ಅತೀಶ ದೀಪಂಕರ

ಅತೀಶ ದೀಪಂಕರ (982-1054). ಟಿಬೆಟ್ಟಿನ ಸಾಂಸ್ಕೃತಿಕ ಚರಿತ್ರೆಯಲ್ಲಿ ಇವನ ಹೆಸರು ಚಿರಸ್ಥಾಯಿಯಾಗಿದೆ. ಬುದ್ಧ ಮತ್ತು ಪದ್ಮಸಂಭವರನ್ನು ಬಿಟ್ಟರೆ, ಇವನೇ ಅತ್ಯಂತ ಪ್ರತಿಭಾವಂತ ವ್ಯಕ್ತಿ.

His Holiness

ಅತೀಶ ದೀಪಂಕರ ಶ್ರೀಜ್ಞಾನ
This distinctive portrait of Atiśa originated from a Kadam monastery in Tibet and was gifted to the Metropolitan Museum of Art, New York in 1933 by The Kronos Collections. In this graphic depiction, Atiśa holds a long, thin palm-leaf manuscript with his left hand, which probably symbolizes one of the many important texts he wrote, and he makes the gesture of teaching with his right hand.[೧]
Born980
Bengal, Pala Empire
Died1054
Nyêtang, Tibet
(now in China)
OccupationBuddhist teacher
Known forThe major figure in the establishment of the Sarma lineages in Tibet.

ಬಾಲ್ಯ ಮತ್ತು ಶಿಕ್ಷಣ

ಈತ ಪೂರ್ವಭಾರತದಲ್ಲಿ ಜನಿಸಿದ.ಬುದ್ಧನಂತೆಯೇ ಇವನದೂ ಕೂಡಾ ರಾಜ ಮನೆತನ[೨].ತಂದೆ ಕಲ್ಯಾಣ ಶ್ರೀ ಎಂಬ ರಾಜ, ತಾಯಿ ಪ್ರಭಾವತಿ. ಬಾಲ್ಯದಿಂದಲೇ ಧಾರ್ಮಿಕ ವಿಷಯಗಳಲ್ಲಿ ಇವನಿಗೆ ವಿಶೇಷ ಆಸಕ್ತಿ ಇತ್ತು. ನಲಂದ ವಿಶ್ವವಿದ್ಯಾನಿಲಯದಲ್ಲಿ ಬೋಧಿಭದ್ರನಿಂದ ದೀಕ್ಷೆಪಡೆದ. ದೀಪಂಕರ ಶ್ರೀಜ್ಞಾನ ಎಂಬ ಹೆಸರಿನಿಂದ ಪ್ರಖ್ಯಾತನಾದ. ಅನಂತರ ವಜ್ರಾಸನ ಮಹಾವಿಹಾರಕ್ಕೆ ಹೋಗಿ ಶೀಲರಕ್ಷಿತನಲ್ಲಿ ವಿನಯಪಿಟಕಗಳ ಅಧ್ಯಯನವನ್ನು ನಡೆಸಿದ. ಆದರೂ ಅವನ ಜ್ಞಾನತೃಷೆ ಕಡಿಮೆಯಾಗಲಿಲ್ಲ. ಸುವರ್ಣದ್ವೀಪಕ್ಕೆ ಹೋಗಿ ಧರ್ಮಪಾಲನೆಂಬ ಪಂಡಿತನ ಆಶ್ರಯದಲ್ಲಿ ತಾಂತ್ರಿಕ ಗ್ರಂಥಗಳನ್ನು ಹನ್ನೆರಡುವರ್ಷ ಅಭ್ಯಾಸಮಾಡಿ, ಹಿಂದಿರುಗಿ ವಿಕ್ರಮಶೀಲ ವಿಶ್ವವಿದ್ಯಾನಿಲಯವನ್ನು ಸೇರಿದ.

ಬರವಣಿಗೆಗಳು

ಜ್ಞಾನಪ್ರಭನೆಂಬ ವಿದ್ವಾಂಸನ ಆಶಯದಂತೆ ಟಿಬೆಟ್ಟಿಗೆ ಹೋಗಿ ಬೌದ್ಧಗ್ರಂಥಗಳನ್ನು ಸಂಪಾದಿಸುವ ಮತ್ತು ಭಾಷಾಂತರಿಸುವ ಮಹಾಕಾರ್ಯವನ್ನು ಕೈಗೊಂಡ. ಸಂಸ್ಕೃತದಿಂದ ಟಿಬೆಟ್ ಭಾಷೆಗೆ ಅನುವಾದ ಮಾಡಿರುವ ಇವನ ಗ್ರಂಥಗಳು ಕಾಂಜೂರ್ ಎಂಬ ಟಿಬೆಟ್ಟಿನ ತ್ರಿಪಿಟಕದಲ್ಲಿ ಸೇರಿವೆ. ಸಾಮ್ಯೆ ಎಂಬ ವಿಹಾರದಲ್ಲಿ ಅತ್ಯಮ್ಯೂಲವಾದ ಬೌದ್ಧಗ್ರಂಥಗಳ ಭಂಡಾರ ಸ್ಥಾಪಿತವಾಯಿತು. ಇಲ್ಲಿಯೇ ಕಾಲಚಕ್ರ ಎಂಬ ಬೃಹದ್ಗ್ರಂಥಕ್ಕೆ ವ್ಯಾಖ್ಯಾನವನ್ನು ಬರೆದ.

ಧರ್ಮ ಪ್ರಸಾರ

Mural of Atiśa at Ralung Monastery, 1993.

ಟಿಬೆಟ್ಟಿನಲ್ಲಿ ಮೊದಲಿಂದ ಇದ್ದ ಭೂತಾರಾಧನೆಯ ಪಂಥದಿಂದ ಬೌದ್ಧಮತ ಖಿಲವಾಗುತ್ತಿದ್ದುದನ್ನು ಗಮನಿಸಿ ವಿನಯವೂ ಧರ್ಮವೂ ಉಳಿಯುವಂತೆ ಭಾರತೀಯ ದೃಷ್ಟಿಗನುಗುಣವಾದ ಆಚಾರ ವ್ಯವಹಾರಗಳನ್ನೊಳಗೊಂಡ ಮಠವೊಂದನ್ನು ಏರ್ಪಡಿಸಿದ. ಮೊದಲಿಗೆ ವಿನಯ ಪಂಥವೆಂದು ಹೆಸರುಗೊಂಡ ಈ ಶಾಖೆ ಕಾಲಾಂತರದಲ್ಲಿ ಪೀತಮುಕುಟಪಂಥವೆಂದು ಪ್ರಸಿದ್ಧವಾಯಿತು. ಈ ಶಾಖೆ ಟಿಬೆಟ್ಟಿನಲ್ಲಿ ಇಂದಿಗೂ ಇದೆ. ಮುಂದೆ ಮಾರ್ಪ, ಮಿಲರೇಪ ಎಂಬುವರು ಈ ಶಾಖೆಯನ್ನು ಬೆಳೆಸಿದರು. ಅತೀಶನಿಂದಾಗಿ ಬೌದ್ಧಮತದಲ್ಲಿ ಬ್ರಹ್ಮಚರ್ಯದ ಅನುಷ್ಠಾನ ಏರ್ಪಟ್ಟಿತಲ್ಲದೆ ತಾಂತ್ರಿಕವಿಧಿಗಳ ವಿಸರ್ಜನೆಯಾಯಿತು. ಅತೀಶ ಲ್ಹಾಸ ಬಳಿ ನೆಕಾಂಗ್ ಎಂಬಲ್ಲಿ ತೀರಿಕೊಂಡ. ಅಲ್ಲಿ ಅವರ ಸಮಾಧಿ ಇದೆ.

ಉಲ್ಲೇಖಗಳು

ಬಾಹ್ಯ ಸಂಪರ್ಕಗಳು

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: