ಪ್ರಣಬ್ ಮುಖೆರ್ಜೀ
ಪ್ರಣಬ್ ಮುಖರ್ಜಿ (ಡಿಸೆಂಬರ್ 11, 1935 - ಆಗಸ್ಟ್ 31, 2020) ಭಾರತದ ಪಶ್ಚಿಮ ಬಂಗಾಲದಲ್ಲಿ ಜನಿಸಿದ ಇವರು ಭಾರತದ ೧೩ನೇ ರಾಷ್ಟ್ರಪತಿ ಮತ್ತು ವಿತ್ತ ಮಂತ್ರಿಯಾಗಿದ್ದರು.[೧][೨] ಇವರು (೧೫ನೇ) ಲೋಕ ಸಭೆಯ [೩] (ಭಾರತ ಸಂಸತ್ತಿನ ಕೆಳಮನೆ) ನಾಯಕ ಹಾಗು ಕಾಂಗ್ರೆಸ್ ಕಾರ್ಯ ಸಮಿತಿಯ ಸದಸ್ಯ ಕೂಡ (ಸಿ.ಡಬ್ಲ್ಯೂ.ಸಿ) ಆಗಿದ್ದರು.[೪] ಇವರು ಕಲ್ಕತ್ತ ವಿಶ್ವವಿದ್ಯಾಲಯದಿಂದ ನ್ಯಾಯಶಾಸನದಲ್ಲಿ ಮಾಸ್ಟರ್ಸ್ ಪದವಿಯನ್ನು ಪಡೆದಿದ್ದಾರೆ. ಇವರು ವಕೀಲ ಹಾಗು ಕಾಲೇಜಿನ ಉಪಾಧ್ಯಾಯರಾಗಿ ಕಾರ್ಯ ನಿರ್ವಹಿಸಿದ್ದಾರೆ.ಇವರು ಗೌರವಾರ್ಥ ಡಿ.ಲಿಟ್ಟ್ ಕೂಡ ಹೊಂದಿದ್ದಾರೆ.
ಪ್ರಣಬ್ ಮುಖರ್ಜಿ | |
---|---|
೧೩ನೇ ಭಾರತದ ರಾಷ್ಟ್ರಪತಿ | |
ಅಧಿಕಾರ ಅವಧಿ ಜುಲೈ 25, 2012 – ಜುಲೈ 25, 2017 | |
ಉಪ ರಾಷ್ಟ್ರಪತಿ | ಹಮೀದ್ ಅನ್ಸಾರಿ |
ಪೂರ್ವಾಧಿಕಾರಿ | ಪ್ರತಿಭಾ ಪಾಟೀಲ್ |
ಉತ್ತರಾಧಿಕಾರಿ | ರಾಮನಾಥ ಕೋವಿಂದ್ |
ಭಾರತದ ವಿತ್ತ ಮಂತ್ರಿ | |
ಅಧಿಕಾರ ಅವಧಿ ಜನೆವರಿ ೧೯೮೨ – ಡಿಸೆಂಬರ್ ೧೯೮೪ | |
ಪ್ರಧಾನ ಮಂತ್ರಿ | ಇಂದಿರಾ ಗಾಂಧಿ ರಾಜೀವ್ ಗಾಂಧಿ |
ಪೂರ್ವಾಧಿಕಾರಿ | ರಾಮಸ್ವಾಮಿ ವೆಂಕಟರಮನ್ |
ಉತ್ತರಾಧಿಕಾರಿ | ವಿಶ್ವನಾಥ್ ಪ್ರತಾಪ್ ಸಿಂಗ್ |
Minister of External Affairs of India | |
ಅಧಿಕಾರ ಅವಧಿ ಅಕ್ಟೋಬರ್ ೨೪, ೨೦೦೬ – ಮೇ ೨೩, ೨೦೦೯ | |
ಪ್ರಧಾನ ಮಂತ್ರಿ | ಮನಮೋಹನ್ ಸಿಂಗ್ |
ಪೂರ್ವಾಧಿಕಾರಿ | ಮನಮೋಹನ್ ಸಿಂಗ್ |
ಉತ್ತರಾಧಿಕಾರಿ | ಸೋಮನಹಳ್ಳಿ ಮಲ್ಲಯ್ಯ ಕೃಷ್ಣ |
ಅಧಿಕಾರ ಅವಧಿ ಫೆಬ್ರವರಿ ೧೦, ೧೯೯೫ – ಮೇ ೧೬, ೧೯೯೬ | |
ಪ್ರಧಾನ ಮಂತ್ರಿ | ಪಾಮುಲಪರ್ತಿ ವೆಂಕಟ ನರಸಿಂಹ ರಾವ್ |
ಪೂರ್ವಾಧಿಕಾರಿ | ದಿನೇಶ್ ಸಿಂಗ್ |
ಉತ್ತರಾಧಿಕಾರಿ | ಸಿಕಂದೆರ್ ಬಖ್ತ್ |
Minister of Defence of India | |
ಅಧಿಕಾರ ಅವಧಿ ಮೇ ೨೨, ೨೦೦೪ – ಅಕ್ಟೋಬರ್ ೨೬, ೨೦೦೬ | |
ಪ್ರಧಾನ ಮಂತ್ರಿ | ಮನಮೋಹನ್ ಸಿಂಗ್ |
ಪೂರ್ವಾಧಿಕಾರಿ | ಜರ್ಜೆ ಫೆರ್ಣನ್ದೆಸ |
ಉತ್ತರಾಧಿಕಾರಿ | ಅರಚ್ಕಪರಮ್ಬಿಲ್ ಕುರಿಯನ್ ಅಂತೋನಿ |
Deputy Chairperson of the Planning Commission of India | |
ಅಧಿಕಾರ ಅವಧಿ ಜೂನ್ ೨೪, ೧೯೯೧ – ಮೇ ೧೫, ೧೯೯೬ | |
ಪ್ರಧಾನ ಮಂತ್ರಿ | ಪಾಮುಲಪರ್ತಿ ವೆಂಕಟ ನರಸಿಂಹ ರಾವ್ |
ಪೂರ್ವಾಧಿಕಾರಿ | ಮೋಹನ್ ಧಾರಿಯಾ |
ಉತ್ತರಾಧಿಕಾರಿ | ಮಧು ದಂಡವತೆ |
ವೈಯಕ್ತಿಕ ಮಾಹಿತಿ | |
ಜನನ | ಬಿರ್ಬ್ಹುಂ, ಪಶ್ಚಿಮ ಬಂಗಾಲ ಬ್ರಿಟಿಶ್ ರಾಜ್ | ಡಿಸೆಂಬರ್ ೧೧, ೧೯೩೫
ಮರಣ | 31 ಆಗಸ್ಟ್, 2020 (aged 84) |
ರಾಷ್ಟ್ರೀಯತೆ | ಭಾರತೀಯ |
ರಾಜಕೀಯ ಪಕ್ಷ | UPA-INC |
ಸಂಗಾತಿ(ಗಳು) | ಸುವರ ಮುಖೆರ್ಜೀ |
ವಾಸಸ್ಥಾನ | ಕಲ್ಕತ್ತಾ , ಭಾರತ |
ಅಭ್ಯಸಿಸಿದ ವಿದ್ಯಾಪೀಠ | ಕಲ್ಕತ್ತಾ ವಿಶ್ವವಿದ್ಯಾಲಯ |
ಧರ್ಮ | ಹಿಂದು |
ಜಾಲತಾಣ | Official Website |
ಆರಂಭಿಕ ಜೀವನ
ಪ್ರಣಬ್ ಮುಖರ್ಜಿ ಪಶ್ಚಿಮ ಬಂಗಾಲ ಬಿರ್ಬ್ಹುಂಜಿಲ್ಲೆಯ ಕಿರ್ನಹರ್ಬಳಿ ಇರುವ ಮಿರತಿ ಹಳ್ಳಿಯಲ್ಲಿ ಗ್ರಾಮದ ಕಿಂಕರ್ ಮುಖರ್ಜಿ ಹಾಗು ರಾಜಲಕ್ಷ್ಮಿ ಮುಖರ್ಜಿಗೆ ಹುಟ್ಟಿದರು.
ವೃತ್ತಿಜೀವನ
ಪ್ರಣಬ್ ಮುಖರ್ಜೀ ತಮ್ಮ ವೃತ್ತಿಜೀವನವನ್ನು ಕಾಲೇಜ್ ಉಪಾಧ್ಯಾಯರಾಗಿ ಪ್ರಾರಂಭಿಸಿದರು. ನಂತರ ಪತ್ರಕರ್ತರಾದರು.
ರಾಜಕೀಯ ಜೀವನ
ಇವರ ಸಂಸತ್ತಿನ ವೃತ್ತಿಜೀವನ ಐದು ದಶಕದ್ದು, ಇವರು ಕಾಂಗ್ರೆಸ್ ಪಕ್ಷದಿಂದ ೧೯೬೯ ರಲ್ಲಿ ರಾಜ್ಯ ಸಭಾ ಸದಸ್ಯರಾಗಿ ಆಯ್ಕೆಗೊಂಡರು; ನಂತರ ೧೯೭೫, ೧೯೮೧, ೧೯೯೩ ಹಾಗು ೧೯೯೯ ಪುನರಾಯ್ಕೆಗೊಂಡರು. ೧೯೮೨ ರಿಂದ ೧೯೮೪ ರವರಗೆ .ಭಾರತದ ವಿತ್ತಮಂತ್ರಿಯಗಿದರು [೫]
ಇವರು ಹಲವಾರು ಮಂತ್ರಿ ಪದವಿಯನ್ನು ನಿಭಾಯಿಸಿದರೆ; ರಕ್ಷಣ, ವಿತ್ತ, ಬಾಹ್ಯ ಇಲಾಖೆ, ಆದಾಯ, ನೌಕಾ, ಸಾರಿಗೆ, ಸಂಪರ್ಕ ವ್ಯವಸ್ಥೆ, ಆರ್ಥಿಕ ಇಲಾಖೆ, ವಾಣಿಜ್ಯ ಹಾಗು ಉದ್ದಿಮೆ.
ಅಂತರರಾಷ್ಟ್ರೀಯ ಪಾತ್ರ
ಅಕ್ಟೋಬರ್ ೧೦, ೨೦೦೮ ರಂದು ಮುಖೆರ್ಜೀ ಹಾಗು ಕಾಂಡೊಲಿನಾ ರೈಸ್ ಸೆಕ್ರೆಟರಿ ಆಫ್ ಸ್ಟೇಟ್(ಉನೈಟೆಡ್ ಸ್ಟೇಟ್ಸ್ ನ ವಿದೇಶಾಂಗ ಮಂತ್ರಿ / ವಿದೇಶಾಂಗ ಖಾತೆಯ ಕಾರ್ಯದರ್ಶಿ) ವಿಭಾಗ ೧೨೩ ಒಪ್ಪಂದಕೆ ಸಹಿಹಾಕಿದರು.
ರಾಜಕೀಯ ಪಕ್ಷದ ಪಾತ್ರ
ಪ್ರಣಬ್ ಮುಖರ್ಜಿಯವರು ಸಾಮಾಜಿಕ ಹಾಗು ಪಕ್ಷದಲ್ಲಿ ಬಹಳ ಗೌರವಾನ್ವಿತ ವ್ಯಕ್ತಿ.
ಭ್ರಷ್ಟಾಚಾರದ ದೃಷ್ಟಿಕೋನಗಳು
ಪ್ರಣಬ್ ಮುಖರ್ಜಿ ಅವರು ವಾಸ್ತವವಾದಿ.
ರಿಡಿಫ್.ಕಂ ನೊಂದಿಗಿನ ಸಂದರ್ಶನದಲ್ಲಿ, ಅವರನ್ನು ಕಾಂಗ್ರೆಸ್ನಲ್ಲಿರುವ ಭ್ರಷ್ಟಾಚಾರದ ಬಗ್ಗೆ ಕೇಳಿದಾಗ. ಅವರ ಉತ್ತರ:
- ಭ್ರಷ್ಟಾಚಾರ ಒಂದು ಸಮಸ್ಯೆ. ನಾವು ನಮ್ಮ ಘೋಷಣೆಯಲ್ಲಿ ಇದರ ಬಗ್ಗೆ ಹೇಳಿದ್ದೇವೆ. ಆದರೆ ದುಃಖದ ಸಂಗತಿ ಎಂದರೆ ಇದು ಕಾಂಗ್ರೆಸ್ಗೆ ಮಾತ್ರ ಸಿಮಿತವಾದುದಲ್ಲ. ಎಷ್ಟೊಂದು ಹಗರಣಗಳಿವೆ. ಹಲವಾರು ರಾಜಕಾರಣಿಗಳು ಇದರಲ್ಲಿ ಬಾಗಿಯಾಗಿದ್ದಾರೆ. ಅದರಿಂದ ಇದು ಕೇವಲ ಕಾಂಗ್ರೆಸ್ ಸರ್ಕಾರಕ್ಕೆ ಸಿಮಿತವಾದುದು ಎನ್ನುವುದು ಸರಳೀಕೃತವಾಗುತ್ತದೆ.[೬]
ವಿದೇಶಾಂಗ ಮಂತ್ರಿ: ಅಕ್ಟೋಬರ್ ೨೦೦೬
ವಿತ್ತ ಮಂತ್ರಿ
ಮನಮೋಹನ್ ಸಿಂಗ್ರವರ ಎರಡನೇ ಸರ್ಕಾರದಲ್ಲಿ ,ಮುಖರ್ಜಿ ಅವರು ಭಾರತದ ವಿತ್ತ ಮಂತ್ರಿಯಾಗಿ ನೇಮಕಗೊಂಡರು, ಈ ಖಾತೆಯನ್ನು ಇವರು ೧೯೮೦ರ ದಶಕದಲ್ಲಿಯೇ ನಿಭಾಯಿಸಿದ್ದರು.
ವೈಯಕ್ತಿಕ ಜೀವನ
ಪ್ರಣಬ್ ಮುಖರ್ಜಿಯವರು, ಶುಭಾ ಮುಖರ್ಜಿಯವರನ್ನು ಜುಲೈ ೧೩, ೧೯೫೭ ರಂದು ಮದುವೆಯಾದರು,ಇವರಿಗೆ ಇಬ್ಬರು ಗಂಡು ಮಕಳು, ಅಭಿಜಿತ್ ಹಾಗು ಸುರೋಜಿತ್ ಹಾಗು ಒಬ್ಬಳು ಪುತ್ರಿ. (प्रणव का विवाह बाइस वर्ष की आयु में 13 जुलाई 1957 को शुभा मुखर्जी के साथ हुआ था।) [೧]
ನಿಧನ
ಪ್ರಣವ್ ಮುಖರ್ಜಿಯವರು ಆಗಸ್ಟ್ 31, 2020ರಂದು ದೀರ್ಘಕಾಲದ ಅನಾರೋಗ್ಯದಿಂದಾಗಿ ನಿಧನ ಹೊಂದಿದರು.[೭]
ಪುರಸ್ಕಾರಗಳು
- ಇವರಿಗೆ ೨೦೦೭ರಲ್ಲಿ ಪದ್ಮ ವಿಭೂಷಣ ಪುರಸ್ಕಾರವನ್ನು ನೀಡಲಾಗಿದೆ.
- ಜನವರಿ 2019ರಲ್ಲಿ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ ಭಾರತರತ್ನ ಪುರಸ್ಕಾರದ ಘೋಷಣೆ ಮಾಡಲಾಯಿತು.[೮]
ನೋಡಿ
ಆಕರಗಳು
ಬಾಹ್ಯ ಕೊಂಡಿಗಳು
- Finance Minister Pranab Mukherjee
- About Pranab Mukherjee
- Profile at Govt. of India website
- Official biographical sketch in Parliament of India website Archived 2007-12-28 ವೇಬ್ಯಾಕ್ ಮೆಷಿನ್ ನಲ್ಲಿ.
- Saddam verdict: India reacts guardedly
- https://www.un.org/webcast/ga/61/pdfs/india-e.pdf
Rajya Sabha | ||
---|---|---|
ಪೂರ್ವಾಧಿಕಾರಿ Unknown | Member ೧೯೬೯–೨೦೦೪ | ಉತ್ತರಾಧಿಕಾರಿ Unknown |
ಲೋಕಸಭೆ | ||
ಪೂರ್ವಾಧಿಕಾರಿ Unknown | Member for Jangipur ೨೦೦೪– ೨೦೧೨ | Incumbent |
Political offices | ||
ಪೂರ್ವಾಧಿಕಾರಿ ರಾಮಸ್ವಾಮಿ ವೆಂಕಟರಮನ್ | ಭಾರತದ ವಿತ್ತ ಮಂತ್ರಿ ೧೯೮೨–೧೯೮೪ | ಉತ್ತರಾಧಿಕಾರಿ ವಿಶ್ವನಾಥ್ ಪ್ರತಾಪ್ ಸಿಂಗ್ |
ಪೂರ್ವಾಧಿಕಾರಿ ಮೋಹನ್ ಧಾರಿಯಾ | Deputy Chairperson of the Planning Commission of India ೧೯೯೧–೧೯೯೬ | ಉತ್ತರಾಧಿಕಾರಿ ಮಧು ದಂಡವತೆ |
ಪೂರ್ವಾಧಿಕಾರಿ ದಿನೇಶ್ ಸಿಂಗ್ | Minister of External Affairs of India ೧೯೯೫–೧೯೯೬ | ಉತ್ತರಾಧಿಕಾರಿ ಸಿಕಂದೆರ್ ಬಖ್ತ್ |
ಪೂರ್ವಾಧಿಕಾರಿ ಜಾರ್ಜ್ ಫರ್ನಾಂಡಿಸ್ | Minister of Defence of India ೨೦೦೪–೨೦೦೬ | ಉತ್ತರಾಧಿಕಾರಿ Arackaparambil ಕುರಿಯನ್ಅಂಟೋನಿ |
ಪೂರ್ವಾಧಿಕಾರಿ ಮನಮೋಹನ್ ಸಿಂಗ್ | Minister for External Affairs of India ೨೦೦೬–೨೦೦೯ | ಉತ್ತರಾಧಿಕಾರಿ ಸೋಮನಹಳ್ಳಿ ಮಲ್ಲಯ್ಯ ಕೃಷ್ಣ |
Finance Minister of India ೨೦೦೯– ಇಲ್ಲಿಯವರೆಗೆ | Incumbent |