ಚಂದ್ರಕಲಾ ನಂದಾವರ

ಬರಹಗಾರ್ತಿ,ಕವಯತ್ರಿ,ಸ್ರೀವಾದೀ ಚಿಂತಕಿಯಾಗಿ ಚಂದ್ರಕಲಾನಂದಾವರ ಕನ್ನಡ ಸಾಹಿತ್ಯದಲ್ಲಿ ಚಿರಪರಿಚಿತರು.

ಜನನ ಜೀವನ

  • ೧೯೫೦ ನವೆಂಬರ್ ೨೧ರಂದು ಮಂಗಳೂರು ತಾಲ್ಲೂಕಿನ ಕೊಂಡಾಣದಲ್ಲಿ ಇವರು ಜನಿಸಿದರು.ತಂದೆ ವಾಮನ ವಿದ್ವಾನ್. ತಾಯಿ ಸುಂದರಿ.
  • ಮಂಗಳೂರಿನ ಸರ್ಕಾರಿ ಕಾಲೇಜಿನಲ್ಲಿಪದವಿ ಮತ್ತು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಎಂ.ಎ. ಪದವಿಯನ್ನು ಪಡೆದರು. [೧]
  • ತಮ್ಮ ೨೭ನೇ ವಯಸ್ಸಿನಲ್ಲಿ ವಾಮನ ನಂದಾವರ ಇವರನ್ನು ಮದುವೆಯಾದರು. ಹೇಮಶ್ರೀ ಮತ್ತು ಸುಧಾಂಶು ಎನ್ನುವ ಇಬ್ಬರು ಮಕ್ಕಳಿದ್ದಾರೆ.
  • ದಕ್ಷಿಣ ಕನ್ನಡ ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷೆಯಾಗಿ ಅವರು ಕೆಲಸ ಮಾಡಿದ್ದಾರೆ.
  • ದಕ್ಷಿಣ ಕನ್ನಡ ಜಿಲ್ಲಾ ಶಿಕ್ಷಕರ ಕ್ರೆಡಿತ್ ಕೋಆಪರೇಟಿವ್ ಸೊಸೈಟಿಯ ನಿರ್ದೇಶಕಿಯಾಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ದಕ್ಷಿಣ ಕನ್ನಡ ಜಿಲ್ಲಾ ಜಾಗೃತಿ ಸಮಿತಿ ಸದಸ್ಯೆಯಾಗಿ ಅವರು ಸೇವೆ ಸಲ್ಲಿಸುತ್ತಿದ್ದಾರೆ.
  • ಮಂಗಳೂರು ವಿಶ್ವವಿದ್ಯಾನಿಲಯದ ಕನಕದಾಸ ಅಧ್ಯಯನ ಪೀಠದ, ದಕ್ಷಿಣ ಕನ್ನಡ ಜಿಲ್ಲಾ ನಗರ ಕೇಂದ್ರ ಗ್ರಂಥಾಲಯ ಸಲಹಾ ಸಮಿತಿಯ ಸದಸ್ಯತ್ವದ ಗೌರವ ಇವರಿಗೆ ಸಂದಿದೆ.

ಕೃತಿಗಳು

ಸಾಹಿತ್ಯ ಕೃತಿ

  • ಪ್ರಾಧ್ಯಾಪಕ ಎಂ. ಮರಿಯಪ್ಪ ಭಟ್ಟರು

ಕವನ ಸಂಕಲನ

  • ನಾವು ಪ್ರಾಮಾಣಿಕರೇ
  • ಮತ್ತೆ ಚಿತ್ತಾರ ಬರೆ ಗೆಳತಿ

ಕಥಾ ಸಂಕಲನ

  • ಮುಖಾಮುಖಿ
  • ಭೂಮಿ ದುಂಡಗಿದೆ
  • ಮನೆಲೆಕ್ಕ

ಕಾದಾಂಬರಿ

  • ಯಾರಿಗೆ ಯಾರುಂಟು?

ಪ್ರಬಂಧ ಸಂಕಲನ

  • ಹೊಸ್ತಿಲಿಂದೀಚೆಗೆ

ವಿಮರ್ಶಾ ಕೃತಿ

  • ಕಯ್ಯಾರರ ಕಾವ್ಯ

ಪ್ರಶಸ್ತಿಗಳು

ಉಲ್ಲೇಖ