ಸೌದೆ

ಸೌದೆಯು ಒಟ್ಟುಸೇರಿಸಿ ಇಂಧನವಾಗಿ ಬಳಸಲಾದ ಕಟ್ಟಿಗೆಯ ಯಾವುದೇ ವಸ್ತು. ಸಾಮಾನ್ಯವಾಗಿ, ಸೌದೆಯು ಹೆಚ್ಚು ಸಂಸ್ಕರಣೆಯಾಗಿರುವುದಿಲ್ಲ ಮತ್ತು ಕೊರಡುಗಳು ಅಥವಾ ಚಕ್ಕೆಗಳಂತಹ ಕಟ್ಟಿಗೆ ಇಂಧನದ ಇತರ ರೂಪಗಳಿಗೆ ಹೋಲಿಸಿದರೆ, ಯಾವುದೋ ತೆರನಾದ ಗುರುತಿಸಬಹುದಾದ ದಿಮ್ಮಿ ಅಥವಾ ಕೊಂಬೆಯ ರೂಪದಲ್ಲಿರುತ್ತದೆ. ಸೌದೆಯು ಒಣಗಿರಬಹುದು ಅಥವಾ ಹಸಿಯಾಗಿರಬಹುದು (ತಾಜಾ). ಅದನ್ನು ಗಟ್ಟಿದಾರು ಅಥವಾ ಮೆದುದಾರು ಎಂದು ವರ್ಗೀಕರಿಸಬಹುದು.

ಸೌದೆಯ ಕಂತೆ

ಸೌದೆಯು ಒಂದು ನವೀಕರಿಸಬಹುದಾದ ಸಂಪನ್ಮೂಲ. ಆದರೆ, ಈ ಇಂಧನಕ್ಕಾಗಿ ಬೇಡಿಕೆ ಸ್ಥಳೀಯ ಅಥವಾ ಪ್ರಾದೇಶಿಕ ಮಟ್ಟದಲ್ಲಿ ಅದರ ಪುನರುತ್ಪಾದನಾ ಸಾಮರ್ಥ್ಯವನ್ನು ಮೀರಿಸಬಹುದು. ಉತ್ತಮ ಅರಣ್ಯಗಾರಿಕೆ ಅಭ್ಯಾಸಗಳು ಮತ್ತು ಸೌದೆಯನ್ನು ಬಳಸುವ ಸಾಧನಗಳಲ್ಲಿನ ಸುಧಾರಣೆಗಳು ಸ್ಥಳೀಯ ಕಟ್ಟಿಗೆ ಪೂರೈಕೆಗಳನ್ನು ಸುಧಾರಿಸಬಹುದು.

ಸೌದೆಯ ಕೊಯ್ಲು ಅಥವಾ ಸಂಗ್ರಹಣೆ ಪ್ರದೇಶ ಮತ್ತು ಸಂಸ್ಕೃತಿಯೊಂದಿಗೆ ಬದಲಾಗುತ್ತದೆ. ಕೆಲವು ಸ್ಥಳಗಳು ಸೌದೆ ಸಂಗ್ರಹಣೆಗಾಗಿ ನಿರ್ದಿಷ್ಟ ಪ್ರದೇಶಗಳನ್ನು ಹೊಂದಿರುತ್ತವೆ. ಇತರ ಸ್ಥಳಗಳು ಸೌದೆಯ ಸಂಗ್ರಹಣೆಯನ್ನು ಹೊಲ ಸರದಿ ಪ್ರಕ್ರಿಯೆಯ ಭಾಗವಾಗಿ ಆಹಾರ ಬೆಳೆಯಲು ಜಮೀನನ್ನು ಸಿದ್ಧಗೊಳಿಸುವ ಆವರ್ತನದಲ್ಲಿ ಏಕೀಕರಿಸಬಹುದು. ಸಂಗ್ರಹಣೆಯು ಗುಂಪು, ಕುಟುಂಬ ಅಥವಾ ವೈಯಕ್ತಿಕ ಚಟುವಟಿಕೆಯಾಗಿರಬಹುದು. ಸೌದೆಯ ಕೊಯ್ಲಿನ ಉಪಕರಣಗಳು ಮತ್ತು ವಿಧಾನಗಳು ವೈವಿಧ್ಯಮಯವಾಗಿವೆ.

ವಿಶ್ವದ ಬಹುತೇಕ ಭಾಗಗಳಲ್ಲಿ, ಸೌದೆಯನ್ನು ಕೊಯ್ಲಿನ ಸಮಯದಲ್ಲಿ ಮಾತ್ರ ಸಾರಿಗೆಗಾಗಿ ಸಿದ್ಧಗೊಳಿಸಲಾಗುತ್ತದೆ. ನಂತರ ಅದನ್ನು ಇಂಧನವಾಗಿ ಬಳಸುವ ಸ್ಥಳದ ಹತ್ತಿರಕ್ಕೆ ಸಾಗಿಸಿ ಸಿದ್ಧಗೊಳಿಸಲಾಗುತ್ತದೆ. ಸೌದೆಯಿಂದ ಇದ್ದಿಲನ್ನು ಮಾಡುವ ಪ್ರಕ್ರಿಯೆಯು ಸೌದೆಯ ಕೊಯ್ಲಿನ ಸ್ಥಳದಲ್ಲಿ ನಡೆಯಬಹುದು.

ಬಹುತೇಕ ಸೌದೆಗೆ ಸೀಳುವಿಕೆ ಅಗತ್ಯವಾಗಿದೆ, ಮತ್ತು ಇದರಿಂದ ಹೆಚ್ಚು ಮೇಲ್ಮೈ ಪ್ರದೇಶ ಒಡ್ಡಲ್ಪಟ್ಟು ಸೌದೆಯು ಕ್ಷಿಪ್ರವಾಗಿ ಒಣಗುತ್ತದೆ. ಇಂದು ಬಹುತೇಕ ಸೀಳುವಿಕೆ ಜಲಚಾಲಿತ ಸೀಳು ಯಂತ್ರದಿಂದ ಆಗುತ್ತದೆ, ಆದರೆ ಸೌದೆಯನ್ನು ಮೌಲ್‍ನಿಂದಲೂ ಸೀಳಬಹುದು.

🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ