ಭಾರತ ರತ್ನ

ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ

ಭಾರತ ರತ್ನ ಭಾರತದ ನಾಗರಿಕರಿಗೆ ದೊರೆಯಬಹುದಾದ ಅತ್ಯುಚ್ಛ ಪ್ರಶಸ್ತಿ. ಭಾರತ ರತ್ನ ಪ್ರಶಸ್ತಿಯನ್ನು ಕಲೆ, ಸಾಹಿತ್ಯ, ವಿಜ್ಞಾನ, ಸಾರ್ವಜನಿಕ ಸೇವೆ ಮತ್ತಿತರ ಕ್ಷೇತ್ರಗಳಲ್ಲಿ ಅತಿ ದೊಡ್ಡ ಸಾಧನೆಗಳನ್ನು ತೋರಿದ ಗಣ್ಯರಿಗೆ ನೀಡಲಾಗುತ್ತದೆ. ಈ ಪ್ರಶಸ್ತಿಯನ್ನು ೧೯೫೪ ರಲ್ಲಿ ಆರಂಭಿಸಲಾಯಿತು. ಆಗ ಈ ಪ್ರಶಸ್ತಿಯನ್ನು ಯಾರಿಗೂ ಮರಣಾನಂತರ ಪ್ರಧಾನ ಮಾಡುವ ಉದ್ದೇಶವಿರಲಿಲ್ಲ. ಮಹಾತ್ಮ ಗಾಂಧಿಯವರಿಗೆ ಈ ಪ್ರಶಸ್ತಿ ದೊರಕದ್ದಕ್ಕೆ ಪ್ರಮುಖ ಕಾರಣ ಇದೇ ಇದ್ದೀತು. ೧೯೬೬ರ ನಂತರ ಮರಣಾನಂತರವೂ ಈ ಪ್ರಶಸ್ತಿಯನ್ನು ಪ್ರದಾನ ಮಾಡಲು ಅವಕಾಶ ಸೃಷ್ಟಿಯಾಯಿತು (ಇದುವರೆಗೆ ಒಟ್ಟು ಹದಿನಾಲ್ಕು ವ್ಯಕ್ತಿಗಳಿಗೆ ಅವರ ಮರಣಾನಂತರ ಭಾರತ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ). ಭಾರತ ರತ್ನ ಪ್ರಶಸ್ತಿಯನ್ನು ಪಡೆಯುವ ವ್ಯಕ್ತಿ ಭಾರತೀಯ ನಾಗರಿಕರಾಗಿರಬೇಕೆಂಬ ನಿಯಮವೇನಿಲ್ಲದಿದ್ದರೂ ಸಾಮಾನ್ಯವಾಗಿ ಇದನ್ನು ಪಾಲಿಸಲಾಗುತ್ತದೆ. ಭಾರತೀಯ ನಾಗರಿಕರಲ್ಲದಿದ್ದರೂ ಈ ಪ್ರಶಸ್ತಿಯನ್ನು ಪಡೆದ ಇಬ್ಬರೇ ವ್ಯಕ್ತಿಗಳೆಂದರೆ ನೆಲ್ಸನ್ ಮಂಡೇಲಾ (೧೯೯೦ ರಲ್ಲಿ) ಮತ್ತು ಖಾನ್ ಅಬ್ದುಲ್ ಗಫಾರ್ ಖಾನ್ (೧೯೮೭ ರಲ್ಲಿ). ಪ್ರಶಸ್ತಿ ಪದಕದ ಮೊದಲ ವಿನ್ಯಾಸದಂತೆ ವೃತ್ತಾಕಾರದ ಚಿನ್ನದ ಪದಕದ ಮೇಲೆ ಸೂರ್ಯನ ಚಿತ್ರ ಮತ್ತು ದೇವನಾಗರಿ ಲಿಪಿಯಲ್ಲಿ "ಭಾರತ ರತ್ನ", ಮತ್ತು ಹಿಂಭಾಗದಲ್ಲಿ ಭಾರತದ ರಾಷ್ಟ್ರೀಯ ಚಿಹ್ನೆ ಮತ್ತು "ಸತ್ಯಮೇವ ಜಯತೇ" ಎಂದು ಬರೆಯಬೇಕೆಂದಿದ್ದಿತು. ಈ ವಿನ್ಯಾಸದ ಯಾವುದೇ ಪದಕವನ್ನು ಉಪಯೋಗಿಸಲಾಗಿಲ್ಲ. ಮುಂದಿನ ವರ್ಷವೇ ಪದಕದ ವಿನ್ಯಾಸವನ್ನು ಈಗಿನ ವಿನ್ಯಾಸಕ್ಕೆ ಬದಲಾಯಿಸಲಾಯಿತು.

ಭಾರತ ರತ್ನ
ಪ್ರಶಸ್ತಿಯ ವಿವರ
ಮಾದರಿನಾಗರೀಕ
ವರ್ಗರಾಷ್ಟ್ರೀಯ
ಪ್ರಾರಂಭವಾದದ್ದು೧೯೫೪
ಕಡೆಯ ಪ್ರಶಸ್ತಿ೨೦೧೯
ಒಟ್ಟು ಪ್ರಶಸ್ತಿಗಳು೪೮
ಪ್ರಶಸ್ತಿ ನೀಡುವವರುಭಾರತ ಸರ್ಕಾರ
ವಿವರಸೂರ್ಯನ ಚಿತ್ರ ಮತ್ತು ಅರಳಿ ಎಲೆಯ ಚಿತ್ರದ ಮೇಲೆ ದೇವನಾಗರಿ ಲಿಪಿಯಲ್ಲಿ "ಭಾರತ ರತ್ನ"
Ribbon
ಮೊದಲ ಪ್ರಶಸ್ತಿ ಪುರಸ್ಕೃತರು೧೯೫೪

 • ಸರ್ವೆಪಲ್ಲಿ ರಾಧಾಕೃಷ್ಣನ್
 • ಸರ್ ಸಿ.ವಿ. ರಾಮನ್
 • ಸಿ. ರಾಜಗೋಪಾಲಚಾರಿ

ಕೊನೆಯ ಪ್ರಶಸ್ತಿ ಪುರಸ್ಕೃತರು೨೦೧೯

 • ಪ್ರಣಬ್ ಮುಖರ್ಜಿ
 • ಭೂಪೇನ್ ಹಝಾರಿಕಾ
 • ನಾನಾಜಿ ದೇಶಮುಖ್

ಪ್ರಶಸ್ತಿಯ ಶ್ರೇಣಿ
ಯಾವುದೂ ಇಲ್ಲ ← ಭಾರತ ರತ್ನಪದ್ಮ ವಿಭೂಷಣ

ಭಾರತ ರತ್ನ ಪ್ರಶಸ್ತಿಯನ್ನು ಪಡೆದವರ ಪಟ್ಟಿ

Key
   + ಭಾರತದ ಪೌರತ್ವ ಸ್ವೀಕೃತರು
    • ವಿದೇಶಿಯರು
   # ಮರಣೋತ್ತರ ಗೌರವ
ಭಾರತರತ್ನ ಪ್ರಶಸ್ತಿ ಪುರಸ್ಕೃತರು[೧]
ವರ್ಷಚಿತ್ರಸಮ್ಮಾನಿತರುರಾಜ್ಯ / ರಾಷ್ಟ್ರ
1954 ಸಿ. ರಾಜಗೋಪಾಲಾಚಾರಿತಮಿಳುನಾಡು
ಸರ್ವೆಪಲ್ಲಿ ರಾಧಾಕೃಷ್ಣನ್ಆಂಧ್ರಪ್ರದೇಶ
ಚಂದ್ರಶೇಖರ ವೆಂಕಟರಾಮನ್ತಮಿಳುನಾಡು
1955 ಭಗವಾನ್ ದಾಸ್ಉತ್ತರ ಪ್ರದೇಶ
ಮೋಕ್ಷಗುಂಡಂ ವಿಶ್ವೇಶ್ವರಯ್ಯಕರ್ನಾಟಕ
ಜವಾಹರಲಾಲ್ ನೆಹರುಉತ್ತರ ಪ್ರದೇಶ
1957 ಜಿ. ಬಿ. ಪಂತ್ಉತ್ತರ ಪ್ರದೇಶ
1958 ಧೊಂಡೊ ಕೇಶವ ಕರ್ವೆಮಹಾರಾಷ್ಟ್ರ
1961 ಬಿಧಾನ್‌ ಚಂದ್ರ ರಾಯ್‌ಪಶ್ಚಿಮ ಬಂಗಾಳ
ಪುರುಷೋತ್ತಮ್ ದಾಸ್ ಟಂಡನ್ಉತ್ತರ ಪ್ರದೇಶ
1962 ರಾಜೇಂದ್ರ ಪ್ರಸಾದ್ಬಿಹಾರ
1963 ಜಾಕಿರ್ ಹುಸೇನ್ಉತ್ತರ ಪ್ರದೇಶ
ಪಿ. ವಿ. ಕಾಣೆಮಹಾರಾಷ್ಟ್ರ
1966 ಲಾಲ್ ಬಹದ್ದೂರ್ ಶಾಸ್ತ್ರಿ[lower-roman ೧]#ಉತ್ತರ ಪ್ರದೇಶ
1971 ಇಂದಿರಾ ಗಾಂಧಿಉತ್ತರ ಪ್ರದೇಶ
1975 ವಿ. ವಿ. ಗಿರಿಒಡಿಶಾ
1976 ಕೆ. ಕಾಮರಾಜ್[lower-roman ೨]#ತಮಿಳುನಾಡು
1980 ಮದರ್ ತೆರೇಸಾ +ಪಶ್ಚಿಮ ಬಂಗಾಳ
[lower-alpha ೧]
1983 ವಿನೋಬಾ ಭಾವೆ[lower-roman ೩]#ಮಹಾರಾಷ್ಟ್ರ
1987 ಖಾನ್ ಅಬ್ದುಲ್ ಗಫಾರ್ ಖಾನ್ •  ಪಾಕಿಸ್ತಾನ
1988 ಎಂ. ಜಿ. ರಾಮಚಂದ್ರನ್[lower-roman ೪]#ತಮಿಳುನಾಡು
1990 ಬಿ. ಆರ್. ಅಂಬೇಡ್ಕರ್[lower-roman ೫]#ಮಹಾರಾಷ್ಟ್ರ
ನೆಲ್ಸನ್ ಮಂಡೇಲಾ •  ದಕ್ಷಿಣ ಆಫ್ರಿಕಾ
1991 ರಾಜೀವ್ ಗಾಂಧಿ[lower-roman ೬]#ಉತ್ತರ ಪ್ರದೇಶ
ವಲ್ಲಭ್‌ಭಾಯಿ ಪಟೇಲ್[lower-roman ೭]#ಗುಜರಾತ್
ಮೊರಾರ್ಜಿ ದೇಸಾಯಿಗುಜರಾತ್
1992 ಮೌಲಾನಾ ಅಬುಲ್ ಕಲಾಂ ಆಜಾ಼ದ್[lower-roman ೮]#ಪಶ್ಚಿಮ ಬಂಗಾಳ
ಜೆ. ಆರ್. ಡಿ. ಟಾಟಾಮಹಾರಾಷ್ಟ್ರ
ಸತ್ಯಜಿತ್ ರೇಪಶ್ಚಿಮ ಬಂಗಾಳ
1997 ಗುಲ್ಜಾರಿಲಾಲ್ ನಂದಾಪಂಜಾಬ್
ಅರುಣಾ ಅಸಫ್ ಅಲಿ[lower-roman ೯]#ಪಶ್ಚಿಮ ಬಂಗಾಳ
ಎ. ಪಿ. ಜೆ. ಅಬ್ದುಲ್ ಕಲಾಂತಮಿಳುನಾಡು
1998 ಎಂ. ಎಸ್. ಸುಬ್ಬುಲಕ್ಷ್ಮೀತಮಿಳುನಾಡು
ಸಿ. ಸುಬ್ರಹ್ಮಣ್ಯಂತಮಿಳುನಾಡು
1999 ಜಯಪ್ರಕಾಶ್ ನಾರಾಯಣ್[lower-roman ೧೦]#ಬಿಹಾರ
ಅಮರ್ತ್ಯ ಸೇನ್ಪಶ್ಚಿಮ ಬಂಗಾಳ
ಗೋಪಿನಾಥ್ ಬೋರ್ಡೊಲೋಯಿ[lower-roman ೧೧]#ಅಸ್ಸಾಂ
ರವಿಶಂಕರ್ಪಶ್ಚಿಮ ಬಂಗಾಳ
2001 ಲತಾ ಮಂಗೇಶ್ಕರ್ಮಹಾರಾಷ್ಟ್ರ
ಬಿಸ್ಮಿಲ್ಲಾ ಖಾನ್ಉತ್ತರ ಪ್ರದೇಶ
2008 ಭೀಮಸೇನ ಜೋಶಿಕರ್ನಾಟಕ
2014 ಸಿ. ಎನ್. ಆರ್. ರಾವ್ಕರ್ನಾಟಕ
ಸಚಿನ್ ತೆಂಡೂಲ್ಕರ್ಮಹಾರಾಷ್ಟ್ರ
2015 ಮದನ ಮೋಹನ ಮಾಳವೀಯ[lower-roman ೧೨]#ಉತ್ತರ ಪ್ರದೇಶ
ಅಟಲ್ ಬಿಹಾರಿ ವಾಜಪೇಯಿಮಧ್ಯಪ್ರದೇಶ
2019 ಪ್ರಣಬ್ ಮುಖರ್ಜಿಪಶ್ಚಿಮ ಬಂಗಾಳ
ಭೂಪೇನ್ ಹಜಾರಿಕಾ[lower-roman ೧೩]#ಅಸ್ಸಾಂ
ನಾನಾಜಿ ದೇಶಮುಖ್[lower-roman ೧೪]#ಮಹಾರಾಷ್ಟ್ರ

ಉಲ್ಲೇಖಗಳು

ಹೊರಸಂಪರ್ಕ ಕೊಂಡಿಗಳು


ಉಲ್ಲೇಖ ದೋಷ: <ref> tags exist for a group named "lower-alpha", but no corresponding <references group="lower-alpha"/> tag was found