ನಾದ ಕಲ್ಯಾಣಿ
ಕರ್ನಾಟಕ ಸಂಗೀತ | |
---|---|
ಪರಿಕಲ್ಪನೆಗಳು | |
ಸಂಗೀತ ರಚನೆಗಳು | |
ವರ್ಣಮ್ • ಕೃತಿ • ಗೀತಂ • ಸ್ವರಜತಿ • ರಾಗಂ ತಾನಂ ಪಲ್ಲವಿ • ತಿಲ್ಲಾನ | |
ಸಂಗೀತೋಪಕರಣಗಳು | |
ಮಾಧುರ್ಯ: ಸರಸ್ವತಿ ವೀಣೆ • ವೇಣು • ಪಿಟೀಲು • ಚಿತ್ರ ವೀಣ • ನಾದಸ್ವರ • ಮ್ಯಾಂಡೊಲಿನ್ ತಾಳ: ಮೃದಂಗ • ಘಟಂ • ಮೋರ್ಸಿಂಗ್ • ಕಂಜೀರ • ತವಿಲ್ ಝೇಂಕಾರ: ತಂಬೂರ • ಶ್ರುತಿ ಪಟ್ಟಿಗೆ | |
ಸಂಗೀತಕಾರರು | |
ನಾದ ಕಲ್ಯಾಣಿಯು ಕರ್ನಾಟಕ ಸಂಗೀತದಲ್ಲಿ [೧] (ದಕ್ಷಿಣ ಭಾರತೀಯ ಶಾಸ್ತ್ರೀಯ ಸಂಗೀತದ ಸಂಗೀತ ಪ್ರಮಾಣ) ಸಂಗೀತ ಸಂಯೋಜಕ ಮಹೇಶ್ ಮಹದೇವ್ ಸೃಷ್ಟಿಸಿರುವ ಒಂದು ರಾಗವಾಗಿದೆ.[೨] [೩]ನಾದ ಕಲ್ಯಾಣಿ ಕರ್ನಾಟಕ ಸಂಗೀತದ 72 ಮೇಳಕರ್ತ ರಾಗ ವ್ಯವಸ್ಥೆಯಲ್ಲಿ 65 ನೇ ಮೇಳಕರ್ತ ರಾಗವಾದ ಮೇಚಕಲ್ಯಾಣಿಯ ಜನ್ಯ ರಾಗವಾಗಿದೆ. [೧] [೨] [೪]
ಈ ರಾಗವು ಪಾಶ್ಚಾತ್ಯ ಸಂಗೀತದ ಲಿಡಿಯನ್ ಮೋಡ್ಗೆ ಸಮನಾಗಿರುತ್ತದೆ ಆದರೆ ಆರೋಹಣದಲ್ಲಿ ನಾಲ್ಕನೇ ಮತ್ತು ಆರನೇ ಸ್ವರವನ್ನು ಬಿಟ್ಟುಬಿಡಲಾಗಿದೆ. ಈ ರಾಗವನ್ನು ಹಿಂದೂಸ್ತಾನಿ ಸಂಗೀತದಲ್ಲಿ ನಾದ ಕಲ್ಯಾಣ ಎಂದು ಮಹೇಶ್ ಮಹದೇವ್ ಹೆಸರಿಸಿದ್ದಾರೆ. [೫]
ರಚನೆ ಮತ್ತು ಲಕ್ಷಣ
ನಾದ ಕಲ್ಯಾಣಿ ಒಂದು ಅಸಂಪೂರ್ಣ ರಾಗವಾಗಿದ್ದು, ಆರೋಹಣದಲ್ಲಿ ಗಾಂಧಾರ ಮತ್ತು ಧೈವತವನ್ನು ಹೊಂದಿರುವುದಿಲ್ಲ. ಇದು ಔಡವ-ಸಂಪೂರ್ಣ ರಾಗಂ. ಈ ರಾಗದ ಆರೋಹಣ ಹಾಗೂ ಅವರೋಹಣ ಈ ಕೆಳಗಿನಂತಿರುತ್ತದೆ.
ಈ ರಾಗದಲ್ಲಿ ಬಳಸಲಾಗುವ ಸ್ವರಗಳೆಂದರೆ ಆರೋಹಣದಲ್ಲಿ ಷಡ್ಜ, ಚತುಶುರುತಿ ಋಷಬ, ಪಂಚಮ, ಪ್ರತಿಮಧ್ಯಮ, ಕಾಕಲಿ ನಿಷಾದ ಹಾಗೂ ಅವರೋಹಣದಲ್ಲಿ ಅಂತರ ಗಾಂಧಾರ ಮತ್ತು ಚತುಶ್ರುತಿ ದೈವತವನ್ನು ಸೇರಿಸಲಾಗಿಗುವುದು. ಇದು ಔಡವ-ಸಂಪೂರ್ಣ ರಾಗವಾಗಿದೆ.
ಸಂಯೋಜನೆಗಳು
ಈ ರಾಗದಲ್ಲಿ ಸಂಯೋಜನೆ
- ಶ್ರೀಹರಿ ಹೃದಯನಿವಾಸಿನಿ ಅಂಬಾ- ಮಹೇಶ್ ಮಹದೇವ್ ಗೀತೆ ರಚಿಸಿ ರಾಗ ಸಂಯೋಜಿಸಿದ್ದಾರೆ[೨]
- ಅಚ್ಯುತಮ್ ಕೇಶವಂ - ಮಹೇಶ್ ಮಹದೇವ್ ಸಂಯೋಜನೆ, ಪ್ರಿಯದರ್ಶಿನಿ ಹಾಡಿದ್ದಾರೆ [೬] [೨]
- ಕಾತ್ಯಾಯಿನಿ ವರಸುತನೆ - ಮಹೇಶ್ ಮಹದೇವ್ ಸಂಯೋಜಿಸಿದ್ದಾರೆ[೨]