ರಾಜ್ಯಪಾಲ
ದೇಶದ ಮುಖ್ಯಸ್ಥರಾಗಿ ರಾಷ್ಟ್ರಪತಿ ಇರುವಂತೆಯೇ, ಭಾರತದಲ್ಲಿ ರಾಜ್ಯಗಳ ಮುಖ್ಯಸ್ಥರನ್ನು ರಾಜ್ಯಪಾಲ ಎಂದು ಕರೆಯುತ್ತಾರೆ.ಕಾರ್ಯಾಂಗದ ನಿಜವಾದ ಮುಖ್ಯಸ್ಥರು ಮುಖ್ಯಮಂತ್ರಿಗಳಾಗಿದ್ದರೂ ರಾಜ್ಯಪಾಲರು ರಾಜ್ಯಗಳ ಮುಖ್ಯಸ್ಥರಾಗಿರುತ್ತಾರೆ.ರಾಜ್ಯಪಾಲರನ್ನು ರಾಷ್ಟ್ರಪತಿಗಳು ನೇಮಿಸುತ್ತಾರೆ. ರಾಜ್ಯಪಾಲರ ಅಧಿಕಾರಾವಧಿ ೫ ವರ್ಷಗಳು.ಕೇಂದ್ರದಲ್ಲಿ ರಾಷ್ಟ್ರಪತಿ ಇದ್ದಂತೆ ರಾಜ್ಯದಲ್ಲಿ ರಾಜ್ಯಪಾಲ ಇರಬೇಕಾಗುತ್ತದೆ. ಭಾರತದ ಸಂವಿಧಾನದಲ್ಲಿ ರಾಜ್ಯದ ಶಾಸನ ರಚನಾ ಅಧಿಕಾರ ಹಾಗೂ ನ್ಯಾಯಾಂಗದ ಅಧಿಕಾರ ಹೊರತುಪಡಿಸಿ ಇರುವ ಉಳಿದೆಲ್ಲ ಅಧಿಕಾರವನ್ನು ರಾಜ್ಯಪಾಲರು ಇಲ್ಲವೆ ಅವರ ಹೆಸರಿನಲ್ಲಿಯೇ ನಿರ್ವಹಣೆ ಮಾಡಬೇಕಾಗುತ್ತದೆ. ಇದು ಸಂವಿಧಾನ ಒಪ್ಪಿಕೊಂಡ ಕ್ರಮವಾಗಿದೆ.ರಾಜ್ಯಪಾಲರು ಸ್ವಂತ ವಿವೇಚನೆಯಂತೆ ಕಾರ್ಯ ನಿರ್ವಹಿಸಲು ಇರುವ ಅವಕಾಶ ಕಡಿಮೆ. ಸಾಧಾರಣವಾಗಿ ಅವರು ಸಚಿವ ಸಂಪುಟದ ಸಲಹೆ–ಸೂಚನೆ ಮೇರೆಗೆ ಕೆಲಸ ಮಾಡಬೇಕಾಗುತ್ತದೆ (ಕಲಂ 163).ಕೆಲ ವಿಷಯಗಳಲ್ಲಿ ಅವರು ಸ್ವಂತ ವಿವೇಚನೆ ಬಳಸುವ ಅಧಿಕಾರ ಇದೆ (ಉದಾಹರಣೆಗೆ ಮುಖ್ಯಮಂತ್ರಿಯನ್ನಾಗಿ ಯಾರನ್ನು ಮಾಡಬೇಕು ಹಾಗೂ ಸಚಿವ ಸಂಪುಟ ವಿಶ್ವಾಸ ಕಳೆದುಕೊಂಡಿದೆಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಲು ಅನುಸರಿಸುವ ಮಾರ್ಗ ಮತ್ತು ವಿಧಾನ). ಉಳಿದಂತೆ ಸ್ವಂತ ವಿವೇಚನೆ ಬಳಸುವಂತಿಲ್ಲ. ಆಡಳಿತದಲ್ಲಿ ಸಚಿವ ಸಂಪುಟದ ಸಲಹೆಗಳ ಮೇಲೆ ಮೇಲ್ಮನವಿ ಪ್ರಾಧಿಕಾರವಾಗಿ ನಡೆದುಕೊಳ್ಳುವಂತಿಲ್ಲ.
7ನೇ ಸಂವಿಧಾನದ ತಿದ್ದುಪಡಿ
ಗವರ್ನರ್ ಭಾರತದಲ್ಲಿ ಒಂದು ರಾಜ್ಯದ ಮುಖ್ಯಸ್ಥರಾಗಿರುತ್ತಾರೆ. ಸಾಮಾನ್ಯವಾಗಿ, ಗವರ್ನರ್ ಅನ್ನು ಪ್ರತಿ ರಾಜ್ಯಕ್ಕೆ ನೇಮಕ ಮಾಡಲಾಗುತ್ತದೆ, ಆದರೆ 7 ನೇ ಸಂವಿಧಾನದ ತಿದ್ದುಪಡಿಯ ನಂತರ, ಒಂದಕ್ಕಿಂತ ಹೆಚ್ಚು ರಾಜ್ಯಗಳಿಗೆ ಒಬ್ಬ ರಾಜ್ಯಪಾಲರನ್ನು ಹೆಚ್ಚುವರಿಯಾಗಿ ನೇಮಕ ಮಾಡಬಹುದು.
ಭಾರತದ ರಾಜ್ಯಗಳ ರಾಜ್ಯಪಾಲರ ಪಟ್ಟಿ
ರಾಜ್ಯ | ರಾಜ್ಯಪಾಲರು[೧] | ಚಿತ್ರ | ಅಧಿಕಾರ ಸ್ವೀಕರಿಸಿದ ದಿನ | Ref. |
---|---|---|---|---|
ಆಂಧ್ರಪ್ರದೇಶ | ಬಿಸ್ವಭೂಷಣ್ ಹರಿಚಂದನ್ | 19 ಜುಲೈ 2019 | ||
ಅರುಣಾಚಲ ಪ್ರದೇಶ | ಬಿ. ಡಿ. ಮಿಶ್ರಾ | 3 ಅಕ್ಟೋಬರ್ 2017 | [೨] | |
ಅಸ್ಸಾಂ | ಜಗದೀಶ್ ಮುಖಿ | 10 ಅಕ್ಟೋಬರ್ 2017 | [೩] | |
ಬಿಹಾರ | ಫಗು ಚೌಹಾಣ್ | ಚಿತ್ರ:Fagu chauhan.jpg | 20 ಜುಲೈ 2019 | |
ಛತ್ತೀಸ್ಘಡ್ | ಅನಸೂಯಾ ಉಕೇಯ್ | 17 ಜುಲೈ 2019 | ||
ಗೋವಾ | ಸತ್ಯಪಾಲ್ ಮಲಿಕ್ | 3 ನವೆಂಬರ್ 2019 | ||
ಗುಜರಾತ್ | ಆಚಾರ್ಯ ದೇವ್ ವ್ರತ್ | 15 ಜುಲೈ 2019 | ||
ಹರಿಯಾಣ | ಸತ್ಯದೇವ್ ನಾರಾಯಣ್ ಆರ್ಯ | 25 ಆಗಸ್ಟ್ 2018 | [೪] | |
ಹಿಮಾಚಲ ಪ್ರದೇಶ | ಬಂಡಾರು ದತ್ತಾತ್ರೇಯ | 1 ಸೆಪ್ಟೆಂಬರ್ 2019 | ||
ಝಾರ್ಖಂಡ್ | ದ್ರೌಪದಿ ಮುರ್ಮು | 18 ಮೇ 2015 | [೫] | |
ಕರ್ನಾಟಕ | ವಜುಭಾಯಿ ವಾಲಾ | 1 ಸೆಪ್ಟೆಂಬರ್ 2014 | [೬] | |
ಕೇರಳ | ಆರಿಫ್ ಮೊಹಮ್ಮದ್ ಖಾನ್ | 6 ಸೆಪ್ಟೆಂಬರ್ 2019 | ||
ಮಧ್ಯಪ್ರದೇಶ | ಲಾಲ್ಜಿ ಟಂಡನ್ | 20 ಜುಲೈ 2019 | ||
ಮಹಾರಾಷ್ಟ್ರ | ಭಗತ್ ಸಿಂಗ್ ಕೋಶಿಯಾರಿ | 1 ಸೆಪ್ಟೆಂಬರ್ 2019 | ||
ಮಣಿಪುರ | ನಜ್ಮಾ ಹೆಪ್ತುಲ್ಲಾ | 21 ಆಗಸ್ಟ್ 2016 | [೭] | |
ಮೇಘಾಲಯ | ತಥಾಗತ ರಾಯ್ | 27 ಜನವರಿ 2020 | ||
ಮಿಝೋರಂ | ಪಿ. ಎಸ್. ಶ್ರೀಧರನ್ ಪಿಳ್ಳೈ | 5 ನವೆಂಬರ್ 2019 | ||
ನಾಗಾಲ್ಯಾಂಡ್ | ಆರ್. ಎನ್. ರವಿ | 20 ಜುಲೈ 2019 | ||
ಒರಿಸ್ಸಾ | ಗಣೇಶಿ ಲಾಲ್ | 29 ಮೇ 2018 | [೮] | |
ಪಂಜಾಬ್ | ವಿ. ಪಿ. ಸಿಂಗ್ ಬದ್ನೋರ್ | 22 ಆಗಸ್ಟ್ 2016 | [೯] | |
ರಾಜಸ್ಥಾನ | ಕಲ್ರಾಜ್ ಮಿಶ್ರಾ | 1 ಸೆಪ್ಟೆಂಬರ್ 2019 | ||
ಸಿಕ್ಕಿಂ | ಗಂಗಾ ಪ್ರಸಾದ್ | 26 ಆಗಸ್ಟ್ 2018 | [೧೦] | |
ತಮಿಳುನಾಡು | ಬನ್ವಾರಿಲಾಲ್ ಪುರೋಹಿತ್ | 6 ಅಕ್ಟೋಬರ್ 2017 | [೧೧] | |
ತೆಲಂಗಾಣ | ತಮಿಳಿಸೈ ಸೌಂದರರಾಜನ್ | 1 ಸೆಪ್ಟೆಂಬರ್ 2019 | ||
ತ್ರಿಪುರ | ರಮೇಶ್ ಬೈಸ್ | 20 ಜುಲೈ 2019 | ||
ಉತ್ತರ ಪ್ರದೇಶ | ಆನಂದಿಬೆನ್ ಪಟೇಲ್ | 20 ಜುಲೈ 2019 | ||
ಉತ್ತರಾಖಂಡ | ಬೇಬಿ ರಾಣಿ ಮೌರ್ಯ | 26 ಆಗಸ್ಟ್ 2018 | [೧೨] | |
ಪಶ್ಚಿಮ ಬಂಗಾಳ | ಜಗದೀಪ್ ಧನ್ಖಾರ್ | 20 ಜುಲೈ 2019 |
ಭಾರತದ ಕೇಂದ್ರಾಡಳಿತ ಪ್ರದೇಶಗಳ ಉಪರಾಜ್ಯಪಾಲರ / ಆಡಳಿತಾಧಿಕಾರಿಗಳ ಪಟ್ಟಿ
ಹುದ್ದೆ | ಹೆಸರು[೧೩] | ಚಿತ್ರ | ಅಧಿಕಾರ ಸ್ವೀಕರಿಸಿದ ದಿನ | Ref |
---|---|---|---|---|
ಅಂಡಮಾನ್ ಮತ್ತು ನಿಕೋಬಾರ್ (ಉಪರಾಜ್ಯಪಾಲರು) | ದೇವೇಂದ್ರ ಕುಮಾರ್ ಜೋಶಿ | 8 ಅಕ್ಟೋಬರ್ 2017 | [೧೪] | |
ಚಂಡೀಗಡ (ಆಡಳಿತಾಧಿಕಾರಿಗಳು) | ವಿ. ಪಿ. ಸಿಂಗ್ ಬದ್ನೋರ್ | 22 ಆಗಸ್ಟ್ 2016 | [೯] | |
ದಾದ್ರಾ ಮತ್ತು ನಗರ್ ಹವೇಲಿ (ಆಡಳಿತಾಧಿಕಾರಿಗಳು) | ಪ್ರಫುಲ್ ಖೋಡಾ ಪಟೇಲ್ | 30 ಡಿಸೆಂಬರ್ 2016 | [೧೫] | |
ದಮನ್ ಮತ್ತು ದಿಯು (ಆಡಳಿತಾಧಿಕಾರಿಗಳು) | ಪ್ರಫುಲ್ ಖೋಡಾ ಪಟೇಲ್ | 29 ಆಗಸ್ಟ್ 2016 | [೧೬] | |
ದೆಹಲಿ (ಉಪರಾಜ್ಯಪಾಲರು) | ಅನಿಲ್ ಬೈಜಲ್ | 31 ಡಿಸೆಂಬರ್ 2016 | [೧೭] | |
ಜಮ್ಮು ಮತ್ತು ಕಾಶ್ಮೀರ (ಉಪರಾಜ್ಯಪಾಲರು) | ಜಿ. ಸಿ. ಮುರ್ಮು | – | 31 ಅಕ್ಟೋಬರ್ 2019 | |
ಲಡಾಖ್ (ಉಪರಾಜ್ಯಪಾಲರು) | ಆರ್. ಕೆ. ಮಾಥೂರ್ | 31 ಅಕ್ಟೋಬರ್ 2019 | ||
ಲಕ್ಷದ್ವೀಪ (ಆಡಳಿತಾಧಿಕಾರಿಗಳು) | ದಿನೇಶ್ವರ್ ಶರ್ಮಾ | – | 3 ನವೆಂಬರ್ 2019 | [೧೮] |
ಪಾಂಡಿಚೆರಿ (ಉಪರಾಜ್ಯಪಾಲರು) | ಕಿರಣ್ ಬೇಡಿ | 29 ಮೇ 2016 | [೧೯] |
ಉಲ್ಲೇಖಗಳು
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |