ಆರ್ಯದೇವ
ಆರ್ಯದೇವಪ್ರ.ಶ.ಸು. ೨-೩ನೆಯ ಶತಮಾನ. ಪ್ರಾಚೀನ ಬೌದ್ಧಾಚಾರ್ಯರಲ್ಲಿ ಒಬ್ಬ. ಪ್ರಸಿದ್ಧ ವಿದ್ವಾಂಸನಾದ ನಾಗಾರ್ಜುನನ ಶಿಷ್ಯ.
ಜೀವನ ವೃತ್ತಾಂತ
ಆರ್ಯದೇವ ಒಬ್ಭ ಸಿಂಹಳಿ ರಾಜನ ಮಗ. ಮಹಾಯಾನ ಪಂಥಾವಲಂಬಿ.[೧] ಅಶ್ವಘೋಷನಂತೆ ಆಯುರ್ವೇದ ಪಂಡಿತ.
ಸಾಧನೆಗಳು
ಮಾತೃಚೇಟ ಎಂಬ ಬ್ರಾಹ್ಮಣ ಪಂಡಿತನನ್ನು ವಾದದಲ್ಲಿ ಸೋಲಿಸಲು ನಾಲಂದ ವಿದ್ಯಾಪೀಠದ ಭಿಕ್ಷುಗಳು ದಕ್ಷಿಣದ ಶ್ರೀಪರ್ವತದಲ್ಲಿದ್ದ ನಾಗಾರ್ಜುನನನ್ನು ಕರೆಸಿದಾಗ, ನಾಗಾರ್ಜುನ ತನ್ನ ಶಿಷ್ಯನಾದ ಇವನನ್ನು ಕಳುಹಿಸಿಕೊಟ್ಟ. ಈತ ಚತುಶ್ಶತಕ, ಮಾಧ್ಯಮಿಕ ಹಸ್ತಬಾಲ ಪ್ರಕರಣ, ಸ್ಖಲಿತ ಪ್ರಮಥನ ಯುಕ್ತಿಹೇತುಸಿದ್ಧಿ, ಜ್ಞಾನಸಾರಖಸಮುಚ್ಚಯ, ಚರ್ಯಾಮೇಳಾಯನ ಪ್ರದೀಪ, ಚಿತ್ತಾವರಣ ವಿಶೋಧನ, ಚತುಃಪೀಠ ತಂತ್ರರಾಜ, ಚತುಃಪೀಠಸ್ಥಾನ, ಜ್ಞಾನಡಾಕಿನೀಸಾಧನ, ಏಕದ್ರುಮ ಪಂಚಿಕಾ ಎಂಬ ಗ್ರಂಥಗಳನ್ನು ಬರೆದಿದ್ದಾನೆ.ಆದರೆ ಮಹಾವ್ಯುತ್ಪತ್ತಿ ಎಂಬ ಗ್ರಂಥದಲ್ಲಿ ನಾಗಾರ್ಜುನ, ನಾಗಾಹ್ವಯ, ಆರ್ಯದೇವ ಎಂದು ಕ್ರಮಪಡಿಸಿರುವುದನ್ನು ನೋಡಿದರೆ ಆರ್ಯದೇವ ನಾಗಾರ್ಜುನನ ಸಾಕ್ಷಾತ್ ಶಿಷ್ಯನಿರಲಾರನೆಂದು ತೋರುತ್ತದೆ.
ಉಲ್ಲೇಖಗಳು
ಬಾಹ್ಯ ಸಂಪರ್ಕಗಳು
- Aryadeva - "Els quatre-cents versos" (En català) Archived 2013-10-12 ವೇಬ್ಯಾಕ್ ಮೆಷಿನ್ ನಲ್ಲಿ.
🔥 Top keywords: ಶ್ರೀ ರಾಮ ನವಮಿಕನ್ನಡದ್ವಾರಕೀಶ್ಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಮುಖ್ಯ ಪುಟಕುವೆಂಪುರಾಮಬಿ. ಆರ್. ಅಂಬೇಡ್ಕರ್ಕನ್ನಡ ಅಕ್ಷರಮಾಲೆಸಂವತ್ಸರಗಳುಸಹಾಯ:ಲಿಪ್ಯಂತರಗಾದೆವಿಶೇಷ:Searchರಾಮಾಯಣಕನ್ನಡ ಗುಣಿತಾಕ್ಷರಗಳುದ.ರಾ.ಬೇಂದ್ರೆಬಸವೇಶ್ವರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಕರ್ನಾಟಕರಾಮ ಮಂದಿರ, ಅಯೋಧ್ಯೆಭಾರತದ ಸಂವಿಧಾನಶಿವರಾಮ ಕಾರಂತತಂತಿವಾದ್ಯಪಂಪಕನಕದಾಸರುಶಕುನಕರ್ನಾಟಕದ ಜಿಲ್ಲೆಗಳುಅಕ್ಕಮಹಾದೇವಿಕರ್ನಾಟಕ ಸಂಗೀತಕರ್ನಾಟಕದ ಇತಿಹಾಸಕರ್ನಾಟಕದ ಏಕೀಕರಣಪೂರ್ಣಚಂದ್ರ ತೇಜಸ್ವಿಭಾರತದಲ್ಲಿನ ಜಾತಿ ಪದ್ದತಿಜವಾಹರಲಾಲ್ ನೆಹರುವಚನಕಾರರ ಅಂಕಿತ ನಾಮಗಳುಕನ್ನಡ ಸಾಹಿತ್ಯಮಹಾತ್ಮ ಗಾಂಧಿಸಿದ್ದಲಿಂಗಯ್ಯ (ಕವಿ)ಭಾರತೀಯ ಸಂಸ್ಕೃತಿ