ ಪದರ | ಸಪ್ನ ಬುಕ್ ಹೌಸ್, ಬೆಂಗಳುರು |
೪೩ | ೨೦೧೦ | ವಿಜ್ಞಾನ : ಪ್ರಶ್ನೆ ಪರಿಹಾರ | ವಸಂತ ಪಬ್ಲಿಕೇಷನ್ಸ್, ಬೆಂಗಳೂರು |
೪೪ | ೨೦೧೦ | ವಿಜ್ಞಾನ : ಸವಾಲು ಜವಾಬು | ವಸಂತ ಪಬ್ಲಿಕೇಷನ್ಸ್, ಬೆಂಗಳೂರು |
೪೫ | ೨೦೧೧ | ವಿಜ್ಞಾನ ಜಗತ್ತು - ೨೦೧೦ | ಶಂಕರ್ ಪ್ರತಿಷ್ಠಾನ, ಗುಲಬರ್ಗಾ |
೪೬ | ೨೦೧೧ | ಕೆರೆಗಳು ಬತ್ತಿದಾಗ ಜಲ ಸಮಸ್ಯೆ | ಉದಯಭಾನು ಉನ್ನತ ಅಧ್ಯಯನ ಕೇಂದ್ರ, ಬೆಂಗಳೂರು |
೪೭ | ೨೦೧೧ | ಮರ್ಫಿ ಲಾ | ಅಂಕಿತ ಪುಸ್ತಕ, ಬೆಂಗಳೂರು |
೪೮ | ೨೦೧೧ | ರಸವಿದ್ಯೆ | ಸಪ್ನಾ ಬುಕ್ ಹೌಸ್, ಬೆಂಗಳೂರು |
೪೯ | ೨೦೧೧ | ನಿಮ್ಮೊಳಗೊಬ್ಬ ಜೀನಿಯಸ್ | ಅರ್ಕಾವತಿ ಪ್ರಕಾಶನ, ಬೆಂಗಳೂರು |
೫೦ | ೨೦೧೨ | ದೈತ್ಯಪ್ರತಿಭೆಗಳ ಹೆಗಲ ಮೇಲೆ | ಸಪ್ನಾ ಬುಕ್ ಹೌಸ್, ಬೆಂಗಳೂರು |
೫೧ | ೨೦೧೩ | ಭೂಮಿಯ ಟೈಂ ಬಾಂಬ್ ಜ್ವಾಲಾಮುಖಿ | ನವಕರ್ನಾಟಕ ಪ್ರಕಾಶನ, ಬೆಂಗಳೂರು |
೫೨ | ೨೦೧೩ | ನಗ್ ನಗ್ತಾ ವಿಜ್ಞಾನ | ಭೂಮಿ ಬುಕ್ಸ್, ಬೆಂಗಳೂರು |
೫೩ | ೨೦೧೪ | ಭಾರತರತ್ನ ಸಿ.ಎನ್. ಆರ್. ರಾವ್–ರಸಾಯನ ವಿಜ್ಞಾನದ ಚಿಂತಾಮಣಿ | ಸಪ್ನ ಬುಕ್ ಹೌಸ್, ಬೆಂಗಳೂರು |
೫೪ | ೨೦೧೫ | ಖ್ಯಾತ ಭೂವಿಜ್ಞಾನಿ ಬಿ.ಪಿ. ರಾಧಾಕೃಷ್ಣ | ನವಕರ್ನಾಟಕ ಪ್ರಕಾಶನ, ಬೆಂಗಳೂರು |
೫೫ | ೨೦೧೫ | ಸಲೀಂ ಅಲಿ | ರಾಷ್ಟ್ರೋತ್ಥಾನ ಸಾಹಿತ್ಯ, ಬೆಂಗಳೂರು |
೫೬ | ೨೦೧೬ | ನೀಲಿ ತಿಮಿಂಗಿಲಗಳ ಹೃದಯ | ವಸಂತ ಪ್ರಕಾಶನ, ಬೆಂಗಳೂರು |
೫೭ | ೨೦೧೮ | ಮತ್ತೆ ಸುದ್ದಿಯಲ್ಲಿ ಬರ್ಮುಡಾ ಟ್ರೆöಯಾಂಗಲ್ | ಐ.ಬಿ.ಎಚ್. ಪ್ರಕಾಶನ, ಬೆಂಗಳೂರು |
೫೮ | ೨೦೧೮ | ಕರೆಯದೆ ಬಂದ ಅತಿಥಿಗಳು | ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರ್ಕಾರ, ಬೆಂಗಳೂರು |
೫೯ | ೨೦೧೯ | ಚಂದ್ರನ ಮೇಲೆ ಮತ್ತೊಮ್ಮೆ | ಸಪ್ನಾ ಬುಕ್ ಹೌಸ್, ಬೆಂಗಳೂರು |
ಇಂಗ್ಲೀಷಿನಿಂದ ಅನುವಾದಿತ ಕೃತಿಗಳು | ||||
---|---|---|---|---|
ಕ್ರಮ ಸಂಖ್ಯೆ | ಪ್ರಕಟಣೆಯ ವರ್ಷ | ಪುಸ್ತಕ | ಪ್ರಕಾಶನ | ಮೂಲ |
೧ | ೧೯೯೫ | ಸಂಪನ್ಮೂಲಗಳಿಗಾಗಿ ಸಮುದ್ರ ಮಥನ | ನವಕರ್ನಾಟಕ ಪಬ್ಲಿಕೇಷನ್ಸ್ | ಟಿ.ಕೆ.ಎಸ್. ಮೂರ್ತಿ, |
೨ | ೧೯೯೫ | ನಮ್ಮ ಜಲ ಸಂಪನ್ಮೂಲಗಳು | ನ್ಯಾಷನಲ್ ಬುಕ್ ಟ್ರಸ್ಟ್, ಇಂಡಿಯ, ನವದೆಹಲಿ | ರಾಮ |
೩ | ೨೦೦೦ | ವಿಸ್ಮಯಗಳ ನಾಡಿನಲ್ಲಿ | ನವಕರ್ನಾಟಕ ಪಬ್ಲಿಕೇಷನ್ಸ್ | ವಿ.ಜಿ. ಕುಲಕರ್ಣಿ. ವಿ.ಜಿ. ಗಂಭೀರ್, ಆರ್. ಎಮ್ ಭಾಗವತ್,. |
೪ | ೨೦೦೭ | ಸುನೀತಾ ವಿಲಿಯಮ್ಸ್ | ಸಪ್ನಾ ಬುಕ್ ಹೌಸ್, ಬೆಂಗಳೂರು | ಆರಾಧಿಕಾ ಶಮ್, ಕ್ಯಾ. ಎಸ್. ಶೇಷಾದ್ರಿ |
೫ | ೨೦೦೯ | ಅಂಟಾರ್ಕ್ಟಿಕ ಕಥೆ (ಇಲಾಖಾ ಪ್ರಕಟಣೆ) | ಗೋವ ಮತ್ತು ಭಾರತೀಯ ಭೂವೈಜ್ಞಾನಿಕ ಸಂಘ ಬೆಂಗಳೂರು | ರಾಷ್ಟ್ರೀಯ ಅಂಟಾರ್ಕ್ಟಿಕ ಮತ್ತು ಸಾಗರ ಸಂಶೋಧನಾ ಕೇಂದ್ರ, |
೬ | ೨೦೦೫ | ಪರಿಸರಸ್ಥಿತಿ ವರದಿ ಮತ್ತು ಕಾರ್ಯಯೋಜನೆ-೨೦೦೩ | ಅರಣ್ಯ ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆ, ಕರ್ನಾಟಕ ಸರ್ಕಾರ | |
೭ | ೨೦೦೯ | ವಾಯುಗುಣ ಬದಲಾವಣೆ | ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು | |
೮ | ೨೦೧೧ | ರಾಕೆಟ್ : ಇತಿಹಾಸ, ವಿಜ್ಞಾನ - ತಂತ್ರಜ್ಞಾನ | ಪ್ರಿಸಂ ಬುಕ್ ಹೌಸ್, ಬೆಂಗಳೂರು | |
೯ | ೨೦೧೧ | ಸೌರಶಕ್ತಿಯ ಕಥೆ | ನವಕರ್ನಾಟಕ ಪ್ರಕಾಶನ, ಬೆಂಗಳೂರು | |
೧೦ | ೨೦೧೩ | ಅಸಾಧಾರಣ ಪರಿಶೋಧಕರು | ಸಪ್ನ ಬುಕ್ ಹೌಸ್, ಬೆಂಗಳೂರು | |
೧೧ | ೨೦೧೪ | ಮಕ್ಕಳ ಸಚಿತ್ರ ಜ್ವಾನ ಭಂಡಾರ : ಭೂಮಿ | ಸಪ್ನ ಬುಕ್ ಹೌಸ್, ಬೆಂಗಳೂರು | |
೧೨ | ೨೦೧೪ | ಮಕ್ಕಳ ಸಚಿತ್ರ ಜ್ವಾನ ಭಂಡಾರ : ವಿಶ್ವ | ಸಪ್ನ ಬುಕ್ ಹೌಸ್, ಬೆಂಗಳೂರು | |
೧೩ | ೨೦೧೬ | ಅಬ್ದುಲ್ ಕಲಾಂ ಅವರು ನಿಮಗೆ ಗೊತ್ತೆ? | ಸಪ್ನ ಬುಕ್ ಹೌಸ್, ಬೆಂಗಳೂರು |
ಸಂಪಾದಿತ ಕೃತಿಗಳು | ||||
---|---|---|---|---|
ಕ್ರಮ ಸಂಖ್ಯೆ | ಪ್ರಕಟಣೆಯ ವರ್ಷ | ಪುಸ್ತಕ | ಪ್ರಕಾಶನ | |
೧ | ೧೯೯೭ | ಕಾವೇರಿ ಹರಿದು ಬಂದು ದಾರಿ | ದಿಕ್ಸೂಚಿ ಪ್ರಕಾಶನ, ಬಸವೇಶ್ವರನಗರ, ಬೆಂಗಳೂರು | |
೨ | ೨೦೦೦ | ತ್ರಿವಿಕ್ರಮ ಹೆಜ್ಜೆಗಳು | ಸಿ.ವಿ.ಜಿ. ಪಬ್ಲಿಕೇಷನ್ಸ್, ಬೆಂಗಳೂರು. | |
೩ | ೨೦೦೨ | ವಿಸ್ಮಯ ವಿಜ್ಞಾನ ಮಾಲಿಕೆ (೨೮ ಪುಸ್ತಕಗಳ ಪ್ರಧಾನ ಸಂಪಾದಕ) | ಸುಭಾಷ್ ಪಬ್ಲಿಷಿಂಗ್ ಹೌಸ್, ಬೆಂಗಳೂರು | |
೪ | ೨೦೧೨ | ಇತಿಹಾಸದಲ್ಲಿ ವಿಜ್ಞಾನ (೪ ಸಂಪುಟಗಳು) (ಜೆ.ಡಿ. ಬರ್ನಾಲ್ ಅವರ `ಸೈನ್ಸ್ ಇನ್ ಹಿಸ್ಟರಿ’) | ಕುವೆಂಪು ಭಾಷಾ ಭಾರತಿ, ಬೆಂಗಳೂರು | |
೫ | ೨೦೧೫ | ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆ (ಸಂಪುಟ ೧೪ – ವಿಜ್ಞಾನ ತಂತ್ರಜ್ಞಾನ ಸಂಪುಟ) | ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು | |
೬ | ೨೦೧೭ | ವಿಜ್ಞಾನದ ಹೆದ್ದಾರಿಯಲ್ಲಿ ಮಹಾತಿರುವುಗಳು | ನವಕರ್ನಾಟಕ ಪ್ರಕಾಶನ, ಬೆಂಗಳೂರು | |
೭ | ೨೦೨೩ | ಕರ್ನಾಟಕದಲ್ಲಿ ಸ್ಮಾರ್ತ ಬ್ರಾಹ್ಮಣರು | ಹರಿವು ಬುಕ್ಸ್, ಬೆಂಗಳೂರು |
ಇತರರೊಡನೆ ಸಂಪಾದಿತ ಕೃತಿಗಳು | ||||
---|---|---|---|---|
ಕ್ರಮ ಸಂಖ್ಯೆ | ಪ್ರಕಟಣೆಯ ವರ್ಷ | ಪುಸ್ತಕ | ಪ್ರಕಾಶನ | ಟಿಪ್ಪಣಿ |
೧ | ೧೯೯೮ | ನವಕರ್ನಾಟಕ ಜ್ಞಾನ ವಿಜ್ಞಾನ ಕೋಶ (೪ ಸಂಪುಟಗಳು - ಸಹ ಸಂಪಾದಕ) | ನವಕರ್ನಾಟಕ ಪ್ರಕಾಶನ, ಬೆಂಗಳೂರು | |
೨ | ೨೦೧೧ | ವಿಜ್ಞಾನ ತಂತ್ರಜ್ಞಾನ ಪದಸಂಪದ | ನವಕರ್ನಾಟಕ ಪ್ರಕಾಶನ, ಬೆಂಗಳೂರು | |
೩ | ೨೦೧೨ | ಕನ್ನಡದಲ್ಲಿ ವಿಜ್ಞಾನ ಸಂವಹನೆ | ಉದಯಭಾನು ಕಲಾಸಂಘ, ಬೆಂಗಳೂರು | |
೪ | ೨೦೧೨ | ವಿಜ್ಞಾನ (ಬೆಳ್ಳಾವೆ ವೆಂಕಟನಾರಣಪ್ಪ ನಂಗಪುರಂ ವೆಂಕಟೇಶ ಐಯ್ಯಂಗಾರ್) | ಉದಯಭಾನು ಕಲಾಸಂಘ, ಬೆಂಗಳೂರು | |
೫ | ೨೦೧೩ | ವಿಜ್ಞಾನ ತಂತ್ರಜ್ಞಾನ ನಿಘಂಟು | ನವಕರ್ನಾಟಕ ಪ್ರಕಾಶನ, ಬೆಂಗಳೂರು | |
೬ | ೨೦೧೩ | ಕಿರಿಯರ ಸಚಿತ್ರ ವಿಶ್ವಕೋಶ | ವಸಂತ ಪ್ರಕಾಶನ, ಬೆಂಗಳೂರು | |
೭ | ೨೦೧೩ | ವಿಜ್ಞಾನ ಯಾನ | ಸಮೃದ್ಧ ಪ್ರಕಾಶನ, ಬೆಂಗಳೂರು | |
೮ | ೨೦೧೮ | ಮೀನಾಕ್ಷಿಯ ಸೌಗಂಧ (ಬಿ.ಜಿ.ಎಲ್. ಸ್ವಾಮಿ ಅವರ ಬಿಡಿ ಲೇಖನಗಳು) | ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು | |
೯ | ೨೦೨೧ | ನಮ್ಮ ದೇಹದ ವಿಜ್ಞಾನ | ನವಕರ್ನಾಟಕ ಪ್ರಕಾಶನ, ಬೆಂಗಳೂರು | ಇನ್ನೊಬ್ಬ ಸಂಪಾದಕರು: ನಾ. ಸೋಮೇಶ್ವರ |
೧೦ | ೨೦೨೩ | ಖಗೋಳ ದರ್ಶನ | ನವಕರ್ನಾಟಕ ಪ್ರಕಾಶನ, ಬೆಂಗಳೂರು | ಇನ್ನೊಬ್ಬ ಸಂಪಾದಕರು: ಬಿ. ಎಸ್. ಶೈಲಜಾ |
ಮಕ್ಕಳ ಸಾಹಿತ್ಯಕ್ಕೆ ಕೊಡುಗೆ (ಪ್ರಧಾನ ಸಂಪಾದಕ) | |||
---|---|---|---|
ಕ್ರಮ ಸಂಖ್ಯೆ | ಪ್ರಕಟಣೆಯ ವರ್ಷ | ಪುಸ್ತಕ | ಪ್ರಕಾಶನ |
೧ | ೨೦೧೩ | ಕಿರಿಯರ ಸಚಿತ್ರ ವಿಶ್ವಕೋಶ | ವಸಂತ ಪ್ರಕಾಶನ, ಬೆಂಗಳೂರು |
೨ | ೨೦೧೩ | ಮಕ್ಕಳ ಜ್ಞಾನಕೋಶ ೨ ಸಂಪುಟ | ವಸಂತ ಪ್ರಕಾಶನ, ಬೆಂಗಳೂರು |
೩ | ೨೦೧೬ | ನಮ್ಮ ನಿಸರ್ಗ-೬೧ ಸರಳ ಪ್ರಯೋಗಗಳು | ವಸಂತ ಪ್ರಕಾಶನ, ಬೆಂಗಳೂರು |
ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣ ಸಂಸ್ಥೆಯಲ್ಲಿ ಹಿರಿಯ ವೈಜ್ಞಾನಿಯಾಗಿ ಟಿ. ಆರ್. ಅನಂತರಾಮುರ ಕೊಡುಗೆ ಬಹಳ ಮಹತ್ವದ್ದಾಗಿದೆ.
ಡಾ.ಟಿ.ಆರ್.ಅನಂತರಾಮುರವರು, ವಿಜ್ಞಾನ ಪ್ರತಿಷ್ಠಾನವನ್ನು ೧೨ ಜನವರಿ ೨೦೨೧ ರಂದು ಔಪಚಾರಿಕವಾಗಿ ನೋಂದಾಯಿಸಿದರು. [೬]ಶಿಕ್ಷಣ ಕ್ಷೇತ್ರದಲ್ಲಿ ವಿಶೇಷವಾಗಿ ವಿಜ್ಞಾನ ಮತ್ತು ಗಣಿತ ವಿಷಯಗಳಲ್ಲಿ ಜಾಗೃತಿ ಮೂಡಿಸುವ ಮೂಲಕ ಸಮಾಜದ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ಉದ್ದೇಶದಿಂದ ೭೦ ರ ದಶಕದ ಆರಂಭದಿಂದಲೂ ವಿಜ್ಞಾನವನ್ನು ಜನಪ್ರಿಯಗೊಳಿಸುವತ್ತ ಅವರ ಕೊಡುಗೆಯು ಈ ಲಾಭೋದ್ದೇಶವಿಲ್ಲದ ಉಪಕ್ರಮಕ್ಕೆ ಪ್ರೇರಕ ಶಕ್ತಿಯಾಗಿದೆ. ಅವರ ವಿಚಾರಧಾರೆಗಳನ್ನು ಈ ಟ್ರಸ್ಟ್ ನ ಮೂಲಕ ಕರ್ನಾಟಕದ ಮೂಲೆ ಮೂಲೆಯನ್ನು ತಲುಪಲು ಯೋಜನೆಗಳನ್ನು ಹೆಚ್ಚಿಸುವ ಆಶಯವನ್ನು ಹೊಂದಲಾಗಿದೆ.