ಟಿ. ಆರ್. ಅನಂತರಾಮು

(ಟಿ. ಅರ್. ಅನಂತರಾಮು ಇಂದ ಪುನರ್ನಿರ್ದೇಶಿತ)

ತಾಳಗುಂದ ರಾಮಣ್ಣ ಅನಂತರಾಮು (ಟಿ. ಆರ್. ಅನಂತರಾಮು) ಒಬ್ಬ ಭೂವಿಜ್ಞಾನಿ, ಸಂಶೋಧಕ, ಪರಿಶೋಧಕ, ಜನಪ್ರಿಯ ಅಂಕಣಕಾರ, ವಿಜ್ಞಾನ ಲೇಖಕ ಮತ್ತು ಸಂಪಾದಕ. ಇವರು ಅನೇಕ ಪತ್ರಿಕೆಗಳಲ್ಲಿ, ತಮ್ಮ ಅತ್ಯಂತ ವಿಚಾರಪೂರ್ಣ ಲೇಖನಗಳನ್ನು ಮಂಡಿಸಿದ್ದಾರೆ. ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ವಿವಿಧ ಮಾಧ್ಯಮಗಳ ಮೂಲಕ ವಿಜ್ಞಾನವನ್ನು ಜನಪ್ರಿಯಗೊಳಿಸುವ ಕೆಲಸದಲ್ಲಿ ಹಲವು ದಶಕಗಳಿಂದ ತೊಡಗಿದ್ದಾರೆ. ಭೂವಿಜ್ಞಾನದಂತಹ ವಿಷಯದಲ್ಲಿಯ ಸಂಗತಿಗಳನ್ನು ಜನಸಾಮಾನ್ಯರಿಗೂ ಮನಮುಟ್ಟುವಂತೆ ತಲುಪಿಸಿ ಅವರಲ್ಲಿ ಆಸಕ್ತಿಯನ್ನುಂಟು ಮಾಡಿದ ಕನ್ನಡ-ವಿಜ್ಞಾನ ಲೇಖಕರಾಗಿದ್ದಾರೆ. ಅವರು ವಿಜ್ಞಾನ ಪ್ರಸಾರ, ಗ್ರಂಥ ರಚನೆ ಹಾಗೂ ಗ್ರಂಥ ಸಂಪಾದನೆಯಲ್ಲಿ ತೊಡಗಿಸಿಕೊಂಡಿರುತ್ತಾರೆ. 'ವಿಸ್ಮಯ ವಿಜ್ಞಾನ ಮಾಲಿಕೆ,' ಯಲ್ಲಿ ಕೃತಿಗಳ ಸಂಪಾದನೆ, ಸಾಕ್ಷ್ಯಚಿತ್ರಗಳಿಗೆ ಸಾಹಿತ್ಯ, 'ಕನ್ನಡ ವಿಶ್ವಕೋಶ', 'ಜ್ಞಾನ-ವಿಜ್ಞಾನಕೋಶ', 'ಕಿರಿಯರ ಕರ್ನಾಟಕ', 'ಕರ್ನಾಟಕ ಸಂಗಾತಿ', 'ಕರ್ನಾಟಕ ಕೋಶ' ಮುಂತಾದ, 'ಪರಾಮರ್ಶನ ಗ್ರಂಥ' ಗಳಿಗೆ ಅವರು ಬರೆದಿರುವ ಲೇಖನ ಮುಂತಾದವುಗಳು ಅನಂತರಾಮುರವರನ್ನು ಕನ್ನಡ ವಿಜ್ಞಾನ ಸಾಹಿತ್ಯದ ಒಬ್ಬ ವಿಶಿಷ್ಠ ವ್ಯಕ್ತಿಯನ್ನಾಗಿಸಿವೆ. ನವಕರ್ನಾಟಕ ಪ್ರಕಟನಾ ಸಂಸ್ಥೆಯ 'ಪದ ವಿವರಣಾ ಕೋಶ’ ಮತ್ತು ’ಜ್ಞಾನ -ವಿಜ್ಞಾನ ಕೋಶ’ಗಳಲ್ಲಿ ಸಹಾಯಕ ಸಂಪಾದಕರಾಗಿ ಮಾಡಿದ ಕೆಲಸ ಮಹತ್ವದ್ದೆಂದು ಗುರುತಿಸಲ್ಪಟ್ಟಿದೆ.

ಟಿ. ಆರ್. ಅನಂತರಾಮು
ಜನನ೩, ಆಗಸ್ಟ್, ೧೯೪೯
ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ತಾಳಗುಂದ
ವೃತ್ತಿಭೂವಿಜ್ಞಾನಿ, ಅಂಕಣಕಾರ, ವಿಜ್ಞಾನ ಲೇಖಕ & ಸಂಪಾದಕ
ಭಾಷೆಕನ್ನಡ
ರಾಷ್ಟ್ರೀಯತೆಭಾರತೀಯ
ಪೌರತ್ವಭಾರತೀಯ
ವಿದ್ಯಾಭ್ಯಾಸಭೂವಿಜ್ಞಾನದಲ್ಲಿ ಎಂ.ಎಸ್ಸಿ
ವಿಷಯArts
ಪ್ರಮುಖ ಪ್ರಶಸ್ತಿ(ಗಳು)ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಇತ್ಯಾದಿ

ಸಹಿಚಿತ್ರ:T.r anantharamu

ಪ್ರಾಥಮಿಕ ಜೀವನ

  • 'ಅನಂತರಾಮು' ಅವರು, ೦೩ ಆಗಸ್ಟ್ ೧೯೪೯ರಂದು, ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ, ತಾಳಗುಂದವೆಂಬ ಊರಿನಲ್ಲಿ ಜನಿಸಿದರು.
  • ತಂದೆ ಶ್ರೀ ರಾಮಣ್ಣನವರು. ಸ್ವತಃ ಓದಿನಲ್ಲಿ ಅತ್ಯಂತ ಆಸಕ್ತರಾದ ತಾಯಿ ವೆಂಕಟಲಕ್ಷ್ಮಮ್ಮನವರು ಅನಂತರಾಮುರಿಗೆ ಬಾಲ್ಯದ ಆದರ್ಶವ್ಯಕ್ತಿಯಾಗಿದ್ದಾರೆ.
  • ಸರ್ಕಾರಿ ಮಾಧ್ಯಮಿಕ ಶಾಲೆ ಹಾಗೂ ಮುನಿಸಿಪಲ್ ಹೈಸ್ಕೂಲ್ (೧೯೬೩-೧೯೬೬), ಶಿರಾದಲ್ಲಿ ಶಾಲಾಶಿಕ್ಷಣ ಮುಗಿಸಿದರು.
  • ತುಮಕೂರು ಸರ್ಕಾರಿ ಕಾಲೇಜಿನಿಂದ (೧೯೬೬-೭೦) ಪದವಿ ಪಡೆದರು.
  • ೧೯೭೨ರಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಎಸ್ಸಿ (ಭೂವಿಜ್ಞಾನ) ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದರು.

ವೃತ್ತಿ-ಜೀವನ

  • ೧೯೭೨ ರಿಂದ ೧೯೭೬ ರ ವರೆಗೆ ಬೆಂಗಳೂರಿನ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಭೂವಿಜ್ಞಾನದ ಅಧ್ಯಾಪಕ.
  • ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ರೀಜನಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕೆಲಸ.
  • ೧೯೭೭ ರಿಂದ ೨೦೦೮ವರೆಗೆ ಬೆಂಗಳೂರಿನ ಭಾರತೀಯ ಭೂ-ವೈಜ್ಞಾನ ಸರ್ವೇಕ್ಷಣ ಸಂಸ್ಥೆಯಲ್ಲಿ ಭೂ-ವಿಜ್ಞಾನಿ.
  • ನಾಡಿನಾದ್ಯಂತ ಚಿನ್ನದ ನಿಕ್ಷೇಪಕ್ಕಾಗಿ ವ್ಯಾಪಕ ಶೋಧನೆ. ದುರ್ಗಮ ಕಾಡುಗಳ ಸಮೀಕ್ಷೆಗಳನ್ನು ನಡೆಸಿದರು.
  • ಡಿಸೆಂಬರ್ ೨೦೦೮ರಲ್ಲಿ ವೃತ್ತಿಯಿಂದ ನಿವೃತ್ತರಾದರು.


ಸಾಹಿತ್ಯಕ ಚಟುವಟಿಕೆಗಳು: ಜನಪ್ರಿಯ ವಿಜ್ಞಾನ ಕ್ಷೇತ್ರ

  • ಕಳೆದ ೪೦ ವರ್ಷಗಳಿಂದ ವಿಜ್ಞಾನವನ್ನು ಜನಪ್ರಿಯಗೊಳಿಸಲು ನಾಡಿನ ವಿವಿಧ ಪತ್ರಿಕೆಗಳಲ್ಲಿ ೮೦೦ಕ್ಕೂ ಹೆಚ್ಚಿನ ಲೇಖನಗಳ ಪ್ರಕಟಣೆ.
  • ಬೆಂಗಳೂರು ಆಕಾಶವಾಣಿಯಲ್ಲಿ ೧೯೭೨ರಿಂದಲೂ ವಿಜ್ಞಾನದ ಮುನ್ನಡೆಯೂ ಸೇರಿದಂತೆ ಭಾಷಣ, ಸಂದರ್ಶನ.
  • ಬಹುತೇಕ ಕರ್ನಾಟಕದ ಎಲ್ಲ ಟಿ.ವಿ. ಚಾನೆಲ್‌ಗಳು ಇವರ ವೈಜ್ಞಾನಿಕ ಕಾರ್ಯಕ್ರಮಗಳನ್ನು ಪ್ರಸಾರಮಾಡಿವೆ.
    • ಉದಯ ಟಿ.ವಿ’ಯು ರೂಪಿಸಿದ ’ಪರಿಚಯ ಕಾರ್ಯಕ್ರಮ’ ದಲ್ಲಿ ಸಂದರ್ಶನ
    • 'ಈ ಟೀವಿ'ಯಲ್ಲಿ ಪ್ರಸಾರವಾದ ಶಿವರಾಮ ಕಾರಂತರ ವಿಜ್ಞಾನ ಸಾಹಿತ್ಯ ನಿರ್ಮಾಣ ಕುರಿತು ಸಂದರ್ಶನಗಳು.
    • ಚಂದನ ವಾಹಿನಿ’ಯಲ್ಲಿ ವಿಜ್ಞಾನ ಕಾರ್ಯಕ್ರಮಗಳು-೧೦
  • ಪ್ರಧಾನ ಸಂಪಾದಕ : ಸುಭಾಷ್ ಪಬ್ಲಿಕೇಷನ್ಸ್ `ವಿಸ್ಮಯ ವಿಜ್ಞಾನ ಮಾಲಿಕೆ` - ೨೭ ಕೃತಿಗಳ ಸಂಪಾದನೆ
  • ನವಕರ್ನಾಟಕ ಸಂಸ್ಥೆಯ ಪ್ರಕಟಣೆ `ಜ್ಞಾನ-ವಿಜ್ಞಾನ ಕೋಶ`ದ ಸಹಾಯಕ ಸಂಪಾದಕ
  • ನವಕರ್ನಾಟಕ ಸಂಸ್ಥೆಯ `ವಿಜ್ಞಾನ ತಂತ್ರಜ್ಞಾನ ಪದ ಸಂಪದದ ಪರಿಷ್ಕತ ಆವೃತ್ತಿಯ (೨೦೧೧) ಸಂಪಾದಕರಲ್ಲೊಬ್ಬರು.
  • `ನವಕರ್ನಾಟಕ ವಿಜ್ಞಾನ ತಂತ್ರಜ್ಞಾನ ನಿಘಂಟು’ ಸಂಪಾದಕರು
  • ಕನ್ನಡ ವಿಶ್ವವಿದ್ಯಾಲಯ, ಹಂಪಿ ಪ್ರಕಟಿಸುತ್ತಿರುವ ` ವಿಜ್ಞಾನ ಸಂಗಾತಿ` ಮಾಸಪತ್ರಿಕೆಯ ಸಂಪಾದಕತ್ವ - ೨೦೦೨-೨೦೦೩
  • ವಿಜ್ಞಾನ ತಂತ್ರಜ್ಞಾನ ಅಕಾಡೆಮಿಯ `ವಿಜ್ಞಾನ ಲೋಕ ‘ ಪತ್ರಿಕೆಯ ಸಂಪಾದಕ ಮಂಡಳಿಯ ಸದಸ್ಯ.
  • ಕನ್ನಡ ವಿಶ್ವವಿದ್ಯಾಲಯ, ಹಂಪಿಯ ಪ್ರಕಟಣೆ ` ಕಿರಿಯರ ಕರ್ನಾಟಕ` ಮತ್ತು `ಕರ್ನಾಟಕ ಕೋಶ`ಕ್ಕೆ ಲೇಖನಗಳು.
  • ನ್ಯಾಷನಲ್ ಬುಕ್ ಟ್ರಸ್ಟ್, ಇಂಡಿಯ, ನವದೆಹಲಿ ಮತ್ತು ಸಿ.ಎಸ್.ಐ.ಆರ್. ಸಂಸ್ಥೆಗೆ ವಿಜ್ಞಾನ ಪುಸ್ತಕಗಳ ಅನುವಾದಕ
  • ಡಿ.ಎಸ್.ಇ.ಆರ್.ಟಿ. ಸಂಸ್ಥೆಗೆ ಶಿಲೆಗಳನ್ನು ಕುರಿತಂತೆ ಎರಡು ಸಾಕ್ಷ್ಯಚಿತ್ರ ಹಾಗೂ ಭೂವಿಜ್ಞಾನ ಕುರಿತಂತೆ ನಾಲ್ಕು ಚಿತ್ರಪಟ (ಚಾರ್ಟ್) ತಯಾರಿಕೆ.
  • ತುಮಕೂರು ವಿಜ್ಞಾನ ಕೇಂದ್ರಕ್ಕೆ ಪರಿಸರ ಕುರಿತಂತೆ ೨೨ ಚಿತ್ರಪಟಗಳ ಅನುವಾದ.
  • ಮೈಸೂರು ವಿಶ್ವವಿದ್ಯಾಲಯ ಪ್ರಕಟಿಸಿರುವ `ಕನ್ನಡ ವಿಶ್ವಕೋಶ` ಕ್ಕೆ ಭೂವಿಜ್ಞಾನ ಕುರಿತಂತೆ ಲೇಖನಗಳು.
  • ಕರ್ನಾಟಕ ರಾಜ್ಯ ವಿಜ್ಞಾನ ತಂತ್ರಜ್ಞಾನ ಅಕಾಡೆಮಿಯ ಮುಖಪತ್ರಿಕೆ `ವಿಜ್ಞಾನ ಲೋಕ’ ದ ಸಂಪಾದಕ ವರ್ಗದ ಸದಸ್ಯ
  • ಕುವೆಂಪು ಭಾ಼ಷಾ ಭಾರತಿ ಪ್ರಾಧಿಕಾರ ಪ್ರಕಟಿಸಿರುವ ಜೆ.ಡಿ. ಬರ್ನಾಲ್‌ರವರ ` ಇತಿಹಾಸದಲ್ಲಿ ವಿಜ್ಞಾನ’ ಅನುವಾದ ಕೃತಿಗಳ (ನಾಲ್ಕು ಸಂಪುಟಗಳು) ಸಂಪಾದಕರು. (೨೦೧೨)
  • ಪ್ರಜಾವಾಣಿ ಪತ್ರಿಕೆಯಲ್ಲಿ `ವಿಸ್ಮಯ ಜಗತ್ತು’ ಕಿರು ಅಂಕಣಕ್ಕೆ ೨೦೧೨-೧೩ (೭೭೦ ಕಿರು ಮಾಹಿತಿ)
  • ಕಸ್ತೂರಿ ಮಾಸಪತ್ರಿಕೆಯಲ್ಲಿ ಅಂಕಣ ‘ಜ್ಞಾನ ವಿಜ್ಞಾನ’ ಮಾರ್ಚ್, ೨೦೧೪ ರಿಂದ ಇಂದಿಗೂ ಮುಂದುವರಿದಿದೆ.
  • ಕನ್ನಡ ಸಾಹಿತ್ಯ ಪರಿಷತ್ತು ಯೋಜಿಸಿರುವ `ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆ’ಯ ಭಾಗವಾಗಿ `ವಿಜ್ಞಾನ-ತಂತ್ರಜ್ಞಾನ ಸಂಪುಟದ ಸಂಪಾದಕ, ೨೦೧೫
  • `ಡಿಜಿಟಲ್ ಕನ್ನಡ’ ಇ-ಪತ್ರಿಕೆಗೆ ವಿಜ್ಞಾನದ ಅಂಕಣ `ಸೈನ್ಸ್ ಸ್ಕೋಪ್’– ೨೦೧೬ರ ಫೆಬ್ರವರಿಯಿಂದ.
  • ಉದಯಭಾನು ಕಲಾಸಂಘ ಪ್ರಕಟಿಸಿರುವ `ಬೆಂಗಳೂರು ದರ್ಶನ’ಕ್ಕೆ ಮೂರು ಲೇಖನಗಳು ೨೦೧೬ (ಪರಿಷ್ಕೃತ ಆವೃತ್ತಿ).
  • ಕನ್ನಡ ಅಭಿವೃದ್ಧಿ ಪ್ರಾಧಿಕಾರ ಪ್ರಕಟಿಸಿರುವ ೨೦೦೩ ’ಕರ್ನಾಟಕ ಸಂಗಾತಿ’, ಪರಾಮರ್ಶನ ಗ್ರಂಥಕ್ಕೆ ಕರ್ನಾಟಕ ಭೂ ವಿಜ್ಞಾನ’ ಕುರಿತಂತೆ ಆಕರ ಲೇಖನ.
  • ’ಹಂಪಿ ಕನ್ನಡ ವಿಶ್ವವಿದ್ಯಾಲಯ’ ಪ್ರಕಟಣೆ ’ಕಿರಿಯರ ಕರ್ನಾಟಕ’ ಮತ್ತು ’ಕರ್ನಾಟಕ ಕೋಶ’ ಕ್ಕೆ ಲೇಖನಗಳು.
  • ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಪ್ರಕಟಣೆ, ’ಬಾಲ ವಿಜ್ಞಾನ ಮಾಸಪತ್ರಿಕೆ’ ಯ ಸಂಪಾದಕ ಮಂಡಳಿಯ ಸದಸ್ಯ.
  • ಮೈಸೂರಿನಲ್ಲಿರುವ, ಭಾರತೀಯ ಭಾಷಾ ವಿಜ್ಞಾನ ಕೇಂದ್ರ '(CICL)' ಕುರಿತು ನಿರ್ಮಿಸುತ್ತಿರುವ ಕರ್ನಾಟಕ ಕುರಿತ ’ಭಾಷಾ ಮಂದಾಕಿನಿ’ ಸರಣಿಗೆ, ಕರ್ನಾಟಕ ಭೂ-ವೈಜ್ಞಾನಿಕ ಅದ್ಭುತಗಳನ್ನು ಕುರಿತಂತೆ ೨ ಕಂತುಗಳ ಸಾಕ್ಷ್ಯಚಿತ್ರಗಳಿಗೆ ಭೂ-ವೈಜ್ಞಾನಿಕ ಸಾಹಿತ್ಯ ರಚನೆ.
  • ’ಬೆಂಗಳೂರಿನ ಕನ್ನಡ ಗಣಕ ಪರಿಷತ್ತು’ ಅಭಿವೃದ್ಧಿಪಡಿಸಿದ ಮೈಸೂರು ವಿಶ್ವವಿದ್ಯಾಲಯದ ಕನ್ನಡ ವಿಶ್ವ ಕೋಶದ ಸೀಡಿ ('CD') ಆವೃತ್ತಿಯ ವಿಜ್ಞಾನ ವಿಭಾಗಕ್ಕೆ ಪ್ರಧಾನ ಸಂಪಾದಕ.
  • ’ಅಂತಾರಾಷ್ಟ್ರೀಯ ಭೂಗ್ರಹ ವರ್ಷಾಚರಣೆ’ ಅಂಗವಾಗಿ ೮-೯ ರಲ್ಲಿ ರಾಜ್ಯದಾದ್ಯಂತ ’ಉಪನ್ಯಾಸ’.
  • ’ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ವೈಜ್ಞಾನಿಕ ಕಾರ್ಯಕ್ರಮಗಳಲ್ಲಿ ಮಾರ್ಗದರ್ಶನ ಮತ್ತು ಉಪನ್ಯಾಸ.

ಟಿ ಆರ್. ಅನಂತರಾಮುರವರ ಪ್ರಕಟಿತ ಕೃತಿಗಳು

ಕನ್ನಡ ವಿಜ್ಞಾನ ಸಾಹಿತ್ಯ ಪ್ರಕಟಣೆಗಳು

ಒಟ್ಟು ಪ್ರಕಟಣೆಗಳು (ಮೇ 2021ವರೆಗೆ): ೧೧೬ ಕೃತಿಗಳು (ಸಂಪಾದಿತ ಕೃತಿಗಳೂ ಸೇರಿದಂತೆ)
ಸ್ವಂತ ರಚನೆಗಳು೫೯ ಕೃತಿಗಳು
ಅನುವಾದಿತ ಕೃತಿಗಳು೧೩ ಕೃತಿಗಳು
ಸಂಪಾದಿತ ಕೃತಿಗಳು೩೩ ಕೃತಿಗಳು
ಸಂಪಾದನೆ (ಇತರರೊಡನೆ)೧೦ ಕೃತಿಗಳು
ಮಕ್ಕಳ ಸಾಹಿತ್ಯ (ಸಂಪಾದನೆ)೩ ಕೃತಿಗಳು

ಸ್ವಂತ ರಚನೆಗಳು

ಸ್ವಂತ ರಚನೆಗಳು:
ಕ್ರಮ ಸಂಖ್ಯೆಪ್ರಕಟಣೆಯ ವರ್ಷಪುಸ್ತಕಪ್ರಕಾಶನ
೧೯೭೮ಕನ್ನಡದಲ್ಲಿ ಭೂವಿಜ್ಞಾನ ಸಾಹಿತ್ಯನಭಶ್ರೀ ಪ್ರಕಾಶನ, ಮೈಸೂರು-೫೭೦೦೦೯
೧೯೭೯ಎಂ.ಎಸ್. ಕೃಷ್ಣನ್ (ಭೂವಿಜ್ಞಾನಿ)ರಾಷ್ಟ್ತೋತ್ಥಾನ ಸಾಹಿತ್ಯ ಪರಿಷತ್ತು, ಬೆಂಗಳೂರು
೧೯೮೦ಭೂಮಿಯ ಅಂತರಾಳಕನ್ನಡ ವಿಜ್ಞಾನ ಪರಿಷತ್ತು, ಬೆಂಗಳೂರು
೧೯೮೦ಬಿಸಿನೀರಿನ ಬುಗ್ಗೆಗಳುಕನ್ನಡ ಸಾಹಿತ್ಯ ಪರಿಷತ್ತು,ಬೆಂಗಳೂರು
೧೯೮೧ಬದಲಾಗುತ್ತಿರುವ ಭೂಮಿಕನ್ನಡ ವಿಕಾಸ, ಮೈಸೂರು
೧೯೮೫ಹಿಮದ ಸಾಮ್ರಾಜ್ಯದಲ್ಲಿರಚನಾ ವಾಚನ, ಬೆಂಗಳೂರು
೧೯೯೧ಭೂಮಿಯ ವಯಸ್ಸು(೪ನೇ ಮುದ್ರಣ)ನವಕರ್ನಾಟಕ ಪ್ರಕಾಶನ, ಬೆಂಗಳೂರು
೧೯೯೧ಭೂಗರ್ಭ ಯಾತ್ರೆನವಕರ್ನಾಟಕ ಪಬ್ಲಿಕೇಷನ್ಸ್, ಬೆಂಗಳೂರು
೧೯೯೨ಬೆಳೆಯುತ್ತಿರುವ ಹಿಮಾಲಯನವಕರ್ನಾಟಕ ಪಬ್ಲಿಕೇಷನ್ಸ್, ಬೆಂಗಳೂರು
೧೦೧೯೯೨ರಾಜರ ಲೋಹ-ಲೋಹಗಳ ರಾಜ: ಚಿನ್ನನವಕರ್ನಾಟಕ ಪಬ್ಲಿಕೇಷನ್ಸ್, ಬೆಂಗಳೂರು
೧೧೧೯೯೨ಜ್ವಾಲಾಮುಖಿನವಕರ್ನಾಟಕ ಪಬ್ಲಿಕೇಷನ್ಸ್, ಬೆಂಗಳೂರು
೧೨೧೯೯೨ಪೆಡಂಭೂತಗಳು ಅಳಿದವೇಕೆ?ನವಕರ್ನಾಟಕ ಪಬ್ಲಿಕೇಷನ್ಸ್, ಬೆಂಗಳೂರು
೧೩೧೯೯೨ವಿಶ್ವವಿಖ್ಯಾತ ನೈಸರ್ಗಿಕ ವಿಕೋಪಗಳುನವಕರ್ನಾಟಕ ಪಬ್ಲಿಕೇಷನ್ಸ್, ಬೆಂಗಳೂರು
೧೪೧೯೯೪ರತ್ನಗಳುಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು
೧೫೧೯೯೪ಭೂಕಂಪನಗಳುಭಾರತೀಯ ಭೂವೈಜ್ಞಾನಿಕ ಸಂಘ, ಬೆಂಗಳೂರು
೧೬೧೯೯೪ಮಳೆಕನ್ನಡ ವಿಶ್ವವಿದ್ಯಾಲಯ, ಹಂಪಿ
೧೭೧೯೯೫ಆಲ್ಫ್ರೆಡ್ ವೆಗೆನರ್ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು
೧೮೧೯೯೬ಪೆಡಂಭೂತಗಳು: ಮಕ್ಕಳ ಸಚಿತ್ರಕೋಶನವಕರ್ನಾಟಕ ಪಬ್ಲಿಕೇಷನ್ಸ್ ಬೆಂಗಳೂರು
೧೯೧೯೯೭ಪ್ರಿ ಹಿಸ್ಟಾರಿಕ್ ಅನಿಮಲ್ಸ್ನವಕರ್ನಾಟಕ ಪಬ್ಲಿಕೇಷನ್ಸ್ ಬೆಂಗಳೂರು
೨೦೧೯೯೯ಭೂವಿಜ್ಞಾನಸಪ್ನ ಬುಕ್ ಹೌಸ್, ಬೆಂಗಳೂರು
೨೧೧೯೯೯ಅಂಟಾರ್ಕ್ಟಿಕ ಸಚಿತ್ರ ವಿಜ್ಞಾನಕೋಶರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ನಿರ್ದೇಶನಾಲಯ, ಬೆಂಗಳೂರು
೨೨೧೯೯೯ಚೌಚೌ ಚಾಕಿ ವಿಜ್ಞಾನ ವಿನೋದ -ಅಂಕಿತ ಪುಸ್ತಕ, ಬೆಂಗಳೂರು
೨೩೧೯೯೯ಕಾಲಗರ್ಭಕ್ಕೆ ಕೀಲಿಕೈಬ್ಯಾಲದಕೆರೆ ಪ್ರಕಾಶನ, ನಾಗಮಂಗಲ ತಾ. ಮಂಡ್ಯ ಜಿಲ್ಲೆ
೨೪೧೯೯೯ಪ್ರಾಚೀನ ಭಾರತದಲ್ಲಿ ಲೋಹ ತಂತ್ರಜ್ಞಾನಬ್ಯಾಲದಕೆರೆ ಪ್ರಕಾಶನ, ನಾಗಮಂಗಲ ತಾ. ಮಂಡ್ಯ ಜಿಲ್ಲೆ
೨೫೧೯೯೯ಪೆಟ್ರೋಲ್ಸಿ.ವಿ.ಜಿ. ಪಬ್ಲಿಕೇಷನ್ಸ್, ಬೆಂಗಳೂರು
೨೬೨೦೦೦ವರಾಹಮಿಹಿರಸಪ್ನ ಬುಕ್ ಹೌಸ್, ಬೆಂಗಳೂರು
೨೭೨೦೦೦ಬಾನಂಗಳದ ಬತ್ತಳಿಕೆಯಲ್ಲಿನೆಲಮನೆ ಪ್ರಕಾಶನ, ರಂಗನಾಥಪುರ, ಶ್ರೀರಂಗಪಟ್ಟಣ, ಮಂಡ್ಯಜಿಲ್ಲೆ,
೨೮೨೦೦೦ಬೀರಬಲ್ ಸಾಹ್ನಿಸಪ್ನ ಬುಕ್ ಹೌಸ್, ಬೆಂಗಳೂರು
೨೯೨೦೦೨ಶಕ್ತಿಸಾರಥಿ ರಾಷ್ಟ್ರಪತಿ: ಅಬ್ದುಲ್ ಕಲಾಂಸಪ್ನ ಬುಕ್ ಹೌಸ್, ಬೆಂಗಳೂರು
೩೦೨೦೦೨ಸೃಷ್ಟಿವಾದಿಗಳ ಮುಷ್ಟಿಯಲ್ಲಿ ಡಾರ್ವಿನ್ಸಿ.ವಿ.ಜಿ. ಪಬ್ಲಿಕೇಷನ್ಸ್ ಬೆಂಗಳೂರು
೩೧೨೦೦೩ಕರ್ತಾರನಿಗೊಂದು ಕಿವಿಮಾತುಸಿ.ವಿ.ಜಿ. ಪಬ್ಲಿಕೇಷನ್ಸ್ ಬೆಂಗಳೂರು
೩೨೨೦೦೫ಸರಸ್ವತೀ ನದಿನವಕರ್ನಾಟಕ ಪಬ್ಲಿಕೇಷನ್ಸ್, ಬೆಂಗಳೂರ
೩೩೨೦೦೫ದಿವ್ಯನೇತ್ರವರ್ಷಾ ಎಂಟರ್‌ಪ್ರೆöÊಸಸ್, ಬೆಂಗಳೂರು
೩೪೨೦೦೬ಅಮೂಲ್ಯರೆಡ್ಡಿಸಪ್ನ ಬುಕ್ ಹೌಸ್, ಬೆಂಗಳೂರು
೩೫೨೦೦೭ದಣಿಯಿಲ್ಲದ ಧರಣಿಸುಧಾ ಎಂಟರ್‌ಪ್ರೆöÊಸಸ್, ಬೆಂಗಳೂರು
೩೬೨೦೦೮ಪಶ್ಚಿಮಮುಖಿ : ಪ್ರವಾಸ ಕಥನನವಕರ್ನಾಟಕ ಪಬ್ಲಿಕೇಷನ್ಸ್, ಬೆಂಗಳೂರು
೩೭೨೦೦೯ಲೋಹವಿದ್ಯಾಪಾರಂಗತ ಕೆ. ನಾಗೇಶರಾವ್ಹೊಯ್ಸಳ ಕರ್ನಾಟಕ ಸಂಘ (ರಿ.)ಬೆಂಗಳೂರು
೩೮೨೦೦೯ತಂತ್ರಪ್ರಪಂಚದಲ್ಲಿ ನ್ಯಾನೋ ಮಂತ್ರವಸಂತ ಪಬ್ಲಿಕೇಷನ್ಸ್, ಬೆಂಗಳೂರು
೩೯೨೦೦೯ಸರ್. ಎಂ. ವಿಶ್ವೇಶ್ವರಯ್ಯ : ಸಾಧಕನ ಹೆಜ್ಜೆಗಳುನವಕರ್ನಾಟಕ ಪಬ್ಲಿಕೇಷನ್ಸ್, ಬೆಂಗಳೂರು
೪೦೨೦೦೯ಡಾರ್ವಿನ್ ಕಂಡ ಗಲಪಗಾಸ್ ದ್ವೀಪಪ್ರಗತಿ ಗ್ರಾಫಿಕ್ಸ್, ಬೆಂಗಳೂರು
೪೧೨೦೦೯ದೂರದರ್ಶಕ ಕಂಡ ವಿಶ್ವರೂಪಪ್ರಗತಿ ಗ್ರಾಫಿಕ್ಸ್, ಬೆಂಗಳೂರು
೪೨೨೦೧೦ಜೀವಿರಕ್ಷಕ ಓಜೋನ್ ಪದರಸಪ್ನ ಬುಕ್ ಹೌಸ್, ಬೆಂಗಳುರು
೪೩೨೦೧೦ವಿಜ್ಞಾನ : ಪ್ರಶ್ನೆ ಪರಿಹಾರವಸಂತ ಪಬ್ಲಿಕೇಷನ್ಸ್, ಬೆಂಗಳೂರು
೪೪೨೦೧೦ವಿಜ್ಞಾನ : ಸವಾಲು ಜವಾಬುವಸಂತ ಪಬ್ಲಿಕೇಷನ್ಸ್, ಬೆಂಗಳೂರು
೪೫೨೦೧೧ವಿಜ್ಞಾನ ಜಗತ್ತು - ೨೦೧೦ಶಂಕರ್ ಪ್ರತಿಷ್ಠಾನ, ಗುಲಬರ್ಗಾ
೪೬೨೦೧೧ಕೆರೆಗಳು ಬತ್ತಿದಾಗ ಜಲ ಸಮಸ್ಯೆಉದಯಭಾನು ಉನ್ನತ ಅಧ್ಯಯನ ಕೇಂದ್ರ, ಬೆಂಗಳೂರು
೪೭೨೦೧೧ಮರ್ಫಿ ಲಾಅಂಕಿತ ಪುಸ್ತಕ, ಬೆಂಗಳೂರು
೪೮೨೦೧೧ರಸವಿದ್ಯೆಸಪ್ನಾ ಬುಕ್ ಹೌಸ್, ಬೆಂಗಳೂರು
೪೯೨೦೧೧ನಿಮ್ಮೊಳಗೊಬ್ಬ ಜೀನಿಯಸ್ಅರ್ಕಾವತಿ ಪ್ರಕಾಶನ, ಬೆಂಗಳೂರು
೫೦೨೦೧೨ದೈತ್ಯಪ್ರತಿಭೆಗಳ ಹೆಗಲ ಮೇಲೆಸಪ್ನಾ ಬುಕ್ ಹೌಸ್, ಬೆಂಗಳೂರು
೫೧೨೦೧೩ಭೂಮಿಯ ಟೈಂ ಬಾಂಬ್ ಜ್ವಾಲಾಮುಖಿನವಕರ್ನಾಟಕ ಪ್ರಕಾಶನ, ಬೆಂಗಳೂರು
೫೨೨೦೧೩ನಗ್ ನಗ್ತಾ ವಿಜ್ಞಾನಭೂಮಿ ಬುಕ್ಸ್, ಬೆಂಗಳೂರು
೫೩೨೦೧೪ಭಾರತರತ್ನ ಸಿ.ಎನ್. ಆರ್. ರಾವ್–ರಸಾಯನ ವಿಜ್ಞಾನದ ಚಿಂತಾಮಣಿಸಪ್ನ ಬುಕ್ ಹೌಸ್, ಬೆಂಗಳೂರು
೫೪೨೦೧೫ಖ್ಯಾತ ಭೂವಿಜ್ಞಾನಿ ಬಿ.ಪಿ. ರಾಧಾಕೃಷ್ಣನವಕರ್ನಾಟಕ ಪ್ರಕಾಶನ, ಬೆಂಗಳೂರು
೫೫೨೦೧೫ಸಲೀಂ ಅಲಿರಾಷ್ಟ್ರೋತ್ಥಾನ ಸಾಹಿತ್ಯ, ಬೆಂಗಳೂರು
೫೬೨೦೧೬ನೀಲಿ ತಿಮಿಂಗಿಲಗಳ ಹೃದಯವಸಂತ ಪ್ರಕಾಶನ, ಬೆಂಗಳೂರು
೫೭೨೦೧೮ಮತ್ತೆ ಸುದ್ದಿಯಲ್ಲಿ ಬರ್ಮುಡಾ ಟ್ರೆöಯಾಂಗಲ್ಐ.ಬಿ.ಎಚ್. ಪ್ರಕಾಶನ, ಬೆಂಗಳೂರು
೫೮೨೦೧೮ಕರೆಯದೆ ಬಂದ ಅತಿಥಿಗಳುಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರ್ಕಾರ, ಬೆಂಗಳೂರು
೫೯೨೦೧೯ಚಂದ್ರನ ಮೇಲೆ ಮತ್ತೊಮ್ಮೆಸಪ್ನಾ ಬುಕ್ ಹೌಸ್, ಬೆಂಗಳೂರು

ಅನುವಾದಿತ ಕೃತಿಗಳು

ಇಂಗ್ಲೀಷಿನಿಂದ ಅನುವಾದಿತ ಕೃತಿಗಳು
ಕ್ರಮ ಸಂಖ್ಯೆಪ್ರಕಟಣೆಯ ವರ್ಷಪುಸ್ತಕಪ್ರಕಾಶನಮೂಲ
೧೯೯೫ಸಂಪನ್ಮೂಲಗಳಿಗಾಗಿ ಸಮುದ್ರ ಮಥನನವಕರ್ನಾಟಕ ಪಬ್ಲಿಕೇಷನ್ಸ್ಟಿ.ಕೆ.ಎಸ್. ಮೂರ್ತಿ,
೧೯೯೫ನಮ್ಮ ಜಲ ಸಂಪನ್ಮೂಲಗಳುನ್ಯಾಷನಲ್ ಬುಕ್ ಟ್ರಸ್ಟ್, ಇಂಡಿಯ, ನವದೆಹಲಿರಾಮ
೨೦೦೦ವಿಸ್ಮಯಗಳ ನಾಡಿನಲ್ಲಿನವಕರ್ನಾಟಕ ಪಬ್ಲಿಕೇಷನ್ಸ್ವಿ.ಜಿ. ಕುಲಕರ್ಣಿ. ವಿ.ಜಿ. ಗಂಭೀರ್, ಆರ್. ಎಮ್ ಭಾಗವತ್,.
೨೦೦೭ಸುನೀತಾ ವಿಲಿಯಮ್ಸ್ಸಪ್ನಾ ಬುಕ್ ಹೌಸ್, ಬೆಂಗಳೂರುಆರಾಧಿಕಾ ಶಮ್, ಕ್ಯಾ. ಎಸ್. ಶೇಷಾದ್ರಿ
೨೦೦೯ಅಂಟಾರ್ಕ್ಟಿಕ ಕಥೆ (ಇಲಾಖಾ ಪ್ರಕಟಣೆ)ಗೋವ ಮತ್ತು ಭಾರತೀಯ ಭೂವೈಜ್ಞಾನಿಕ ಸಂಘ ಬೆಂಗಳೂರುರಾಷ್ಟ್ರೀಯ ಅಂಟಾರ್ಕ್ಟಿಕ ಮತ್ತು ಸಾಗರ ಸಂಶೋಧನಾ ಕೇಂದ್ರ,
೨೦೦೫ಪರಿಸರಸ್ಥಿತಿ ವರದಿ ಮತ್ತು ಕಾರ್ಯಯೋಜನೆ-೨೦೦೩ಅರಣ್ಯ ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆ, ಕರ್ನಾಟಕ ಸರ್ಕಾರ
೨೦೦೯ವಾಯುಗುಣ ಬದಲಾವಣೆಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು
೨೦೧೧ರಾಕೆಟ್ : ಇತಿಹಾಸ, ವಿಜ್ಞಾನ - ತಂತ್ರಜ್ಞಾನಪ್ರಿಸಂ ಬುಕ್ ಹೌಸ್, ಬೆಂಗಳೂರು
೨೦೧೧ಸೌರಶಕ್ತಿಯ ಕಥೆನವಕರ್ನಾಟಕ ಪ್ರಕಾಶನ, ಬೆಂಗಳೂರು
೧೦೨೦೧೩ಅಸಾಧಾರಣ ಪರಿಶೋಧಕರುಸಪ್ನ ಬುಕ್ ಹೌಸ್, ಬೆಂಗಳೂರು
೧೧೨೦೧೪ಮಕ್ಕಳ ಸಚಿತ್ರ ಜ್ವಾನ ಭಂಡಾರ : ಭೂಮಿಸಪ್ನ ಬುಕ್ ಹೌಸ್, ಬೆಂಗಳೂರು
೧೨೨೦೧೪ಮಕ್ಕಳ ಸಚಿತ್ರ ಜ್ವಾನ ಭಂಡಾರ : ವಿಶ್ವಸಪ್ನ ಬುಕ್ ಹೌಸ್, ಬೆಂಗಳೂರು
೧೩೨೦೧೬ಅಬ್ದುಲ್ ಕಲಾಂ ಅವರು ನಿಮಗೆ ಗೊತ್ತೆ?ಸಪ್ನ ಬುಕ್ ಹೌಸ್, ಬೆಂಗಳೂರು

ಸಂಪಾದಿತ ಕೃತಿಗಳು

ಸಂಪಾದಿತ ಕೃತಿಗಳು
ಕ್ರಮ ಸಂಖ್ಯೆಪ್ರಕಟಣೆಯ ವರ್ಷಪುಸ್ತಕಪ್ರಕಾಶನ
೧೯೯೭ಕಾವೇರಿ ಹರಿದು ಬಂದು ದಾರಿದಿಕ್ಸೂಚಿ ಪ್ರಕಾಶನ, ಬಸವೇಶ್ವರನಗರ, ಬೆಂಗಳೂರು
೨೦೦೦ತ್ರಿವಿಕ್ರಮ ಹೆಜ್ಜೆಗಳುಸಿ.ವಿ.ಜಿ. ಪಬ್ಲಿಕೇಷನ್ಸ್, ಬೆಂಗಳೂರು.
೨೦೦೨ವಿಸ್ಮಯ ವಿಜ್ಞಾನ ಮಾಲಿಕೆ (೨೮ ಪುಸ್ತಕಗಳ ಪ್ರಧಾನ ಸಂಪಾದಕ)ಸುಭಾಷ್ ಪಬ್ಲಿಷಿಂಗ್ ಹೌಸ್, ಬೆಂಗಳೂರು
೨೦೧೨ಇತಿಹಾಸದಲ್ಲಿ ವಿಜ್ಞಾನ (೪ ಸಂಪುಟಗಳು) (ಜೆ.ಡಿ. ಬರ್ನಾಲ್ ಅವರ `ಸೈನ್ಸ್ ಇನ್ ಹಿಸ್ಟರಿ’)ಕುವೆಂಪು ಭಾಷಾ ಭಾರತಿ, ಬೆಂಗಳೂರು
೨೦೧೫ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆ (ಸಂಪುಟ ೧೪ – ವಿಜ್ಞಾನ ತಂತ್ರಜ್ಞಾನ ಸಂಪುಟ)ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು
೨೦೧೭ವಿಜ್ಞಾನದ ಹೆದ್ದಾರಿಯಲ್ಲಿ ಮಹಾತಿರುವುಗಳುನವಕರ್ನಾಟಕ ಪ್ರಕಾಶನ, ಬೆಂಗಳೂರು
೨೦೨೩ಕರ್ನಾಟಕದಲ್ಲಿ ಸ್ಮಾರ್ತ ಬ್ರಾಹ್ಮಣರುಹರಿವು ಬುಕ್ಸ್, ಬೆಂಗಳೂರು

ಇತರರೊಡನೆ ಸಂಪಾದಿತ ಕೃತಿಗಳು

ಇತರರೊಡನೆ ಸಂಪಾದಿತ ಕೃತಿಗಳು
ಕ್ರಮ ಸಂಖ್ಯೆಪ್ರಕಟಣೆಯ ವರ್ಷಪುಸ್ತಕಪ್ರಕಾಶನಟಿಪ್ಪಣಿ
೧೯೯೮ನವಕರ್ನಾಟಕ ಜ್ಞಾನ ವಿಜ್ಞಾನ ಕೋಶ (೪ ಸಂಪುಟಗಳು - ಸಹ ಸಂಪಾದಕ)ನವಕರ್ನಾಟಕ ಪ್ರಕಾಶನ, ಬೆಂಗಳೂರು
೨೦೧೧ವಿಜ್ಞಾನ ತಂತ್ರಜ್ಞಾನ ಪದಸಂಪದನವಕರ್ನಾಟಕ ಪ್ರಕಾಶನ, ಬೆಂಗಳೂರು
೨೦೧೨ಕನ್ನಡದಲ್ಲಿ ವಿಜ್ಞಾನ ಸಂವಹನೆಉದಯಭಾನು ಕಲಾಸಂಘ, ಬೆಂಗಳೂರು
೨೦೧೨ವಿಜ್ಞಾನ (ಬೆಳ್ಳಾವೆ ವೆಂಕಟನಾರಣಪ್ಪ ನಂಗಪುರಂ ವೆಂಕಟೇಶ ಐಯ್ಯಂಗಾರ್)ಉದಯಭಾನು ಕಲಾಸಂಘ, ಬೆಂಗಳೂರು
೨೦೧೩ವಿಜ್ಞಾನ ತಂತ್ರಜ್ಞಾನ ನಿಘಂಟುನವಕರ್ನಾಟಕ ಪ್ರಕಾಶನ, ಬೆಂಗಳೂರು
೨೦೧೩ಕಿರಿಯರ ಸಚಿತ್ರ ವಿಶ್ವಕೋಶವಸಂತ ಪ್ರಕಾಶನ, ಬೆಂಗಳೂರು
೨೦೧೩ವಿಜ್ಞಾನ ಯಾನಸಮೃದ್ಧ ಪ್ರಕಾಶನ, ಬೆಂಗಳೂರು
೨೦೧೮ಮೀನಾಕ್ಷಿಯ ಸೌಗಂಧ (ಬಿ.ಜಿ.ಎಲ್. ಸ್ವಾಮಿ ಅವರ ಬಿಡಿ ಲೇಖನಗಳು)ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು
೨೦೨೧ನಮ್ಮ ದೇಹದ ವಿಜ್ಞಾನನವಕರ್ನಾಟಕ ಪ್ರಕಾಶನ, ಬೆಂಗಳೂರುಇನ್ನೊಬ್ಬ ಸಂಪಾದಕರು: ನಾ. ಸೋಮೇಶ್ವರ
೧೦೨೦೨೩ಖಗೋಳ ದರ್ಶನನವಕರ್ನಾಟಕ ಪ್ರಕಾಶನ, ಬೆಂಗಳೂರುಇನ್ನೊಬ್ಬ ಸಂಪಾದಕರು: ಬಿ. ಎಸ್. ಶೈಲಜಾ

ಮಕ್ಕಳ ಸಾಹಿತ್ಯಕ್ಕೆ ಕೊಡುಗೆ (ಪ್ರಧಾನ ಸಂಪಾದಕ)

ಮಕ್ಕಳ ಸಾಹಿತ್ಯಕ್ಕೆ ಕೊಡುಗೆ (ಪ್ರಧಾನ ಸಂಪಾದಕ)
ಕ್ರಮ ಸಂಖ್ಯೆಪ್ರಕಟಣೆಯ ವರ್ಷಪುಸ್ತಕಪ್ರಕಾಶನ
೨೦೧೩ಕಿರಿಯರ ಸಚಿತ್ರ ವಿಶ್ವಕೋಶವಸಂತ ಪ್ರಕಾಶನ, ಬೆಂಗಳೂರು
೨೦೧೩ಮಕ್ಕಳ ಜ್ಞಾನಕೋಶ ೨ ಸಂಪುಟವಸಂತ ಪ್ರಕಾಶನ, ಬೆಂಗಳೂರು
೨೦೧೬ನಮ್ಮ ನಿಸರ್ಗ-೬೧ ಸರಳ ಪ್ರಯೋಗಗಳುವಸಂತ ಪ್ರಕಾಶನ, ಬೆಂಗಳೂರು

ವೃತ್ತಿಜೀವನದ ಕೊಡುಗೆಗಳು

ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣ ಸಂಸ್ಥೆಯಲ್ಲಿ ಹಿರಿಯ ವೈಜ್ಞಾನಿಯಾಗಿ ಟಿ. ಆರ್. ಅನಂತರಾಮುರ ಕೊಡುಗೆ ಬಹಳ ಮಹತ್ವದ್ದಾಗಿದೆ.

  • 'ಕೋಲಾರ ಗೋಲ್ಡ್ ಫೀಲ್ಡ್ಸ್,’ ನ ಗಣಿಯೊಳಗೆ ೩ ಕಿ.ಮೀಟರ್ ಗೂ ಹೆಚ್ಚಿನ ಆಳದ ಪರಿಸರಕ್ಕೆ ಇಳಿದುಹೋಗಿ, ೬೯ ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ, ಸಂಶೋಧನಾ ಕೆಲಸಗಳನ್ನು ಕೈಗೊಂಡಿದ್ದಾರೆ. ಉತ್ತರಭಾರತದ ’ಮೇಘಾಲಯ ರಾಜ್ಯ’ ದ ಬೆಟ್ಟ-ಕಣಿವೆಗಳಲ್ಲಿಯೂ-ನಿಕ್ಷೇಪಗಳನ್ನು ಶೋಧಿಸುವ ಕೆಲಸದಲ್ಲಿ ಯಶನ್ನು ಪಡೆದಿದ್ದಾರೆ.
  • ದಕ್ಷಿಣ ಭಾರತದ ’ಮಲೆಮಹದೇಶ್ವರ’ ಬೆಟ್ಟಗಳ ಪ್ರದೆಶದಲ್ಲಿ ೨,೫೦೦ ಚ. ಕಿಲೋಮೀಟರ್ ವಿಸ್ತೀರ್ಣದ ದುರ್ಗಮಕಾಡುಗಳ-ಭೂಪ್ರದೇಶದಲ್ಲಿ, ಸಂಚರಿಸಿ, ಅಲ್ಲಿಯೇ ಶಿಬಿರವನ್ನು ಹೂಡಿ, ಅಲ್ಲಿನ ಶಿಲಾನಿಕ್ಷೇಪಗಳ ನಕ್ಷೆಯನ್ನು ಸಿದ್ಧಪಡಿಸಿದ್ದಾರೆ. ಇಂತಹ ನಕ್ಷೆಯನ್ನು ಸಿದ್ಧಪಡಿಸಿದವರಲ್ಲಿ ಮೊದಲಿಗರು.
  • ಜಿಲ್ಲಾಮಟ್ಟದಲ್ಲಿ ಸರ್ವ ಸಮಸ್ತ ಸಂಪಮ್ಮೂಲಗಳನ್ನೂ ನೀರು, ಮಣ್ಣು ಅರಣ್ಯ, ಕೈಗಾರಿಕಾ ಕಚ್ಚಾವಸ್ತುಗಳು, ಖನಿಜ ನಿಕ್ಷೇಪಗಳು, ಇತ್ಯಾದಿಗಳನ್ನು ಒಳಗೊಂಡ ಮಹತ್ವ ’ಜಿಲ್ಲಾ ಸಂಪಮ್ಮೂಲ ನಕ್ಷೆ,’ ಯನ್ನು ಸಿದ್ಧಪಡಿಸುವ ಪರಿಪಾಠವನ್ನು ಅವರು ಜಾರಿಗೆ ತಂದಿದ್ದಾರೆ.[೧]

ಕೆಲ ಉಲ್ಲೇಖಾರ್ಹ ಸಂಗತಿಗಳು

೨೦೧೩ರಲ್ಲಿ ಬೆಂಗಳೂರಿನಲ್ಲಿ ಆಯೋಜಿಸಿದ ಕನ್ನಡ ವಿಕಿಪೀಡಿಯ ದಶಮಾನೋತ್ಸವದಲ್ಲಿ
  • ’ಭೂವೈಜ್ಞಾನಿಕ ಸರ್ವೆಕ್ಷನ ಸಂಸ್ಥೆ’ ಯ ೧೫೦ ನೇ ವರ್ಷಾಚರಣೆ’ ಯ ಸಂದರ್ಭದಲ್ಲಿ ಅ ಸಂಪಾದಿಸಿದ " ನ್ಯಾಶನಲ್ ಜಿಯೊಲಾಜಿಕಲ್ ಮಾನ್ಯುಮೆಂಟ್ಸ್," ಅತಿ ವಿಶಿಷ್ಠವಾದ, ಹಾಗೂ ಅತ್ಯಂತ ಮಹತ್ವದ ಕೃತಿಯಾಗಿದೆಯೆಂಬುದು ಕೃತಿ-ವಿಮರ್ಶಕರ ಅಂಬೋಣ. ಈ ಕೃತಿ, ಬಹಳ ಕಾಲದವರೆಗೆ ಎಲ್ಲರ ಸಂಶೋಧನೆಗಳಿಗೆ ನೆರವಾಗುವ ಉಲ್ಲೇಖಗಳಾಗುವ ಕೃತಿಯಾಗಿದೆ. ಕರ್ನಾಟಕದ ಮರಡಿಹಳ್ಳಿಯಲ್ಲಿರುವ ದಿಂಬುಲಾವ, ಬೆಂಗಳೂರಿನ ಲಾಲ್ ಬಾಗ್ ನ, ಶಿಲಾಬೆಟ್ಟ, ಸೆಂಟ್ ಮೇರಿ ದ್ವೀಪದ, ಶಿಲಾಕಂಬಗಳು, ಕೆ.ಜಿ.ಎಫ್ ನಲ್ಲಿರುವ ಜ್ವಾಲಾಮುಖಿಯ ಕಲ್ಲುಗಳ ರಾಶಿಗಳಬಗ್ಗೆ ಮಾಡಿದ ಅಧ್ಯಯನದ ತಥ್ಯಗಳನ್ನು ತಮ್ಮ ಕೃತಿ ಪಟ್ಟಿಯಲ್ಲಿ ಸೇರಿಸಿದ್ದಾರೆ.[೨]
  • ಅಂಕಣಕಾರ ಡಾ. ಎಚ್. ಆರ್. ಕೃಷ್ಣಮೂರ್ತಿಯವರ ಬರೆದಿರುವಂತೆ ಅನಂತರಾಮುರವರು ಕನ್ನಡದ ಜನಪ್ರಿಯ ವಿಜ್ಞಾನ ಪತ್ರಿಕೆಯ ಹೇಗಿರಬೇಕೆಂಬ ’ಬೆಂಚ್ ಮಾರ್ಕ್’ನ್ನು ’ವಿಜ್ಞಾನ ಸಂಗಾತಿ’ಯ ಮೂಲಕ ಮಾಡಿ ತೋರಿಸಿಕೊಟ್ಟಿದ್ದಾರೆ. ’ಟಿ. ಆರ್. ಅನಂತರಾಮು’ ರವರ ವಿದ್ವತ್ತನ್ನು ಕಂಡುಹಿಡಿದ ವ್ಯಕ್ತಿಗಳಲ್ಲಿ ಜಿ. ಟಿ.ನಾರಾಯಣರಾಯರು ಮೊದಲಿಗರು.
  • ಅನಂತರಾಮು ಹಾಗೂ ನಾಗೇಶ ಹೆಗಡೆಯವರ ಸಂಪಾದಕತ್ವದಲ್ಲಿ ಹಂಪಿ ವಿಶ್ವವಿದ್ಯಾ ಲಯದಿಂದ ಹತ್ತು ಸಂಚಿಕೆಗಳು ಒಂದು ಶ್ರೇಷ್ಠಮಾದರಿ ಕನ್ನಡ ಕಾವ್ಯಲೋಕದ ಕಾವ್ಯ-ಸಂಪತ್ತಾಗಿ ಉಳಿಯುತ್ತವೆ.

ಪ್ರಶಸ್ತಿ ಮತ್ತು ಗೌರವಗಳು

  • `ಭೂಕಂಪನಗಳು` ಕೃತಿಗೆ ಆರ್ಯಭಟ ಪ್ರಶಸ್ತಿ. - ೧೯೯೪
  • `ಕಾಲಗರ್ಭಕ್ಕೆ ಕೀಲಿಕೈ` ಕೃತಿಗೆ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಪ್ರಶಸ್ತಿ-೨೦೦೬
  • ವಿಜ್ಞಾನ ಸಾಹಿತ್ಯದ ಕೊಡುಗೆಗಾಗಿ - ಮೌಲ್ಯ ಗೌರವ ಪ್ರಶಸ್ತಿ. ಮೂಡಬಿದರೆ, ದ.ಕ. - ೨೦೦೬
  • ಕರ್ನಾಟಕ ಸರ್ಕಾರದ ಪರಿಸರ ಮತ್ತು ಅರಣ್ಯ ಇಲಾಖೆಯಿಂದ ೨೦೦೮ರ `ಪರಿಸರ ಪತ್ರಿಕೋದ್ಯಮ ಪ್ರಶಸ್ತಿ’.
  • ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ `ವಿಷನ್ ಗ್ರೂಪ್’ಇಂದ `ಶ್ರೇಷ್ಠ ವಿಜ್ಞಾನ ಸಂವಹನಕಾರ’ ಪ್ರಶಸ್ತಿ-೨೦೧೧
  • ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯಿಂದ `ಶ್ರೇಷ್ಠ ಲೇಖಕ ಪ್ರಶಸ್ತಿ’ (೨೦೧೨-೧೩). ಕೃತಿ:`ದೈತ್ಯ ಪ್ರತಿಭೆಗಳ ಹೆಗಲ ಮೇಲೆ’
  • ಕರ್ನಾಟಕ ಸರ್ಕಾರದ `ಕುವೆಂಪು ಭಾಷಾ ಭಾರತಿ ಪ್ರಾಧಿಕಾರ’ದ ಅನುವಾದ ಪುರಸ್ಕಾರ, ೨೦೧೧ (ಕೃತಿ `ರಾಕೆಟ್’)
  • ಜನಪ್ರಿಯ ವಿಜ್ಞಾನ ಸಾಹಿತ್ಯಕ್ಕೆ ಕೊಡುಗೆಯನ್ನು ಪರಿಗಣಿಸಿ 'ಗೌರವ ಡಾಕ್ಟರೇಟ್'- ತುಮಕೂರು ವಿಶ್ವವಿದ್ಯಾಲಯ, ತುಮಕೂರು, ೨೦೧೫[೩]
  • ಶಿವಮೊಗ್ಗ ಕರ್ನಾಟಕ ಸಂಘದಿಂದ ಜೀವಮಾನ ಸಾಧನೆಗಾಗಿ `ಡಾ. ಶಿವರಾಮ ಕಾರಂತ ವಿಜ್ಞಾನ ಪ್ರಶಸ್ತಿ’ – ೨೦೧೭
  • ವಿ.ಸಿ. ಸಂಪದದಿಂದ ಜೀವಮಾನ ಸಾಧನೆಗಾಗಿ ಗೌರವಾರ್ಪಣೆ - ೨೦೧೮
  • ವಿಜ್ಞಾನ ಶಿಕ್ಷಕರಿಗೆ, ಸಂವಹಕರಿಗೆ ಕರ್ನಾಟಕ ಸರ್ಕಾರದ ವಾರ್ಷಿಕ ಪ್ರಶಸ್ತಿ

ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಪುಸ್ತಕ ಪುರಸ್ಕಾರ[೪]

  • ೧೯೮೫ರ ಅತ್ಯುತ್ತಮ ವಿಜ್ಞಾನ ಕೃತಿ - `ಹಿಮದ ಸಾಮ್ರಾಜ್ಯದಲ್ಲಿ`
  • ೨೦೦೩ರ ಅತ್ತುತ್ತಮ ವಿಜ್ಞಾನ ಕೃತಿ - `ಕರ್ತಾರನಿಗೊಂದು ಕಿವಿಮಾತು'
  • ೨೦೦೮ರ ಅತ್ಯುತ್ತಮ ಪ್ರವಾಸ ಸಾಹಿತ್ಯ ಕೃತಿ - `ಪಶ್ವಿಮ ಮುಖಿ’[೫]

ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನದಲ್ಲಿ ವಿಜ್ಞಾನ ಗೋಷ್ಠಿಯ ಅಧ್ಯಕ್ಷತೆ

  1. ಅಖಿಲ ಭಾರತ ೭೩ನೇ ಕನ್ನಡ ಸಾಹಿತ್ಯ ಸಮ್ಮೇಳನ – ವಿಜ್ಞಾನ ಗೋಷ್ಠಿಯ ಅಧ್ಯಕ್ಷತೆ, ಶಿವಮೊಗ್ಗ, ೨೦೦೬
  2. ಅಖಿಲ ಭಾರತ ೮೧ನೇ ಸಾಹಿತ್ಯ ಸಮ್ಮೇಳನ – ವಿಜ್ಞಾನ ಗೋಷ್ಠಿಯ ಅಧ್ಯಕ್ಷತೆ, ಮಡಿಕೇರಿ, ಕೊಡಗು, ೨೦೧೪
  3. ೩ನೇ ಸಿರಾ ತಾಲ್ಲೂಕು ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷ, ಸಿರಾ, ೨೦೧೫

ಡಾ. ಟಿ.ಆರ್.ಎ.ವಿಜ್ಞಾನ ಪ್ರತಿಶ್ಠಾನ ಸ್ಥಾಪನೆ

ಡಾ.ಟಿ.ಆರ್.ಅನಂತರಾಮುರವರು, ವಿಜ್ಞಾನ ಪ್ರತಿಷ್ಠಾನವನ್ನು ೧೨ ಜನವರಿ ೨೦೨೧ ರಂದು ಔಪಚಾರಿಕವಾಗಿ ನೋಂದಾಯಿಸಿದರು. [೬]ಶಿಕ್ಷಣ ಕ್ಷೇತ್ರದಲ್ಲಿ ವಿಶೇಷವಾಗಿ ವಿಜ್ಞಾನ ಮತ್ತು ಗಣಿತ ವಿಷಯಗಳಲ್ಲಿ ಜಾಗೃತಿ ಮೂಡಿಸುವ ಮೂಲಕ ಸಮಾಜದ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ಉದ್ದೇಶದಿಂದ ೭೦ ರ ದಶಕದ ಆರಂಭದಿಂದಲೂ ವಿಜ್ಞಾನವನ್ನು ಜನಪ್ರಿಯಗೊಳಿಸುವತ್ತ ಅವರ ಕೊಡುಗೆಯು ಈ ಲಾಭೋದ್ದೇಶವಿಲ್ಲದ ಉಪಕ್ರಮಕ್ಕೆ ಪ್ರೇರಕ ಶಕ್ತಿಯಾಗಿದೆ. ಅವರ ವಿಚಾರಧಾರೆಗಳನ್ನು ಈ ಟ್ರಸ್ಟ್ ನ ಮೂಲಕ ಕರ್ನಾಟಕದ ಮೂಲೆ ಮೂಲೆಯನ್ನು ತಲುಪಲು ಯೋಜನೆಗಳನ್ನು ಹೆಚ್ಚಿಸುವ ಆಶಯವನ್ನು ಹೊಂದಲಾಗಿದೆ.

ಅನಂತರಾಮುರವರ ಕುಟುಂಬ ಮತ್ತು ವಿಳಾಸ

  • ಪತ್ನಿ ಅನ್ನಪೂರ್ಣರವರು, ಕರಡುಪ್ರತಿಗಳನ್ನು ತಿದ್ದುವುದರಿಂದ ಹಿಡಿದು, ಅದಕ್ಕೆ ಅಂತಿಮ ಮೆರುಗನ್ನು ಕೊಡುವವರೆಗೂ ಅತ್ಯಂತ ಕಾಳಜಿ ಶ್ರದ್ಧೆಗಳಿಂದ ಪತಿಯ ಜೊತೆ ಸಹಕರಿಸುತ್ತಿದ್ದಾರೆ. ಮಗ ಬೆಂಗಳೂರಿನ ಸಂಸ್ಥೆಯೊಂದರಲ್ಲಿ ಇಂಜಿನಿಯರ್. ಮಗಳು ’ಸ್ಪೇನ್ ದೇಶ’ದಲ್ಲಿ ನೆಲೆಸಿದ್ದಾರೆ. ಮೊಮ್ಮಕ್ಕಳು ’ಅಮೋಘ್’ ಮತ್ತು ´ಅನನ್ಯ´.
  • ವಿಳಾಸ: ೫೩೪, ’ಧಾತ್ರಿ,’ ೭೦ ನೇ ಅಡ್ಡ ರಸ್ತೆ, ೧೪ ನೇ ಮುಖ್ಯ ರಸ್ತೆ, ಕುಮಾರಸ್ವಾಮಿ ಬಡಾವಣೆ, ೧ ನೇ ಹಂತ, ಬೆಂಗಳೂರು-೫೬೦೦೭೮. ದೂರವಾಣಿ : ೨೬೬೬೪೨೦೪/೯೮೮೬೩೫೬೦೮೫

ಉಲ್ಲೇಖಗಳು

ಹೊರಸಂಪರ್ಕಕೊಂಡಿಗಳು