ಪಿ. ಭಾನುಮತಿ
ಉಪಕರಣಗಳು
Actions
ಸಾಮಾನ್ಯ
ಮುದ್ರಿಸು/ರಫ್ತು ಮಾಡು
ಇತರೆ ಯೋಜನೆಗಳಲ್ಲಿ
ಪಾಲುವಾಯಿ ಭಾನುಮತಿ ರಾಮಕೃಷ್ಣ, (Telugu: భానుమతీ రామకృష్ణ)
(೭ ಸೆಪ್ಟೆಂಬರ್, ೧೯೨೫-೨೪ ಡಿಸೆಂಬರ್, ೨೦೦೫)
ಡಾ.ಪಿ.ಭಾನುಮತಿಯವರ, ಪ್ರತಿಭೆ ಬಹುಮುಖವಾದದ್ದು. ದಕ್ಷಿಣ ಭಾರತದ ಖ್ಯಾತ ಹಿನ್ನೆಲೆಗಾಯಕಿ, ನಟಿ, ನಿರ್ದೇಶಕಿ, ಸಂಗೀತ ನಿರ್ದೇಶಕಕಿ, ಸಂಕಲನಕಾರ್ತಿ, ಚಿತ್ರಕಥಾ ಲೇಖಕಿ, ನೃತ್ಯಪ್ರವೀಣೆ, ಭರಣಿ ಸ್ಟುಡಿಯೊದ ಮಾಲಕಿ,ತೆಲುಗಿನ ಖ್ಯಾತ ಬರಹಗಾತಿ, ಮತ್ತು ಮೇಧಾವಿಯೆಂದು ಹೆಸರಾಗಿದ್ದರು. ಶಾಸ್ತ್ರೀಯ ಸಂಗೀತದಲ್ಲೂ ಪರಿಣಿತರಾಗಿದ್ದ ಭಾನುಮತಿ ರಾಮಕೃಷ್ಣ, ಪುರಂದರದಾಸರ ೮ ಜನಪ್ರಿಯ ಕೀರ್ತನೆಗಳನ್ನು ಶಂಕರಾಭರಣ, ಕಲ್ಯಾಣಿ, ಕಾನಡ, ಕಾಂಬೋಧಿ, 'ಬೇಹಾಗ್' ಹಾಗೂ 'ಆನಂದ ಭೈರವಿ' ರಾಗಗಳಲ್ಲಿ ವೈವಿಧ್ಯಮಯವಾಗಿ ಹಾಡಿದ್ದಾರೆ. ಈ ಕೊಡುಗೆಯಿಂದ ಆ ಅಮರ ಗಾಯಕಿಯ ಕನ್ನಡ ಇನಿದನಿ ಸ್ಥಿರವಾಗಿ ಉಳಿದಿದೆ. ತಮಿಳು, ತೆಲುಗು, ಹಿಂದಿ, ಸೇರಿದಂತೆ ನೂರಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿದ್ದರು. ಹಿಂದೆ, 'ಟೆಂಟ್ ಸಿನಿಮಾ' ಪ್ರಾರಂಭವಾಗುವ ಮೊದಲು, ರಂಗಭೂಮಿಯಲ್ಲಿ ನಾಟಕದ ಪರದೆ ಏಳುವಮೊದಲು, ಸಂತೆ ಮಾರುಕಟ್ಟೆಗಳಲ್ಲಿ ಹಲ್ಲುಪುಡಿ, ನಾರುಬೇರಿನ ಔಷಧಿಮಾರುವವರ ಬಳಿ ಹಾಕುತ್ತಿದ್ದ 'ಗ್ರಾಮಾಫೋನ್ ರೆಕಾರ್ಡ್' ಗಳು ಭಾನುಮತಿಯವರು ಹೇಳಿದ ಹಾಡುಗಳೇ. ಅವರು ಕನ್ನಡದಲ್ಲಿ ೧೯೫೭ ರಲ್ಲಿ ತೆರೆಕಂಡ 'ಕೆಂಪರಾಜ್ ಪ್ರೊಡಕ್ಷನ್' ರವರ 'ನಳದಮಯಂತಿ' ಚಿತ್ರದಲ್ಲಿ ಮಾತ್ರ ಅಭಿನಯಿಸಿದ್ದು. ಆದರೆ, ೧೯೪೩ ರಲ್ಲಿ, 'ಎಂ.ವಿ.ರಾಜಮ್ಮ' ನಿರ್ಮಿಸಿದ ರಾಧಾರಮಣ, ಚಿತ್ರದಲ್ಲಿ ಒಂದು ಚಿಕ್ಕಪಾತ್ರದಲ್ಲಿ ಅಭಿನಯಿಸಿದ್ದರು.
'ಭಾನುಮತಿ'ಯವರು, ಸರಸ್ವತಮ್ಮ ಮತ್ತು ಬೊಮ್ಮರಾಜು ವೆಂಕಟ ಸುಬ್ಬಯ್ಯನವರ ಮೂರನೆಯ ಪುತ್ರಿ. ಪ್ರಕಾಸಮ್ ಜಿಲ್ಲೆಯ ದೊಡ್ಡಾವರಂ ಗ್ರಾಮದಲ್ಲಿ ಜನಿಸಿದರು. ತಂದೆಯವರಿಗೆ ಶಾಸ್ತ್ರೀಯ ಸಂಗೀತದಲ್ಲಿ ಅಭಿರುಚಿ ಇತ್ತು; ಅವರು ನಾಟಕಗಳಲ್ಲಿ ಅಭಿನಯಿಸುತ್ತಿದ್ದಿದ್ದನ್ನು ಕಂಡು, ಮಗಳೂ ಪ್ರೇರಿತರಾದರು. ಬಾಲ್ಯದಲ್ಲಿ ಭಾನುಮತಿಯವರಿಗೆ ಸಂಗೀತದಲ್ಲಿ ಶಿಕ್ಷಣವನ್ನು ಕೊಡಿಸಿದರು. ಅವರು,೧೯೩೫ ರಲ್ಲಿ 'ಚಲನಚಿತ್ರ ವಲಯ'ಕ್ಕೆ ಪಾದಾರ್ಪಣೆಮಾಡಿದರು. ಒಟ್ಟಾರೆ, ಸುಮಾರು ೨೦೦ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಭಾನುಮತಿಯವರ ಪ್ರಬುದ್ಧತೆ ಹಾಗೂ ಬುದ್ಧಿಮತ್ತೆಯನ್ನು ಗುರುತಿಸಿದ ಜನ ಅವರನ್ನು ’ಅಷ್ಟಾವಧಾನಿ’ಯೆಂದು ಕರೆಯುತ್ತಿದ್ದರು. 'ಜ್ಯೋತಿಷ್ಯ ಶಾಸ್ತ್ರ'ದಲ್ಲಿ ಪರಿಣಿತಿಯಿತ್ತು. 'ತತ್ವ ಶಾಸ್ತ್ರ', ಅವರ ಪ್ರಿಯವಾದ ವಿಷಯವಾಗಿತ್ತು. ೧೯೩೯ ರಲ್ಲಿ ತೆಲುಗಿನಲ್ಲಿ ನಟಿಸಿದ ಮೊಟ್ಟಮೊದಲ ಚಿತ್ರ, 'ವರ ವಿಕ್ರಯಮ್' ನಲ್ಲಿ, ಅವರು 'ಕಾಳಿಂದಿ'ಯಾಗಿ ಅಭಿನಯಿಸಿದ್ದರು. ಈ ಚಿತ್ರವನ್ನು ಸಿ.ಪುಲ್ಲಯ್ಯ’ ನವರು ನಿರ್ದೇಶಿಸಿದ್ದರು.
ಸಿ.ಎನ್. ಅಣ್ಣಾದು,ರೈ ನಾಡಿಪ್ಪುಕ್ಕು ಲಕ್ಕನಂ ಎಂಬ ಬಿರುದನ್ನು ಕೊಟ್ಟಿದ್ದರು.(ನಟನಾಶಾಸ್ತ್ರದ ವ್ಯಾಕರಣ ಕೋವಿದೆ) ಹಿಂದೂಸ್ಥಾನಿ ಸಂಗೀತ, ಹಾಗೂ ದಕ್ಷಿಣಾದಿ ಶಾಸ್ತ್ರೀಯ ಸಂಗೀತದಲ್ಲಿ ಪ್ರಭುದ್ಧೆಯಾಗಿದ್ದರು. ಚಿತ್ರಗಳಲ್ಲಿ ತಮ್ಮ ಪಾತ್ರಗಳಿಗೆ ತಾವೇ ಹಾಡನ್ನು ಹಾಡಿದ್ದರು. ಭಾನುಮತಿ ರಾಮಕೃಷ್ಣರು ಹಾಡಿದ ಕೆಲವು ಮರಯಲಾರದ ಗೀತೆಗಳು :
ಚಲನಚಿತ್ರ ಸಂಸ್ಥೆಗಳ ಜೊತೆಗೆ ಒಡನಾಟ, ಸಾರ್ವಜನಿಕ ಸೇವಾಸಂಸ್ಥೆಗಳಜೊತೆ ಕೆಲಸಮಾಡುತ್ತಿದ್ದರು. ಅವರು ಸಂಪರ್ಕದಲ್ಲಿದ್ದ ಸಂಘ ಸಂಸ್ಥೆಗಳ ವಿವರಗಳು ಹೀಗಿವೆ.
ಸಮಾಜಸೇವೆಗೆ ಹೆಸರಾದ ವ್ಯಕ್ತಿ. 'ಚಿಕಾಗೊ ನಗರದ ಅಲ್ಟ್ರೂಸ ಇಂಟರ್ ನ್ಯಾಷನಲ್ ಸಂಸ್ಥೆ'ಯ ಸ್ಥಾಪಕ ಸದಸ್ಯೆಯಾಗಿ, 'ಖಜಾಂಚಿ'ಯಾಗಿ, ೧೯೬೩ ರಿಂದ ತಮ್ಮ ಜೀವನದ ಅಂತ್ಯದವರೆಗೆ ಸಂಪರ್ಕದಲ್ಲಿದ್ದರು.
'ಕ್ರಿಷ್ಣ ಪ್ರೇಮ' ಚಿತ್ರದ ಶೂಟಿಂಗ್ ಸಮಯದಲ್ಲಿ ಸಹಾಯಕ ನಿರ್ದೇಶಕ, ಚಿತ್ರ ನಿರ್ಮಾಪಕ, ತಮಿಳು, ತೆಲುಗು ಚಿತ್ರಗಳ ಸಂಪಾದಕ, ಪಿ.ಎಸ್. ರಾಮಕೃಷ್ಣರಾವ್ ರವರನ್ನು ಭೆಟ್ಟಿಯಾದರು. ಈ ಭೇಟಿ ಪ್ರೇಮದಲ್ಲಿ ತಿರುಗಿ ಅವರಿಬ್ಬರೂ ಆಗಸ್ಟ್,೮, ೧೯೪೩ ರಲ್ಲಿ ಮದುವೆಯಾದರು. ಈ ದಂಪತಿಗಳು ತಮ್ಮ ಮಗನ ಹೆಸರಿನಲ್ಲಿ, 'ಭರಣಿ ಪಿಕ್ಚರ್ಸ್' ಎಂಬ ಲಾಂಛನವನ್ನು ಪ್ರಾರಂಭಿಸಿದರು.
’ಸಿಲೋನ್ ರೇಡಿಯೊ ಸ್ಟೇಷನ್’ ನಲ್ಲಿ 'ಕನ್ನಡ ಪಾಡಲ್' ಕಾರ್ಯಕ್ರಮದಲ್ಲಿ ಹಾಡಿದ ನಳದಮಯಂತಿ ಕನ್ನಡ ಚಿತ್ರದ ಕೆಲವು ಹಾಡುಗಳು ಕೇಳಿಬರುತ್ತಿದ್ದವು. ಅವುಗಳ ವಿವರಗಳು ಹೀಗಿವೆ.
ಇವೇ ಮೊದಲಾದ ಹಾಡುಗಳು ಒಂದು ತೆರನ ಗುಂಗನ್ನು ರಸಿಕರ ಮನಸ್ಸಿನಲ್ಲಿ ಹಿಡಿಸಿ ಬಿಡುತ್ತಿದ್ದವು. ಎಚ್.ಎಂ.ವಿ ಧ್ವನಿಮುದ್ರಿಕೆ ೭೮ ಆಪ್.ಪಿ.ಎಂ.ನಲ್ಲಿವೆ.ಅವು ಈಗ ಲಭ್ಯವಿಲ್ಲ. ಹಳೆಯ ಹಾಡುಗಳನ್ನು ಸಂಗ್ರಹಿಸುವವರಿಗೆ ಇದೊಂದು ದೊಡ್ಡ ತೊಡಕಾಗಿ ಪರಿಣಮಿಸಿದೆ. ಇಂಗ್ಲೀಷ್ ಕವಿ ಕೀಟ್ಸ್ ಹೇಳುವಂತೆ, ಹರ್ಡ್ ಮೆಲೊಡೀಸ್ ಆರ್ ಸ್ವೀಟ್, ಬಟ್ ದೋಸ್ ಅನ್ ಹರ್ಡ್ ಆರ್ ಮಚ್ ಮೋರ್ ಸ್ವೀಟರ್’ (Heard melodies are sweet; but those unheard are much more sweeter) ಒಂದು ಸೋಲೊ ಮತ್ತು ಯುಗಳಗೀತೆಗಳನ್ನು ಹಾಡಿದ್ದಾರೆಂದು, ಜಯಸಿಂಹರವರ ದಾಖಲೆಯಿಂದ ತಿಳಿದುಬರುವ ಅಂಶಗಳು.
ಈ ಎಂಟೂ ಗೀತೆಗಳ ಧ್ವನಿಸುರಳಿಗಳು ಮತ್ತು ಧ್ವನಿಚಕ್ರವನ್ನು ಎಚ್.ಎಂ.ವಿ. ಈಗ ಮಾರುಕಟ್ಟೆಗೆ ತರುವುದಿದೆ. ನಳದಮಯಂತಿ', ೧೯೫೭ ರಲ್ಲಿ ಹೊರಬಂದ ನಾಲ್ಕನೆ ಚಿತ್ರ. ಈ ಚಿತ್ರಕ್ಕೆ ಕತೆ, ಚಿತ್ರಕತೆ, ಸಂಭಾಷಣೆ, ಹಾಗೂ ಗೀತೆಗಳನ್ನು ರಚಿಸಿದವರು, ಹುಣಸೂರು ಕೃಷ್ಣಮೂರ್ತಿಗಳು. ವಿ.ಗೋಪಾಲಂ ಸಂಗೀತ ನಿರ್ದೇಶಕರು. ೨೬ ಹಾಡುಗಳು. ನಳನ ಪತ್ರ ಕೆಂಪರಾಜ್, ಆತ ಸ್ಪುರದೄಪಿ, ನಿರ್ದೇಶಕ. ದಮಯಂತಿಯ ಪಾತ್ರವನ್ನು ಭಾನುಮತಿಯವರು ಸುಂದರವಾಗಿ ನಿಭಾಯಿಸಿದರು. ನರಸಿಂಹರಾಜು, ವಾಸುದೇವ ಗಿರಿಮಾಜಿ, ಸಹಪಾತ್ರಗಳಲ್ಲಿದ್ದರು.
ತೆಲುಗು, ತಮಿಳು ಚಿತ್ರಗಳ ಖ್ಯಾತ ಅಭಿನೇತ್ರಿ, ಸುಪ್ರಸಿದ್ಧ ಗಾಯಕಿ, ೧೯೫೭ ರಲ್ಲಿ ನಿರ್ಮಿತವಾದ ಒಂದು ತೆಲುಗುಚಿತ್ರ ’ವರುಡ ಕಾವಾಲಿ’ಯಲ್ಲಿ ಸಂಧರ್ಬೋಚಿತವಾಗಿ ಬರುವ 'ಕೃಷ್ಣಾನೀ ಬೇಗನೆ ಬಾರೋ' ಎಂಬ ಸುಪ್ರಸಿದ್ಧ ದಾಸರ ಕೀರ್ತನೆಯನ್ನು ಹಿನ್ನೆಲೆ ಗಾಯನಕ್ಕೆ ಭಾನುಮತಿ ಧ್ವನಿ ನೀಡಿದ್ದಾರೆ. ಆ ಚಿತ್ರದ ಸಂಗೀತ ನಿರ್ದೇಶಕ, ಜಿ.ರಾಮನಾಥನ್. ಡಾ. ರಾಜ್ ಕುಮಾರ್ ಜೊತೆ, 'ಅಣ್ಣ-ತಂಗಿ' ಚಿತ್ರದಲ್ಲೂ ರಾಜ್ ಜೋಡಿಯಾಗಿ ಅವರು ಅಭಿನಯಿಸಬೇಕಿತ್ತು. ಆದರೆ ಕಾರಣಾಂತರಗಳಿಂದ ಆಪಾತ್ರವನ್ನು ಬಿ. ಸರೋಜಾದೇವಿಯವರು, ಅಭಿನಯಿಸಿದರು.
'ಪಿ. ಭಾನುಮತಿ'ಯವರು ಸನ್ ೨೦೦೫ ರ, ಡಿಸೆಂಬರ್, ೨೪ ರಂದು ಚೆನ್ನೈನಗರದಲ್ಲಿ ದೈವಾಧೀನರಾದರು.