ಚಂದ್ರಕಲಾ ನಂದಾವರ
ಬರಹಗಾರ್ತಿ,ಕವಯತ್ರಿ,ಸ್ರೀವಾದೀ ಚಿಂತಕಿಯಾಗಿ ಚಂದ್ರಕಲಾನಂದಾವರ ಕನ್ನಡ ಸಾಹಿತ್ಯದಲ್ಲಿ ಚಿರಪರಿಚಿತರು.
ಜನನ ಜೀವನ
- ೧೯೫೦ ನವೆಂಬರ್ ೨೧ರಂದು ಮಂಗಳೂರು ತಾಲ್ಲೂಕಿನ ಕೊಂಡಾಣದಲ್ಲಿ ಇವರು ಜನಿಸಿದರು.ತಂದೆ ವಾಮನ ವಿದ್ವಾನ್. ತಾಯಿ ಸುಂದರಿ.
- ಮಂಗಳೂರಿನ ಸರ್ಕಾರಿ ಕಾಲೇಜಿನಲ್ಲಿಪದವಿ ಮತ್ತು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಎಂ.ಎ. ಪದವಿಯನ್ನು ಪಡೆದರು. [೧]
- ತಮ್ಮ ೨೭ನೇ ವಯಸ್ಸಿನಲ್ಲಿ ವಾಮನ ನಂದಾವರ ಇವರನ್ನು ಮದುವೆಯಾದರು. ಹೇಮಶ್ರೀ ಮತ್ತು ಸುಧಾಂಶು ಎನ್ನುವ ಇಬ್ಬರು ಮಕ್ಕಳಿದ್ದಾರೆ.
- ದಕ್ಷಿಣ ಕನ್ನಡ ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷೆಯಾಗಿ ಅವರು ಕೆಲಸ ಮಾಡಿದ್ದಾರೆ.
- ದಕ್ಷಿಣ ಕನ್ನಡ ಜಿಲ್ಲಾ ಶಿಕ್ಷಕರ ಕ್ರೆಡಿತ್ ಕೋಆಪರೇಟಿವ್ ಸೊಸೈಟಿಯ ನಿರ್ದೇಶಕಿಯಾಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ದಕ್ಷಿಣ ಕನ್ನಡ ಜಿಲ್ಲಾ ಜಾಗೃತಿ ಸಮಿತಿ ಸದಸ್ಯೆಯಾಗಿ ಅವರು ಸೇವೆ ಸಲ್ಲಿಸುತ್ತಿದ್ದಾರೆ.
- ಮಂಗಳೂರು ವಿಶ್ವವಿದ್ಯಾನಿಲಯದ ಕನಕದಾಸ ಅಧ್ಯಯನ ಪೀಠದ, ದಕ್ಷಿಣ ಕನ್ನಡ ಜಿಲ್ಲಾ ನಗರ ಕೇಂದ್ರ ಗ್ರಂಥಾಲಯ ಸಲಹಾ ಸಮಿತಿಯ ಸದಸ್ಯತ್ವದ ಗೌರವ ಇವರಿಗೆ ಸಂದಿದೆ.
ಕೃತಿಗಳು
ಸಾಹಿತ್ಯ ಕೃತಿ
- ಪ್ರಾಧ್ಯಾಪಕ ಎಂ. ಮರಿಯಪ್ಪ ಭಟ್ಟರು
ಕವನ ಸಂಕಲನ
- ನಾವು ಪ್ರಾಮಾಣಿಕರೇ
- ಮತ್ತೆ ಚಿತ್ತಾರ ಬರೆ ಗೆಳತಿ
ಕಥಾ ಸಂಕಲನ
- ಮುಖಾಮುಖಿ
- ಭೂಮಿ ದುಂಡಗಿದೆ
- ಮನೆಲೆಕ್ಕ
ಕಾದಾಂಬರಿ
- ಯಾರಿಗೆ ಯಾರುಂಟು?
ಪ್ರಬಂಧ ಸಂಕಲನ
- ಹೊಸ್ತಿಲಿಂದೀಚೆಗೆ
ವಿಮರ್ಶಾ ಕೃತಿ
- ಕಯ್ಯಾರರ ಕಾವ್ಯ
ಪ್ರಶಸ್ತಿಗಳು
- ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ [೨]
- ರಾಜ್ಯ ಮಟ್ಟದ ಪ್ರಶಸ್ತಿ [೩]
- ಕೌದೆಆಂಡಾಲ್ ಪ್ರಶಸ್ತಿ [೪]
- ಕನ್ನಡ ಸಾಹಿತ್ಯ ಪರಿಷತ್ತು ಪ್ರಶಸ್ತಿ [೫]
- ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ[೬]
ಉಲ್ಲೇಖ
🔥 Top keywords: ಮುಖ್ಯ ಪುಟಕುವೆಂಪುವಿಶೇಷ:Searchಸಹಾಯ:ಲಿಪ್ಯಂತರಕನ್ನಡಗಾದೆಪಿ.ಲಂಕೇಶ್ಬಸವೇಶ್ವರದ.ರಾ.ಬೇಂದ್ರೆಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಕನ್ನಡ ಅಕ್ಷರಮಾಲೆಶಿವರಾಮ ಕಾರಂತಭಾರತದ ಸಂವಿಧಾನಕನ್ನಡ ಸಂಧಿಕನ್ನಡ ಗುಣಿತಾಕ್ಷರಗಳುಕರ್ನಾಟಕದ ಏಕೀಕರಣಬಿ. ಆರ್. ಅಂಬೇಡ್ಕರ್ಗೌತಮ ಬುದ್ಧಮಹಾತ್ಮ ಗಾಂಧಿಕರ್ನಾಟಕರಾಘವಾಂಕಕರ್ನಾಟಕದ ಜಿಲ್ಲೆಗಳುಕರ್ನಾಟಕದ ಇತಿಹಾಸವಚನ ಸಾಹಿತ್ಯಪುರಂದರದಾಸರಾಷ್ಟ್ರೀಯ ಸೇವಾ ಯೋಜನೆಮಾಸ್ತಿ ವೆಂಕಟೇಶ ಅಯ್ಯಂಗಾರ್ಹೊಯ್ಸಳಭಾರತೀಯ ಮೂಲಭೂತ ಹಕ್ಕುಗಳುಅಕ್ಕಮಹಾದೇವಿಪೂರ್ಣಚಂದ್ರ ತೇಜಸ್ವಿರಾಮಾಯಣಪಂಪಕನ್ನಡ ಸಾಹಿತ್ಯಅರ್ಜುನಭಾರತೀಯ ಸಂಸ್ಕೃತಿಜಾನಪದಸಮಾಸಜನಪದ ಕಲೆಗಳು