ಅದೃಶ್ಯಕವಿ

ಅದೃಶ್ಯಕವಿ

ಹದಿನಾರನೆಯ ಶತಮಾನದಲ್ಲಿದ್ದ ಈ ಕವಿ ಪ್ರೌಢರಾಯನ ಕಾವ್ಯವನ್ನು ಬರೆದಿದ್ದಾನೆ. ತಂದೆ ಅಣ್ಣೇಂದ್ರ ಗುರು ಮಳೆಯ ಮಲ್ಲೇಶ; ಸ್ಥಳ ಬಿಜಾಪುರ ಪ್ರಾಂತದ ತೊರೆಸಾಲ ಪರಗಣೆಯ ಕೊಲ್ಲಾಪುರ, ದೇಸಾಯಿ ನಾಡೆರೆಯ ಹಕ್ಕರಿ ವಂಶಕ್ಕೆ ಸೇರಿದವ: ವೀರಶೈವ ಕವಿ. ಇಷ್ಟದೈವ ಉಪ್ಪಗಿರಿಯ ಸಂಗಮನಾಥ. ಈತನಿಗೆ ಅದ್ರೀಶಪ್ಪ ಎಂಬ ಹೆಸರು ಇದ್ದಂತೆ ತೋರುತ್ತದೆ.

ಈ ಕವಿ ಪ್ರೌಢರಾಯನ ಕಾವ್ಯವನ್ನೇ ಅಲ್ಲದೆ ಮತ್ತೆರಡು ಕಾವ್ಯಗಳನ್ನು ಬರೆದಿರಬಹುದೆಂದು ಈ ಕಾವ್ಯದ ಸಂಪಾದಕರಾದ ಪ್ರೊ.ಸ.ಶಿ.ಭೂಸನೂರಮಠರು ಊಹಿಸಿದ್ದಾರೆ.

ಪ್ರೌಢರಾಯನ ಕಾವ್ಯ ವಾರ್ಧಕಷಟ್ಪದಿಯಲ್ಲಿದೆ. ಇದರಲ್ಲಿ 21 ಸಂಧಿಗಳೂ 1113 ಪದ್ಯಗಳೂ ಇವೆ. ಈ ಕಾವ್ಯದಲ್ಲಿ ಎಂಬತ್ತಕ್ಕಿಂತಲೂ ಹೆಚ್ಚು ಶಿವಶರಣರ ಕಥೆಗಳನ್ನು ನಿರೂಪಿಸಲಾಗಿದೆ. ಇದನ್ನು ವಿಜಯನಗರದ ರಾಜನಾದ ಪ್ರೌಢರಾಯನಿಗೆ ಆತನ ಮಂತ್ರಿಯಾದ ಜಕ್ಕಣಾಚಾರ್ಯ ಬಿತ್ತರಿಸಿದುದನ್ನು ಕವಿ ಈ ಕಾವ್ಯದಲ್ಲಿ ಹೇಳಿದ್ದಾನೆ; ಭೂರಮಣ ಪ್ರೌಢಂಗೆ ಜಕ್ಕಣಾರ್ಯರು ಕಥಾಸಾರಮಂ ಪೇಳ್ದುದಂ ವಾರ್ಧೀಕ ಷಟ್ಪದಿಯ ದಾರದಿಂ ದಿವ್ಯಮಣಿಯನು ಪೋಣಿಪಂತೆ ಗುರುವಂಘ್ರಿ ಬಲದಿಂದುಸುರುವೆನು. ಚಾರಿತ್ರಿಕ ಮಹತಿಗಳಿಂದ ಕೂಡಿರುವ ಈ ಕಾವ್ಯ ಕೆಲವಾರು ದೃಷ್ಟಿಗಳಿಂದ ಬಹುಮುಖ್ಯವಾದುದಾಗಿದೆ.

(ಎನ್.ಬಿ.)

🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ