ಅಂಬೆ, ಅಂಬಿಕೆ, ಅಂಬಾಲಿಕೆ
ಅಂಬೆ, ಅಂಬಿಕೆ, ಅಂಬಾಲಿಕೆ
ಮಹಾಭಾರತದ ಕಥೆಯ ಪ್ರಕಾರ ಕಾಶೀರಾಜನ ಮಕ್ಕಳು. ಅಂಬೆ ಕಾಶೀರಾಜನ ಮೊದಲನೆ ಮಗಳು. ತಂದೆ ಇವರಿಗೆ ಸ್ವಯಂವರವನ್ನು ಏರ್ಪಡಿಸಿದಾಗ ಭೀಷ್ಮ ಈ ಮೂವರನ್ನೂ ಅಪಹರಿಸಿದ. ಅಂಬೆ ತಾನು ಸಾಲ್ವರಾಜನನ್ನು ಪ್ರೀತಿಸಿದುದಾಗಿ ಹೇಳಲು ಭೀಷ್ಮ ಅವಳನ್ನು ಅವನ ಬಳಿಗೆ ಕಳುಹಿಸಿದ. ಆದರೆ ಭೀಷ್ಮ ಅಪಹರಿಸಿದ ಅವಳನ್ನು ಸಾಲ್ವ ಸ್ವೀಕರಿಸಲಿಲ್ಲ. ಅವಳು ಹಿಂತಿರುಗಿ ಬಂದು ತನ್ನನ್ನು ಭೀಷ್ಮನೇ ಮದುವೆಯಾಗಬೇಕೆಂದು ಹಠ ಹಿಡಿದಳು. ಭೀಷ್ಮ ಒಪ್ಪಲಿಲ್ಲ. ಅನಂತರ ಶಿಖಂಡಿಯಾಗಿ ಜನ್ಮತಾಳಿ ಭೀಷ್ಮನ ಮೇಲೆ ಸೇಡು ತೀರಿಸಿಕೊಂಡಳು.ಭೀಷ್ಮನು ಅಂಬಾಲಿಕೆ ಮತ್ತು ಅಂಬಿಕೆಯರನ್ನು ತನ್ನ ಮಲತಮ್ಮನಾದ ವಿಚಿತ್ರ ವೀರ್ಯನಿಗೆ ಮದುವೆ ಮಾಡಿದ. ಸಂತಾನವಿಲ್ಲದೆ ಅವನು ತೀರಿಕೊಳ್ಳಲು, ಇವರು ಅತ್ತೆ ಸತ್ಯವತಿಯ ಆಜ್ಞೆಗೆ ವಿಧೇಯರಾಗಿ ನಿಯೋಗ ಪದ್ಧತಿಯಂತೆ ವ್ಯಾಸರಿಂದ ಅಂಬಾಲಿಕೆ ಪಾಂಡು ರಾಜನನ್ನೂ ಅಂಬಿಕೆ ಧೃತರಾಷ್ಟ್ರನನ್ನೂ ಪಡೆದರು. ಕೊನೆಯಲ್ಲಿ ಇವರಿಬ್ಬರೂ ಅತ್ತೆಯೊಡನೆ ತಪಸ್ಸಿಗಾಗಿ ಕಾಡಿಗೆ ಹೋದರು.
🔥 Top keywords: ಮುಖ್ಯ ಪುಟಕುವೆಂಪುವಿಶೇಷ:Searchಸಹಾಯ:ಲಿಪ್ಯಂತರಕನ್ನಡಗಾದೆಪಿ.ಲಂಕೇಶ್ಬಸವೇಶ್ವರದ.ರಾ.ಬೇಂದ್ರೆಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಕನ್ನಡ ಅಕ್ಷರಮಾಲೆಶಿವರಾಮ ಕಾರಂತಭಾರತದ ಸಂವಿಧಾನಕನ್ನಡ ಸಂಧಿಕನ್ನಡ ಗುಣಿತಾಕ್ಷರಗಳುಕರ್ನಾಟಕದ ಏಕೀಕರಣಬಿ. ಆರ್. ಅಂಬೇಡ್ಕರ್ಗೌತಮ ಬುದ್ಧಮಹಾತ್ಮ ಗಾಂಧಿಕರ್ನಾಟಕರಾಘವಾಂಕಕರ್ನಾಟಕದ ಜಿಲ್ಲೆಗಳುಕರ್ನಾಟಕದ ಇತಿಹಾಸವಚನ ಸಾಹಿತ್ಯಪುರಂದರದಾಸರಾಷ್ಟ್ರೀಯ ಸೇವಾ ಯೋಜನೆಮಾಸ್ತಿ ವೆಂಕಟೇಶ ಅಯ್ಯಂಗಾರ್ಹೊಯ್ಸಳಭಾರತೀಯ ಮೂಲಭೂತ ಹಕ್ಕುಗಳುಅಕ್ಕಮಹಾದೇವಿಪೂರ್ಣಚಂದ್ರ ತೇಜಸ್ವಿರಾಮಾಯಣಪಂಪಕನ್ನಡ ಸಾಹಿತ್ಯಅರ್ಜುನಭಾರತೀಯ ಸಂಸ್ಕೃತಿಜಾನಪದಸಮಾಸಜನಪದ ಕಲೆಗಳು