ನಿರಾಕರಣವಾದ

ನಿರಾಕರಣವಾದ ವು (ಲ್ಯಾಟಿನ್ ಮೂಲದ ಶೂನ್ಯತ್ವ) ಆಧ್ಯಾತ್ಮಿಕ ತತ್ವವಾಗಿದ್ದು, ಒಂದು ಅಥವಾ ಅದಕ್ಕಿಂತ ಹೆಚ್ಚು ಮಾರ್ಗದಲ್ಲಿ ಅರ್ಥಪೂರ್ಣ ಜೀವನದಲ್ಲಿನ ಋಣಾತ್ಮಕವನ್ನು ಸೂಚಿಸುತ್ತದೆ.nihil ನೈಜ ಮೌಲ್ಯಗಳು ಜೀವನಕ್ಕೆ ಗುರಿ ಇಲ್ಲದಿರುವಿಕೆ, ಉದ್ದೇಶಿತ ಜೀವನದ ಕುರಿತು ವಾದ ಮಾಡುವ ನಿರಾಕರಣವಾದವನ್ನು ಸರ್ವೆ ಸಾಧಾರಣವಾಗಿ ಅಸ್ತಿತ್ವವಿರುವ ನಿರಾಕರ‍ಣವಾದದ ರೂಪದಲ್ಲಿ ಪ್ರಸ್ತುತಪಡಿಸಲಾಗುತ್ತದೆ.[೧] ನೈತಿಕ ನಿರಾಕರಣವಾದಿಗಳ ಪ್ರಕಾರ ಸಾವು ಅನ್ನುವುದು ಸಹಜರೂಪದಲ್ಲಿ ಅಸ್ತಿತ್ವದಲ್ಲಿಲ್ಲ,ಮತ್ತು ಯಾವುದೇ ಸ್ಥಾಪಿತ ನೈತಿಕ ಮೌಲ್ಯಗಳು ಅಮೂರ್ತ ಸ್ವರೂಪದಲ್ಲಿವೆ ಎಂದು ವಾದಿಸುತ್ತಾರೆ. ನಿರಾಕರಣವಾದವು ಜ್ಞಾನಶಾಸ್ತ್ರ, ಅನುಭಾವ ಅಥವಾ ತತ್ವಶಾಸ್ತ್ರದ ಅರ್ಥದ ರೂಪವನ್ನು ಕ್ರಮವಾಗಿ ಕೆಲ ಸಂದರ್ಭದಲ್ಲಿ ಪಡೆಯಬಹುದು. ಅದು ಜ್ಞಾನದ ಕೆಲ ವಿಧಗಳಲ್ಲಿ ಸಾಧ್ಯವಾಗಿಲ್ಲದಿರಬಹುದು ಅಥವ ಆ ರೀತಿ ವಾಸ್ತವಿಕತೆಯ ಕೆಲ ವಿಧಗಳ ನಂಬಿಕೆಗೆ ಅದು ವಿರುದ್ಧವಾಗಿರಬಹುದು.

ಕೆಲವು ಬಾರಿ ನಿರಾಕರಣವಾದ ಶಬ್ದವನ್ನು ಸಮಾಜದಲ್ಲಿನ ನೈತಿಕ ಮೌಲ್ಯಗಳ ಅಧಃಪತನಕ್ಕೆ ಸಂಯೋಜಿಸಿ ಅಂತ್ಯವಿಲ್ಲದ ಅಸ್ತಿತ್ವವನ್ನು ಇಂದ್ರಿಯಗಳಿಂದ ಗ್ರಹಿಸುವುದಕ್ಕೆ ಸಾಮಾನ್ಯವಾಗಿ ಮೂಡುವ ನಿರಾಕರಣವಾದದ ವಿವರಣೆಗೆ ಉಪಯೋಗಿಸಲಾಗುತ್ತದೆ. ಈ ಮೂಲಕ ವ್ಯಕ್ತಿಯು ಯಾವುದೇ ನಿಬಂಧನೆಗಳು, ನಿಯಮಗಳು ಮತ್ತು ಕಟ್ಟಳೆಗಳ ಅಗತ್ಯವಿಲ್ಲ ಎಂದು ಅರಿವಿಗೆ ಬಂದು ಬೆಳವಣಿಗೆ ಹೊಂದಬಹುದು.[೨] ವಿವಿಧ ಸಂದರ್ಭದಲ್ಲಿ ಮತ್ತು ಮತ್ತು ಸಮಯಕ್ಕಾನುಸಾರ, ಸಂಭಾಷಣೆಕಾರರು ಭವಿತವ್ಯವಾದ ಮತ್ತು ವಿನಾಶವಾದ ಸೇರಿದಂತೆ ಇತರವುಗಳನ್ನು "ನಿರಾಕರಣವಾದ" ಎಂದು ಗುರುತಿಸಿದ್ದಾರೆ.[೩]

ಕಾಲಾವಧಿಯನ್ನು ವಿವರಿಸುವಂತಹ ವೈಶಿಷ್ಟ್ಯವನ್ನು ನಿರಾಕರಣವಾದ ಹೊಂದಿದ್ದು, ಉದಾ: ಜೀನ್ ಬೌಡ್ರಿಲ್ಯಾರ್ಡ್ ಮತ್ತು ಇತರರು ಆಧುನಿಕತೆಯ ನಂತರದ ಕಾಲಾವಧಿಯನ್ನು ನಿರಾಕರಣವಾದದ[೪] ಶಕೆ ಎಂದು ಕರೆದರು. ಕೆಲ ಕ್ರಿಶ್ಚಿಯನ್ ಬ್ರಹ್ಮಜ್ಞಾನಿಗಳು ಮತ್ತು ಧಾರ್ಮಿಕವಾದಿಗಳು ಆಧುನಿಕತೆಯ ನಂತರದ ಕಾಲಾವಧಿಯು ಮತ್ತು ಆಧುನಿಕತೆಯ[೩] ಹಲವಾರು ಮುಖಗಳು ಆಸ್ತಿಕವಾದದ ತಿರಸ್ಕಾರವನ್ನು ಪ್ರತಿನಿಧಿಸುತ್ತದೆ. ಮತ್ತು ಈ ರೀತಿಯ ನಿರಾಕರಣೆಯು ನಾಸ್ತಿಕವಾದಕ್ಕೆ ಹತ್ತಿರವಾಗಿದೆ ಎಂದು ಖಡಾಖಂಡಿತವಾಗಿ ಹೇಳಿದರು.

ಇತಿಹಾಸ

೧೯ನೆಯ ಶತಮಾನ

ನಿರಾಕರಣವಾದ ಶಬ್ದವನ್ನು ಮೊದಲು ಕಾದಂಬರಿಕಾರ ಇವಾನ್ ತುರ್ಜೆನೆವ್(೧೮೧೮-೧೮೮೩)ರಲ್ಲಿ ತನ್ನ ಫಾಧರ್ಸ್ ಅಂಡ್ ಸನ್ಸ್ ಕಾದಂಬರಿಯಲ್ಲಿ ಜನಪ್ರಿಯಗೊಳಿಸಿದನಾದರೂ, ಮೊದಲು ಫ್ರೆಡ್ರಿಕ್ ಹೆನ್ರಿಕ್ ಜಾಕೋಬಿ (೧೭೪೩-೧೮೧೯) ಅವರಿಂದ ಇದು ಆಧ್ಯಾತ್ಮಿಕ ವಲಯಕ್ಕೆ ಪರಿಚಯಿಸಲ್ಪಟ್ಟಿತು.[೫] ಜಾಕೋಬಿ ತಾರ್ಕಿಕವಾದದ ಗುಣಲಕ್ಷಣ ವಿವರಣೆಯಲ್ಲಿ ನಿರಾಕರಣವಾದದ ಶಬ್ದವನ್ನು ಉಪಯೋಗಿಸಲಾಯಿತು. ಅದರಲ್ಲೂ ವಿಶೇಷವಾಗಿ ಇಮ್ಯಾನುಯೇಲ್ ಕಾಂಟ್ ಅವರ "ಕ್ರಿಟಿಕಲ್"ನ ಆಧ್ಯಾತ್ಮವಾದವನ್ನು ಅಸಂಬದ್ಧತೆಗೆ ಇಳಿಕೆಯಲ್ಲಿ ಉಪಯೋಗಿಸಲ್ಪಟ್ಟಿದೆ. ಇದರ ಪ್ರಕಾರ ಎಲ್ಲ ತಾರ್ಕಿಕವಾದಗಳು (ವಿಮರ್ಶೆಯಾಗಿ ಆಧ್ಯಾತ್ಮವಾದ) ಅಂತಿಮವಾಗಿ ನಾಸ್ತಿಕವಾದಕ್ಕೆ ತಲುಪುತ್ತವೆ. ಹೀಗಾಗಿ ಇದನ್ನು ತಡೆಯಬೇಕು ಮತ್ತು ಒಂದು ನಂಬಿಕೆ ಮತ್ತು ದೈವಪ್ರೇರಣೆಯೊಂದಿಗೆ ಸ್ಥಾನಪಲ್ಲಟಗೊಳಿಸಬೇಕು.[೬]

ಉದಾಹರಣೆಗೆ ಬ್ರೆಟ್ ಡೆವಿಸ್ ಅವರು ಬರೆದಿರುವ ಪ್ರಸಿದ್ಧ ಪತ್ರದಲ್ಲಿ ಫಿಚ್ಚೆ ಅವರ ಆದರ್ಶವಾದ ನಿರಾಕರಣವಾದದ ತೆಕ್ಕೆಯಲ್ಲಿ ಬೀಳುತ್ತಿದೆ ಎಂದು ಟೀಕಿಸಿ ನಾಸ್ತಿಕವಾದ ಪರಿಕಲ್ಪನೆಯನ್ನು ಆಧ್ಯಾತ್ಮಿಕದ ಬೆಳಕಿನಲ್ಲಿ ಅಭಿವೃದ್ಧಿಪಡಿಸಿದ ಖ್ಯಾತಿ ಪೂರ್ಣತಃ ಫ್ರೆಡರಿಕ್ ಜಾಕೊಬಿ ಅವರಿಗೆ ಸಲ್ಲಬೇಕು. ಜಾಕೊಬಿ ಅವರ ಪ್ರಕಾರ ಮದದ ಅದ್ವೈತವು ವಿಷಯದಲ್ಲಿನ ಅಗ್ನಿಕಾರಕವಾಗಿದ್ದು, ಅದು ದೈವದ ಅನುಭವಾತೀತವಾದವನ್ನು ಧಿಕ್ಕರಿಸುತ್ತದೆ.[೭] ತುರ್ಗನೇವ್‌ ಅವರಿಂದ ಜನಪ್ರಿಯಗೊಂಡ ನಿರಾಕರಣವಾದದ ಶಬ್ದವು

ನಿರಾಕರಣವಾದ ಚಳುವಳಿ ಈ ಪದವನ್ನು ಸ್ವೀಕರಿಸಿತು. ರಷಿಯಾದ ಹೊಸ ರಾಜಕೀಯ ಚಳುವಳಿ ನಿರಾಕರಣವಾದ ವನ್ನು ಸ್ವೀಕರಿಸಿ ನಿರಾಕರಣವಾದ ಚಳುವಳಿ ಎಂದು ಕರೆಯಿತು. ನಿರಾಕರಣವಾದಿಗಳು ತಮ್ಮ ತಾವೇ ಕರೆದುಕೊಳ್ಳುತ್ತಿದ್ದ ಅವರ ಪ್ರಕಾರ "ಆ ಸಮಯದಲ್ಲಿ ಅವರ ದೃಷ್ಟಿಯಲ್ಲಿ ಏನೂ ಅಸ್ತಿತ್ವದಲ್ಲಿ ಇರಲಿಲ್ಲ"[೮]

ಕೀರ್ಕಿಗಾರ್ಡ್‌‍

ಸೋರೇನ್ ಕೀರ್ಕಿಗಾರ್ಡ್‌‍ (೧೮೧೩-೧೮೫೫) ಪ್ರಾರಂಭಿಕ ಹಂತದ ನಿರಾಕರಣವಾದವು ಶೂನ್ಯತ್ವವಾಗಿದೆ ಎಂದು ಹೇಳಿದ್ದು.[೯] ಶೂನ್ಯತ್ವದ ಪ್ರಕ್ರಿಯೆ ಎಂದರೆ ವೈಯಕ್ತಿಕವನ್ನು ನಾಶಗೊಳಿಸುವುದು ಆಗಿದ್ದು, ಇಲ್ಲಿ ವೈಯಕ್ತಿಕ ವಿಶಿಷ್ಟತೆಯು ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ ಮತ್ತು ಅವನ ಅಸ್ತಿತ್ವದಲ್ಲಿ ಯಾವುದೇ ಅರ್ಥವಿಲ್ಲ ಎನ್ನುವುದನ್ನು ಎತ್ತಿ ತೋರಿಸುತ್ತದೆ.

Levelling at its maximum is like the stillness of death, where one can hear one's own heartbeat, a stillness like death, into which nothing can penetrate, in which everything sinks, powerless. One person can head a rebellion, but one person cannot head this levelling process, for that would make him a leader and he would avoid being levelled. Each individual can in his little circle participate in this levelling, but it is an abstract process, and levelling is abstraction conquering individuality.

— Søren Kierkegaard, The Present Age, translated by Alexander Dru with Foreword by Walter Kaufmann, p. ೫೧-೫೩'

ಆಧ್ಯಾತ್ಮಿಕ ಜೀವನದ ವಾದಿಯಾಗಿದ್ದ ಕೀರ್ಕಿಗಾರ್ಡ್‌‍, ಸಾಮಾನ್ಯವಾಗಿ ಶೂನ್ಯತ್ವ ಮತ್ತು ಅದರ ನಿರಾಕರಣವಾದದ ಪರಿಣಾಮಗಳ ವಿರೋಧಿಸಿ ವಾದ ಮಾಡಿದನು. ಆದಾಗ್ಯೂ ಆತನು ಇದು " ಶೂನ್ಯತ್ವದ ಕಾಲದಲ್ಲಿ ಜೀವಿಸುವುದಕ್ಕೆ ನಿಜವಾಗಿಯೂ ಜ್ಞಾನ ನೀಡುವುದಂತಹದ್ದು ಆಗಿದೆ. ಎಕೆಂದರೆ ಎಕಾಂಗಿತನದ ಬಗ್ಗೆ ತೀರ್ಮಾನಿಸುವುದಕ್ಕೆ ಜನರನ್ನು ಒತ್ತಾಯಕ್ಕೆ ಎಡೆ ಮಾಡಿಕೊಡುತ್ತದೆ."[೧೦] ಆಧ್ಯಾತ್ಮಿಕ ಮತ್ತು ರಾಜಕೀಯ ಈ ಎರಡುವುಗಳಲ್ಲಿ ನಂಬಿಕೆ ಮತ್ತು ಶೂನ್ಯತ್ವಕ್ಕೆ ಮಾನದಂಡ ನಿಗದಿ ಮಾಡುವುದನ್ನು ಕೀರ್ಕಿಗಾರ್ಡ್‌‍ ವಿರೋಧಿಸಿದ್ದನು. ೧೯ನೇ ಶತಮಾನದಲ್ಲಿ (ಮತ್ತು ಅವನು) ಪೂಜ್ಯತೆಗೆ ನಿಗದಿಪಡಿಸಲಾದ ಮಾನದಂಡಗಳನ್ನು ಪ್ರಬಲ ಅಭಿಪ್ರಾಯಕ್ಕೆ ವಿರೋಧವಾಗಿ ರೂಪಿಸಿ ವ್ಯಕ್ತಿಯನ್ನು ಸಾಮುದಾಯಿಕ ಸಂಸ್ಕೃತಿಯ ಮಟ್ಟಕ್ಕೆ ಇಳಿಸುವುದನ್ನು ಆತನು ವಿರೋಧಿಸಿದ್ದನು ಎಂದು ಜಾರ್ಜ್ ಕಾಟ್ಕಿನ್ ಖಂಡಿತವಾಗಿ ಹೇಳುತ್ತಾರೆ.[೧೧] ಅವನ ಅವಧಿಯಲ್ಲಿ (ಡ್ಯಾನಿಷ್ ಕಾರ್ಸನ್ ) ನಂತಹ ಟಾಬ್ಲಾಯಿಡ್‌‍ಗಳು ಮತ್ತು ಭ್ರಷ್ಟ ಕ್ರಿಶ್ಚಿಯನ್ ಧರ್ಮವು ಶೂನ್ಯತ್ವದ ಪ್ರತಿಪಾದನೆಗೆ ಸಾಧನಗಳು ಆಗಿದ್ದವು ಮತ್ತು ೧೯ನೇ ಶತಮಾನದಲ್ಲಿ ಯುರೋಪ್‌‍ನಲ್ಲಿ "ಪ್ರತಿಫಲನಾತ್ಮಕ ಭಾವನಾರಹಿತ ಅವಧಿ" ಗೆ ಕಾರಣವಾಯಿತು.[೧೨]ಶೂನ್ಯತ್ವದ ಪ್ರಕ್ರಿಯೆಯಿಂದ ಹೊರಬರುವಲ್ಲಿ ಸಮರ್ಥರಾಗಿರುವ ವ್ಯಕ್ತಿಗಳು ಸಾಮರ್ಥ್ಯವಂತರಾಗಿದ್ದು, ಮತ್ತು "ನಿಜವಾದ ವ್ಯಕ್ತಿ" ಆಗುವಲ್ಲಿ ಸರಿಯಾದ ಹೆಜ್ಜೆ ಎಂದು ಕೀರ್ಕಿಗಾರ್ಡ್‌‍ ವಾದಿಸುತ್ತಾನೆ.[೧೦][೧೩] ಶೂನ್ಯತ್ವದಿಂದ ನಾವು ಹೊರಬರಲೇ ಬೇಕು ಎಂದ ಕೀರ್ಕಿಗಾರ್ಡ್‌‍‌ನ ಆಸಕ್ತಿಯನ್ನು ಹರ್ಬರ್ಟ್ ಡ್ರೆಫ್ಯೂಸ್ ಮತ್ತು ಜೇನ್ ರುಬಿನ್ ವಾದಿಸುತ್ತಾರೆ. "ಬೆಳವಣಿಗೆಯಾಗುತ್ತಿರುವ ನಿರಾಕರಣವಾದದ ಕಾಲದಲ್ಲಿ ನಮ್ಮ ಜೀವನ ಹೇಗೆ ಅರ್ಥಪೂರ್ಣ ಎನ್ನುವುದನ್ನು ನಾವು ಹೇಗೆ ಮರಳಿಪಡೆಯಬಹುದು."[೧೪]

ಕೀರ್ಕಿಗಾರ್ಡ್‌‍ ಅವರ ಅರ್ಥದ ನಿರಾಕರಣವಾದವು ಆ ಪ್ರಕಾರ ನೋಡಿದಲ್ಲಿ ಆಧುನಿಕ ನಿರಾಕರಣವಾದದ ವ್ಯಾಖ್ಯಾನ ವಿಭಿನ್ನವಾಗಿದೆ ಎನ್ನುವುದನ್ನು ಗಮನಿಸಬೇಕಾಗುತ್ತದೆ. ಕೀರ್ಕಿಗಾರ್ಡ್‌‍ ಅವರಿಗೆ ಶೂನ್ಯತ್ವವು ಅರ್ಥವಿಲ್ಲದ ಜೀವನ, ಉದ್ದೇಶ ಅಥವ ಮೌಲ್ಯಕ್ಕೆ[೧೨] ಎಡೆ ಮಾಡಿಕೊಡುತ್ತದೆ. ಅದೇ ಆಧುನಿಕ ವ್ಯಾಖ್ಯಾನವು ಜೀವನಕ್ಕೆ ಯಾವುದೇ ಅರ್ಥ, ಉದ್ದೇಶ ಮತ್ತು ಮೌಲ್ಯವೇ ಇರಲಿಲ್ಲ ಎಂದು ಪ್ರಾರಂಭವಾಗುತ್ತದೆ.

ನೀತ್ಸೆ

ಕೆಲ ಸಂದರ್ಭದಲ್ಲಿ ನಿರಾಕರಣವಾದವು, ಪಾಶ್ಚಿಮಾತ್ಯ ಸಂಸ್ಕೃತಿಯಲ್ಲಿ ವ್ಯವಹಾರಿಕವಾಗಿ ಸವಿಸ್ತರವಾಗಿ ಹರಡಿಕೊಂಡಿರುವ ನಿರಾಕರಣವಾದದ ಸಂಪೂರ್ಣ ವಿವರವನ್ನು ನೀಡಿದ ಜರ್ಮನ್ ತತ್ವಜ್ಞಾನಿ ಫ್ರೆಡ್ರಿಕ್ ನೀತ್ಸೆ ಅವರೊಂದಿಗೆ ತಳಕು ಹಾಕಿಕೊಂಡಿದೆ. ನಿತ್ಸೆ ಅವರ ಕೆಲಸದ ಉದ್ದಕ್ಕೂ ಅವರು ಶಬ್ದವನ್ನು ವೈವಿಧ್ಯಮಯವಾಗಿ ವಿಭಿನ್ನ ಅರ್ಥಗಳು ಮತ್ತು ಲಕ್ಷಣಾರ್ಥಗಳೊಂದಿಗೆ ಋಣಾತ್ಮಕವಾಗಿ ಮತ್ತು ಧನಾತ್ಮಕವಾಗಿಯೂ ಉಪಯೋಗಿಸುತ್ತಾರೆ. ಸಾಮಾನ್ಯವಾಗಿ ಅವರು ನಿರಾಕರಣವಾದವನ್ನು "ನಾವು ಯಾವುದಕ್ಕೆ ಮೌಲ್ಯವನ್ನು ನೀಡಬೇಕು ಎನ್ನುವ ಅಸಮ ಅನುಪಾತ ಮತ್ತು ನಿರ್ವಹಣೆಯಲ್ಲಿ ಜಗತ್ತು ಇರಬಹುದು ಎನ್ನುವುದರ ನಡುವಿನ ಒತ್ತಡದ ಸ್ಥಿತಿಯಾಗಿದೆ" ಎಂದು ವಿವರಿಸುತ್ತಾರೆ.[೧೫] ಜಗತ್ತು, ನಮಗೆ ಬೇಕಾಗಿರುವ ಉದ್ದೇಶಿತ ಮೌಲ್ಯ ಅಥವಾ ಅರ್ಥವನ್ನು ಹೊಂದಿಲ್ಲ ಎಂದು ಅರಿವಿಗೆ ಬಂದ ಮೇಲೆ ಅಥವ ಇದು ಅನಾದಿ ಕಾಲದಿಂದಲೂ ಹೀಗೆ ಇದೆ ಎಂದು ನಾವು ನಂಬಿದ್ದಲ್ಲಿ ನಮ್ಮಲ್ಲಿ ಬಿಕ್ಕಟ್ಟನ್ನು ಕಾಣುತ್ತೇವೆ.[೧೬] ಕ್ರಿಶ್ಚಿಯನ್ ಧರ್ಮದ ಅವನತಿ ಮತ್ತು ಮಾನಸಿಕವಾಗಿ ನೈತಿಕ ಮೌಲ್ಯಗಳ ಅಧಃಪತನದ ಬೆಳವಣಿಗೆಯಾಗಿದ್ದು, ವಾಸ್ತವಿಕವಾಗಿ ನಿರಾಕರಣವಾದವು ಆಧುನಿಕ ಕಾಲದ[೧೭] ವೈಶಿಷ್ಟ್ಯವನ್ನು ಹೊಂದಿದೆ ಎಂದು ಖಂಡಿತವಾಗಿ ಹೇಳುತ್ತಾರೆ. ಆದರೂ ಕೂಡ ಅವರು ನಿರಾಕರಣವಾದದ ಬೆಳವಣಿಗೆಯು ಅಪೂರ್ಣವಾಗಿದ್ದು ಮತ್ತು ಅದು ಅದರಿಂದ ಹೊರಬರಬೇಕಾಗಿದೆ ಎಂದು ಭಾವಿಸುತ್ತಾರೆ.[೧೮]

ಆದರೂ ನಿರಾಕರಣವಾದದ ಸಮಸ್ಯೆಯು ವಿಶೇಷವಾಗಿ ನೀತ್ಸೆ ಮರಣಾನಂತರ ಪ್ರಕಟಗೊಂಡ ಅವರ ಪುಸ್ತಕಗಳಲ್ಲಿ ಅಭಿವ್ಯಕ್ತಗೊಂಡಿದೆ. ಅವರ ಪ್ರಕಟಿತ ಲೇಖನಗಳಲ್ಲಿ ಪದೇ ಪದೇ ಇದನ್ನು ಉಲ್ಲೇಖಿಸಲಾಗಿದ್ದು, ಮತ್ತು ಅದು ಉಲ್ಲೇಖಿಸಲ್ಪಟ್ಟ ಹಲವಾರು ಸಮಸ್ಯೆಗಳಿಗೆ ತೀರ ಹತ್ತಿರವಾಗಿದೆ.

ಜಗತ್ತನ್ನು ಅದರಲ್ಲೂ ಮನುಷ್ಯನ ಅಸ್ತಿತ್ವದ ಅರ್ಥ, ಉದ್ದೇಶ, ಸಮಗ್ರ ಸತ್ಯ ಅಥವ ಮೂಲ ಮೌಲ್ಯಗಳನ್ನು ಶೂನ್ಯಗೊಳಿಸುವುದಾಗಿದೆ ಎಂದು ನಿತ್ಸೆ ನಿರಾಕರಣವಾದವನ್ನು ವರ್ಗಿಕರಿಸುತ್ತಾರೆ. ಈ ರೀತಿಯ ದೃಷ್ಟಿಕೋನವು ನಿತ್ಸೆಯ ಗಣನೆಯಲ್ಲಿ ಅಥವ 'ಜ್ಞಾನವು' ಕೆಲವರಲ್ಲಿನ ಕೆಲವು ಸಂಗತಿಗಳಿಂದ ಎನ್ನುವ ಅವರ ಅಭಿವ್ಯಕ್ತಿಯಲ್ಲಿ ಕಾಣಸಿಗುತ್ತದೆ. ಇದು ಯಾವಾಗಲೂ ದೃಷ್ಟಿಕೋನದ ವ್ಯಾಪ್ತಿಯಲ್ಲಿದ್ದು ಇದು ಬರೀ ವಾಸ್ತವಿಕವಲ್ಲ.[೧೯] ನಿಜವಾಗಿಯೂ ಹೇಳುವುದಾದರೆ ಅರ್ಥ ವಿವರಣೆಯ ಮೂಲಕ ಈ ಜಗತ್ತನ್ನು ನಾವು ಅರ್ಥೈಸಿಕೊಂಡು ಅದಕ್ಕೆ ಅರ್ಥವನ್ನು ನೀಡುತ್ತೇವೆ. ಅರ್ಥವಿವರಣೆಯಿಲ್ಲದೇ ನಾವು ಮುಂದಕ್ಕೆ ಸಾಗಲಾರೆವು, ವಾಸ್ತವಿಕವಾಗಿ ನಮಗೆ ಇಂತಹದ್ದೊಂದು ಅಗತ್ಯ ವಿದೆ. ಮೃತ್ಯುವಿನ ಮುಖಾಂತರ ಜಗತ್ತನ್ನು ಅರ್ಥೈಸುವುದು ಒಂದು ಮಾರ್ಗವಾಗಿದ್ದು, ಮೂಲಭೂತ ಮಾರ್ಗವಾಗಿರುವ ಇದರ ಮೂಲಕ ಜನರು ಜಗತ್ತಿನ ಅನುಭಾವವನ್ನು ವಿಶೇಷವಾಗಿ ಅವರದೇ ಆದ ಚಿಂತನೆಗಳು ಮತ್ತು ಕ್ರಮಗಳಿಂದ ಪಡೆಯುಯುತ್ತಾರೆ. ನೀತ್ಸೆ ಅವರು ಮೃತ್ಯುವನ್ನು ಪ್ರಬಲವಾದ ಮತ್ತು ಆರೋಗ್ಯಯುತವಾದುದು ಎಂದು ವರ್ಗಿಕರಿಸುವ ಅರ್ಥದಲ್ಲಿ, ಪ್ರಶ್ನಾಭಾವದಲ್ಲಿರುವ ವ್ಯಕ್ತಿ ತನ್ನನ್ನು ತಾನು ದುರ್ಬಲ ಮೃತ್ಯುವಿನಿಂದ ನಿರ್ಮಿಸಿಕೊಳ್ಳುತ್ತಿದ್ದೇನೆ ಎನ್ನುವ ಅರಿವಿನಲ್ಲಿ ಇರುತ್ತಾನೆ. ಇಲ್ಲಿ ಕೆಲ ಆತೀತವಾಗಿರುವ ಆಧಾರದ ಮೇಲೆ ಇಲ್ಲಿ ವ್ಯಾಖ್ಯಾನಿಸಲಾಗಿದೆ. ಅದರ ಸಾಮರ್ಥ್ಯದ ಹೊರತಾಗಿಯೂ ಮೃತ್ಯು ನಮಗೆ ಅರ್ಥವನ್ನು ಒದಗಿಸುತ್ತದೆ.[೨೦] ಜೀವನದ ಮುಖಾಂತರ ಸಾಗುವುದಕ್ಕೆ ರಚಿತವಾಗಿದಯೋ ಅಥವಾ "ಬೇರೂರಲ್ಪಟ್ಟಿದ್ದರೂ" ಸಹಕಾರಿಯಾಗುತ್ತದೆ. ಇದೇ ಮಾತನ್ನು ನೀತ್ಸೆ, "ಸಂಪೂರ್ಣ ಮೌಲ್ಯರಹಿತ" ಅಥವ "ಅರ್ಥವಿಲ್ಲದಿರುವಿಕೆ" ಅಪಾಯಕಾರಿಯಾಗಿದ್ದು "ಅಪಾಯದ ಅಪಾಯ"ವನ್ನು[೨೧] ನಿರಾಕರಣವಾದ ಹೇಳುತ್ತದೆ ಎಂದು ಉಲ್ಲೇಖಿಸುತ್ತಾರೆ. ಈ ನಿರ್ಣಯದ ಕಾರಣ ಜನರು ಅಪಾಯವನ್ನು ಎದುರಿಸುವುದು, ನೋವು ಮತ್ತು ಜೀವನದಲ್ಲಿನ ಅಡೆತಡೆಗಳನ್ನು ಎದುರಿಸುತ್ತಾರೆ. ಎಲ್ಲ ಅರ್ಥಗಳ ಮತ್ತು ಎಲ್ಲ ಮೌಲ್ಯಗಳ ಸಂಪೂರ್ಣ ವಿನಾಶವು ಆತ್ಮಹತ್ಯೆ ಅಥವ ಸಾಮೂಹಿಕ ನರಮೇಧಕ್ಕೆ ಸಮಾನಾರ್ಥಕವಾಗಿದೆ.[೨೨]

ನಿರಾಕರಣವಾದದ ಸಮಸ್ಯೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕ್ರಿಶ್ಚಿಯನ್ ಧರ್ಮದ ಕುರಿತು ನೀತ್ಸೆ ತಮ್ಮ ಪ್ರಮುಖ ಸಾಹಿತ್ಯದಲ್ಲಿ'ಯುರೋಪ್ ನ ನಿರಾಕರಣವಾದ' ಎಂಬ ಅಗ್ರಲೇಖದ ಅಧ್ಯಾಯದಲ್ಲಿ ಸಾಕಷ್ಟು ಚರ್ಚಿಸಿದ್ದಾರೆ.[೨೩] ಕ್ರಿಶ್ಚಿಯನ್ ನೈತಿಕ ತತ್ವಗಳು ಜನರಿಗೆ ನೈಜ ಮೌಲ್ಯಗಳು, ದೇವರಲ್ಲಿ ನಂಬಿಕೆ (ಇದು ಜಗತ್ತಿನಲ್ಲಿ ಕೆಟ್ಟದ್ದು ಇದೆ ಎನ್ನುವುದನ್ನು ವಾದಿಸುತ್ತದೆ.) ಮತ್ತು ನಿರ್ದಿಷ್ಟ ಜ್ಞಾನಕ್ಕೆ ಆಧಾರವನ್ನು ಒದಗಿಸುತ್ತದೆ ಎಂದು ಹೇಳುತ್ತಾರೆ. ಈ ವಿಚಾರಕ್ಕೆ ಅನುಗುಣವಾಗಿ ನಿರ್ದಿಷ್ಟ ಜ್ಞಾನವಿರುವ ಜಗತ್ತನ್ನು ನಿರ್ಮಿಸುವುದು ಸಾಧ್ಯ ನಿರಾಕರಣವಾದದ ಪ್ರಾರಂಭಿಕ ಮೂಲರೂಪ. ನಿರರ್ಥಕ ನಿರಾಶೆಯ ಭಾವದ ವಿರುದ್ಧ ಕ್ರಿಶ್ಚಿಯನ್ ಧರ್ಮ ಪ್ರತಿವಿಷಕಾರಿಯಾಗಿತ್ತು. ಆದರೆ, ಕ್ರಿಶ್ಚಿಯನ್ ಧರ್ಮದ ತತ್ವಗಳಿಗೆ ಅನುಗುಣವಾಗಿ ಇದು ಇದೆ. ಅದನ್ನು ಅದು ಮಾಡುತ್ತಿಲ್ಲ. ಸತ್ಯದೆಡೆಗಿನ ದಾರಿಯಲ್ಲಿ ಕ್ರಿಶ್ಟಿಯನ್ ಧರ್ಮವು ತನ್ನನ್ನು ತಾನು ನಿರ್ಮಿಸಿಕೊಳ್ಳಬೇಕಾಗಿತ್ತು. ಇದು ಅದರ ಪ್ರಳಯಕ್ಕೆ ದಾರಿ ಮಾಡಿಕೊಡುವಂತಾಗಿತ್ತು. ಹೀಗಾಗಿ ಇದೇ ಕಾರಣದಿಂದ ನೀತ್ಸೆ ನಾವು ಕ್ರಿಶ್ಚಿಯನ್ ಧರ್ಮದಾಚೆಗೆ ಬೆಳೆದು ನಿಂತಿದ್ದೇವೆ ಎಂದು ಉಲ್ಲೇಖಿಸುತ್ತಾರೆ. ನಾವು ಅದರಿಂದ ಬಲುದೂರದಲ್ಲಿ ವಾಸಿಸುತ್ತದ್ದೇವೆ ಎನ್ನುವುದು ಅಷ್ಟೆ ಕಾರಣವಲ್ಲ.[೨೪] ಎಕೆಂದರೆ ಕ್ರಿಶ್ಚಿಯನ್ ಧರ್ಮವು ತನ್ನನ್ನು ತಾನು ವ್ಯಾಖ್ಯಾನಿಸಿಕೊಳ್ಳುವ ಸ್ಥಾನಕ್ಕೆರಿಸಿದೆ. ಈ ರೀತಿಯ ಪ್ರಳಯವು ಸತ್ಯದ ಬಗ್ಗೆ ಇರುವ ಸಂದೇಹದಾಚೆ ಸಾಗಿ ಎಲ್ಲ ಅರ್ಥವನ್ನು ನಾಶಪಡಿಸುತ್ತದೆ ಎಂದು ನೀತ್ಸೆ ವಾದಿಸುತ್ತಾರೆ.[೨೫][೨೬]


"ಎಲ್ಲದಕ್ಕೂ ಸಮ್ಮತಿ ಇರುವಂತಹ " ಇದರೊಂದಿಗೆ ನೀತ್ಸೆ ಅವರ ನಾಸ್ತಿಕವಾದವನ್ನು ಅರ್ಥವಿಲ್ಲದ ಪರಿಸ್ಥಿತಿ ಎಂದು ಸ್ಟ್ಯಾನ್ಲೆ ಗುರುತಿಸುತ್ತಾರೆ. ಅವನ ಪ್ರಕಾರ, ವೈದೃಶ್ಯದೊಂದಿಗೆ ಅಸ್ತಿತ್ವದಲ್ಲಿರುವ ಜಗತ್ತಿನ ಮೂಲ ವಾಸ್ತವಿಕತೆ ಅಥವ ಎಲ್ಲ ಮಾನವೀಯ ಉಪಾಯಗಳಿಗೆ ಮೌಲ್ಯವಿಲ್ಲ ಎನ್ನುವ ಮನುಷ್ಯನ ಉಪಾಯಗಳು ಮತ್ತು ಉನ್ನತ ಆಧ್ಯಾತ್ಮಿಕ ಮೌಲ್ಯಗಳ ನಷ್ಟವು ಮೌಲ್ಯವಿಲ್ಲದ್ದಾಗಿದೆ. ಆದರ್ಶವಾದದ ತಿರಸ್ಕಾರ ಕೂಡ ನಾಸ್ತಿಕವಾದಕ್ಕೆ ಕಾರಣವಾಗುತ್ತದೆ. ಎಕೆಂದರೆ ಇದೇ ರೀತಿಯ ಅನುಭವಾತೀತವಾದ ಆದರ್ಶಗಳು ಇಂದಿಗೂ ನಾಸ್ತಿಕವಾದಿ ನಂಬುವ ಹಿಂದಿನ ಆದರ್ಶಗಳೊಂದಿಗೆ ಬದುಕಬೇಕಾಗುತ್ತದೆ.[೨೭]

ಜಗತ್ತಿನ ಮೂಲ ಅರಿಯುವಲ್ಲಿನ ಕ್ರಿಶ್ಚಿಯನ್ ಧರ್ಮದ ವೈಫಲ್ಯವು ನೀತ್ಸೆ ಅವರ ಪ್ರಖ್ಯಾತ ಪೌರುಷ ವಿಜ್ಞಾನ ದಲ್ಲಿ ಬರುವ ಹುಚ್ಚನ ಕುರಿತ ನಾಣ್ನುಡಿಯಲ್ಲಿ ಪ್ರತಿಬಿಂಬಿತವಾಗಿದೆ.[೨೮] ವಿಜ್ಞಾನ ಅಭಿವೃದ್ಧಿ ಸಾಧಿಸಿದ ಕಾರಣ ದೈವದ ಮೃತ್ಯು ಎನ್ನುವ ಹೇಳಿಕೆ ಅದರಲ್ಲೂ " ನಾವು ಅವನನ್ನು ಸಾಯಿಸಿದೇವು" ಎಂಬ ಹೇಳಿಕೆ ಕ್ರಿಶ್ಚಿಯನ್ ಧರ್ಮದ ತತ್ವಗಳ ಸ್ವ-ನಾಶವನ್ನು ಉಲ್ಲೇಖಿಸುತ್ತದೆ.


ಇದೇ ಕಾರಣಕ್ಕೆ ನೀತ್ಸೆ ಮನುಷ್ಯ ವಿಕಸನವಾದದ ಉತ್ಪನ್ನ ಎಂದು ತೋರಿಸಿ ನಕ್ಷತ್ರಗಳಲ್ಲಿ ಭೂಮಿಗೆ ವಿಶೇಷವಾದ ಸ್ಥಾನವಿಲ್ಲ ಮತ್ತು ಇತಿಹಾಸ ಅಭಿವೃದ್ಧಿಕಾರಕವಲ್ಲ. ಕ್ರಿಶ್ಟಿಯನ್ ಧರ್ಮದ ದೈವ ಸಿದ್ದಾಂತ ಬಹಳ ದಿನಗಳ ಕಾಲ ನಶ್ವರವಾದಕ್ಕೆ ಮೂಲಾಧಾರವಾಗಿ ಉಳಿಯಲಾರದು.ಇದನ್ನೇ ನೀತ್ಸೆ ಪಾಶ್ಚಿಮಾತ್ಯ ಬೌದ್ಧ ಧರ್ಮ ಎಂದು ಕೂಡ ಉಲ್ಲೇಖಿಸುತ್ತಾರೆ. ನೋವು ನಿವಾರಿಸುವುದಕ್ಕೆ ಇಚ್ಚೆಗಳನ್ನು ತನ್ನಿಂದ ತಾನೇ ಕಡಿಮೆ ಮಾಡಿಕೊಳ್ಳಬೇಕು ಎಂದು ಅದು ವಾದಿಸುತ್ತದೆ. ಅರ್ಥ ಕಳೆದುಕೊಳ್ಳುವಿಕೆಯಂತಹ ಒಂದು ಪ್ರತಿಕ್ರಿಯೆಯಲ್ಲಿ ನೀತ್ಸೆ 'ಜಡತ್ವ ನಾಸ್ತಿಕವಾದ' ಎನ್ನುತ್ತಾರೆ. ಇದನ್ನು ಅವರು ಸ್ಕೊಫೆನಹೌರ್ ಅವರ ಸ್ಕೊಪೆನಹೌರ್ ತತ್ವಗಳಲ್ಲಿ ಗುರುತಿಸಿದ್ದಾರೆ. ಜಗತ್ತಿನ ಎಲ್ಲ ಮೌಲ್ಯಗಳಿಂದ ದೂರ ಸರಿಯುವುದು ನಾಸ್ತಿಕವಾದಿಯ ಪ್ರಮುಖ ಲಕ್ಷಣವಾಗಿದ್ದರೂ ನಾಸ್ತಿಕವಾದಿ ನಿರಂತರತೆಯನ್ನು ಇಲ್ಲಿ ಕಾಯ್ದುಕೊಳ್ಳುವುದಿಲ್ಲ.[೨೯]

A nihilist is a man who judges of the world as it is that it ought not to be, and of the world as it ought to be that it does not exist. According to this view, our existence (action, suffering, willing, feeling) has no meaning: the pathos of 'in vain' is the nihilists' pathos — at the same time, as pathos, an inconsistency on the part of the nihilists.

— Friedrich Nietzsche, KSA 12:9 [60], taken from The Will to Power, section 585, translated by Walter Kaufmann

ನಿರಾಕರಣವಾದದ ಸಮಸ್ಯೆಯ ಕುರಿತ ನೀತ್ಸೆ ಸಂಬಂಧ ಸಂಕೀರ್ಣವಾಗಿದ್ದು, ಅವರು ನಿರಾಕರಣವಾದ ಸಮಸ್ಯೆಯನ್ನು ತೀರ ವೈಯಕ್ತಿಕವಾಗಿ ತೆಗೆದುಕೊಂಡು ವಾದ ಮಂಡಿಸುತ್ತಾರೆ. ಆಧುನಿಕ ಜಗತ್ತಿನ ಸಮಸ್ಯೆಯು " ಪ್ರಜ್ಞಾವಂತ"ನನ್ನಾಗಿ ಮಾಡಿದೆ ಎಂದು ಉಲ್ಲೇಖಿಸುತ್ತಾರೆ.[೩೦] ಅಲ್ಲದೇ ನಿರಾಕರಣವಾದ ಅಪಾಯ ಮತ್ತು ಅದು ನೀಡುವ ಆಹ್ವಾನವನ್ನು ಎರಡಕ್ಕೂ ಪ್ರಾಧಾನ್ಯತೆ ನೀಡುತ್ತಾರೆ. ಅವರ ಹೇಳಿಕೆಗಳಲ್ಲಿ ಉಲ್ಲಖವಾಗಿರುವಂತೆ "ನಿರಾಕರಣವಾದ ಮರಳಿ ಬರುವುದಿಲ್ಲ ಎಂದು ಪ್ರಾರ್ಥಿಸುತ್ತೇನೆ.

ಇದು ಅತ್ಯಂತ ಬಿಕ್ಕಟ್ಟಿನ ಸಮಯ, ಮಾನವೀಯತೆಯ ಪ್ರತಿಬಿಂಬದ ಆಳವಾದ ಕ್ಷಣಗಳಲ್ಲಿ ಒಂದು" ಎನ್ನುತ್ತಾರೆ. ಮನುಷ್ಯ ಅಂತಹುದರಿಂದ ಪುನಶ್ಚೇತನ ಪಡೆದುಕೊಳ್ಳುತ್ತಾನೆಯೇ, ಆತ ಈ ವಿಷಮ ಪರಿಸ್ಥಿತಿಯನ್ನು ಗೆಲ್ಲುತ್ತಾನೆಯೇ ಎಂಬುದು ಆತನ ಸಾಮರ್ಥ್ಯದ ಪ್ರಶ್ನೆಯಾಗಿದೆ!"[೩೧] ನಾಸ್ತಿಕವಾದದಿಂದ ಹೊರಬರುವುದಕ್ಕೆ ಇರುವ ಒಂದೇ ಮಾರ್ಗವೆಂದರೆ ನಿಜವಾದ ಬುನಾದಿಯ ಮೇಲೆ ನಿಂತ ಸಂಸ್ಕೃತಿ ಮಾತ್ರ ಬೆಳವಣಿಗೆಯಾಗಲು ಸಾಧ್ಯ.'

ಅದರ ಪಸರಿಸುವಿಕೆಯನ್ನು ವೇಗವನ್ನು ಸ್ವಾಗತಿಸುವ ಅವರು ಅದರ ನಿರ್ಗಮನ ಕೂಡ ಅಷ್ಟೆ ವೇಗದಲ್ಲಿರುತ್ತದೆ ಎಂದಿದ್ದಾರೆ.[೧೭]


ಕ್ರಿಶ್ಚಿಯನ್ ಧರ್ಮದ ಸ್ವನಾಶದ ಸಂದರ್ಭದಲ್ಲಿ ಕನಿಷ್ಠ ಇನ್ನೊಂದು ಮಾದರಿಯ ನಾಸ್ತಿಕವಾದ ಬೆಳವಣಿಗೆ ಹೊಂದಲಿದೆ ಎಕೆಂದರೆ ಎಲ್ಲ ಮೌಲ್ಯಗಳ ಮತ್ತು ಅರ್ಥದ ನಾಶದ ನಂತರ ಯಾವುದು ನಿಲ್ಲುವುದಿಲ್ಲ ಇದರ ಹಿಂದಿನಿಂದ ನಶ್ವರವಾದ ಕೂಡ ಬರುತ್ತದೆ ಎಂದು ಉಲ್ಲೇಖಿಸುತ್ತಾರೆ. ಪರ್ಯಾಯವಾಗಿ ಬರುವ 'ಸಕ್ರಿಯ ನಾಸ್ತಿಕವಾದ'ವು ಹೊಸತನ್ನು ನಿರ್ಮಿಸುವುದಕ್ಕೆ ಅಗತ್ಯವಿರುವ ವೇದಿಕೆಯನ್ನು ಸಿದ್ದಪಡಿಸುವುದಕ್ಕೆ ಒಂದು ಬದಿಯಿಂದ ಎಲ್ಲವನ್ನು ನಾಶಗೊಳಿಸುತ್ತದೆ. ಈ ರೀತಿಯ ನಾಸ್ತಿಕವಾದದ ಲಕ್ಷಣವನ್ನು ನೀತ್ಸೆ "ಸಾಮರ್ಥ್ಯದ ಚಿಹ್ನೆ"[೩೨] ಎಂದು ವರ್ಗಿಕರಿಸುತ್ತಾರೆ. ಉದ್ದೇಶಪೂರ್ವಕವಾಗಿ ಹಳೆಯ ಮೌಲ್ಯಗಳ ನಾಶವು ಹಲಗೆಯ ಮೇಲಿರುವುದನ್ನು ಅಳಿಸಿ ತನ್ನದೇ ಆದ ನಂಬಿಕೆ ಮತ್ತು ವ್ಯಾಖ್ಯಾನಗಳನ್ನು ಬರೆಯುವುದು ಆಗಿದೆ.ಜಡತ್ವದ ನಾಸ್ತಿಕವಾದವು ತನ್ನನ್ನು ತಾನೇ ಕೊಳೆಯುತ್ತಿರುವ ಹಳೇ ಮೌಲ್ಯಗಳಿಂದ ದೂರ ಇಟ್ಟುಕೊಳ್ಳುವ ಅಪಸವ್ಯದ ಮಾರ್ಗ ಅನುಸರಿಸುತ್ತದೆ. ಈ ರೀತಿ ಉದ್ದೇಶಪೂರ್ವಕವಾಗಿ ಹಳೇ ಮೌಲ್ಯಗಳ ಹನನ ಮತ್ತು ನಾಸ್ತಿಕವಾದದ ಸ್ಥಿತಿಯಿಂದ ಹೊರಬರುವುದಕ್ಕೆ ಹೊಸ ಅರ್ಥವನ್ನು ಸೃಷ್ಟಿಸುವ ಸಕ್ರಿಯ ನಾಸ್ತಿಕವಾದವು ನೀತ್ಸೆ ಅವರ ಕರೆಯುವ 'ಮುಕ್ತ ಆತ್ಮ'[೩೩] ದೊಂದಿಗೆ ಸಂಬಂಧವಿದೆ ಎಂದು ಹೇಳುತ್ತ ಕ್ರೈಸ್ತ್ ವಿರೋಧಿಯಾಗಿದ್ದ ಜರಾತೃಷ್ಟನ ಕುರಿತು ಉಲ್ಲೇಖಿಸಿ ಸಾಮರ್ಥ್ಯಶಾಲಿಯಾಗಿದ್ದ ಆತನು ತನ್ನದೇ ಆದ ಮೌಲ್ಯಗಳೊಂದಿಗೆ ಸುಂದರ ಕುಸುರಿ ಚಿತ್ರಕಲೆಯಂತಹ ಜೀವನ ನಡೆಸಿದನು.

ನೀತ್ಸೆ ಕುರಿತ ಹೈಡೆಗ್ಗರ್ ವ್ಯಾಖ್ಯಾನ

ನೀತ್ಸೆ ಅವರಿಂದ ಪರಿಚಯಿಸಲ್ಪಟ್ಟ ನಾಸ್ತಿಕವಾದದ ಅಪಾಯದ ಕುರಿತು ಹಲವಾರು ಆಧುನಿಕ ಕಾಲಾನಂತರ ವಿಚಾರವಾದಿಗಳು ಸಂಶೋಧನೆ ನಡೆಸಿದರು. ಮತ್ತು ಅವರು ನೀತ್ಸೆ ಕುರಿತು ಮಾರ್ಟಿನ್ ಹೈಡಗ್ಗರ್ ಮಾಡಿರುವ ವ್ಯಾಖ್ಯಾನಗಳಿಂದ ಪ್ರಭಾವಿತರಾದರು. ತೀರ ಇತ್ತೀಚಿನ ದಿನಗಳಲ್ಲಿ ಹೈಡಗ್ಗರ್ ಅವರ ಮೇಲೆ ನಾಸ್ತಿಕವಾದದ ಕುರಿತ ನೀತ್ಸೆ ಸಂಶೋಧನೆಯ ಪ್ರಭಾವ ಕಡಿಮೆಯಾಗಿದೆ.[೩೪] ೧೯೩೦ರ ಪ್ರಾರಂಭದ ದಿನಗಳಲ್ಲಿ ಹೈಡೆಗ್ಗರ್ ನೀತ್ಸೆ ಚಿಂತನೆಗಳ ಕುರಿತು ಉಪನ್ಯಾಸ ನೀಡುತ್ತಿದ್ದರು.[೩೫] ನಾಸ್ತಿಕವಾದ ವಿಷಯಕ್ಕೆ ಸಂಬಂಧಿಸಿದಂತೆ ನೀತ್ಸೆ ನೀಡಿರುವ ಕೊಡುಗೆಗೆ ಪ್ರಾಮುಖ್ಯತೆ ನೀಡಿದಲ್ಲಿ ನೀತ್ಸೆ ಕುರಿತು ಹೈಡೆಗ್ಗರ ನೀಡಿದ ಪ್ರಭಾವಶಾಲಿ ವ್ಯಾಖ್ಯಾನದೊಂದಿಗೆ ನಿರಾಕರಣವಾದ ಶಬ್ದದ ಐತಿಹಾಸಿಕ ಬೆಳವಣಿಗೆ ಕೂಡ ಮುಖ್ಯವಾಗುತ್ತದೆ.

ನೀತ್ಸೆ ಕುರಿತ ಹೈಡೆಗ್ಗರ್ ಅವರ ಸಂಶೋಧನೆ ಮತ್ತು ಬೋಧನೆ ವಿಶಿಷ್ಟವಾಗಿ ಅವರದ್ದೇ ಆಗಿತ್ತು. ಉದ್ದೇಶಪೂರ್ವಕವಾಗಿ ಅವರು ನೀತ್ಸೆಯನ್ನು ನೀತ್ಸೆ ರೂಪದಲ್ಲಿ ಪ್ರಸ್ತುತ ಪಡಿಸುತ್ತಿರಲಿಲ್ಲ. ಬದಲಾಗಿ ಅವರದ್ದೇ ಆಗಿದ್ದ ಫಿಲಾಸಾಫಿಕಲ್ ಸಿಸ್ಟಮ್ ಆಫ್ ಬಿಯಿಂಗ್, ಟೈಮ್ ಆಂಡ್ ಡಸಿಯನ್‌‍ ನಲ್ಲಿ ನೀತ್ಸೆಯನ್ನು ಸೇರ್ಪಡಿಸುವುದಕ್ಕೆ ಪ್ರಯತ್ನಿಸುತ್ತಿದ್ದರು.[೩೬]

ನೀತ್ಸೆಯ ನಿರಾಕರಣವಾದ ಹೈಡೆಗ್ಗರ್, ಹಿಸ್ಟರಿ ಆಫ್ ಬಿಯಿಂಗ್‌‍ (೧೯೪೪–೪೬)[೩೭] ಅಂದಿನ ಕಾಲದ ಉನ್ನತ ಮೌಲ್ಯಗಳನ್ನು ಅಪಮೌಲ್ಯಕರಣದಿಂದ ವಿಜಯ ಸಾಧಿಸುವ ರೀತಿಯಲ್ಲಿ ಅರ್ಥೈಸಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಿದ್ದರು. ಹೈಡೆಗ್ಗರ್ ಪ್ರಕಾರ ಈ ಅಪಮೌಲ್ಯಕರಣದ ತತ್ವವು ಮನಸ್ಸಿಗೆ ಶಕ್ತಿಯಾಗಿದೆ. ಈ ಅಪಮೌಲ್ಯಿಕರಣ ಹೇಗೆ ಆಗುತ್ತದೆ ಮತ್ತು ಎಕೆ ಈ ನಿರಾಕರಣವಾದ, ಹೈಡೆಗ್ಗರ್ ಅವರ ಆಧ್ಯಾತ್ಮದ ಕುರಿತ ಪ್ರಮುಖ ಟೀಕೆಯು ಆತ್ಮಶಕ್ತಿಯ ಕುರಿತಾದುದಾಗಿದೆ. ಆತ್ಮಸ್ಥೈರ್ಯವು ಈ ಎಲ್ಲ ವಾದಗಳ ಮುಖ್ಯ ಸೂತ್ರವಾಗಿದ್ದು ಮೌಲ್ಯಗಳ ಮೌಲ್ಯೀಕರಣಕ್ಕೆ ಕಾರಣವಾಗಿದೆ.[೩೮]

ಈ ಅಪಮೌಲ್ಯೀಕರಣ ಹೇಗೆ ಸಂಭವಿಸುತ್ತದೆ ಮತ್ತು ಅದು ಹೇಗೆ ನಿರಾಕರಣವಾದವಾಗಿದೆ? ಹೈಡೆಗ್ಗರ್ ಅವರ ಆಧ್ಯಾತ್ಮದ ಕುರಿತ ಪ್ರಮುಖ ಟೀಕೆಯು ಆಧ್ಯಾತ್ಮ ಅದರಲ್ಲೂ ನಿರ್ದಿಷ್ಟವಾಗಿ ಆಧ್ಯಾತ್ಮವಿದ್ಯೆಯಾಗಿದ್ದು, ಅದು ಸಿಯೆಂಡೆ ಆಗಿರುವುದು ಮತ್ತು ಸಿಯೆಂಡೆ ಇರುವಿಕೆ ನಡುವೆ ಇರುವ ವ್ಯತ್ಯಾಸವನ್ನು ಕಂಡು ಹಿಡಿಯುವಲ್ಲಿ ಅವರು ಮರೆತಿದ್ದಾರೆ ಎಂದು ಟೀಕಿಸುತ್ತಾರೆ.

ಹೈಡೆಗ್ಗರ್ ಅವರ ಪಾಶ್ಚಿಮಾತ್ಯ ಚಿಂತನೆಯ ಇತಿಹಾಸದ ಪ್ರಕಾರ ಇದನ್ನು ಆಧ್ಯಾತ್ಮ ಜ್ಞಾನದ ಇತಿಹಾಸ ಎಂದೂ ನೋಡಬಹುದಾಗಿದೆ. ಆಧ್ಯಾತ್ಮಿಕ ಸಿದ್ಧಾಂತವು ಇರುವಿಕೆಯ ಕಲ್ಪನೆಯ ಕುರಿತು ಕೇಳುವುದನ್ನು ಮರೆತಿರುವುದರಿಂದ (ಅದನ್ನು ಹೈಡೆಗ್ಗರ್ Seinsvergessenheit ಎಂದು ಕರೆಯುತ್ತಾನೆ), ಇರುವಿಕೆಯು ನಷ್ಟವಾಗಿರುವುದು ಒಂದು ಐತಿಹಾಸಿಕ ಸಂಗತಿಯಾಗಿದೆ. ಆದ್ದರಿಂದಾಗಿಯೇ ಹೈಡೆಗ್ಗರ್ ಆಧ್ಯಾತ್ಮಿಕ ಸಿದ್ಧಾಂತವನ್ನು ನಿರಾಕರಣವಾದಿ ಎಂದು ಕರೆಯುತ್ತಾನೆ.[೩೯] ಇದು ನೀತ್ಸೆಯ ಆಧ್ಯಾತ್ಮಿಕತೆಯ ಸಿದ್ಧಾಂತವು ನಿರಾಕರಣವಾದದ ಮೇಲೆ ಗೆಲುವನ್ನು ಸಾಧಿಸುವುದಿಲ್ಲ, ಹೊರತಾಗಿ ಅದಕ್ಕೆ ಸಂಪೂರ್ಣತೆಯನ್ನು ನೀಡುತ್ತದೆ.[೪೦]

ನೀತ್ಸೆಯ ವ್ಯಾಖ್ಯಾನದ ಸಂದರ್ಭದಲ್ಲಿ ಹೈಡೆಗ್ಗರ್ ಅರ್ನೆಸ್ಟ್ ಜಂಗರ್ ಅವರಿಂದ ಪ್ರಭಾವಿತನಾಗಿದ್ದಾರೆ. ನೀತ್ಸೆಯ ಕುರಿತು ಹೈಡೆಗ್ಗರ್ ನೀಡಿದ ಉಪನ್ಯಾಸಗಳಲ್ಲಿ ಜಂಗರ್ ಕುರಿತು ಹಲವಾರು ಉಲ್ಲೇಖಗಳನ್ನು ಕಾಣಬಹುದಾಗಿದೆ. ಉದಾಹರಣೆಗೆ ನವೆಂಬರ್ ೪, ೧೯೪೫ರಲ್ಲಿ ಫ್ರೀಬರ್ಗ್ ವಿಶ್ವವಿದ್ಯಾಲಯದ ರೆಕ್ಟರ್ ಅವರಿಗೆ ಬರೆದಿರುವ ಪತ್ರದಲ್ಲಿ ಹೈಡೆಗ್ಗರ್ ಜಂಗರ್ ಅವರಿಂದ ಪ್ರಭಾವಿತನಾಗಿ "ದೇವರು ಸತ್ತಿದ್ದಾನೆ" ಉದ್ದೇಶವನ್ನು ಶಕ್ತಿಗಾಗಿ ಮನಸ್ಸಿನ ವಾಸ್ತವಿಕತೆಯ ಕುರಿತು ವಿವರಿಸುವುದಕ್ಕೆ ಪ್ರಯತ್ನಿಸಿದ್ದಾರೆ. ಮೂರನೇ ರೀಕ್‌ನಲ್ಲಿ ನೀತ್ಸೆಯನ್ನು ಜೀವ ವಿಜ್ಞಾನ ಅಥವ ಮಾನವ ವಿಜ್ಞಾನಕ್ಕೆ ಸಂಬಂಧಿಸಿದ ವಿಚಾರದಲ್ಲೆ ನೀತ್ಸೆಯ ವಾದವನ್ನು ಸಮರ್ಥಿಸಿಕೊಂಡಿದ್ದಕ್ಕೆ ಜಂಗರ್ ಅವರನ್ನು ಪ್ರಶಂಶಿಸಿದ್ದಾರೆ.[೪೧]

ಆಧುನಿಕ ಕಾಲಾನಂತರ ಹಲವಾರು ವಿಚಾರವಾದಿಗಳು ನೀತ್ಸೆ ಕುರಿತ ಹೈಡೆಗ್ಗರ್ ಅವರ ವ್ಯಾಖ್ಯಾನದಿಂದ ಪ್ರಭಾವಿತರಾಗಿದ್ದಾರೆ. ಅದರಲ್ಲಿ ಗಿಯಾನಿ ವಾಟ್ಟಿಮೊ, ನೀತ್ಸೆ ಮತ್ತು ಹೈಡೆಗ್ಗರ್ ನಡುವಿನ ನಾಲ್ಕನೇ ಯುರೋಪಿಯನ್ ಚಿಂತನೆಯ ಚಳುವಳಿಯನ್ನು ಬೆಂಬಲಿಸಿದ್ದಾರೆ. ೧೯೬೦ರ ಅವಧಿಯಲ್ಲಿ ನೀತ್ಸೆಯಿನ್ 'ಪುನರುಜ್ಜೀವನ' ಪ್ರಾರಂಭವಾಗಿ ಮ್ಯಾಜಿನೊ ಮಾಂಟಿನಾರಿ ಮತ್ತು ಜಿಯಾರ್ಜಿಯೊ ಕೊಲ್ಲಿ ಅವರ ಚಿಂತನಾಶೈಲಿಯಲ್ಲಿ ಪರ್ಯಾವಸನಗೊಂಡಿತು. ನೀತ್ಸೆಯ ಸಂಗ್ರಹಿತ ಲೇಖನಗಳ ಹೊಸ ಆವೃತ್ತಿಯನ್ನು ತರವುದಕ್ಕೆ ಹೊಸದಾಗಿ ಕೆಲಸವನ್ನು ಅವರಿಬ್ಬರು ಪ್ರಾರಂಭಿಸಿ ಈ ಮೂಲಕ ಉನ್ನತ ಸಂಶೋಧನೆಗೆ ನೀತ್ಸೆ ಲಭ್ಯವಾಗುವಂತೆ ಮಾಡಿದರು. ಕೊಲಿ ಮತ್ತು ಮೊಂಟಿನಾರಿ ಅವರ ನೂತನ ಆವೃತ್ತಿಯಿಂದಾಗಿ ನೀತ್ಸೆ ಕುರಿತು ಹೈಡೆಗ್ಗರ್ ವ್ಯಾಖ್ಯಾನಗಳಿಗೆ ವಿಮರ್ಶಾತ್ಮಕ ಸ್ವಾಗತ ದೊರೆತು ಹೊಸ ರೂಪ ಪಡೆಯಲು ಪ್ರಾರಂಭಿಸಿತು ಎಂದು ವಾಟ್ಟಿಮೊ ವಿವರಿಸುತ್ತಾರೆ. ಇತರ ಸಮಕಾಲೀನ ಫ್ರೆಂಚ್ ಮತ್ತು ಇಟಲಿಯ ತತ್ವಜ್ಞಾನಿಗಳಂತೆ ನೀತ್ಸೆಯನ್ನು ಅರ್ಥೈಸಿಕೊಳ್ಳುವುದಕ್ಕೆ ಭಾಗಶಃ ಅಥವ ಪೂರ್ಣಪ್ರಮಾಣದಲ್ಲಿ ಹೆಡೆಗ್ಗರ್ ನ ವ್ಯಾಖ್ಯಾನಗಳ ಮೇಲೆ ಅವಲಂಬಿತವಾಗುವುದು ಅವರಿಗೆ ಬೇಕಾಗಿರಲಿಲ್ಲ. ಇನ್ನೊಂದು ಬದಿಯಲ್ಲಿ ಅವುಗಳನ್ನು ನಿಜವಾದ ರೂಪದಲ್ಲಿ ಕಾಯ್ದಿಡುವಲ್ಲಿ ಹೈಡೆಗ್ಗರ್ ಉದ್ದೇಶ ನಿಜವಾದುದು ಎಂದು ವಾಟ್ಟಿಮೊ ತೀರ್ಮಾನಿಸುತ್ತಾರೆ.[೪೨] ನಾಲ್ಕನೇ ಚಳುವಳಿಯಲ್ಲಿ ಭಾಗವಾಗಿ ಮತ್ತು ಬೆನ್ನೆಲುಬಾಗಿ ನಿಂತವರಲ್ಲಿ ಫ್ರೆಂಚ್ ತತ್ವಜ್ಞಾನಿ ಡೆಲ್ಯಿಲೋಜ್, ಫೌಕಾಲ್ಟ್ ಮತ್ತು ಡೆರ್ರಿಡಾ. ಇದೇ ಚಳುವಳಿಯಲ್ಲಿದ್ದ ಇಟಲಿಯ ತತ್ವಜ್ಞಾನಿಗಳಾದ ಕಕ್ಕಾರಿ, ಸೆವೇರಿನೊ ಮತ್ತು ಸ್ವತಃ ತಾನು ಇದ್ದೇ ಎಂದು ವಾಟ್ಟಿಮೋ ಉದಾಹರಣೆಯಾಗಿ ನೀಡುತ್ತಾರೆ.[೪೩] ಹೆಬರ್ಮಾಸ್, ಲೈಟಾರ್ಡ್ ಮತ್ತು ರೋರ್ಟಿಯಂತಹ ತತ್ವಜ್ಞಾನಿಗಳು ಕೂಡ ನೀತ್ಸೆ ಕುರಿತ ಹೈಡೆಗ್ಗರ್ ಅವರ ವ್ಯಾಖ್ಯಾನದಿಂದ ಪ್ರಭಾವಿತರಾಗಿದ್ದರು.[೪೪]

ಆಧುನಿಕೋತ್ತರ

ಆಧುನಿಕ ವಿಚಾರವಾದಿಗಳು ಮತ್ತು ಆಧುನಿಕ ಮಾನವ ವಿಜ್ಞಾನಿಗಳು (ಪೋಸ್ಟ್‌ಸ್ಟ್ರಕ್ಚರಲಿಸ್ಟ್) ಪಾಶ್ಚಿಮಾತ್ಯ ಸಂಸ್ಕೃತಿಯು ಮಾನವೀಯತೆ ಮತ್ತು ಮೋಕ್ಷಜ್ಞಾನ ಪರಿಪೂರ್ಣ ಜ್ಞಾನ ಮತ್ತು ಅರ್ಥ ಮತ್ತು ಮಾಲೀಕತ್ವದ ವಿಕೇಂದ್ರಿಕರಣ, ಧನಾತ್ಮಕ ಜ್ಞಾನ ಸಂಪಾದನೆ, ಐತಿಹಾಸಿಕ ಅಭಿವೃದ್ದಿ ಮತ್ತು ಕೆಲ ಆದರ್ಶಗಳು ಮತ್ತು ಆಚರಣೆಗಳ ಬುನಾದಿಯ ಮೇಲೆ ತಮ್ಮ ಸತ್ಯವನ್ನು ಸ್ಥಾಪಿಸಿದ್ದಾರೆ ಎಂದು ಚಿಂತನೆ ಮಾಡಿದರು.

ಜಾಕಿಸ್ ಡಿರಿಡಾ ಅವರ ನಿರ್ಮಿಸದಿರುವಿಕೆಯು ಬಹುಶಃ ಸಾಮಾನ್ಯವಾಗಿ ಎಲ್ಲರೂ ಹೇಳುವ ನಿರಾಕರಣವಾಗಿದ್ದು, ಇತರರು ವಾದಿಸುವಂತೆ ಅವರು ನಿರಾಕರಣ ತತ್ವದಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಲಿಲ್ಲ. ಡೆರ್ರಿಡಿಯನ್ ಡಿಕನ್ಸಸ್ಟ್ರಕ್ಶನಿಸ್ಟ್ ಗಳು ಈ ರೀತಿಯ ವಾದಸರಣಿಯನ್ನು ವಿರೋಧಿಸಿ ನಿರ್ಬಂಧಿತ ಸತ್ಯದಿಂದ ಪಠ್ಯ, ವ್ಯಕ್ತಿ ಅಥವ ಸಂಘಟನೆಗಳನ್ನು ಮುಕ್ತಗೊಳಿಸಬೇಕು ಎಂದು ವಾದಿಸಿದ್ದರು. ಮತ್ತು ಅದರಿಂದ ನಿರ್ಮಿಸದಿರುವಿಕೆಯು ಅಸ್ತಿತ್ವದ ಇನ್ನೊಂದು ಮಾರ್ಗವನ್ನು ತೆರೆಯುತ್ತದೆ ಎಂದು ವಾದಿಸಿದ್ದರು.[೪೫] ಉದಾಹರಣೆಗೆ ಗಾಯತ್ರಿ ಚಕ್ರವರ್ತಿ ನೈತಿಕತೆಯನ್ನು ನಿರ್ಮಿಸುವುದಕ್ಕೆ ನಿರ್ಮಿಸದಿರುವಿಕೆಯನ್ನು ಉಪಯೋಗಿಸಿ ಪಾಶ್ಚಿಮಾತ್ಯ ಚಿಂತನೆಯನ್ನು ಯುರೋಪಿನ ಆಚೆಗಿರುವ ತತ್ವಜ್ಞಾನಕ್ಕೆ ಸಮನಾಗಿರುವಲ್ಲಿ ಮುಕ್ತಗೊಳಿಸುವುದಕ್ಕೆ ಉಪಯೋಗಿಸುತ್ತಾರೆ.[೪೬] ಸ್ವತಃ ಡೆರ್ರಿಡಾ ಕೂಡ 'ಇತರರಿಗೆ ಜವಾಬ್ದಾರಿ'[೪೭] ಆಧಾರದ ಮೇಲಿನ ತತ್ವವನ್ನು ರಚಿಸಿದ್ದನು. ಈ ಮೂಲಕ ನಿರ್ಮಿಸದಿರುವಿಕೆಯನ್ನು ಸತ್ಯದ ನಿರಾಕರಣೆಯಾಗಿ ನೋಡಬಹುದು ಆಗಿದೆ. ಆದರೆ ಅದು ಸತ್ಯವನ್ನು ತಿಳಿಯುವುದಕ್ಕೆ ನಮ್ಮಲ್ಲಿನ ಸಾಮರ್ಥ್ಯದ ನಿರಾಕರಣೆಯಂತಿರಬೇಕು. (ಇದು ನಿರಾಕರಣವಾದವು ದಾರ್ಶನಿಕವಾದಕ್ಕೆ ಹೋಲಿಸಿದಲ್ಲಿ ಜ್ಞಾನದ ಮೂಲ ಎಂದು ಹಕ್ಕು ಸಾಧಿಸುತ್ತದೆ.)


ಲ್ಯೋಟಾರ್ಡ್‌ ವಾದದ ಪ್ರಕಾರ, ಉದ್ದೇಶದ ಸತ್ಯದ ಮೇಲೆ ಅವಲಂಭಿತವಾಗಿರುದಕ್ಕಿಂತ ಅವರ ವಾದವನ್ನು ನಿರೂಪಿಸುವ ಕೆಲಸಕ್ಕೆ ಕೈಹಾಕಬೇಕು. ತತ್ವಜ್ಞಾನಿಗಳು ಕೆಲವು ಕತೆಗಳ ಆಧಾರದ ಮೇಲೆ ತಮ್ಮ ವಾದವನ್ನು ಮಂಡಿಸುತ್ತಾರೆ. ಪ್ರಪಂಚದಲ್ಲಿ ಇದು ಒಂದಕ್ಕೊಂದು ಬೇರ್ಪಡಿಸಲಾಗದಂತೆ ಜೊತೆಯಾಗಿದೆ. ಇವು ಬಹಳ ಹಿಂದಿನ ಕಾಲಕ್ಕೆ ಸಂಬಂಧಪಟ್ಟವಾಗಿವೆ ಎಂದು ಲ್ಯೋಟಾರ್ಡ್‌ ವಾದಮಾಡುತ್ತಾರೆ ಅಲ್ಲದೆ ಇವುಗಳನ್ನು ಪಾರಲೌಕಿಕ-ವಿವರಣೆಯವು ಎಂದು ಕರೆಯುತ್ತಾನೆ. ನಂತರ ಅವನು ಆಧುನಿಕೋತ್ತರ ಪರಿಸ್ಥಿತಿಯಲ್ಲಿ ಈ ಪಾರಲೌಕಿಕ ವಿವರಣೆಯನ್ನು ಮತ್ತು ಈ ಪಾರಲೌಕಿಕ ವಿವರಣೆಯಿಂದ ಶಾಸನಬದ್ಧಗೊಳಿಸುವ ಕ್ರಿಯೆಯನ್ನು ತಳ್ಳಿಹಾಕುತ್ತಾರೆ. "ಪಾರಲೌಕಿಕ ವಿವರಣೆಯ ನೆರಳಿನಲ್ಲಿ ನಾವು ಹೊಸ ಭಾಷಾ ಸಂಬಂಧಿ ಆಟವನ್ನು ಪ್ರಾರಂಭಿಸಿದ್ದೇವೆ. ಇದರ ಮೂಲಕ ನಾವು ಬದಲಾಗುವ ಸಂಬಂಧದ ಪರಿಕಲ್ಪನೆ ಮತ್ತು ಕೆಲವು ಸತ್ಯಗಳ ಕುರಿತಾದ ವಿವರಣೆಯನ್ನು ನೀಡುವ ಮೂಲಕ ಇನ್ನುಳಿದವರಿಗೆ ಪರಮ ಸತ್ಯ ಹೇಳದಂತೆ ತಡೆಯುತ್ತಿದ್ದೇವೆ." ಈ ಬದಲಾಗುತ್ತಿರುವ ಈ ಪರಿಕಲ್ಪನೆಯಲ್ಲಿ ಸತ್ಯ ಮತ್ತು ಅರ್ಥವು ನಿರಾಕರಣವಾದದ ದಿಕ್ಕಿನಲ್ಲಿ ಸಾಗುತ್ತದೆ. ಲ್ಯೋಟಾರ್ಡ್‌‍ ಮೊದಲಿನದನ್ನು ಕೈಬಿಟ್ಟು ನಂತರದ್ದನ್ನು ಹಿಡಿದುಕೊಳ್ಳುತ್ತಾರೆ.

ಆಧುನಿಕೋತ್ತರ ಸಿದ್ಧಾಂತವಾದಿಯಾದ ಜೀನ್‌ ಬೌಡ್ರಿಲಾರ್ಡ್‌, ಸಿಮ್ಯೂಲ್ಯಾಕ್ರಾ ಅಂಡ್‌ ಸಿಮ್ಯೂಲೇಷನ್‌‍ ಎಂಬ ಪುಸ್ತಕದಲ್ಲಿ ಆಧುನಿಕೋತ್ತರ ದೃಷ್ಟಿಕೋನದಲ್ಲಿ ನಿರಾಕರಣವಾದದ ಕುರಿತಾಗಿ ಬರೆದಿದ್ದಾರೆ. ಅವರು ನೈಜ ಪ್ರಪಂಚ ಮತ್ತು ಈ ಪ್ರಪಂಚವು ಹೇಗೆ ಕಾಲ್ಪನಿಕ ಪ್ರಪಂಚದ ಜೊತೆ ಸೇರಿಕೊಂಡಿದೆ ಎಂಬುದರ ಕುರಿತಾಗಿ ಅರ್ಥ ವಿವರಣೆಯನ್ನು ಕೊಡುತ್ತಾರೆ. ಬೌಡ್ರಿಲ್ಯಾರ್ಡ್‌ನ ನಿರಾಕರಣವಾದದ ಚರ್ಚೆಯಲ್ಲಿ ವಿಷಯಕ್ಕಿಂತ, ಅರ್ಥದ ಕುರಿತಾದ ವಿವರಣೆಯೇ ಮುಖ್ಯವೆನಿಸಿಕೊಳ್ಳುತ್ತದೆ.

The apocalypse is finished, today it is the precession of the neutral, of forms of the neutral and of indifference…all that remains, is the fascination for desertlike and indifferent forms, for the very operation of the system that annihilates us. Now, fascination (in contrast to seduction, which was attached to appearances, and to dialectical reason, which was attached to meaning) is a nihilistic passion par excellence, it is the passion proper to the mode of disappearance. We are fascinated by all forms of disappearance, of our disappearance. Melancholic and fascinated, such is our general situation in an era of involuntary transparency.

— Jean Baudrillard, Simulacra and Simulation, "On Nihilism", trans. ೧೯೯೫

ನಿರಾಕರಣವಾದ ರೂಪಗಳು

ನಿರಾಕರಣವಾದಕ್ಕೆ ಹಲವು ವ್ಯಾಖ್ಯಾನಗಳಿವೆ, ಆದ್ದರಿಂದ ಅದನ್ನು ಹಲವು ವಿವಾದಾತ್ಮಕ ಆಧ್ಯಾತ್ಮಿಕ ಸ್ಥಿತಿಗಳನ್ನು ವಿವರಿಸಲು ಬಳಸಲಾಗುತ್ತದೆ.

ನೈತಿಕ ನಿರಾಕರಣವಾದ

ನೈತಿಕ ನಿರಾಕರಣವಾದ, ಅಥವಾ ಋಜುತ್ವ ನಿರಾಕರಣವಾದ ಎನ್ನುವುದು ವಸ್ತುನಿಷ್ಠ ಅಸ್ತಿತ್ವಕ್ಕೆ ಸ್ವಾಭಾವಿಕವಾಗಿ ಬಂದ ನೈತಿಕತೆ ಎಂಬುದು ಇಲ್ಲವೇ ಇಲ್ಲ; ಆದ್ದರಿಂದ ಬೇರೆ ಯಾವುದರ ಸಲುವಾಗಿಯೂ ಯಾವ ಕಾರ್ಯವನ್ನು ಮಾಡುವುದೂ ಆವಶ್ಯಕವಲ್ಲ ಎನ್ನುವ ಮೇಟಾ-ನೈತಿಕ ದೃಷ್ಟಿಕೋನ. ಉದಾಹರಣೆಗೆ, ಒಬ್ಬ ನೈತಿಕ ನಿರಾಕರಣವಾದಿಯು ಯಾವುದೇ ಕಾರಣಕ್ಕಾಗಲೀ ಯಾರನ್ನಾದರೂ ಕೊಲ್ಲುವುದು ಸ್ವಾಭಾವಿಕವಾಗಿ ತಪ್ಪೂ ಅಲ್ಲ ಸರಿಯೂ ಅಲ್ಲ ಎಂದು ಹೇಳಬಹುದು.ಕೆಲವು ನಿರಾಕರಣವಾದಿಗಳು[who?] ನೈತಿಕತೆ ಇಲ್ಲವೇ ಇಲ್ಲ ಎಂಬುದಲ್ಲ, ಆದರೆ ಅದು ಅಸ್ತಿತ್ವದಲ್ಲಿದ್ದರೆ ಅದು ಮಾನವಿಕ ಮತ್ತು ಆದ್ದರಿಂದ ಕೃತಕ ನಿರ್ಮಾಣ, ಇಲ್ಲಿ ಎಲ್ಲ ಅಥವಾ ಯಾವುದೇ ಅರ್ಥವಗಳು ಸಂಭವನೀಯ ಫಲಿತಾಂಶಕ್ಕೆ ಸಾಪೇಕ್ಷವಾಗಿರುತ್ತದೆ. ಉದಾಹರಣೆಗೆ, ಯಾರಾದರೂ ಯಾರನ್ನಾದರೂ ಕೊಂದರೆ, ಆ ನಿರಾಕರಣವಾದಿಯು ಕೊಲೆ ಮಾಡುವುದು ಕೆಟ್ಟ ಕೆಲಸವಲ್ಲ ಎಂದು ಹೇಳಬಹುದು, ನಮ್ಮ ನೈತಿಕ ನಂಬಿಕೆಗಳಿಂದಾಗಿ ಅದು ಕೆಟ್ಟದ್ದು, ಇದು ಏಕೆಂದರೆ ನಾವು ನೈತಿಕತೆಯನ್ನು ಒಂದು ಪ್ರಾಥಮಿಕ ದ್ವಂದ್ವತೆಯನ್ನಾಗಿ ನಿರ್ಮಿಸಿದ್ದೇವೆ, ಯಾವುದನ್ನು ಕೆಟ್ಟದ್ದು ಅನ್ನುತ್ತೇವೋ ಅದಕ್ಕೆ ಒಳ್ಳೆಯದು ಎಂದು ಕರೆಯುವುದಕ್ಕಿಂತ ಹೆಚ್ಚಿನ ಋಣಾತ್ಮಕ ಅಧಿಕಾನುಕೂಲವನ್ನು ಕೊಡುತ್ತೇವೆ: ಫಲಿತಾಂಶವಾಗಿ, ವ್ಯಕ್ತಿಯನ್ನು ಕೊಲ್ಲುವುದು ಕೆಟ್ಟದ್ದು ಏಕೆಂದರೆ ಅದು ಮನುಷ್ಯನನ್ನು ಬದುಕುವುದಕ್ಕೆ ಬಿಡಲಿಲ್ಲ, ಮನುಷ್ಯನನ್ನು ಬದುಕುವುದಕ್ಕೆ ಬಿಡುವುದಕ್ಕೆ ಯಥೇಚ್ಛ ಗುಣಾತ್ಮಕ ಅಧಿಕಾನುಕೂಲವನ್ನು ಕೊಡುತ್ತೇವೆ ಆದ್ದರಿಂದ. ಈ ರೀತಿಯಲ್ಲಿ ಒಬ್ಬ ನೈತಿಕ ನಿರಾಕರಣವಾದಿಯ ನಂಬಿಕೆ ಏನೆಂದರೆ ಎಲ್ಲ ನೈತಿಕತೆಯೂ ಕೊನೆಗೆ ಸುಳ್ಳಾಗಿ ಪರಿಣಮಿಸುತ್ತದೆ.

ಅಸ್ತಿತ್ವವಾದದ ನಿರಾಕರಣವಾದ

ಅಸ್ತಿತ್ವವಾದದ ನಿರಾಕರಣವಾದವೆಂದರೆ ಅದು ಜೀವನವು ಯಾವುದೇ ಆಂತರಿಕ ಅರ್ಥ ಅಥವಾ ಮೌಲ್ಯವನ್ನು ಹೊಂದಿರುವುದಿಲ್ಲ ಎಂಬುದು. ಇದು ಕೇವಲ ಭೌತಿಕ ನಿಯಮಗಳು ನಮ್ಮ ಅಸ್ತಿತ್ವಕ್ಕೆ ದಾರಿ ಮಾಡಿದವು ಎಂಬ ವೈಜ್ಞಾನಿಕ ವಿಶ್ಲೇಷಣೆಯಿಂದ ಹುಟ್ಟಿಕೊಳ್ಳುತ್ತದೆ. ವಿಶ್ವಕ್ಕೆ ಸಂಬಂಧಿಸಿದಂತೆ, ಒಬ್ಬ ವ್ಯಕ್ತಿ ಅಥವಾ ಇಡೀ ಮಾನವ ಜನಾಂಗವೂ ಅಮುಖ್ಯವೇ ಆಗಿರುತ್ತದೆ, ಅದರ ಅಸ್ತಿತ್ವಕ್ಕೆ ಯಾವುದೇ ಉದ್ದೇಶವಿದ್ದಂತೆ ತೋರುವುದಿಲ್ಲ ಮತ್ತು ಅದು ಇಡೀ ಅಸ್ತಿತ್ವದ ಸಮಗ್ರತೆಯನ್ನು ಯಾವ ರೀತಿಯಲ್ಲಿಯೂ ಬದಲಿಸುವಂತೆ ತೋರುವುದಿಲ್ಲ. ಅತ್ಯಂತ ಸರಳವಾಗಿ ಹೇಳುವುದಾದರೆ, ಈ ವಿಷಯದಲ್ಲಿ ನಿರಾಕರಣವಾದಿಗಳು ಜೀವನದ ಒಂದೇ ಉದ್ದೇಶವೆಂದರೆ ಅದನ್ನು ಜೀವಿಸುವುದು.

ಜ್ಞಾನಮೀಮಾಂಸಾ ನಿರಾಕರಣವಾದ

ಜ್ಞಾನಮೀಮಾಂಸಾ ರೀತಿಯ ನಿರಾಕರಣವಾದವನ್ನು ಸಂಶಯವಾದದ ಅತ್ಯಂತಿಕ ರೂಪವನ್ನಾಗಿ ನೋಡಬಹುದಾಗಿದ್ದು, ಇದರಲ್ಲಿ ಎಲ್ಲ ರೀತಿಯ ಜ್ಞಾನವನ್ನೂ ತಿರಸ್ಕರಿಸಲಾಗುತ್ತದೆ.[೪೮]

ಆಧ್ಯಾತ್ಮವಾದಿ ನಿರಾಕರಣವಾದ

ಆಧ್ಯಾತ್ಮವಾದಿ ನಿರಾಕರಣವಾದ ಎಂಬುದು ತಾತ್ವಿಕ ಸಿದ್ಧಾಂತವಾಗಿದ್ದು, ಅದರ ಪ್ರಕಾರ ಬಹುಶಃ ವಸ್ತುಗಳು ಇರುವುದೇ ಇಲ್ಲ ಎಂದು ಹೇಳುತ್ತದೆ, ಅಂದರೆ ಒಂದು ಸಂಭಾವ್ಯ ಜಗತ್ತಿದ್ದು, ಅದರಲ್ಲಿ ಯಾವುದೇ ವಸ್ತುಗಳ ಅಸ್ತಿತ್ವ ಇರುವುದಿಲ್ಲ; ಅಥವಾ ಕನಿಷ್ಟ ಪಕ್ಷ ಯಾವುದೇ ಮೂರ್ತರೂಪದ ವಸ್ತುಗಳೇ ಇರುವ ಸಾಧ್ಯತೆಯಿರುವುದಿಲ್ಲ, ಹಾಗಾಗಿ ಎಲ್ಲಾ ಸಾಧ್ಯ ಜಗತ್ತುಗಳಲ್ಲಿ ಕೆಲವು ಮೂರ್ತ ವಸ್ತುಗಳು ಇರುವುದಾದರೂ, ಕೇವಲ ಅಮೂರ್ತ ವಸ್ತುಗಳು ಮಾತ್ರ ಇರುವ ಕನಿಷ್ಟ ಒಂದು ಜಗತ್ತಾದರೂ ಇರುತ್ತದೆ.

ಆಧ್ಯಾತ್ಮವಾದಿ ನಿರಾಕರಣವಾದದ ಅತ್ಯಂತ ಪರಮಾವಧಿಯ ರೀತಿಯನ್ನು ಸಾಮಾನ್ಯವಾಗಿ ಅಸ್ತಿತ್ವವೇ ಅಸ್ತಿತ್ವದಲ್ಲಿಲ್ಲ ಎಂಬ ನಂಬಿಕೆ ಎಂದು ವ್ಯಾಖ್ಯಾನಿಸಲಾಗುತ್ತದೆ.[೪೯][೫೦] ಈ ಹೇಳಿಕೆಯನ್ನು ವಿವರಿಸುವ ಒಂದು ರೀತಿಯೆಂದರೆ: 'ಅಸ್ತಿತ್ವ'ದಿಂದ 'ಅಸ್ತಿತ್ವದಲ್ಲಿಲ್ಲದಿರುವಿಕೆ'ಯನ್ನು ಬೇರ್ಪಡಿಸುವುದು ಸಾಧ್ಯವಿಲ್ಲ, ಏಕೆಂದರೆ ಯಾವುದೇ ಭೌತಿಕ ಗುಣಗಳು ಅಸ್ತಿತ್ವದಲ್ಲಿರುವುದಿಲ್ಲ, ಮತ್ತು ಹಾಗಾಗಿ ಒಂದು ವಾಸ್ತವತೆಯು, ಒಂದು ಸ್ಥಿತಿಯನ್ನು ಹೊಂದುವ ಮೂಲಕ ಎರಡರ ನಡುವಿನ ಬೇಧವನ್ನು ಗ್ರಹಿಸುತ್ತದೆ. ಒಂದು ವೇಳೆ ಅಸ್ತಿತ್ವವನ್ನು ಅದರ ಅಲ್ಲಗಳೆಯುವಿಕೆಯಿಂದ ಗ್ರಹಿಸಲು ಸಾಧ್ಯವಾಗುವುದಿಲ್ಲವಾದರೆ, ಆಗ ಅಸ್ತಿತ್ವದ ತತ್ವಕ್ಕೆ ಯಾವುದೇ ಅರ್ಥವೂ ಇರುವುದಿಲ್ಲ; ಅಥವಾ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಅದು ಯಾವುದೇ ಅರ್ಥಬದ್ಧವಾದ ರೀತಿಯಲ್ಲಿ 'ಅಸ್ತಿತ್ವದಲ್ಲಿ' ಇರುವುದಿಲ್ಲ. ಈ ಸಂದರ್ಭದಲ್ಲಿ 'ಅರ್ಥಬದ್ಧ' ಎನ್ನುವುದನ್ನು ಅಸ್ತಿತ್ವವು ಯಾವುದೇ ವಾಸ್ತವ ದ ಉನ್ನತ ಸ್ಥಿತಿಯನ್ನು ಹೊಂದಿಲ್ಲ ಎಂದು ವಾದಿಸಲು ಬಳಸಲಾಗಿದ್ದು, ಬಹುಶಃ ಅದು ಅದರ ಅಗತ್ಯ ಮತ್ತು ವ್ಯಾಖ್ಯಾನಿಸಬಹುದಾದ ಗುಣವಾಗಿದೆ, ಏಕೆಂದರೆ ಅಸ್ತಿತ್ವ ತಾನೇ ಯಾವುದೇ ಅರ್ಥವನ್ನು ಹೊಂದಿರುವುದಿಲ್ಲ. ಈ ನಂಬಿಕೆಯು ಒಮ್ಮೆ ಜ್ಞಾನಮೀಮಾಂಸೆಗೆಸಂಬಂಧಿಸಿದ ನಿರಾಕರಣವಾದದೊಂದಿಗೆ ಸೇರಿದರೆ ಇದು ಒಬ್ಬ ವ್ಯಕ್ತಿಯನ್ನು ಎಲ್ಲವನ್ನೂ ಒಳಗೊಳ್ಳುವ ನಿರಾಕರಣವಾದದಲ್ಲಿರಿಸುತ್ತದೆ, ಮತ್ತು ಅದರಲ್ಲಿ ಯಾವುದನ್ನೂ ನೈಜ ಎಂದು ಹೇಳಲಾಗುವುದಿಲ್ಲ, ಏಕೆಂದರೆ ಅಂತಹ ಯಾವುದೇ ಮೌಲ್ಯಗಳೂ ಅಸ್ತಿತ್ವದಲ್ಲಿರುವುದಿಲ್ಲ ಎಂದು ವಾದಿಸಬಹುದಾಗಿದೆ. ಇಂತಹುದೇ ಚಿಂತನೆಯನ್ನು ಸ್ವಾತ್ಮೈಕಮಾತ್ರತಾವಾದದಲ್ಲಿ ಸಹಾ ಕಾಣಬಹುದಾಗಿದೆ; ಆದರೂ, ಈ ದೃಷ್ಟಿಕೋನದಲ್ಲಿ ಸ್ವಾತ್ಮೈಕಮಾತ್ರತಾವಾದಿಯು ದೃಢೀಕರಿಸುತ್ತಾನೆ, ಆದರೆ ನಿರಾಕರಣವಾದಿಯು ಆತ್ಮವನ್ನು ನಿರಾಕರಿಸುತ್ತಾನೆ. ಇವೆರಡೂ ವಾಸ್ತವಿಕವಾದ-ವಿರೋಧಿಯ ರೂಪುಗಳಾಗಿವೆ.[ಸೂಕ್ತ ಉಲ್ಲೇಖನ ಬೇಕು] ಆದರೆ ಹೇಗಿದ್ದರೂ ಅಸ್ತಿತ್ವ ಮತ್ತು ಸತ್ಯ ಎರಡೂ ಇರುವುದಿಲ್ಲ ಎಂದು ಹೇಳುವುದು, ಅಸ್ತಿತ್ವ ಮತ್ತು ಸತ್ಯದ ಮೇಲೆ ಸಾಮಾನ್ಯವಾದ ಹೇಳಿಕೆಯನ್ನು ನೀಡಿದಂತೆ ಆಗುತ್ತದೆ ಅಷ್ಟೆ.

ಮೀರಿಯಾಲಜಿಕಲ್ ನಿರಾಕರಣವಾದ

ಮೀರಿಯಾಲಜಿಕಲ್ ನಿರಾಕರಣ (ಸಂಯೋಜನಾ ನಿರಾಕರಣವಾದ ಎಂತಲೂ ಕರೆಯುತ್ತಾರೆ) ಎನ್ನುವುದು ಸರಿಯಾದ ಭಾಗಗಳಿರುವ ವಸ್ತುಗಳು ಅಸ್ತಿತ್ವದಲ್ಲಿಲ್ಲ ಎನ್ನುವ ಸ್ಥಿತಿ (ಕೇವಲ ದೇಶದಲ್ಲಿರುವ ವಸ್ತುಗಳಲ್ಲ, ಆದರೆ ಕಾಲದಲ್ಲಿ ಇರುವ ಲೌಕಿಕ ಭಾಗಗಳಿಲ್ಲದ ವಸ್ತುಗಳು ಕೂಡ), ಮತ್ತು ಭಾಗಗಳಿಲ್ಲದ ಆದರೆ ಕೇವಲ ಪ್ರಾಥಮಿಕ ಅಡಿಗಲ್ಲುಗಳು ಅಸ್ತಿತ್ವದಲ್ಲಿದೆ, ಆದ್ದರಿಂದ ನಾವು ನೋಡುವ ಮತ್ತು ಅನುಭವಿಸುವ ’ಭಾಗಗಳಿಂದ ಕೂಡಿದ ವಸ್ತುಗಳೇ ತುಂಬಿರುವ ಪ್ರಪಂಚ’ ಎನ್ನುವುದು ಮಾನವನ ತಪ್ಪುಗ್ರಹಿಕೆ (ಉದಾಹರಣೆಗೆ, ನಾವು ಸರಿಯಾಗಿ ನೋಡಬಲ್ಲವರಾಗಿದ್ದರೆ, ಸಂಯೋಜಿತ ವಸ್ತುಗಳನ್ನು ಗ್ರಹಿಸುತ್ತಿರಲಿಲ್ಲ).

ರಾಜಕೀಯ ನಿರಾಕರಣವಾದ

ವಿಶಿಷ್ಟವಾದ ನಿರಾಕರಣವಾದಿಗಳು ಅತಾರ್ಕಿಕ ಅಥವಾ ಅಪ್ರಮಾಣಿತ ಹೇಳಿಕೆಗಳನ್ನು, ಈ ಸಂದರ್ಭದಲ್ಲಿ ಅತ್ಯಂತ ಮೂಲಭೂತ ಸಾಮಾಜಿಕ ಮತ್ತು ರಾಜಕೀಯ ರಚನೆಗಳು ಉದಾಹರಣೆಗೆ ಸರ್ಕಾರ, ಕುಟುಂಬ ಅಥವಾ ಕಾನೂನು ಮತ್ತು ಕಾನೂನಿನ ಜಾರಿ, ಇವುಗಳನ್ನು ತಿರಸ್ಕರಿಸಿದ್ದರಿಂದ ನಿರಾಕರಣವಾದದ ಒಂದು ಶಾಖೆಯಾದ ರಾಜಕೀಯ ನಿರಾಕರಣವಾದವು ಹುಟ್ಟಿತು. ೧೯ನೇ ಶತಮಾನದಲ್ಲಿ ರಷ್ಯಾದಲ್ಲಿ ನಡೆದ ನಿರಾಕರಣವಾದಿ ಚಳುವಳಿಯು ಇದೇ ತರಹದ ತತ್ತ್ವವನ್ನು ಅಂಗೀಕರಿಸಿತು.

ಸಾಂಸ್ಕೃತಿಕ ಆವಿರ್ಭಾವ

ಟಿವಿ

ಬೋಸ್ಟನ್‌ ಕಾಲೇಜಿನ ಪ್ರೊಫೆಸರ್‌ ಮತ್ತು ತತ್ವಜ್ಞಾನದ ಮುಖ್ಯಸ್ಥನಾಗಿದ್ದ ಥಾಮಸ್‌ ಹಿಬ್ಸ್‌ ಎನ್ನುವವನು ಟಿವಿಯಲ್ಲಿ ಬರುವ ಸೇನ್‌ಫೀಲ್ಡ್‌ ಎಂಬ ಕಾರ್ಯಕ್ರಮ ನಿರಾಕರಣವಾದದ ಆವಿರ್ಭಾವ ಎಂದು ಕರೆದರು. ಈ ಪ್ರಾಸಂಗಿಕ ಹಾಸ್ಯದ ಆಧಾರವೇನೆಂದರೆ ಅದು "ಶೂನ್ಯದ ಬಗೆಗೆ ಕಾರ್ಯಕ್ರಮ (ಷೋ ಅಬೌಟ್‌ ನಥಿಂಗ್‌)" ಆಗಿತ್ತು. ಬಹುತೇಕ ಕಂತುಗಳು ಸೂಕ್ಷ್ಮವಿವರಗಳ ಮೇಲೆ ಕೇಂದ್ರೀಕೃತವಾಗಿದ್ದವು. ಸೇನ್‌ಫೀಲ್ಡ್‌ ನಲ್ಲಿ ವ್ಯಕ್ತವಾಗುವ ಅಭಿಮತಗಳು ನಿರಾಕರಣವಾದದ ತತ್ವದೊಂದಿಗೆ ಹೋಲುತ್ತವೆ ಎನ್ನುವುದು ವಿವಾದಾಸ್ಪದ. ಕಾರ್ಯಕ್ರಮದ ವ್ಯಂಗ್ಯಪೂರ್ಣ ಹಾಸ್ಯವು, ಜೀವನಕ್ಕೆ ಯಾವ ಉದ್ದೇಶವೂ ಇಲ್ಲ ಎಂಬ ಕಲ್ಪನೆಯಿಂದ ಹುಟ್ಟುವ ಅಸಂಗತ ಭಾವನೆಯ ಮೇಲೆ ರೂಪಿತವಾಗುತ್ತದೆ.[೫೧]

ದಾದಾ ಚಳುವಳಿ

೧೯೧೬ರಲ್ಲಿ ಟ್ರಿಸ್ಟಾನ್‌ ಜಾರಾ ಎನ್ನುವವರು ದಾದ ಎನ್ನುವ ಪದವನ್ನು ಮೊದಲ ಬಾರಿಗೆ ಉಪಯೋಗಿಸಿದರು.[೫೨] ಸರಿಸುಮಾರು ೧೯೧೬ರಿಂದ ೧೯೨೨ರವರೆಗೆ ಮುಂದುವರೆದ ಈ ಚಳುವಳಿಯು ಮಹಾಯುದ್ಧ Iರ ಸಮಯದಲ್ಲಿ ಹುಟ್ಟಿತು, ಇದು ಕಲೆಗಾರರ ಮೇಲೆ ಪ್ರಭಾವ ಬೀರಿದ ಚಳುವಳಿ.[೫೩] ದಾದಾ ಚಳುವಳಿಯು - ಕೆಫೆ ವೋಲ್ಟಾಯರ್‌ನಲ್ಲಿ "ನೀಡರ್‌ಡೋರ್ಫ್" ಅಥವಾ "ನೀಡರ್‌ಡೋರ್ಫ್ಲಿ" ಎಂದು ಪ್ರಸಿದ್ಧವಾದ - ಸ್ವಿಟ್ಸರ್‌ಲ್ಯಾಂಡ್‌ನ ಜುರಿಚ್‌ನಲ್ಲಿ ಪ್ರಾರಂಭವಾಯಿತು.[೫೪] ದಾದಾವಾದಿಗಳು ದಾದಾ ಚಳುವಳಿಯು ಕಲಾ ಚಳುವಳಿಯಾಗಿರದೆ, ಸಿಕ್ಕಿದ್ದ ವಸ್ತುಗಳನ್ನು ಕೆಲವೊಮ್ಮೆ ಏರ್ಪಟ್ಟ ಕಾವ್ಯದ ಹಾಗೆ ಬಳಸಿಕೊಳ್ಳುವ ಕಲಾವಿರೋಧಿ ಚಳುವಳಿಯಾಗಿತ್ತು ಎಂದರು. ಯುದ್ಧಾನಂತರದ ಖಾಲಿತನದಿಂದಲೇ "ಕಲಾವಿರೋಧಿ" ಪ್ರೇರಣೆಯು ಹುಟ್ಟಿರಬೇಕು ಎಂದು ಹೇಳಲಾಗುತ್ತದೆ. ಕಲೆಯನ್ನು ಅಪಮೌಲ್ಯೀಕರಣಗೊಳಿಸುವ ಈ ಪ್ರವೃತ್ತಿಯಿಂದ ಹಲವರು ದಾದಾ ಚಳುವಳಿ ಮೂಲತಃ ನಿರಾಕರಣವಾದದಿಂದಲೇ ಹುಟ್ಟಿದೆ ಎಂದು ನಂಬುವಂತೆ ಮಾಡಿತು. ದಾದಾ ತನ್ನ ಉತ್ಪನ್ನಗಳನ್ನು ಅರ್ಥೈಸಲು ತಾನೇ ದಾರಿಗಳನ್ನು ಸೃಷ್ಟಿಸಿಕೊಂಡಿತು ಎಂಬುದನ್ನು ನೋಡಿದಾಗ, ಆಧುನಿಕ ಕಲಾ ಅಭಿವ್ಯಕ್ತಿಗಳ ಜೊತೆಗೆ ಇದನ್ನು ವಿಭಾಗಿಸುವುದು ಬಹಳ ಕಷ್ಟ. ಹಾಗಾಗಿ, ತನ್ನ ಸಂದಿಗ್ಧತೆಯ ಕಾರಣ, ಅದನ್ನು ಕೆಲವು ಸಾರಿ ನಿರಾಕರಣವಾದದ ತಾತ್ಕಾಲಿಕ ಜೀವನಶೈಲಿ ಎಂದು ಕರೆಯಲಾಗುತ್ತದೆ.[೫೩]

ಸಂಗೀತ

ದ ಗಾರ್ಡಿಯನ್‌ ನ ೨೦೦೭ರ ಲೇಖನವೊಂದು ಇದನ್ನು ಗಮನಿಸಿತು "...೧೯೭೭ರ ಬೇಸಿಗೆಯಲ್ಲಿ, ...ಪಂಕ್‌ರ ನಿರಾಕರಣೀಯ ಬಡಾಯಿ ಇಂಗ್ಲೆಂಡ್‌ನಲ್ಲೇ ಅತ್ಯಂತ ರೋಮಾಂಚನಕಾರಿಯಾಗಿತ್ತು."[೫೫] ಸೆಕ್ಸ್‌ ಪಿಸ್ತೋಲ್‌ರ "ಗಾಡ್‌ ಸೇವ್‌ ದ ಕ್ವೀನ್‌", ತನ್ನ "ನೋ ಫ್ಯೂಚರ್‌" ಪಲ್ಲವಿ ಮಂತ್ರದೊಂದಿಗೆ, ೧೯೭೦ರ ದಶಕದಲ್ಲಿ ನಿರುದ್ಯೋಗಿ ಮತ್ತು ವಿಶ್ವಾಸರಹಿತ ಯುವಕರ ಧ್ಯೇಯವಾಕ್ಯವೇ ಆಗಿಹೋಯಿತು.[೫೬]

ನಿರಾಕರಣವಾದವನ್ನು ಕೆಲವು ಗ್ಯಾಂಗ್‌ಸ್ಟಾ ರಾಪ್‌ಗಳಲ್ಲಿ "ಸ್ಟ್ರೀಟ್ ಕೋಡ್‌"ನ ಭಾಗವಾಗಿ ಅಭಿವ್ಯಕ್ತಿಪಡಿಸಲಾಗುತ್ತದೆ, ಆದರೆ ಇದು ಅಂತಹ ಸಂಗೀತದಲ್ಲಿ ವ್ಯಕ್ತಪಡಿಸಿದ ಹಲವಾರು ದೃಷ್ಟಿಕೋನಗಳಲ್ಲಿ ಒಂದು ಅಷ್ಟೇ.[೫೭]

ಬ್ಲ್ಯಾಕ್‌ ಮೆಟಲ್‌ ಮತ್ತು ಡೆತ್‌ ಮೆಟಲ್‌ ಸಂಗೀತವು ಅನೇಕವೇಳೆ ನಿರಾಕರಣ ತತ್ವಗಳಿಗೆ ಪ್ರಾಶಸ್ತ್ಯ ಕೊಡುತ್ತವೆ.[೫೮][೫೯][೬೦]

ಔದ್ಯೋಗಿಕ ಸಂಗೀತ ಮತ್ತು ರಿವೆಟ್‌ಹೆಡ್‌ ಉಪಸಂಸ್ಕೃತಿಯು ಸ್ವಭಾವದಲ್ಲಿ ನಿರಾಕರಣೀಯವಾಗಿದೆ.

ಇವನ್ನೂ ಗಮನಿಸಿ

  • ಆ‍ಯ್‌ಬ್ಸರ್ಡಿಸಂ
  • ಆ‍ಯ್‌೦ಟಿ ಆರ್ಟ್ ಆ‍ಯ್‌೦ಡ್ ಆ‍ಯ್‌೦ಟಿ-ಆ‍ಯ್‌೦ಟಿ-ಆರ್ಟ್
  • ಕಾಸ್ಮಿಸಿಜಂ
  • ಡಿಸ್ಟೆಲಿಯಾಲಜಿ
  • ಜ್ಞಾನಮೀಮಾಂಸಾ ನಿರಾಕರಣವಾದ
  • ಅಸ್ತಿತ್ವವಾದ
  • ನಿರಾಕರಣವಾದಕ್ಕೆ ವಿರೋಧಾಭಾಸ
  • ಸೈದ್ಧಾಂತಿಕ ನಿರಾಕರಣವಾದ
  • ನೈತಿಕವಾದ ನಿರಾಕರಣವಾದ
  • ಕಮ್ಯುನಿಸ್ಟ್ ನಿರಾಕರಣವಾದಿಗಳು
  • ನಿರಾಕರಣ ಚಳುವಳಿ
  • ಶೂನ್ಯ
  • ಮೂಲಭೂತ ಸಂಶಯವಾದ
  • ಚಿಕಿತ್ಸಕ ನಿರಾಕರಣವಾದ

ಟಿಪ್ಪಣಿಗಳು

ಆಕರಗಳು

ಪ್ರಾಥಮಿಕ ವಿಷಯಗಳು

  • ಹೈಡೆಗ್ಗರ್‌, ಮಾರ್ಟೀನ್ (೧೯೮೨), ನೀತ್ಸೆ, ವೊಲ್ಸ್. I-IV , ಟ್ರಾನ್ಸ್. ಎಫ್.ಎ. ಕ್ಯಾಪುಜಿ, ಸ್ಯಾನ್‌ಫ್ರಾನ್ಸಿಸ್ಕೊ: ಹರ್ಪರ್ & ರಾ.
  • ಕೈರ್ಕ್‌ಗಾರ್ಡ್, ಸೋರೆನ್ (೧೯೯೮/೧೮೫೪), ದ ಮೊಮೆಂಟ್ ಆ‍ಯ್‌೦ಡ್ ಲೇಟ್ ರೈಟಿಂಗ್ಸ್,ಕೈರ್ಕ್‌ಗಾರ್ಡ್ಸ್ ರೈಟಿಂಗ್, ಸಂಪುಟ. ೨೩ , ed. ಮತ್ತು ಟ್ರಾನ್ಸ್. ಹೋವಾರ್ಡ್ ವಿ. ಹಾಂಗ್ ಮತ್ತು ಎಡ್ನಾ ಎಚ್ ಹಾಂಗ್, ಪ್ರಿನ್ಸ್‌ಟನ್, ಎನ್.ಜೆ: ಪ್ರಿನ್ಸ್‌ಟನ್ ಅಪ್. ISBN ೯೭೮-೦೬೯೧೦೩೨೨೬೯.
  • ಕೈರ್ಕ್‌ಗಾರ್ಡ್, ಸೋರೆನ್ (೧೯೭೮/೧೮೪೬), ದ ಟು ಏಜ್ಸ್ : ಕೈರ್ಕ್‌ಗಾರ್ಡ್ಸ್ ರೈಟಿಂಗ್, ಸಂಪುಟ 14 , ed. ಮತ್ತು ಟ್ರಾನ್ಸ್. ಹೋವಾರ್ಡ್ ವಿ. ಹಾಂಗ್ ಮತ್ತು ಎಡ್ನಾ ಎಚ್ ಹಾಂಗ್, ಪ್ರಿನ್ಸ್‌ಟನ್, ಎನ್.ಜೆ: ಪ್ರಿನ್ಸ್‌ಟನ್ ಅಪ್. ISBN ೯೭೮-೦೬೯೧೦೭೨೨೬೫.
  • ಕೈರ್ಕ್‌ಗಾರ್ಡ್, ಸೋರೆನ್ (೧೯೯೫/೧೮೫೦), ವರ್ಕ್ಸ್ ಆಫ್ ಲವ್ : ಕೈರ್ಕ್‌ಗಾರ್ಡ್ಸ್ ರೈಟಿಂಗ್, ಸಂಪುಟ 14 , ed. ಮತ್ತು ಟ್ರಾನ್ಸ್.. ಹೋವಾರ್ಡ್ ವಿ. ಹಾಂಗ್ ಮತ್ತು ಎಡ್ನಾ ಎಚ್ ಹಾಂಗ್, ಪ್ರಿನ್ಸ್‌ಟನ್, ಎನ್.ಜೆ: ಪ್ರಿನ್ಸ್‌ಟನ್ ಅಪ್. ISBN ೯೭೮-೦೬೯೧೦೩೭೯೨೯.
  • ನೀತ್ಸೆ ,ಪ್ರೈಡ್ರಿಚ್ (೨೦೦೫/೧೮೮೬), ಬಿಯಾಂಡ್ ಗಾಡ್ ಆ‍ಯ್‌೦ಡ್ ಇವಿಲ್ ,ಟ್ರಾನ್ಸ್ ಶೆಲೆನ್ ಜಿಮ್ಮರ್ನ್.
  • ನೀತ್ಸೆ, ಪ್ರೈಡ್‌ರಿಕ್‌ ೧೯೭೪/೧೮೮೭), ದ ಗೇ ಸೈನ್ಸ್ , ಟ್ರಾನ್ಸ್. ವಾಲ್ಟರ್ ಕೌಫ್‌ಮನ್, ವಿಂಟೇಗ್, ISBN ೦-೩೯೪-೭೧೯೮೫-೯.
  • ನೀತ್ಸೆ, ಪ್ರೈಡ್‌ರಿಕ್‌ (೧೯೮೦), ಸ್ಯಾಮ್ಟ್‌ಲೀಚೆ ವೆರ್ಕನ್. Kritische Studienausgabe , ed. ಸಿ. ಕೊಲ್ಲಿ ಮತ್ತು ಎಮ್. ಮೊಂಟಿನರಿ, ವಾಲ್ಟರ್ ಡೆ ಗ್ರೈಟರ್. ISBN ೩-೧೧-೦೦೭೬೮೦-೨.
  • ನೀತ್ಸೆ, ಪ್ರೈಡ್‌ರಿಕ್‌ (೨೦೦೮/೧೮೮೫), ದಸ್ ಸ್ಪೇಕ್ ಜರಾತುಸ್ಟ್ರಾ ,ಟ್ರಾನ್ಸ್. ಥಾಮಸ್ ಕಾಮನ್.

ದ್ವಿತೀಯ ವಿಷಯಗಳು

  • ಕಾರ್, ಕರೇನ್ (೧೯೯೨), ದ ಬೆನಾಲಿಸೇಶನ್ ಆಫ್ ನಿಲಿಜಂ ,ಸ್ಟೇಟ್ ವಿಶ್ವವಿದ್ಯಾಲಯ ನ್ಯೂಯಾರ್ಕ್ ಪ್ರೆಸ್.
  • ಕನ್ನಿಂಗ್‌ಹ್ಯಾಮ್, ಕೊನೊರ್ (೨೦೦೨), ಜಿನಿಯಾಲನಿ ಅಫ್ ನಿಲಿಜಂ: ಫಿಲಾಸಫಿಸ್ ಆಫ್ ನಥಿಂಗ್ & ದ ಡಿಫರೆನ್ಸ್ ಆಫ್ ಥೀಯಾಲಜಿ , ನ್ಯೂಯಾರ್ಕ್ ಎನ್‌ವೈ: ರಾಟ್ಲೆಜ್.
  • ಡ್ರೆಯ್ಫಸ್,ಹರ್ಬರ್ಟ್ ಎಲ್. (೨೦೦೪), ಕೈರ್ಕೆಗಾರ್ಡ್ ಆನ್ ದ ಇಂಟರ್‌ನೆಟ್:ಆ‍ಯ್‌ನೊನಿಮಿಟಿ ವಿಎಸ್.ಕಮಿಟ್ಮೆಂಟ್ ಇನ್ ದ ಪ್ರೆಸೆಂಟ್ ಏಜ್ . ಡಿಸೆಂಬರ್ ೧, ೨೦೦೯ರಲ್ಲಿ ಪರಿಷ್ಕರಿಸಲಾಗಿದೆ.
  • ಫ್ರೆಜರ್, ಜಾನ್ (೨೦೦೧), "ನಿಹಿಲಿಜಂ, ಮಾಡರ್ನ್ ಆ‍ಯ್‌೦ಡ್ ವ್ಯಾಲ್ಯೂ ", ಡಿಸೆಂಬರ್ ೨, ೨೦೦೯ರಲ್ಲಿಪರಿಷ್ಕರಿಸಲಾಗಿದೆ.
  • ಗಿಲೆಸ್ಪಿ,ಮಿಶೆಲ್ ಅಲೆನ್ (೧೯೯೬), ನಿಹಿಲಿಜಂ ಬಿಫೋರ್ ನೀತ್ಸೆ ,ಚಿಕಾಗೋ, ಐಎಲ್: ಚಿಕಾಗೋ ಪ್ರೆಸ್ ವಿಶ್ವವಿದ್ಯಾನಿಲಯ.
  • ಗಿಯೊವನಿ,ಜಾರ್ಜ್ ಡಿ (೨೦೦೮), "ಪ್ರೈಡ್‌ರಿಕ್‌ ಹೆನ್‌ರಿಚ್ ಜಾಕೊಬಿ ", ದ ಸ್ಟ್ಯಾನ್‌ಫೋರ್ಡ್ ಎನ್‌ಸೈಕ್ಲೋಪೀಡಿಯಾ ಆಫ್ ಫಿಲಾಸಫಿ , ಎಡ್ವರ್ಡ್ ಎನ್ ಜಟ್ಲಾ(ed.). ಡಿಸೆಂಬರ್ ೧೨, ೨೦೦೬ರಂದು ಮರುಸಂಪಾದಿಸಲಾಗಿದೆ.
  • ಹಾರ್ಪರ್, ಡೋಗ್ಲಾಸ್, "ನಿಹಿಲಿಜಂ", ಇನ್: ಆನ್‌ಲೈನ್ ಎಟಿಮೊಲಾಜಿ ಡಿಕ್ಷನರಿ ,ಡಿಸೆಂಬರ್ ೨, ೨೦೦೯ರಲ್ಲಿ ಮರುಸಂಪಾದಿಸಲಾಗಿದೆ.
  • ಹಿಬ್ಸ್, ಥಾಮಸ್ ಎಸ್. (೨೦೦೦), ಶೋಸ್ ಎಬೌಟ್ ನಥಿಂಗ್: ನಿಹಿಲಿಜಂ ಇನ್ ಪಾಪ್ಯೂಪಲ್ ಕಲ್ಚರ್ ಫ್ರಾಮ್ದ ಎಕ್ಸೊರ್ಸಿಟ್ ಟು ಸೈನ್‌ಫೆಲ್ಡ್ , ಡಲ್ಲಾಸ್, ಟಿಎಕ್ಸ್: ಸ್ಪೆನ್ಸ್ ಪಬ್ಲಿಷಿಂಗ್ ಕಂಪನಿ.
  • ಕೊರಬ್-ಕಾರ್ಪೊವಿಡ್ಜ್, ಡಬ್ಲ್ಯೂ. ಜೆ. (೨೦೦೫), "ಮಾರ್ಟೀನ್ ಹೈಡೆಗ್ಗರ್‌ (1889—1976)", ಇನ್: ಇಂಟರ್‌ನೆಟ್ ಎನ್‌ಸೈಕ್ಲೋಪೀಡಿಯಾ ಆಫ್ ಫಿಲಾಸಫಿ , ಡಿಸೆಂಬರ್ ೨, ೨೦೦೯ರಲ್ಲಿ ಮರುಸಂಪಾದಿಸಲಾಗಿದೆ.
  • ಕನ್, ಎಲಿಸಬೆತ್ (೧೯೯೨), ಪ್ರೈಡ್‌ರಿಕ್‌ ನೀತ್ಸೆ ಫಿಲಾಸಫಿ ದೆಸ್ ಯುರೊಪಿಯಸ್ಜೆನ್ ನಿಹಿಲಿಮಸ್ , ವಾಲ್ಟರ್ ಡೆ ಗ್ರೈಟರ್.
  • ಲೊವಿತ್, ಕಾರ್ಲ್ (೧೯೯೫), ಮಾರ್ಟೀನ್ ಹೈಡೆಗ್ಗರ್‌ ಆ‍ಯ್‌೦ಡ್ ಯುರೋಪಿಯನ್ ಜನಿಹಿಲಿಜಂ , ನ್ಯೂಯಾರ್ಕ್,ಎನ್‌ವೈ:ಕೊಲಂಬಿಯಾ ಅಪ್.
  • ಮರ್ಮಿಸ್ಜ್, ಜಾನ್ (೨೦೦೩), ಲಾಫಿಂಗ್ ಎಟ್ ನಥಿಂಗ್: ಹ್ಯೂಮರ್ ಅ‍ಯ್‌ಸ್ ಎ ರಿಸ್ಪಾನ್ಸ್ ಟು ನಿಹಿಲಿಜಂ , ಆಲ್ಬನಿ, ಎನ್‌ವೈ: ಸನಿ ಪ್ರೆಸ್.
  • ಮುಲ್ಲರ್-ಲೂಥರ್, ವೂಲ್ಫ್‌ಗಂಗ್ (೨೦೦೦), ಹೈಡೆಗ್ಗರ್‌ und ನೀತ್ಸೆ. ನೀತ್ಸೆ-ಇಂಟರ್‌ಪ್ರೆಸೇಂಟೇಶನನ್ III , ಬರ್ಲಿನ್-ನ್ಯೂಯಾರ್ಕ್.
  • ಪರ್ವೆಜ್ ಮಂಜೂರ್, ಎಸ್. (೨೦೦೩), "ಮಾಡರ್ನಿಟಿ ಆ‍ಯ್‍೦ಡ್ ನಿಹಿಲಿಜಂ. Archived 2004-02-20 ವೇಬ್ಯಾಕ್ ಮೆಷಿನ್ ನಲ್ಲಿ.ಸೆಕ್ಯುಲರ್ ಹಿಸ್ಟರಿ ಆ‍ಯ್‌೦ಡ್ ಲಾಸ್ ಆಫ್ ಮೀನಿಂಗ್ Archived 2004-02-20 ವೇಬ್ಯಾಕ್ ಮೆಷಿನ್ ನಲ್ಲಿ.", ಡಿಸೆಂಬರ್ ೨, ೨೦೦೯ರಲ್ಲಿ ಮರುಸಂಪಾದಿಸಲಾಗಿದೆ.
  • ರೋಸ್, ಎಗೆನ್ ಪ್ರ್. ಸೆರಪಿಮ್ (೧೯೯೫), ನಿಹಿಲಿಜಂ,ದ ರೂಟ್ ಆಫ್ ದ ರೆವಲ್ಯುಷನ್ ಆಫ್ ದ ಮಾಡರ್ನ್ ಏಜ್ , ಫೊರೆಸ್ಟ್‌ವಿಲ್ಲೆ, ಸಿಎ: ಪ್ರ್. ಸೆರಪಿಮ್ ರೋಸ್ ಫೌಂಡೇಶನ್.
  • ರೋಸನ್,ಸ್ಟ್ಯಾನ್ಲಿ (೨೦೦೦), ನಿಹಿಲಿಜಂ: ಎ ಫಿಲಾಸಫಿಕಲ್ ಎಸ್ಸೆ , ಸೌತ್ ಬೆಂಡ್,ಇಂಡಿಯಾನಾ: ಸೇಂಟ್.ಅಗಸ್ಟೀನ್ಸ್ ಪ್ರೆಸ್ (೨ನೇಯ ಆವೃತ್ತಿ).
  • ಸ್ಲೊಕೊಂಬೆ,ವಿಲ್ (೨೦೦೬), ನಿಹಿಲಿಜಂ ಅ‍ಯ್‌೦ಡ್ ಸಬ್‌ಲೈಮ್ ಪೋಸ್ಟ್ ಮಾಡರ್ನ್: ದ (ಹಿ)ಸ್ಟೋರಿ ಆಫ್ ಎ ಢಿಫಿಕಲ್ಟ್ ರಿಲೇಶನ್‌ಶಿಪ್ , ನ್ಯೂಯಾರ್ಕ್, ಎನ್‌ವೈ: ರಾಟ್ಲೆಜ್.
  • ವಿಲ್ಲೆಟ್, ಚಾರ್ಲ್ಸ್ (೨೦೦೯), ಟವರ್ಡ್ಸ್ ಎಥಿಕಲ್ ನಿಹಿಲಿಜಂ: ದ ಪಾಸಿಬಿಲಿಟಿ ಆಫ್ ನೀತ್ಸೆಯನ್ ಹೋಪ್ , ಸಾರ್ಬ್ರುಕೆನ್: ವೆರ್ಲಾಗ್ ಡಾ. ಮುಲ್ಲರ್.
  • ವಿಲಿಯಂಸ್, ಪೀಟರ್ ಎಸ್. (೨೦೦೫), ' ಐ ವಿಶ್ ಐ ಕುಡ್ ಬಿಲೀವ್ ಇನ್ ಮೀನಿಂಗ್: ಎ ರಿಸ್ಪಾನ್ಸ್ ಟು ನಿಹಿಲಿಜಂ, ದಮಾರೀಸ್ ಪಬ್ಲಿಷಿಂಗ್

ಬಾಹ್ಯ ಕೊಂಡಿಗಳು