ಅಮ್ನೆಸ್ಟಿ ಇಂಟರ್ ನ್ಯಾಶನಲ್ (ರಾಜದ್ರೋಹದ ಕ್ಷಮಾಪಣೆಯ ಅಂತಾರಾಷ್ಟ್ರೀಯ ಸಂಸ್ಥೆ)

ಅಮ್ನೆಸ್ಟಿ ಇಂಟರ್ ನ್ಯಾಶನಲ್ (ಸಾಮಾನ್ಯವಾಗಿ ಇದನ್ನು ರಾಜದ್ರೋಹದ ಕ್ಷಮಾಪಣೆ )ಅಮ್ನೆಸ್ಟಿ) ಮತ್ತುAI(ಏಐ) ) ಎಂದು ಕರೆಯಲಾಗುತ್ತದೆ.ಇದೊಂದು ಅಂತಾರಾಷ್ಟ್ರೀಯ ಸರ್ಕಾರೇತರ ಸಂಘಟನೆಯಾಗಿದೆ . }ಇದರ ಮುಖ್ಯ ಉದ್ದೇಶವೆಂದರೆ "ತನಿಖೆ ನಡೆಸುವ ಮೂಲಕ ಮಾನವ ಹಕ್ಕುಗಳ ರಕ್ಷಣೆ ಮತ್ತು ಇವುಗಳ ದುರುಪಯೋಗಳ ತಡೆದು ವಂಚಿತರಾದ ವ್ಯಕ್ತಿಗಳ ಹಕ್ಕು ರಕ್ಷಣೆ ಮತ್ತು ನ್ಯಾಯಕ್ಕಾಗಿ ಒತ್ತಾಯಿಸುವುದು ಇದರ [೨] ಗುರಿಯಾಗಿದೆಲಂಡನ್ ನಲ್ಲಿ ಸುಮಾರು 1961 ರಲ್ಲಿ ನಿಧಿ ನೆರವಿನಿಂದ ಆರಂಭ ಕಂಡಿತು,ಮಾನವ ಹಕ್ಕುಗಳ ದುರುಪಯೋಗ ಮತ್ತು ಅವುಗಳ ಉಲ್ಲಂಘನೆ ಬಗ್ಗೆ ಅದು ತನ್ನ ಗಮನ ಹರಿಸಿತು.ಅಂತಾರಾಷ್ಟ್ರೀಯ ಕಾನೂನುಗಳ ಮತ್ತು ಗುಣಮಟ್ಟಗಳ ಮೂಲಕ ಸಮಸ್ಯೆ ಬಗೆಹರಿಸುವ ಕಾರ್ಯವನು ಕೈಗೆತ್ತಿಕೊಂಡಿತು. ಇದು ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಿ ಆಯಾ ಸರ್ಕಾರ ಮಟ್ಟದಲ್ಲಿ ಉಂಟಾಗುವ ಮಾನವ ಹಕ್ಕುಗಳ ದಮನವನ್ನು ತಡೆಯಲು [೨] ಪ್ರಯತ್ನಿಸುತ್ತದೆ. ಈ ಸಂಘಟನೆಯು 1977 ರಲ್ಲಿ "ತಾನು ಚಿತ್ರಹಿಂಸೆಯ ವಿರುದ್ದ ನಡೆಸಿದ ಪ್ರಚಾರಾಂದೋಲನಕ್ಕಾಗಿ" ನೋಬಲ್ ಶಾಂತಿ ಪ್ರಶಸ್ತಿಯನ್ನು ಪಡೆಯಿತು.ಅಷ್ಟೇ ಅಲ್ಲದೇ ಮಾನವ ಹಕ್ಕುಗಳ ವಲಯದಲ್ಲಿನ ಯುನೈಟೆಡ್ ನೇಶನ್ಸ್ [೩] 1978 ರಲ್ಲಿ (ಸಂಯುಕ್ತ ರಾಷ್ಟ್ರ ಸಂಘ)ಪ್ರಶಸ್ತಿಗೂ [೪] ಪಾತ್ರವಾಯಿತು.ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆಯಲ್ಲಿ (ಅಂದರೆ ಸುಮಾರು 300 ಸಂಘಟನೆಗಳು [೫] 1996 ರ ವರೆಗೆ ದಾಖಲಾಗಿದ್ದವು.)ಆದರೆ ಅಮ್ನೆಸ್ಟಿಯು ಸುದೀರ್ಘ ಇತಿಹಾಸ ಮತ್ತು ವ್ಯಾಪಕ ಹೆಸರು ಪಡೆದಿದೆ,ಅದಲ್ಲದೇ "ಇದು ಪೂರಕ ಚಳವಳಿಗೆ ಒಂದು ಗುಣಮಟ್ಟ ತಂದುಕೊಡುವಲ್ಲಿ [೫] ಯಶಸ್ವಿಯಾಗಿದೆ".

Amnesty International
ಚಿತ್ರ:Amnesty International logo.svg
ಧ್ಯೇಯವಾಕ್ಯIt is better to light a candle than to curse the darkness.[೧]
FoundedJuly 1961 by Peter Benenson in the United Kingdom
ಶೈಲಿNon-profit
NGO
ಸ್ಥಳ
  • Global
    General secretariat in London
ServicesProtecting human rights
FieldsMedia attention, direct-appeal campaigns, research, lobbying
Members
2.2 million members and supporters
Key people
Salil Shetty, Irene Khan, Seán MacBride, Martin Ennals, Peter Benenson, Thomas Hammarberg, Eric Baker, Arthur Fern, Ian Martin and Pierre Sané
ಅಧಿಕೃತ ಜಾಲತಾಣwww.amnesty.org

ಇತಿಹಾಸ/ಚರಿತ್ರೆ

1960ರ ದಶಕ

ಅಮ್ನೆಸ್ಟಿ ಇಂಟರ್ ನ್ಯಾಶನಲ್ ನ್ನು ಇಂಗ್ಲಿಷ್ ಕಾರ್ಮಿಕ ವಕೀಲ ಪೀಟರ್ ಬೆನೆಸನ್ ಜುಲೈ 1961 ರಲ್ಲಿ ಸ್ಥಾಪಿಸಿದರು. ಆತನೇ ಹೇಳುವ ಪ್ರಕಾರ 1960,ನವೆಂಬರ್ 19 ರಂದು ಆತ ಲಂಡನ್ ನೆಲಮಾಳಿಗೆಯಡಿ ಪ್ರಯಾಣ ಮಾಡುತ್ತಿರುವಾಗ ಇಬ್ಬರು ಪೋರ್ಚ್ ಗೀಸ್ ನ ಕೊಯೊಂಬ್ರಾದ ವಿದ್ಯಾರ್ಥಿಗಳನ್ನು ಕುಡಿದು ಅಸಭ್ಯವಾಗಿ ವರ್ತಿಸಿದ ಕಾರಣದಿಂದ ಅವರಿಗೆ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು ಎಂಬುದನ್ನು ಆತ ಪಯಣಿಸುವಾಗ ಫಲಕವೊಂದರಲ್ಲಿ [a][೬] ಕಂಡಿದ್ದ.ಅದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಹೇಳಿದ. ಆದರೆ ಸಂಶೋಧಕರು ಸುದ್ದಿ ಪತ್ರಿಕೆಗಳಲ್ಲಿ ಬಂದ ಲೇಖನಗಳನ್ನು ಅಷ್ಟಾಗಿ ಗಮನಿಸರಲಿಲ್ಲ. ಸುಮಾರು 1960 ರಲ್ಲಿ ಯುರೊಪಿಯನ್ ವಶಾಹತುಶಾಹಿ ಅಧಿಕಾರಾಡಳಿತಕ್ಕೆ ಒಳಪಟ್ಟಿದ್ದು ಆಫ್ರಿಕಾದ ಪೊರ್ಚಗಲ್ ಒಂದೇ,ಇದನ್ನು ಈಸ್ಟಾಡೊ ನೊವೊ ಆಡಳಿತ ನಡೆಸುತ್ತಿದ್ದ ಕಾಲದಲ್ಲಿ ಎಂದು ಗುರುತಿಸಲಾಗಿದೆ. ಆಗ ಆಡಳಿತ ವಿರೋಧಿ ಚಟುವಟಿಕೆಗಳು ಪೊರ್ಚ್ ಗೀಸ್ ರಾಜ್ಯ ಪೊಲೀಸ್ ರಿಂದ ಪೊರ್ಚ್ ಗೀಸ್ ನಾಗರಿಕರ ವಿರುದ್ದವೇ ನಡೆಯಿತು. ಒಂದು ಮಹತ್ವದ ಸುದ್ದಿ ಪತ್ರಿಕೆಯಲ್ಲಿ ಬಂದ "ದಿ ಫಾರ್ಗಾಟನ್ ಪ್ರಿಜನರ್ಸ್" ಲೇಖನವೊಂದಕ್ಕೆ ಬೆನ್ ಸನ್ ಪ್ರತಿಕ್ರಿಯಿಸುದ್ದು,"ಯಾವುದೇ ನಿಮ್ಮ ಪತ್ರಿಕೆಯೊಂದನ್ನು ಯಾವುದೇ ದಿನ ನೀವು ತೆರೆದು ಓದಿದರೆ ಪ್ರತಿ ವಾರ ಅಥವಾ ಪ್ರತಿದಿನ ಯಾರೋ ಯಾರನ್ನೋ ಅಲ್ಲಿನ ಸರ್ಕಾರದ ಒತ್ತಡಕ್ಕೆ ಮಣಿದು ಸೆರೆಮನೆಗೆ ತಳ್ಳಿರುತ್ತಾರೆ ಎಂಬ ಕಥೆ ಅಲ್ಲಿರುತ್ತದೆ.ಚಿತ್ರಹಿಂಸೆಗೀಡಾದವರು ಅಥವಾ ನೇಣುಗಂಬಕ್ಕೆ ಏರಿಸಿದ್ದು ಇತ್ಯಾದಿಗಳನ್ನು ನೀವು-ನಾವು ನೋಡುತ್ತೇವೆ.ಅದೇಕೆಂದರೆ ಆಯಾ ಸರ್ಕಾರದ ಆಜ್ಞೆ ಪಾಲಿಸದಿರುವುದಕ್ಕೆ ಇಲ್ಲವೆ ಅಲ್ಲಿನ ಧರ್ಮಕ್ಕೆ ತಲೆ ಬಾಗದಿದ್ದಕ್ಕಾಗಿ ಅಥವಾ ಅವರ ಅಭಿಪ್ರಾಯಗಳ ಒಪ್ಪದಿರುವುದು ಹೀಗೆ ಹಲವಾರು ವಿಧಗಳಲ್ಲಿ ಈ ಮಾನವ ಹಕ್ಕುಗಳಿಗೆ ಚ್ಯುತಿ ಉಂಟಾಗುತ್ತಿದೆ.[...] ಈ ಸುದ್ದಿಪತ್ರಿಕೆಯ ಓದುಗ ನಿರ್ವೀರ್ಯನಾಗುತ್ತಾನೆ ಇಲ್ಲವೇ ಅಂತಹ ಭಾವನಾ ಸ್ಥಿತಿಗೆ ತಲುಪುತ್ತಾನೆ. ಹೀಗಾಗಿ ಇಂತಹ ಖಿನ್ನತೆಯ ಭಾವನೆಗಳು ಒಂದಾಗಿ ಒಂದು ಸಾರ್ವತ್ರಿಕ ಅಭಿಪ್ರಾಯದಡಿ ಬಂದು ಅದಕ್ಕಾಗಿ ಉತ್ತಮ ಕ್ರಿಯೆಯೊಂದಿಗೆ [೭] ಸ್ಪಂದಿಸಬೇಕಾಗುತ್ತದೆ.ಬೆನೆಸನ್ ತನ್ನ ಸ್ನೇಹಿತ ಎರಿಕ್ ಬೇಕರ್ ಜೊತೆಯಾಗಿ ಕೆಲಸ ಮಾಡಿದ. ಬೇಕರ್ ರಿಲಿಜಿಯಸ್ ಸೊಸೈಟಿ ಆಫ್ ಫ್ರೆಂಡ್ಸ್ ನ ಸದಸ್ಯನಾಗಿದ್ದ.ಅಣ್ವಸ್ತ್ರ ನಿಷೇಧದ ಪ್ರಚಾರಕ್ಕಾಗಿ ನಿಧಿ ಸಂಗ್ರಹದ ಕಾರ್ಯದಲ್ಲಿ ನಿರತನಾಗಿದ್ದ.ಇದರೊಂದಿಗೆ ಆತ ಕ್ವೇಕರ್ ಪೀಸ್ ಅಂಡ್ ಸೊಸಿಯಲ್ ವಿಟ್ನೆಸ್ ಸಂಘಟನೆಯ ಮುಖ್ಯಸ್ಥನಾಗಿದ್ದ.ಹೀಗೆ ಬೆನೆಸನ್ ಆತನ ಆತ್ಮಚರಿತ್ರೆಯಲ್ಲಿ "ಈತನೊಬ್ಬ ಇಂತಹ ಯೋಜನೆಗಳ ಅನುಷ್ಟಾನದಲ್ಲಿಬೆಂಬಲ ನೀಡುವ ಪಾಲುದಾರನಾಗಿದ್ದ." ಆತ ಇನ್ನುಳಿದ ವಿದ್ವಾಂಸರು ಮತ್ತು ವಕೀಲಕರೊಂದಿಗೆ ಅದಲ್ಲದೇ ಬಹು ಮುಖ್ಯವಾಗಿ ಅಲೆಕ್ ಡಿಗ್ಗೆಸ್ ರೊಂದಿಗೆ ಚರ್ಚೆ ನಡೆಸಿದ.ಲೂಯಿಸ್ ಬ್ಲೊಮ್ -ಕೂಪರ್ ಮುಖಾಂತರ ಸಂಪಾದಕ ಡೇವಿಡ್ ಆಸ್ಟೊರ್ ಅವರ ದಿ ಆಬ್ಸರವರ್ ಪತ್ರಿಕೆಯಲ್ಲಿ 1961 ಮೇ 28 ರಂದು ಬೆನೆಸನ್ ನ ಲೇಖನ "ದಿ ಫಾರ್ಗಾಟನ್ ಪ್ರಿಜನರ್ಸ್ "ಪ್ರಕಟಗೊಂಡಿತು. ಈ ಲೇಖನವು ಓದುಗರಲ್ಲಿ "ಜೈಲುಗಳಲ್ಲಿರುವವರ ಬಗ್ಗೆ,ಚಿತ್ರಹಿಂಸೆ ಅಥವಾ ಗಲ್ಲುಶಿಕ್ಷೆಗೊಳಗಾದವರ ಬಗ್ಗೆ ತೀವ್ರ ಗಮನ ಸೆಳೆಯಿತು.ಆತನ ಅಭಿಪ್ರಾಯಗಳು ಅಥವಾ ಧರ್ಮಗಳು ಆತನ [೭] ಸರ್ಕಾರದಿಂದ ಸಮ್ಮತಿಸಲಿಲ್ಲ.ಇನ್ನೊಂದೆಂದರೆ ಸರ್ಕಾರಗಳಿಂದ ಕಾನೂನು ಉಲ್ಲಂಘನೆ ಅಂದರೆ ಯುನ್ವರ್ಸಲ್ ಡಿಕ್ಲೇರೇಶನ್ ಆಫ್ ಹುಮನ್ ರೈಟ್ಸ್ (UDHR)ನ ನಿಯಮಾವಳಿಯ ವಿಧಿ 18 ಮತ್ತು 19 ರ ಪ್ರಕಾರ ಸ್ಪಷ್ಟ ಉಲ್ಲಂಘನೆ ಇತ್ತು. ಈ ಲೇಖನವು ಇಂತಹ ಉಲ್ಲಂಘನೆಗಳು ಇಡೀ ಜಗತ್ತಿನಾದ್ಯಂತ ನಡೆಯುತ್ತವೆ ಎಂದು ವಿವರಿಸಿತ್ತು.ಸ್ವಾತಂತ್ರ್ಯವನ್ನು ನಿರ್ಭಂಧಿಸಲು,ರಾಜಕೀಯ ವಿರೋಧಿಗಳ ಮಟ್ಟಹಾಕಲು ಇದು ಸರಿಯಾಗಿ ಎಲ್ಲಾ ಸಾಕ್ಷಾಧಾರಗಳ ಒದಗಿಸಿತ್ತು.ಆಗಾಗ್ಗೆ ಸಾರ್ವಜನಿಕ ವಿಚಾರಣೆಗಳು ನಿಸ್ಪಕ್ಷ ನ್ಯಾಯಾಲಯಗಳ ಮುಂದೆ ನಡೆದು ಭಾದಿತರಿಗೆ ಆಶ್ರಯ ಒದಗಿಸುವ ಬಗ್ಗೆಯೂ ವಿವರಿಸಲಾಗಿತ್ತು. ಅದು "ಲಾಂಚ್ ಆಫ್ ಅಮ್ನೆಸ್ಟಿ,1961",ಎಂಬ ಗುರಿಯೊಂದಿಗೆ ತನ್ನ ಕಾರ್ಯಚಟುವಟಿಕೆಗಳನ್ನು ಸಾರ್ವಜನಿಕಗೊಳಿಸಲು,ತ್ವರಿತವಾಗಿ ಮತ್ತು ವ್ಯಾಪಕವಾಗಿ ಮಾನವ ಹಕ್ಕುಗಳ ರಕ್ಷಣೆಗೆ ಬೆನೆ ಸನ್ ಇದಕ್ಕೆ "ಪ್ರಿಜನರ್ಸ್ ಆಫ್ ನ್ಸೈನ್ಸ್ "ಎಂದು ಹೆಸರಿಸಿದ. ರಾಜದ್ರೋಹದ ಕ್ಷಮಾಪಣೆಯ "ಅಪೀಲ್ ಫಾರ್ ಅಮ್ನೆಸ್ಟಿ"ಘೋಷಣೆಯು ಬಹುತೇಕ ಎಲ್ಲಾ ಪ್ರಮುಖ ಅಂತಾರಾಷ್ಟ್ರೀಯ ಪತ್ರಿಕೆಗಳಲ್ಲಿ ಕಾಣಿಸಿತು. ಅದೇ ವರ್ಷ ಬೆನೆಸನ್ ಪರ್ಸೆಕ್ಯುಶನ್ 1961 ಎಂಬ ಪುಸ್ತಕವನ್ನು ಪ್ರಕಟಿಸಿದ.ಇದು ಒಂಬತ್ತು ಪ್ರಿಜನರ್ಸ್ ಆಫ್ ಕನ್ಸೈನ್ಸ್ ನ ಪ್ರಕರಣಗಳ ವಿವರವಾದ ವರದಿ ಪ್ರಕಟಿಸಿತ್ತು.ಇದನ್ನು ತನಿಖೆ ಮಾಡಿ ಸಮಗ್ರ ಮಾಹಿತಿಯನ್ನು ಬೆನೆಸನ್ ಮತ್ತುಬೇಕರ್ (ಮೌರೈಸ್ ಆಡಿನ,ಆಸ್ಟಒನ್ ಜೊನ್ಸ್ ,ಅಗೊಸ್ಟಿನೊ ನೆಟೊ,ಪ್ಯಾಟ್ರಿಕ್ ಡಂಕನ್ ,ಒಲ್ಗಾ ಐವಿನ್ಸ್ಕಾಯಾ,ಲುಯಿಸ್ ಟಾರುಕ್ ಮತ್ತು ಹೆ ಫೆಂಗ್ )ಮುಂತಾದವರು ಇದರ ಸಂಪಾದನೆಗೆ [೮] ನೆರವಾದರು.ಆಗ 1961 ರ ಜುಲೈನಲ್ಲಿ ಈ ನಾಯಕತ್ವ ನಿರ್ಧಾರದಂತೆ ಈ ಮನವಿಯು ತನ್ನ ಕಾಯಂ ಮೂಲವನ್ನು ಪಡೆದುಕೊಳ್ಳಲು ನೂತನ ಸಂಘಟನೆಯನ್ನು ಆರಂಭಿಸಲು ಮುಂದಾಯಿತು.ಸುಮಾರು 1962 ರಲ್ಲಿ ಸೆಪ್ಟೆಂಬರ್ 30 ರಂದು ಅಧಿಕೃತವಾಗಿ 'ಅಮ್ನೆಸ್ಟಿ ಇಂಟರ್ ನ್ಯಾಶನಲ್ 'ಎಂದು ನಾಮಕರಣವಾಯಿತು.(ಈ ನಡುವೆ 'ಅಪೀಲ್ ಫಾರ್ ಅಮ್ನೆಸ್ಟಿ,1961' ಮತ್ತು 1962 ಸೆಪ್ಟೆಂಬರ್ 30 ರಲ್ಲಿ ತನ್ನ ಹೆಸರನ್ನು ಸರಳವಾಗಿ 'ಅಮ್ನೆಸ್ಟಿ'[೯] ಎನ್ನಲಾಯಿತು.)ಇದು ಸಣ್ಣ ಮನವಿಯು ಆ ಕೂಡಲೇ ಕಾಯಂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನವ ಹಕ್ಕುಗಳ ರಕ್ಷಣೆ ಕುರಿತಂತೆ ಚಳವಳಿ ರೂಪದ ಕ್ರಮಕ್ಕೆ ಮುಂದಾಗುವುದು.ಇಲ್ಲಿ ಖೈದಿಗಳು ಅಹಿಂಸಾತ್ಮಕ ಭಾವನೆಯನ್ನು ಅಭಿವ್ಯಕ್ತಿಗೊಳಿಸಲಾಗುತ್ತದೆ.ಹೀಗೆ ಈ ಮೂಲಕ UDHR ನ ಅಧಿನಿಯಮ 18 ಮತ್ತು 19 ರ ಅಡಿಯಲ್ಲಿ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.ಅಲ್ಲದೇ ಪ್ರಾರಂಭದಿಂದಲೇ ಸಂಶೋಧನೆ ಮತ್ತು ಪ್ರಚಾರಾಂದೋಲನ ಕಾರ್ಯಕ್ರಮಗಳು ಅಮ್ನೆಸ್ಟಿಇಂಟರ್ ನ್ಯಾಶನಲ್ ನಲ್ಲಿವೆ. ಈ ಉದ್ದೇಶಕ್ಕಾಗಿ ವಾಚನಾಲಯವೊಂದನ್ನು ಸ್ಥಾಪಿಸಿ ಪಶ್ಚ್ಯಾತ್ತಾಪ ಪಡುತ್ತಿರುವ ಅಥವಾ ಧರ್ಮಪ್ರಜ್ಞೆಯ ಖೈದಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಸ್ಥಳೀಯ ಮಾಹಿತಿ ಜಾಲವೊಂದನ್ನು ಹುಟ್ಟುಹಾಕಲಾಯಿತು.ಅದಕ್ಕಾಗಿ ಸ್ಥಳೀಯವಾದ "ಥ್ರೀಸ್ " ಎಂಬ ಗುಂಪುಗಳ ರಚಿಸಲಾಯಿತು. ಪ್ರತಿಯೊಂದು ಗುಂಪೂ ಮೂವರು ಖೈದಿಗಳ ಪರವಾಗಿ ಕೆಲಸ ಆರಂಭಿಸಿತು:ಅದರಲ್ಲೂ ವಿಶ್ವದ ಮೂರು ತತ್ವಗಳನ್ನಾಧರಿಸಿದ ಅನುಯಾಯಿಗಳ ವಿವಿಧ ಪ್ರದೇಶದ ಸದಸ್ಯರು ಇದರಲ್ಲಿ ಸಕ್ರಿಯರಾದರು.ಪ್ರಧಾನ ತತ್ವಗಳೆಂದರೆ ಕಮ್ಯುನಿಸ್ಟ್ ,ಬಂಡವಾಳಶಾಹಿಗಳು ಮತ್ತು ಅಭಿವೃದ್ಧಿಪರ ಸಂಘಟನೆಗಳು ಇದರಲ್ಲಿ ಪಾಲ್ಗೊಂಡವು.ಅದಾದ ನಂತರ 1960 ರ ಮಧ್ಯಭಾಗದಲ್ಲಿ ಅಮ್ನೆಸ್ಟಿ ಇಂಟರ್ ನ್ಯಾಶನಲ್ ನ ಜಾಗತಿಕ ಅಸ್ತಿತ್ವ ಬೆಳೆಯಿತು.ಇದರ ಹಿನ್ನೆಲೆಯಲ್ಲಿ ಇಂಟರ್ ನ್ಯಾಶನಲ್ ಸೆಕ್ರೆಟರಿಯೇಟ್ ಮತ್ತು ಇಂಟರ್ ನ್ಯಾಶನಲ್ ಎಕ್ಸಿಕ್ಯುಟಿವ್ ಕಮೀಟಿಗಳನ್ನು ಸ್ಥಾಪಿಸಲಾಯಿತು.ಇವುಗಳ ಮೂಲಕ ಅಮ್ನೆಸ್ಟಿ ಇಂಟರ್ ನ್ಯಾಶನಲ್ ನ ರಾಷ್ಟ್ರೀಯ ಸಂಘಟನೆಗಳನ್ನು ಅಂದರೆ "ಸೆಕ್ಸೆನ್ಸ್"ಎಂದು ಹೇಳಲಾದ ಅಂಗಸಂಸ್ಥೆಗಳನ್ನು ವಿವಿಧ ದೇಶಗಳಲ್ಲಿ ಕಾರ್ಯೋನ್ಮುಖಗೊಳಿಸಲಾಯಿತು. ಈ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಚಳವಳಿಯೊಂದು ಇದರ ಅಗ್ರ ತತ್ವಗಳು ಮತ್ತು ತಂತ್ರಜ್ಞಾನದ ಬಗ್ಗೆ ತನ್ನ ಸಮ್ಮತಿ ಸೂಚಿಸಲು ಆರಂಭಿಸಿತು. ಉದಾಹರಣೆಗೆ ಎಂತಹ ಖೈದಿಗಳನ್ನು ಕ್ಷಮಾಪಣೆಗೆ ಪಡೆಯಬೇಕೆಂಬುದರ ಬಗ್ಗೆ ಅಥವಾ ಹಿಂಸಾತ್ಮಕ ಕೃತ್ಯಗಳ ಪ್ರೊತ್ಸಾಹಿಸಿದವರ ಬಗ್ಗೆ ಸೂಕ್ತ ಗಮನ ಹರಿಸುವುದು ಅಗತ್ಯವೆಂದು ಪ್ರತಿಪಾದಿಸಲಾಯಿತು.ನೆಲ್ಸನ್ ಮಂಡೆಲಾ ಅಂತವರು ಇಂತಹ ಖೈದಿಗಳಿಗೆ ಧರ್ಮಪ್ರಜ್ಞೆ ಇರುವವರು ಎಂದು ಕರೆಯುವುದು ಬೇಡ ಎಂಬ ಒಪ್ಪಂದಕ್ಕೆ ಬಂದರು. ವಾಚನಾಲಯ ಮತ್ತು ಸಹಾಯಕ ಗುಂಪುಗಳಲ್ಲದೇ ಅಮ್ನೆಸ್ಟಿ ಇಂಟರ್ ನ್ಯಾಶನಲ್ ಖೈದಿಗಳ ಕುಟುಂಬಗಳಿಗೆ ಸಾಂತ್ವನ ಹೇಳುವುದು,ಅವರಿದ್ದೆಡೆ ಪ್ರತಿನಿಧಿಗಳ ಕಳಿಸಿ ಅವರ ಪರವಾಗಿ ಪ್ರತಿನಿಧಿಯಾಗಿ ಕೆಲಸ ಮಾಡುವ ಚಟುವಟಿಕೆಗಳಲ್ಲಿಯೂ ತೊಡಗಿತು.ಖೈದಿಗಳಿಗೆ ಉದ್ಯೋಗವಕಾಶ ಒದಗಿಸುವುದು ಅಥವಾ ಅವರಿಗಾಗಿ ನಿರಾಶ್ರಿತ ತಾಣಗಳ ನಿರ್ಮಾಣದಂತಹ ಕಾರ್ಯಗಳೊಂದಿಗೆ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿತು. ಅದರ ಚಟುವಟಿಕೆ ಮತ್ತು ಪ್ರಭಾವವು ಆಂತರಿಕ ಸರ್ಕಾರಿ ಮಟ್ಟದಲ್ಲೂ ಬೆಳೆಯಿತು;ಅದರ ಸಲಹಾ ಮಂಡಳಿಯು ಯುನೈಟೆಡ್ ನೇಶನ್ಸ್ ನಿಂದ ಕೌನ್ಸಿಲ್ ಆಫ್ ಯುರೊಪ್ ಮತ್ತು UNESCOಗಳ ಪ್ರಶಸ್ತಿಗೂ ತನ್ನನ್ನು ಯೋಗ್ಯವೆನ್ನುವಂತೆ ಕೆಲಸ ಮಾಡಿತು.ಇದು ಒಂದು ದಶಕದ ಅವಧಿ ಮುಗಿಯುವ ಸಮಯದಲ್ಲಿಯೇ ಅದರೆ ಪ್ರಗತಿ ಕಾಣಿಸಿತು.

1970ರ ದಶಕ

ಅಮ್ನೆಸ್ಟಿ ಇಂಟರ್ ನ್ಯಾಶನಲ್ ನ ಕಾರ್ಯಚಟುವಟಿಕೆಗಳಲ್ಲಿ 1970 ರ ಸುಮಾರಿಗೆ ಮುಂಚೂಣಿಯಲ್ಲಿದ್ದವರೆಂದರೆ ಸೀನ್ ಮೆಕ್ ಬ್ರೈಡ್ ಮತ್ತು ಮಾರ್ಟಿನ್ ಎನ್ನಾಲ್ಸ್ ಮುಂತಾದವರು. ಧರ್ಮಪ್ರಜ್ಞೆಯ ಅಥವಾ ಪಶ್ಚಾತ್ತಾಪದಿಂದ ನೊಂದ ಖೈದಿಗಳ ಸಲುವಾಗಿ ಕೆಲಸ ಮಾಡಲು ಅಮ್ನೆಸ್ಟಿ ಇಂಟರ್ ನ್ಯಾಶನಲ್ ನ ವ್ಯಾಪ್ತಿ ವಿಸ್ತಾರಗೊಂಡಿತು.ಇದರಲ್ಲಿ "ನ್ಯಾಯಯುತ-ವಿಚಾರಣೆ" ಮತ್ತು ವಿಚಾರಣೆನಡೆಸದೇ ಅವರನ್ನು ದೀರ್ಘಕಾಲ ಇರಿಸಿಕೊಳ್ಳುವುದರ ವಿರುದ್ದ (UDHR ಅಧಿನಿಯಮ 9)ರಂತೆ ವಿರೋಧ ವ್ಯಕ್ತಪಡಿಸುವ ಕಾರ್ಯವೂ ಸೇರಿತು.ಅದಲ್ಲದೇ ಸೆರೆಮನೆಯಲ್ಲಿ ಖೈದಿಗಳಿಗೆ ಚಿತ್ರಹಿಂಸೆ ನೀಡುವುದನ್ನು ತಪ್ಪಿಸಲು ಸಲಹೆಗಳ ನೀಡಲಾಯಿತು.(UDHR ಅಧಿನಿಯಮ 5) ಖೈದಿಗಳಿಗೆ ನೀಡುವ ಚಿತ್ರಹಿಂಸೆಗೆ ಕಾರಣವೆಂದರೆ ಆಯಾ ಸರ್ಕಾರಗಳು ಅವರಿಂದ ಗುಪ್ತ ಮಾಹಿತಿ ಸಂಗ್ರಹ ಅಥವಾ ವಿರೋಧಪಕ್ಷಗಳಲ್ಲಿ ಭಯ ಅಥವಾ ನಡುಕ ಹುಟ್ಟಿಸುವುದೇ ಆಗಿತ್ತೆಂಬುದು ಅಮ್ನೆಸ್ಟಿ ಇಂಟರ್ ನ್ಯಾಶನಲ್ ನ ನಂಬಿಕೆ ದೃಢವಾಯಿತು. ಅದಲ್ಲದೇ ಕಿರುಕಳಕ್ಕಾಗಿ ಅತ್ಯಾಧುನಿಕ ತಂತ್ರ ಬಳಕೆಯು ವಿವಿಧ ದೇಶಗಳಿಂದ ಪಡೆಯಲಾಗುತ್ತದೆ ಎಂಬ ಮಾಹಿತಿಯೂ ಅದಕ್ಕೆ ಗೊತ್ತಾಯಿತು.ಉದಾಹರಣೆಗೆ ಯುನೈಟೆಡ್ ಸ್ಟೇಟ್ಸ್ CIA ಮೂಲಕ ಕೆಲವು ಚಟುವಟಿಕೆಗಳ ಮೂಲಕ ಮಾಹಿತಿ ಕಲೆಹಾಕುವಂತೆ ಸೂಚಿಸಿದಂತಾದ ಪ್ರಕರಣಗಳೂ ಕಂಡು ಬಂದವು.ಅಮ್ನೆಸ್ಟಿ ಇಂಟರ್ ನ್ಯಾಶನಲ್ ಎಲ್ಲಿ ಈ ಚಿತ್ರಹಿಂಸೆ ಅವ್ಯಾಹತವಾಗಿದೆಯೋ ಅಲ್ಲಿಂದ ವರದಿಗಳನ್ನು ತರಿಸಿಕೊಳ್ಳಲಾರಂಭಿಸಿತು.ಹೀಗೆ ಅದರ ಮುಖಾಂತರ ಅಂತಾರಾಷ್ಟ್ರೀಯ ಮಟ್ಟದ ಸಮಾವೇಶವೊಂದನ್ನು ನಡೆಸಿತು. ಅದು ತನ್ನ ಕೆಲಸವನ್ನು ಇನ್ನಷ್ಟು ಪ್ರಭಾವಿತಗೊಳಿಸಲು ಸಾರ್ವಜನಿಕ ಅಭಿಪ್ರಾಯ ಪಡೆದು 'ಚಿತ್ರಹಿಂಸೆಯ ರದ್ದತಿ'ಎಂಬ ಪ್ರಚಾರಾಂದೋಲನವನ್ನು ಆರಂಭಿಸಿ ಹಲವಾರು ವರ್ಷಗಳಿಂದ ದೇಶಗಳಲ್ಲಿದ್ದ ಈ ಪದ್ದತಿಯ ದೇಶಗಳ ಸರ್ಕಾರಗಳ ಮೇಲೆ ಒತ್ತಡ ತಂದು ಇದನ್ನು ನಿಲ್ಲಿಸಲು ಪ್ರಯತ್ನಿಸಿತು.ಅಮ್ನೆಸ್ಟಿ ಇಂಟರ್ ನ್ಯಾಶನಲ್ ನ ಸದಸ್ಯತ್ವವು [೧೦] 1969 ರಲ್ಲಿದ್ದದ್ದು 15,000 ಅದು 1979 ರಲ್ಲಿ 200,000 [೧೧] ಕ್ಕೇರಿತು. ಈ ಬೆಳವಣಿಗೆಯು ಅದರ ಸಂಪನ್ಮೂಲಗಳನ್ನೂ ಹೆಚ್ಚಿಸಿತು.ಅದಕ್ಕಾಗಿ "ಜೈಲು ಗೋಡೆಗಳಿಂದಾಚೆ" ಎಂಬ ಕಾರ್ಯಕ್ರಮ ಅನುಷ್ಠಾನಾಕ್ಕೆ ಬಂದು "ಕಾಣೆಯಾಗುವಿಕೆಗಳ" ಬಗ್ಗೆ,ಮರಣದಂಡನೆ ಬಗ್ಗೆ ಮತ್ತು ನಿರಾಶ್ರಿತರ ಹಕ್ಕುಗಳ ಬಗ್ಗೆ ಅದು ಹಲವು ಕಾರ್ಯಯೋಜನೆಗಳನ್ನು ಜಾರಿಗೆ ತಂದಿತು. ಇಲ್ಲಿ ಹೊಸ ತಂತ್ರವೊಂದನ್ನು 'ಅರ್ಜಂಟ್ ಆಕ್ಸನ್ 'ಎಂಬ ಹೆಸರಿನ ಮೇಲೆ ಆರಂಭಿಸಿ ಸದಸ್ಯತ್ವದ ಪ್ರಕ್ರಿಯೆಗೆ ತ್ವರಿತಗತಿ ನೀಡುವ ಪ್ರವರ್ತಕ ಯೋಜನೆ ರೂಪಿಸಲಾಯಿತು. ಮೊದಲ ಸಲ ಪ್ರಾಯೋಗಿಕ ಎನ್ನುವಂತೆ 1973 ರ ಮಾರ್ಚ್ 19 ರಲ್ಲಿ ರಾಜಕೀಯ ಕಾರಣಕ್ಕಾಗಿ ಬ್ರೆಜಿಲಿಯನ್ ನ ಶಿಕ್ಷಣ ತಜ್ಞ ಲುಯಿಜ್ ಬ್ಯಾಸಿಲಿಯೊ ರೊಸ್ಸಿ ಅವರನ್ನು ಬಂದಿಸಲಾಗಿತ್ತು ಆಗ ಪರವಾಗಿ ತನ್ನ ಈ ಅರ್ಜೆಂಟ್ ಆಕ್ಸನ್ ಕಾರ್ಯಕ್ರಮವನ್ನು ಅದು ಜಾರಿಗೊಳಿಸಿತು. ಅಂತರ್ ಸರ್ಕಾರಿ ಮಟ್ಟದಲ್ಲಿ ಅಮ್ನೆಸ್ಟಿ ಇಂಟರ್ ನ್ಯಾಶನಲ್ UN ನ ಖೈದಿಗಳ ನಡೆಸಿಕೊಳ್ಳುವ ಕನಿಷ್ಟ ಶಿಸ್ತಿನ ಗುಣಮಟ್ಟದ ನಿಯಮಗಳ ಪಾಲಿಸುವಂತೆ ಒತ್ತಡ ತಂದಿತು.ಸದ್ಯ ಅಸ್ತಿತ್ವದಲ್ಲಿರುವ ಮಾನವೀಯತೆ ಸಮಾರಂಭಗಳನ್ನು ನಡೆಸಿ ಅಲ್ಲಿ UN ನ ಮಾನವ ಹಕ್ಕುಗಳು ಸಮಾವೇಶಗಳು 1976 ರಲ್ಲಿ);ಹೀಗೆ ಅದು ಅಗತ್ಯವಿರುವ ಕಾನೂನುಗಳ ನೆರವಿನಿಂದ ಇಂತಹ ಕೆಟ್ಟ ಆಚರಣೆಗಳನ್ನು ರದ್ದುಪಡಿಸಲು ನಿರ್ಧರಿಸಲಾಯಿತು. ಇಂಟರ್ -ಅಮೆರಿಕನ್ ಕಮಿಶನ್ ಆನ್ ಹುಮನ್ ರೈಟ್ಸ್ (ಮಾನವ ಹಕ್ಕುಗಳ ಬಗ್ಗೆ ಅಂತರ-ಅಮೆರಿಕನ್ ಆಯೋಗ)ಪ್ರಕಾರ ಇದಕ್ಕೆ ಆಪ್ತ ಸಲಹಾಕಾರನೆಂಬ ಅಭಿವಾದನವೂ 1972 ರಲ್ಲಿದೊರೆಯಿತು.ಅಮ್ನೆಸ್ಟಿಯು 1976 ರಲ್ಲಿ ನಿಧಿ ಸಂಗ್ರಹಣೆಗಾಗಿ ದಿ ಸಿಕ್ರೆಟ್ ಪೊಲಿಸ್ ಮನ್ಸ್ ಬಾಲ್ಸ್ ಎಂಬ ಹೆಸರಿನಲ್ಲಿ ನೆರವಿನ ನಿಧಿ ಸಂಗ್ರಹಿಸಲು ಆರಂಭಿಸಿತು. ಆರಂಭದಲ್ಲಿ ಲಂದಣ್ ಣಳ್ಳಿ ವಿದೂಷಕರಿಂದ ಹಲವಾರಿ ವಿಡಂಬನಾತ್ಮಕ ಪ್ರದರ್ಶನಗಳು ನಡೆದವು.ಮೊಂಟೆ ಪೈಥಾನ್ ನ ಸದಸ್ಯರು ಇದರಲ್ಲಿ ಬಹುಮುಖ್ಯವಾಗಿ ಪಾಲ್ಗೊಂಡರು.ನಂತರ ಪ್ರಸಿದ್ದ ಸಂಗೀತಗೋಷ್ಟಿಗಳ ವರೆಗೂ ಅವರ ಕಾರ್ಯ ಯೋಜನೆ ವಿಸ್ತರಿಸಿತು. ಈ ಸರಣಿಗಳಲ್ಲಿ ಮೊಂಟೆ ಪೈಥಾನ್ ಅವರ ಹಳೆಯ ಸದಸ್ಯರು ಜಾನ್ ಕ್ಲೀಸೆ ಮತ್ತು ಮನರಂಜನಾ ಉದ್ಯಮದ ಕಾರ್ಯಕಾರಿ ಅಧಿಕಾರಿ ಮಾರ್ಟಿನ್ ಲೆವಿಸ್ ಅವರು ಅಮ್ನೆಸ್ಟಿ ಸಿಬ್ಬಂದಿ ಪೀಟರ್ ಲುಫ್ (ಅಮ್ನೆಸ್ಟಿಯ ಸಹಾಯಕ ನಿರ್ದೇಶಕರಾಗಿದ್ದು 1976-1977)ನಂತರ ಪೀಟರ್ ವಾಕರ್ (ನಿಧಿ ಸಂಗ್ರಹಣಾ ಅಧಿಕಾರಿ1978 ರಲ್ಲಿ)ಅವರೊಂದಿಗೆ ಕೈಜೋಡಿಸಿ ಈ ಕಾರ್ಯ ನಡೆಸಲಾಯಿತು. ಕ್ಲೀಸೆ,ಲೆವಿಸ್ ಮತ್ತು ಲುಫ್ ಮೊದಲ ಎರಡು ಪ್ರದರ್ಶನಗಳಲ್ಲಿ ಒಟ್ಟಿಗೆ ಕೆಲಸ ಮಾಡಿದರು.(1976 ಮತ್ತು 1977)ಸಂಘಟನೆಯು ಅದರ [೩] ಚಿತ್ರಹಿಂಸೆ ವಿರುದ್ದದ ಪ್ರಚಾರಾಂದೋಲಕ್ಕಾಗಿ 1977 ರಲ್ಲಿ ನೋಬಲ್ ಶಾಂತಿ ಪ್ರಶಸ್ತಿ;ಅದೇ ತೆರನಾಗಿ ಮಾನವ ಹಕ್ಕುಗಳ ರಕ್ಷಣಾ ವಲಯದ ಕಾರ್ಯಗಳಿಗಾಗಿ ಯುನೈಟೆಡ್ ನೇಶನ್ಸ್ ಪ್ರಶಸ್ತಿಯನ್ನು [೪] 1978 ರಲ್ಲಿ ಪಡೆಯಿತು.

1980ರ ದಶಕ

1986ರಲ್ಲಿ ಫಾರೊರೆನ ಅಂಚೆ ಚೀಟಿ ಬಿಡುಗಡೆ ಮಾಡಿ ಸಂಭ್ರಮಿಸಿತು.ಸೆಲೆಬ್ರೇಟಿಂಗ್ ಅಮ್ನಿಸ್ಟಿಸ್ 25 ನೆಯ ವಾರ್ಷಿಕೋತ್ಸವ-11 ವರ್ಷದ ರಾನ್ನಾವಾ ಕುನೊಯ್ ನಿಂದ ಚಿತ್ರಕಲೆ

ಆದರೆ 1980 ರ ಸುಮಾರಿಗೆ ಅಮ್ನೆಸ್ಟಿ ಇಂಟರ್ ನ್ಯಾಶನಲ್ ಸರ್ಕಾರಗಳಿಂದ ಹೆಚ್ಚು ಟೀಕೆಗಳಿಗೆ ಗುರಿಯಾಗಬೇಕಾಯಿತು. ಆಗ USSR ಅಮ್ನೆಸ್ಟಿ ಇಂಟರ್ ನ್ಯಾಶನಲ್ ಇದರ ನೆಪದಲ್ಲಿ ಬೇಹುಗಾರಿಕೆ ನಡೆಸುತ್ತಿದೆ ಎಂದು ಆರೋಪಿಸಿತು,ಮೊರೊಕ್ಕೊನ್ ಸರ್ಕಾರವು ಇದನ್ನು ಕಾನೂನು ಉಲ್ಲಂಘಿಸುವ ಒಬ್ಬ ಪ್ರತಿಪಾದಕ ಎಂದು ಟೀಕಿಸಿತು.ಅದೇ ರೀತಿ ಅರ್ಜೆಂಟೈನಾ ಅಮ್ನೆಸ್ಟಿ ಇಂಟರ್ ನ್ಯಾಶನಲ್ ನ 1983 ರ ವಾರ್ಷಿಕ ವರದಿಯನ್ನು [೧೨] ತಿರಸ್ಕರಿಸಿತು.ಆದರೆ ಅಮ್ನೆಸ್ಟಿ ಇಂಟರ್ ನ್ಯಾಶನಲ್ 1980ನ್ ರ ಉದ್ದಕ್ಕೂ ಚಿತ್ರಹಿಂಸೆ ವಿರುದ್ದ ಪ್ರಚಾರ ಮತ್ತು ಪಶ್ಚಾತ್ತಾಪಪಡುತ್ತಿರುವ ಖೈದಿಗಳ ಪರವಾಗಿ ನಿಂತಿತು. ಈ ಹೊಸ ವಿಷಯಗಳು ತಮ್ಮ ಸ್ಥಾನ ಪಡೆದವು,ನ್ಯಾಯಾಧಿಕರಣದ ವ್ಯಾಪ್ತಿ ಮೀರಿದ ಹತ್ಯೆಗಳು,ಮಿಲಿಟರಿ,ಭದ್ರತೆ ಮತ್ತು ಪೊಲೀಸ್ ವರ್ಗವಣೆಗಳು,ಅಲ್ಲದೇ ರಾಜಕೀಯ ಹತ್ಯೆಗಳ ಬಗ್ಗೆ ಪ್ರಸ್ತಾಪಗಳು ಬಂದವು.ಈ ದಶಕದ ಅಂತ್ಯದಲ್ಲಿ ವಿಶ್ವಾದ್ಯಂತದ ನಿರಾಶ್ರಿತರ ಸಂಖ್ಯೆಯು ಅಮ್ನೆಸ್ಟಿ ಇಂಟರ್ ನ್ಯಾಶನಲ್ ನ ಕಣ್ಣಿಗೆ ಬೀಳದ ಪ್ರದೇಶವೇ ಆಗಿರಲಿಲ್ಲ. ಸುಮಾರಾಗಿ ವಿಶ್ವದಲ್ಲಿನ ಆ ವೇಳೆಯ ನಿರಾಶ್ರಿತರನ್ನು ಯುದ್ದ ಮತ್ತು ಬರಗಾಲಗಳು ಸ್ಥಾನಪಲ್ಲಟಗೊಳಿಸಿದವು.ಇದರ ಸಂದರ್ಭದಲ್ಲಿ ಅಮ್ನೆಸ್ಟಿ ಇಂಟರ್ ನ್ಯಾಶನಲ್ ಯಾರನ್ನೂ ಒತ್ತಾಯದಿಂದ ಆಚೆ ದೂಡಲಾಗುತ್ತದೆ ಎಂಬುದರ ಬಗ್ಗೆ ನಿಗಾವಹಿಸಲು ಆರಂಭಿಸಿತು.ಮಾನವ ಹಕ್ಕುಗಳ ರಕ್ಷಣೆಗೆ ತನ್ನನ್ನು ತೊಡಗಿಸಿಕೊಂಡಿತು. ಆಶ್ರಯಕ್ಕಾಗಿ ಬರುವ ನಿರಾಶ್ರಿತರ ಮೇಲೆ ನಿರ್ಭಂದಗಳ ವಿಧಿಸುವುದಕ್ಕಿಂತ ಸರ್ಕಾರಗಳು ಅಲ್ಲಿನ ಮಾನವ ಹಕ್ಕುಗಳ ಉಲ್ಲಂಘನೆಯ ಪ್ರಕರಣಗಳಿಗೆ ಪರಿಹಾರ ನೀಡುವಂತೆ ಅದಲ್ಲದೇ ಇಂತಹ ಸಮಸ್ಯೆಯು ಜನರನ್ನು ಒತ್ತಾಯಪೂರ್ವಕವಾಗಿ ವಲಸೆಹೋಗದಂತೆ ತಡೆಯಲು ಸಲಹೆ ನೀಡಿತು.ಇದಲ್ಲದೇ ಅದರ ಎರಡನೆಯ ಪ್ರಚಾರಾಂದೋಲನವು ಮೊದಲ ಅರ್ಧ ದಶಕ ಪೂರ್ತಿಗೊಳಿಸಿತು.ಅಮ್ನೆಸ್ಟಿಯ ಪ್ರಧಾನ ಸಮಾವೇಶವೆಂದರೆ 1980 ರ ಅಂದರೆ 1988 ರಲ್ಲಿ ಈಗ ಮಾನವ ಹಕ್ಕುಗಳು! ಸಂಚಾರ ಅಮ್ನೆಸ್ಟಿಯ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಮಾನವ ಹಕ್ಕುಗಳ ರಕ್ಷಣೆಯ ಅದರ ಕೆಲಸಕರ್ಯಗಳ ಬಗ್ಗೆ ಯುನೈಟೆಡ್ ನೇಶನ್ಸನ್ 40ನೆಯ ವಾರ್ಷಿಕೋತ್ವವದಲ್ಲಿ ಸಮಾವಾಇಶದಲ್ಲಿ ಘೋಷಿಸಲಾಯಿತು.ಅಲ್ಲಿ ಯುನ್ವರ್ಸಲ್ ಡಿಕ್ಲೇರೇಶನ್ ಆಫ್ ಹುಮನ್ ರೈಟ್ಸ್ (ಸಾರ್ವತ್ರಿಕ ಮಾನವ ಹಕ್ಕುಗಳ ಘೋಷಣೆ)(UDHR),ಅದು ಅತ್ಯಂತ ಪ್ರಸಿದ್ದ ವಾದ್ಯಗೋಷ್ಟಿಗಳ ಸಂಗೀತಗಾರರು ಮತ್ತು ಖ್ಯಾತ ಬ್ಯಾಂಡ್ ಗೋಷ್ಟಿಗಳು ಸರಣಿಯನ್ನು ಪ್ರದರ್ಶಿಸಿದವು.ಐದು ಭೂಖಂಡಗಳಲ್ಲಿ ಆರು ವಾರಗಳ ಯೋಜನೆ ಹಾಕಿಕೊಳ್ಳಲಾಯಿತು.

1990ರ ದಶಕ

ಅಮ್ನೆಸ್ಟಿ ಇಂತರ್ ನ್ಯಾಶನಲ್ 1990 ರ ದಶಕದಾದ್ಯಂತ ವೇಗದ ಪ್ರಗತಿ ಹೊಂದಿತು,ಸುಮಾರು 150 ದೇಶ,ಕೇಂದ್ರಾಡಳಿತ [೧೩] ಪ್ರದೇಶಗಳಿಂದ 2.2 ದಶಲಕ್ಷ ಸದಸ್ಯರಾದರು.ಸೆನೆಗಲೀಸ್ ಸಚಿವ ಪೆರೆ ಸಾನೆ ಅವರು ಈ ಪ್ರಗತಿಯ ನೇತೃತ್ವ ವಹಿಸಿದರು. ನಂತರ ಅಮ್ನೆಸ್ಟಿ ವಿಶ್ವದ ದೊಡ್ಡ ಮಟ್ಟದ ಸಮಸ್ಯೆಗಳು ಮತ್ತು ಘಟನೆಗಳಬಗ್ಗೆ ತನ್ನ ಕಾರ್ಯವನ್ನು ಮುಂದುವರೆಸಿತು. ಉದಾಹರಣೆಗೆ ದಕ್ಷಿಣ ಆಫ್ರಿಕಾದ ಗುಂಪು 1992 ರಲ್ಲಿ ಪೆರೆ ಸಾನೆಯವರ ಭೇಟಿಗಾಗಿ ಆತಿಥೇಯನಾಗಿ ಅಲ್ಲಿನ ಸರ್ಕಾರದ ವರ್ಣದ್ವೇಷ,ಜನಾಂಗೀಯ ಕಲಹದ ಬಗ್ಗೆ ಮತ್ತು ಪೊಲೀಸರ ದಬ್ಬಾಳಿಕೆ ಬಗ್ಗೆ ಅವರ ಗಮನ ಸೆಳೆಯಿತು.ಅಫ್ರಿಕನ್ ಗ್ರೇಟ್ ಲೇಕ್ಸ್ ಪ್ರದೇಶಗಳಿಗೆ ಶಸ್ತ್ರಾಸ್ತ್ರಗಳ ಮಾರಾಟ ನಿಲ್ಲಿಸಲು ಅದು ಮನವಿ ಮಾಡಿತು.ಅದಲ್ಲದೇ ಮರಣದಂಡನೆ ಶಿಕ್ಷೆಯನ್ನು ರದ್ದುಪಡಿಸಲು ಅದು ಆಗ್ರಹಿಸಿತು. ವಿಶೇಷವಾಗಿ ಹಿಂಸಾಕೃತ್ಯಗಳನ್ನು ಕೆಲವು ನಿರ್ಧಿಷ್ಟ ಗುಂಪುಗಳಾದ,ನಿರಾಶ್ರಿತರು,/ಮಹಿಳೆಯರು/ಜನಾಂಗೀಯ/ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಅದರ ದುರಾಕ್ರಮಣ ತಡೆಯಲು ಅಮ್ನೆಸ್ಟಿ ಇಟರ್ ನ್ಯಾಶನಲ್ ತನ್ನ ಗಮನ ಹರಿಸಿತು.ಮರಣದಂಡನೆಗೆ ಗುರಿಯಾದವರ ಸಾಲಿನಲ್ಲಿರುವ ಇಲ್ಲವೆ ಈ ಶಿಕ್ಷೆ ಅನುಭವಿಸುತ್ತಿರುವವರ ಮೇಲಿನ ದೌರ್ಜನ್ಯಕ್ಕೆ ಅಮ್ನೆಸ್ಟಿ ತನ್ನ ಕಳಕಳಿ ವ್ಯಕ್ತಪಡಿಸಿತು. ಮರಣದಂಡನೆಯ ವರದಿಯು ಯಾವಾಗ ಆ ರಾಜ್ಯ ಹತ್ಯೆಗೆ ಬಳಸಿತೆಂಬುದನ್ನು ತಿಳಿಯುವುದು, (ISBN 0-691-10261-9)ಮತ್ತು 'ಮಾನವ ಹಕ್ಕುಗಳು ಎಂದರೆ ಮಹಿಳೆಯರ ಹಕ್ಕುಗಳು'ಎಂಬ ಪ್ರಚಾರಾಂದೋಲನವು ಸಂಘಟನೆಯ ಆಯ್ದ ಕ್ರಿಯೆ ಎನಿಸಿತ್ತು.ನಂತರದ ಎರಡು ವಿವಾದಗಳಿಗೆ ಅದು ತೆರೆ ಎಳೆಯಲು ಪ್ರಯತ್ನಿಸಿತು. ಆದರೆ 1990 ರಲ್ಲಿ ಅಮ್ನೆಸ್ಟಿ ಇಂಟರ್ ನ್ಯಾಶನಲ್ ಒತ್ತಾಯಪೂರ್ವಕವಾಗಿ ಮಾನವ ಹಕ್ಕುಗಳ ಉಲ್ಲಂಘನೆಯ ಹಲವಾರು ಪ್ರಕರಣಗಳಿಗೆ ಪ್ರತಿಕ್ರಿಯಿಸಬೇಕಾದ ಪರಿಸ್ಥಿತಿ ಉಂಟಾಯಿತು.ಸಶಸ್ತ್ರ ಪಡೆಗಳ ಕಾಳಗದ ಕಾರಣ ಮುಂದಿಟ್ಟು ಅಂಗೊಲಾ,ಪೂರ್ವ ತೈಮೊರ್ ,ದಿ ಪರ್ಸಿಯನ್ ಕೊಲ್ಲಿ,ರವಾಂಡಾ ಮತ್ತು ಹಳೆಯ ಯುಗೊಸ್ಲಾವಿಯಾದಲ್ಲಿ ಬಹಳಷ್ಟು ಮಾನವ ಹಕ್ಕುಗಳಿಗೆ ಚ್ಯುತಿ ಬಂದಿತು. ಈ ಸಂದರ್ಭದಲ್ಲಿ ಅಮ್ನೆಸ್ಟಿ ಇಂಟರ್ ನ್ಯಾಶನಲ್ ,ಇಂತಹ ಸಶಸ್ತ್ರ ಕಾಳಗಗಳಲ್ಲಿ ಬಾಹ್ಯ ಮಿಲಿಟರಿ ಪಡೆಗಳಿಗೆ ಬೆಂಬಲಿಸಬೇಕೋ ಅಥವಾ ವಿರೋಧಿಸಬೇಕೋ ಎಂಬ ದಿಗಿಲಲ್ಲಿ ಉಳಿಯಿತು. ಆದರೆ ಅದು ಸೈನ್ಯಪಡೆ ಬಳಕೆಯನ್ನು ನಿರಾಕರಿಸಲಿಲ್ಲ(ನಿರಾಕರಿಸಲೂ ಮನಸ್ಸು ಮಾಡಲಿಲ್ಲ)ಅದಲ್ಲದೇ ಮಾರಕ ಸೈನ್ಯ ಬಲದ ಪ್ರಯೋಗಕ್ಕೂ ಅದು ಹಿಂದೆ ಸರಿಯಲಿಲ್ಲ.ಅಥವಾ ಸಶಸ್ತ್ರ ಪಡೆಗೆ ದಾಳಿಯನ್ನು ನಿಲ್ಲಿಸುವಂತೆಯೂ ಹೇಳಲಿಲ್ಲ. ಅದರ ಬದಲಾಗಿ ಬಾಹ್ಯ ಪಡೆಗಳ ಮಧ್ಯಸ್ಥಿಕೆಯನ್ನು ಅದು ಪ್ರಶ್ನಿಸುವ ಮತ್ತು ಅದರ ಉದ್ದೇಶ ಅರಿಯಲು ಪ್ರಯತ್ನಿಸಿತು.ಆದರೆ ಇತರ ದೇಶಗಳ ಪಡೆಗಳನ್ನು ಯಾವ ಉದ್ದೇಶಕಾಗಿ ರವಾನಿಸಲಾಗುತ್ತದೆ ಎಂಬುದನ್ನು ಕೂಡಾ ಅದು ಪರಿಶೀಲನೆಗೆ ಒಳಪಡಿಸಿತು. ಮಾನವ ಹಕ್ಕುಗಳ ಸಮಸ್ಯೆಗಳು ಮಾನವ ಹಕ್ಕುಗಳ ದುರಂತಗಳಂತೆ ಕಾಣಿಸಲಾರಂಭಿಸಿದಾಗ ತಾನು ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಅದು ವಾದಿಸಿತು.ಮಧ್ಯಸ್ಥಿಕೆ ವಹಿಸುವುದು ಹಾಗು ನಿಷ್ಕ್ರಿಯೆತೆಯು ಅಂತಾರಾಷ್ಟ್ರೀಯ ಸಮುದಾಯದ ವಿಫಲತೆಗೆ ಕಾರಣವಾದವು.ಅಮ್ನೆಸ್ಟಿ ಇಂಟರ್ ನ್ಯಾಶನಲ್ ಸಂಘಟನೆಯು ಮಾನವ ಹಕ್ಕುಗಳನ್ನು ಸಾರ್ವತ್ರಿಕವಾಗಿ ಗುರುತಿಸಬೇಕೆಂಬ ಚಳವಳಿಯಲ್ಲಿ ಸಕ್ರಿಯ ಪಾತ್ರ ವಹಿಸಿತು. ಈ ಪ್ರಚಾರಾಂದೋಲನವು 'ಗೆಟ್ ಅಪ್ ,ಸೈನ್ ಅಪ್ (ಎದ್ದೇಳಿ,ನಿಮ್ಮನ್ನು ಋಜುವಾತುಗೊಳಿಸಿ) ಎಂಬ ಘೋಷಣೆಯು UDHR ನ 50 ನೆಯ ವರ್ಷದ ದ್ಯೋತಕವಾಗಿ ಆರಂಭಗೊಂಡಿತು.ಇದಕ್ಕಾಗಿ ಹದಿಮೂರು ದಶಲಕ್ಷ ಸಹಿಗಳು ಪ್ರತಿಜ್ಞೆ ಸ್ವೀಕರಿಸಿ ಇದಕ್ಕೆ ಬೆಂಬಲ ವ್ಯಕ್ತಪಡಿಸಿದವು.ಅದಲ್ಲದೇ ಡೆಸೆಲ1 ಸಂಗೀತಗೋಷ್ಟಿಯು 1998 ರ ಡಿಸೆಂಬರ್ 10 ರಂದು ಅಂದರೆ ಮಾನವ ಹಕ್ಕುಗಳ ದಿನಾಚರಣೆಯಂದು ಹಮ್ಮಿಕೊಳ್ಳಲಾಗಿತ್ತು. ಆಂತರಿಕ ಸರ್ಕಾರೀ ಮಟ್ಟದಲ್ಲಿ ಸಮಿತಿ ರಚನೆಗೆ ಅಮ್ನೆಸ್ಟಿ ಇಂಟರ್ ನ್ಯಾಶನಲ್ ಆಲೋಚಿಸಿತು.ಯುನೈಟೆಡ್ ನೇಶನ್ಸ್ ಹೈ ಕಮೀಶನರ್ ಫಾರ್ ಹುಮನ್ ರೈಟ್ಸ್ ರಚನೆಗೆ ಅದು ತನ್ನ ಬೆಂಬಲ ವ್ಯಕ್ತಪಡಿಸಿತು.(ಇದು 1993 ರಲ್ಲಿ ಪ್ರಾರಂಭವಾಯಿತು).ಅದೇ ವೇಳೆಗೆ ಇಂಟರ್ ನ್ಯಾಶನಲ್ ಕ್ರಿಮಿನಲ್ ಕೋರ್ಟ್ ಕೂಡಾ ಅಸ್ತಿತ್ವಕ್ಕೆ ಬಂತು.(ಇದು 2002 ರಲ್ಲಿ ಕಾರ್ಯಾರಂಭ ಮಾಡಿತು)ಲಂಡನ್ ನಲ್ಲಿ 1998 ರ ಸುಮಾರಿಗೆ ಮೆಟ್ರೊಪಾಲಿಟಿನ್ ಪೊಲೀಸರಿಂದ ಚಿಲಿಯನ್ ನ ಮಾಜಿ ಅಧ್ಯಕ್ಷರ ಬಂಧನದಿಂದಾಗಿ ಅಮ್ನೆಸ್ಟಿ ಇಂಟರ್ ನ್ಯಾಶನಲ್ ಸೆನೆಟರ್ ಪಿನೊಚೆಟ್ ಅವರೊಂದಿಗಿನ ಕಾನೂನು ಸಮರದಲ್ಲಿ ತೊಡಗಿಸಿಕೊಂಡಿತು.ತನ್ನ ಮೇಲಿನ ಆರೋಪಗಳ ವಿಚಾರಣೆ ಕುರಿತಂತೆ ಚಿಲಿಯನ್ ಮಾಜಿ ಅಧ್ಯಕ್ಷರು ಸ್ಪೇನ್ ಗೆ ಗಡಿಪಾರಾಗುವ ವಿಷಯಕ್ಕೆ ಸಂಬಂಧಿಸಿದಂತೆ ಈ ವಿವಾದ ಸೃಷ್ಟಿಯಾಯಿತು. ಲಾರ್ಡ್ ಹಾಫ್ ಮ್ಯಾನ್ ಅಮ್ನೆಸ್ಟಿ ಇಂಟರ್ ನ್ಯಾಶನಲ್ ನೊಂದಿಗೆ ಪರೋಕ್ಷವಾಗಿ ಸಂಬಂಧ ಹೊಂದಿದ್ದರು.ಇದು UK ಕಾನೂನಿನ ಜಾರಿಯಲ್ಲಿ ಮಹತ್ವದ ಅಗ್ನಿಪರೀಕ್ಷೆಗೆ ಈಡಾಯಿತು. ಅಲ್ಲಿ [೧೪] ಇವರ ನಿರ್ಧಾರವೇ ಸೆನೆಟರ್ ಪಿನೊಚೆಟ್ ಬಿಡುಗಡೆಗೆ ಒಂದು ಕಾರಣವಾಯಿತು.ಆಗಿನ ಬ್ರಿಟಿಶ್ ಗೃಹ ಕಾರ್ಯದರ್ಶಿ ಮಿ.ಜಾಕ್ ಸ್ಟ್ರಾವ್ ಅವರು ಇವರನ್ನು ವಶಕ್ಕೆ ತೆಗೆದುಕೊಂಡು,ಈ ನಿರ್ಧಾರಕ್ಕೆ ಮುಂಚೆಯೇ ಸೆನೆಟರ್ ಪಿನೊಚೆ ಬಿಡುಗಡೆ ರದ್ದತಿಗೆ ಪ್ರಯತ್ನಗಳಾದವು. ಆಗ ದಿ ಇಂಗ್ಲಿಷ್ ಹೈ ಹೈಕೋರ್ಟ್ ಈ ಅರ್ಜಿಯನ್ನು ತಿರಸ್ಕರಿಸಿತು.ಸೆನೆಟರ್ ಪಿನೊಚೆಟ್ ಬಿಡುಗಡೆಯಾಗಿ ಚಿಲಿಗೆ [೧೫] ಮರಳಿದರು. ಈ ಕಾನೂನು ಸಮರವು ಒಂದು ನೂತನ ಸವಾಲಾಗಿ ಪರಿಣಮಿಸಿತು.ಇದರ ಬಗ್ಗೆ ಆ ಕೂಡಲೇ ಪಡೆಯಬೇಕಾದ ನಿರ್ಧಾರಗಳ ಬಗ್ಗೆ ಕಾನೂನು ನಿಯಮಗಳ ಒಟ್ಟುಗೂಡಿಸುವುದು ಕಠಿಣ ಕೆಲಸವಾಗಿ ಮಾರ್ಪಟ್ಟಿತು.ಆದರೆ ಗೃಹ ಕಾರ್ಯದರ್ಶಿಗಳು ಕಾನೂನು ಪರಿಪಾಲನೆಯಲ್ಲಿ ಕೆಲವೆಡೆ ಎಡವಿದ್ದಾರೆಂಬ ಊಹಾಪೋಹಗಳು ಸಕಾರಣವಾಗಿಯೇ ಎಲ್ಲರಲ್ಲಿ [ಸೂಕ್ತ ಉಲ್ಲೇಖನ ಬೇಕು]ಮೂಡತೊಡಗಿದವು.

2000s

ಆದರೆ 2000 ನೆಯ ಇಸ್ವಿ ನಂತರ ಅಮ್ನೆಸ್ಟಿ ಇಂಟರ್ ನ್ಯಾಶನಲ್ ಸಂಘಟನೆಯ ಗಮನವು ಜಾಗತಿಕರಣದಿಂದಾಗುವ ಸವಾಲಿನೆಡೆಗೆ ತಿರುಗಿತು.ಅದಲ್ಲದೇ ಯುನೈಟೆಡ್ ಸ್ಟೇಟ್ಸ್ ನಲ್ಲಿ 11 ಸೆಪ್ಟೆಂಬರ್ 2001 ರ ದಾಳಿಗಳ ಬಗ್ಗೆ ತೀವ್ರ ಗಮನ ಹರಿಸಲಾರಂಭಿಸಿತು. ಜಾಗತಿಕರಣದ ವಿಷಯವು ಅಮ್ನೆಸ್ಟಿ ಇಂಟರ್ ನ್ಯಾಶನಲ್ ನಲ್ಲಿನ ನೀತಿಗಳನ್ನೇ ಬದಲಾವಣೆ ಮಾಡುವಂತಹ ಪರಿಸ್ಥಿತಿಯನ್ನು ತಂದುಕೊಟ್ಟಿತು.ಅದರ ಕಾರ್ಯ ವ್ಯಾಪ್ತಿಯು ಆರ್ಥಿಕ,ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳ ರಕ್ಷಣೆಯೆಡೆಗೆ ವಾಲಿತು.ಈ ಕ್ಷೇತ್ರದಲ್ಲಿ ತನ್ನ ಹೊಸ ಸ್ಥಾನ ಗಿಟ್ಟಿಸಿ ಇದರಲ್ಲೂ ತನ್ನ ಭಾಗವಹಿಸುವಿಕೆ ತೋರಿತು. ಹೀಗೆ ಇದು ಒಂದು ಮಹತ್ವದ ವರ್ಗಾವಣೆ ಎಂದು ಅಮ್ನೆಸ್ಟಿ ಇಂಟರ್ ನ್ಯಾಶನಲ್ ತಿಳಿದು ವೈಯಕ್ತಿಕ ವಿಕಾಸಗಳ ಮಟ್ಟದಲ್ಲಿ ತನ್ನ ಹಕ್ಕುಗಳ ಸ್ಥಾಪಿಸುವ ವ್ಯಕ್ತಿಗತ ಹಿತಾಸಕ್ತಿಗೂ ಅದು ಗಮನಹರಿಸಿತು.ಈ ಜಾಗತಿಕರಣವು ಹಲವಾರು ಕಂಪನಿಗಳ ಬೆಳವಣಿಗೆಯೊಂದಿಗೆ ಕೆಲವು ದೇಶಗಳನ್ನು ಕೆಳಮಟ್ಟದಲ್ಲಿ ನೋಡುವ ಪರಿಸ್ಥಿಗೆ [ಸೂಕ್ತ ಉಲ್ಲೇಖನ ಬೇಕು]ಈಡಾಯಿತು.ಆಗ 11 ಸೆಪ್ಟೆಂಬರ್ ನ ದಾಳಿಗಳ ನಂತರದ ವೇಳೆಗೆ ಅಮ್ನೆಸ್ಟಿ ಇಂಟರ್ ನ್ಯಾಶನಲ್ ನ ನೂತನ ಪ್ರಧಾನ ಕಾರ್ಯದರ್ಶಿ ಇರೆನಾ ಖಾನ್ ಅವರು ವರದಿ ಪ್ರಕಾರ ಒಬ್ಬ ಹಿರಿಯ ಸರ್ಕಾರಿ ಅಧಿಕಾರಿಯು ಅಮ್ನೆಸ್ಟಿ ಇಂಟರ್ ನ್ಯಾಶನಲ್ ನ ನಿಯೋಗದ ಸದಸ್ಯರಿಗೆ ಹೇಳಿದ್ದೇನೆಂದರೆ "ನ್ಯುಯಾರ್ಕ್ ನಲ್ಲಿನ ಅವಳಿಜವಳಿ ಗೋಪುರಗಳ ಕುಸಿತದೊಂದಿಗೆ ನಿಮ್ಮ ಸಂಘಟನೆಯ ಪಾತ್ರವೂ ಕುಸಿದು ಬಿತ್ತು,"ಎಂದು [೧೬] ಉದ್ಘರಿಸಿದ್ದ. ಈ ದಾಳಿಗಳ ನಂತರ ಕೆಲವರು [who?]ಹೇಳುವಂತೆ ಮಾನವ ಹಕ್ಕುಗಳ ರಕ್ಷಣಾ ಸಂಘಟನೆಗಳ ಹಿಂದಿನ ದಶಕಗಳ ಸಾಧನೆ ಅಳಿಸಿಹೋದ ಭಾಸವಾಯಿತು. ಮಾನವಹಕ್ಕುಗಳು ಎಲ್ಲರ ಭದ್ರತೆಗೆ ತಳಪಾಯವಾಗಿವೆ,ಇವು ಅಡತಡೆಗಳಲ್ಲ ಎಂದು ಅಮ್ನೆಸ್ಟಿ ಇಂಟರ್ ನ್ಯಾಶನಲ್ ತನ್ನ ವಾದ ಮಂಡಿಸಿತು. ಸುಮಾರು 2005 ರಲ್ಲಿ ಖಾನ್ ಅವರು US ಸರ್ಕಾರದ ಕ್ಯುಬಾದ ಗೌಂಟಾನಾಮೊದ ಕೊಲ್ಲಿಯಲ್ಲಿ ಸೊವಿಯೆತ್ ಗುಲಾಗ್ ಗೆ ಒದಗಿಸಿದ್ದ ಬಂಧನದ ಸ್ಥಳಾವಕಾಶದ ಬಗ್ಗೆ ತಮ್ಮ ಬೆಂಬಲ ವ್ಯಕ್ತಪಡಿಸಿದಾಗ ಬುಶ್ ಆಡಳಿತ ಹಾಗು ದಿ ವಾಶಿಂಗ್ಟನ್ ಪೊಸ್ಟ್ ನಿಂದ ನೇರವಾಗಿಯೇ ಟೀಕೆಗಳು [೧೭][೧೮] ಬಂದವು.ಅಮ್ನೆಸ್ಟಿ ಇಂಟರ್ ನ್ಯಾಶನಲ್ ದಶಕದ ಮೊದಲಾರ್ಧದಲ್ಲಿ ಮಹಿಳೆಯರ ವಿರುದ್ದದ ಹಿಂಸಾಕೃತ್ಯಗಳ ಬಗ್ಗೆ ತನ್ನ ಗಮನ ಹರಿಸಿತು.ವಿಶ್ವದ ಶಸ್ತ್ರಾಸ್ತ್ರ ವ್ಯಾಪಾರದ ಬಗ್ಗೆ ಅದು ಗಮನ ಕೇಂದ್ರೀಕರಿಸಿತು.ಇದರೊಂದಿಗೆ UN ಸುತ್ತಮುತ್ತಲಿನ ವಾತಾವರಣದ ಮೇಲೆ ಅದು ಅದರ ಪರಿಣಾಮಕಾರಿ ಪ್ರತಿಕ್ರಿಯೆಯನ್ನೂ ಸಹ ಕಾದು ನೋಡಿತು.ಹೀಗೆ [೧೯] 2005 ರ ಹೊತ್ತಿಗೆ ಅದರ ಸದಸ್ಯತ್ವವು ಎರಡು ದಶಲಕ್ಷಕ್ಕೇರಿ ಅಮ್ನೆಸ್ಟಿ ಧರ್ಮಪ್ರಜ್ಞೆಯ ಖೈದಿಗಳಿಗಾಗಿ ತನ್ನ ಕೆಲಸವನ್ನು ಇನ್ನಷ್ಟು ಚುರುಕುಗೊಳಿಸಿತು.ಇಸ್ವಿ 2007 ರಲ್ಲಿ ಸಂಘಟನೆಯು ಗರ್ಭಪಾತದ ವಿಷಯಕ್ಕೆ ಸಂಬಂಧಿಸಿದ ಆಯ್ಕೆಯ ಅಂಶಗಳಿಗೆ ಅದು ತನ್ನ ಬೆಂಬಲ [೨೦] ವ್ಯಕ್ತಪಡಿಸಲಾಯಿತು. ಆದರೆ ಈ ಬಗ್ಗೆ ಸಂಘಟನೆ ಪ್ರತಿಕ್ರಿಯಿಸಿದಾಗ ಇದನ್ನು ಕೇವಲ ಸೀಮಿತ ಸಂದರ್ಭಗಲಿಗಾಗಿ ಅದಕ್ಕೆ ಪ್ರತಿಕ್ರಿಯಿಸಿದೆ ಎಂದು ಅದು [೨೧] ಹೇಳಿಕೊಂಡಿತು.ಅಮ್ನೆಸ್ಟಿ ಇಂಟರ್ ನ್ಯಾಶನಲ್ ಇರಾಕ್ ಯುದ್ದ 2008 ರ ಮಾರ್ಚ್ ನಲ್ಲಿ ದುರಂತಕ್ಕೆ ತನ್ನ ಕಳವಳ ವ್ಯಕ್ತಪಡಿಸಿತು.ಇತ್ತೀಚಿನ ದಿನಗಳಲ್ಲಿ ಇರಾಕ್ ನಲ್ಲಿ ಪರಿಸ್ಥಿತಿ ಸುಧಾರಿಸಿದೆ,ಆದರೆ 203 ರಲ್ಲಿ ಐದು ವರ್ಷಗಳ ಹಿಂದೆ ಮಾನವ ಹಕ್ಕುಗಳ ಪರಿಸ್ಥಿತಿಯು [೨೨] ವಿನಾಶಕಾರಿಯಾಗಿತ್ತು.ಅಮ್ನೆಸ್ಟಿ ಇಂಟರ್ ನ್ಯಾಶನಲ್ ಯುನೈಟೆಡ್ ಸ್ಟೇಟ್ಸ್ ನಲ್ಲಿ ಸಂಚಾರಿ ನಿಧಿ ಕೊಡುಗೆ ಸಂಗ್ರಹದ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿತು.ಇದು ಅತಿ ಸಣ್ಣ ಮೊತ್ತ $5 ಸಣ್ಣ ಕೊಡುಗೆಯನ್ನು 90999ಶಾರ್ಟ್ ಕೋಡ್ ನಂಬರ್ ಗೆ RIGHTS ಎಂಬ ಪದದೊಂದಿಗೆ ಸಂದೇಶ ರವಾನಿಸಲು ಹೇಳಿತು.ಈ ಸಂಚಾರಿ ಕೊಡುಗೆಯ ಸಂಗ್ರಹವನ್ನು ಅದು ಎಂಗಿವ್ ಮತ್ತು ಮೊಬೈಲ್ ಗಿವಿಂಗ್ ಫೌಂಡೇಶನ್ ನೊಂದಿಗೆ ಒಪ್ಪಂದ ಮಾಡಿ ಜಂಟಿಯಾಗಿ ನಿಧಿ ಸಂಗ್ರಹಕ್ಕೆ [೨೩] ಮುಂದಾಯಿತು.ಅಮ್ನೆಸ್ಟಿ ಇಂಟರ್ ನ್ಯಾಶನಲ್ ಇಸ್ರೇಲ್ ಮತ್ತು ಪಾಲಸಿಸ್ಟಿಯನ್ ಹಾಮಾಸ್ ಅವರ ಚಳವಳಿ ಸಮರ ಅಪರಾಧಗಳನ್ನು ಎಸಗುತ್ತದೆ ಎಂದು ದೂರಿತು.ಜನವೇ ತಿಂಗಳಲ್ಲಿ ಗಾಜಾ ಪಟ್ಟಿಯಲ್ಲಿ ಅದು ಎಸಗುತ್ತಿರುವ ಹಿಂಸಾತ್ಮಕ ಆಪ್ ರೇಶನ್ ಕಾಸ್ಟ್ ಲೀಡ್ ಬಗ್ಗೆ ತೀವ್ರ ಟೀಕೆ ಮಾಡಿತು.ಈ ಕಾರ್ಯಾಚರಣೆಯಲ್ಲಿ 1400 ಕ್ಕೂ ಹೆಚ್ಚು ಪಾಲೇಸ್ಟಿಯನ್ ರು ಮತ್ತು 13 ಇಸ್ರೇಲಿಗಳು [೨೪] ಮೃತಪಟ್ಟರು. ಈ ಸಂದರ್ಭದಲ್ಲಿ ಅಮ್ನೆಸ್ಟಿಯು 117 ಪುಟಗಳ ಸಮಗ್ರ ವರದಿಯನ್ನು ಸಲ್ಲಿಸಿತು.ನೂರಾರು ನಾಗರಿಕರನ್ನು ಕೊಂದ ಇಸ್ರೇಲ್ ಮತ್ತು ಸಾವಿರಾರು ಮನೆಗಳನ್ನು ವಿನಾಕಾರಣವಾಗಿ ನಾಶಗೊಳಿಸಿದ್ದನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು. ಆದರೆ ಪಾಲೇಸ್ಟಿಯನ್ ಉಗ್ರಗಾಮಿಗಳು ಇಸ್ರೇಲ್ ದಾಳಿ ತಡೆಯಲು ನಾಗರಿಕರನ್ನು ಮರೆಕೊಂಡಿದ್ದಾರೆ ಎಂಬುದಕ್ಕೆ ಅಮ್ನೆಸ್ಟ್ಗೆ ಯಾವುದೇ ಪುರಾವೆ ಸಿಗಲಿಲ್ಲ.ಆದರೆ ಹಮಾಸ್ ಉಗ್ರಗಾಮಿಗಳು ನಾಗರಿಕರು ವಾಸ ಮಾಡುವ ಕಟ್ಟಡಗಳ ಮೂಲಕ ತಮ್ಮ ದಾಳಿ ನಡೆಸಿದ್ದರು. ಅದರ ನಂತರ ಯುನೈಟೆಡ್ ನೇಶನ್ಸ್ ನ ಸತ್ಯ ಸಂಶೋಧನಾ ಆಯೋಗವು ಗಾಜಾ ಕದನದ ಬಗ್ಗೆ ತನಿಖೆ ನಡೆಸಿತು.ಅಮೆಸ್ಟಿ ಹೇಳುವ ಪ್ರಕಾರ ಈ ಸತ್ಯಶೋಧನಾ ಸಮಿತಿಯ ಶಿಫಾರಸುಗಳನ್ನು ಜಾರಿಗೊಳಿಸುವಂತೆ UN ಗೆ ಅದು ಕಟ್ಟುನಿಟ್ಟು ಪಾಲಿಸುವ ಬಗ್ಗೆ [೨೫] ಹೇಳಿತು.

2010 ರ ಸಮಯ

ಅಮ್ನೆಸ್ಟಿಯು ತನ್ನ ಘಟಕವೊಂದರ ಮುಖ್ಯಸ್ಥೆ ಗೀತಾ ಸಹಗಲ್ ಅವರನ್ನು ಅಮಾನತುಗೊಳಿಸಿತು,ಯಾಕೆಂದರೆ ಕೇಜ್ ಪ್ರಿಜನರ್ಸ್ ಎಂಬ ಪ್ರಚಾರಾಂದೋಲನದ ಮೊಝಾಮ್ ಬೆಗ್ ಅವರೊಂದಿಗಿನ ಸಂಬಂದದ ಬಗೆಗೆ ಆಕೆ ಟೀಕೆ ಮಾಡಿದ ಕಾರಣದಿಂದಾಗಿ ಅದು ಈ ಕ್ರಮ ಕೈಗೊಂಡಿತು. ಈ ಸಂಬಂಧವು "ದೊಡ್ಡ ನ್ಯಾಯದ ದೊಡ್ಡ ತಪ್ಪು" ಎಂದು ಅವಳು ವ್ಯಾಖ್ಯಾನಿಸಿದ್ದಳು,ಇದು ಅಮ್ನೆಸ್ಟಿಯ ಮಾನವ ಹಕ್ಕುಗಳ ರಕ್ಷಣೆಯ ಖ್ಯಾತಿಗೆ ಧಕ್ಕೆ ತಂದಿತು.ಆಕೆ ಹೇಳಿದಂತೆ "ಬ್ರಿಟೇನ್ ನ ತಾಲಿಬಾನ್ ಗೆ ಕಟ್ಟಾ ಬೆಂಬಲಿಗನಾದವನನ್ನು ಬೆಂಬಲಿಸುವುದರ ಬಗ್ಗೆ ಆಕೆಗೆ ಸಮ್ಮತಿ [೨೬][೨೭][೨೮][೨೯] ಇರಲಿಲ್ಲ. ಅಮ್ನೆಸ್ಟಿ ಹೇಳುವ ಪ್ರಕಾರ ಸಹಗಲ್ ಈ ವಿಷಯಗಳನ್ನು "ಆಂತರಿಕವಾಗಿ ಎತ್ತಿದ್ದಕ್ಕಾಗಿ ಆಕೆಯನ್ನು ಅಮಾನತುಗೊಳಿಸಿರಲಿಲ್ಲ... [ಬೆಗ್ ]ತನ್ನ ಸ್ವಂತಾಭಿಪ್ರಾಯದ ವಿಚಾರಗಳ ಬಗ್ಗೆ ಮಾತನಾಡುತ್ತಾನೆ,ಆದರೆ ಅಮ್ನೆಸ್ಟಿ ಇಂಟರ್ ನ್ಯಾಶನಲ್ ಬಗ್ಗೆ [೩೦] ಅಲ್ಲ". ಸಹಗಲ್ ಬಗ್ಗೆ ಮಾತನಾಡಿದವರಲ್ಲಿ ಸಲ್ಮಾನ್ ರಶ್ದಿ ("ಅಮ್ನೆಸ್ಟಿಯು ಮಾಡಿದ್ದು ...ತನ್ನ ಜನಪ್ರಿಯತೆಗೆ ಸಾಕಷ್ಟು ಹಾನಿ ಮಾಡಿಕೊಂಡಿದೆ...) ಅಮ್ನೆಸ್ಟಿಯ ನಾಯಕತ್ವವು ನೈತಿಕ ದಿವಾಳಿತನದಿಂದ ಬಳಲುತ್ತಿದೆ,ಅದು ತನ್ನ ಸಾಮರ್ಥ್ಯವನ್ನು ಕೂಡಾ ಅದು ಕಳೆದುಕೊಂಡಿತು.(ಕೆಟ್ಟದ್ದಾವುದು-ಒಳ್ಳೆಯದಾವುದು ಎಂಬುದು ಅದಕ್ಕೆ ವ್ಯತ್ಯಾಸ ಗೊತ್ತಾಗುತ್ತಿಲ್ಲ ಎಂಬ ಮಾತು ಕೇಳಿಬಂತು.ಪಾರ್ಲಿಮೆಂಟ್ ಸದಸ್ಯ ಡೆನಿಸ್ ಮೆಕ್ ಶೇನ್ ಜೋನ್ ಸ್ಮಿತ್ ,ಕ್ರಿಸ್ಟೊಫರ್ ಹಿಚೆನ್ಸ್ ,ಮಾರ್ಟಿನ್ ಬ್ರೈಟ್ ,ಮೆಲಾನೆ ಫಿಲಿಪ್ಸ್ ಮತ್ತು ನಿಕ್ ಕೊಹೆನ್ [೩೧][೩೨][೩೩][೩೪][೩೫][೩೬][೩೭][೩೮] ಇತ್ಯಾದಿ.

ಕೆಲಸಗಳು(ಕಾರ್ಯಪಾಲನೆ)

Amnesty International’s vision is of a world in which every person enjoys all of the human rights enshrined in the Universal Declaration of Human Rights and other international human rights standards.

In pursuit of this vision, Amnesty International’s mission is to undertake research and action focused on preventing and ending grave abuses of the rights to physical and mental integrity, freedom of conscience and expression, and freedom from discrimination, within the context of its work to promote all human rights.

—Statute of Amnesty International, 27th International Council meeting, 2005

ಅಮ್ನೆಸ್ಟಿ ಇಂಟರ್ ನ್ಯಾಶನಲ್ ಪ್ರಾಥಮಿಕವಾಗಿ ಸರ್ಕಾರಗಳ ಮೇಲೆ ಮತ್ತು ಸರ್ಕಾರೇತರ ಸಂಸ್ಥೆಗಳ ವರದಿಗಳ ಮೇಲೆ ಅದು ತನ್ನ ದೃಷ್ಟಿ ಬೀರುತ್ತದೆ.ಖಾಸಗಿ ವ್ಯಕ್ತಿಗಳು("ನಾನ್ ಸ್ಟೇಟ್ ಆಕ್ಟರ್ಸ್ ")

ಅಮ್ನೆಸ್ಟಿ ಪ್ರಮುಖವಾಗಿ ಏಳು ಆಯಕಟ್ಟಿನ ಮಹತ್ವದ ಪ್ರದೇಶಗಳ ಜೊತೆ ವ್ಯವಹರಿಸುತ್ತದೆ:

  • ಮಹಿಳೆಯರ ಹಕ್ಕುಗಳು ,
  • ಮಕ್ಕಳ ಹಕ್ಕುಗಳು
  • ಚಿತ್ರಹಿಂಸೆ ಅಂತ್ಯಗೊಳಿಸುವಿಕೆ,
  • ಮರಣ ದಂಡನೆ ಶಿಕ್ಷೆ ಕ್ರಮವನ್ನು ರದ್ದುಪಡಿಸುವುದು
  • ನಿರಾಶ್ರಿತರುಗಳ ಹಕ್ಕುಗಳು
  • ಧರ್ಮಪ್ರಜ್ಞೆಯುಳ್ಳ ಖೈದಿಗಳ ಹಕ್ಕುಗಳು
  • ಮಾನವ ಕುಲ ಗೌರವ ರಕ್ಷಣೆ.

ಕೆಲವು ವಿಶೇಷ ಗುರಿಗಳೆಂದರೆ: ಮರಣ ದಂಡನೆ ,ರದ್ದತಿ, ಹೆಚ್ಚುವರಿ ನ್ಯಾಯಾಧಿಕರಣದ ಕ್ರಮಗಳ ಕೊನೆಗೊ ಳಿಸುವಿಕೆ "ನಾಪತ್ತೆಯಾಗುವ ಪ್ರಕರಣಗಳಿ"ಗೆ ಕಡಿವಾಣ,ರಾಜಕೀಯ ಖೈದಿ ಗಳಿಗೆ,ನ್ಯಾಯಯುತ ವಿಚಾರಣೆಯಾಗಬೇಕು.ಬಂದಿಖಾನೆಯ ನಿಯಮಗಳು ಮಾನವ ಹಕ್ಕುಗಳಿಗೆ ಪೂರಕವಾಗಿರಬೇಕು.ವಿಶ್ವಾದ್ಯಾಂತ ಎಲ್ಲಾ ಮಕ್ಕಳಿಗೂ ಉಚಿತ ಶಿಕ್ಷಣ ನೀಡಬೇಕು.ಗರ್ಭಪಾತವನ್ನು ಅಪರಾಧಿಕರಣ ಹೊರಗಿಡಬೇಕು.ನ್ಯಾಯಾಲಯದಿಂದ ದೋಷಗಳ ಹೊಡದೋಡಿಸಲು [೩೯] ಹೋರಾಟಕಳಂಕತೆಹೊರಹಾಕಬೇಕು ಕಳಂಕತೆ ಅಪ್ರಾಪ್ತ ಮಕ್ಕಳು ಸೈನಿಕರಾಗುವಂತೆ ,ಮಾಡುವುದನ್ನು ನಿರ್ಭಂಧಿಸಿ; ಧರ್ಮಪ್ರಜ್ಞೆಯ ಖೈದಿಗಳಬಿಡುಗಡೆ ಮಾಡಬೇಕು.ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳನ್ನು ಕೆಳಸ್ತರದವರಿಗೂ ತಲುಪಿಸಬೇಕು.ಮಾನವ ಹಕ್ಕುಗಳ ರಕ್ಷಕರಗಳನ್ನು ಪ್ರೊತ್ಸಾಹಿಸಿ, ಧಾರ್ಮಿಕ ಸಹಿಷ್ಣುತೆ ,ಉತ್ತೇಜಿಸಿ, ಚಿತ್ರಹಿಂಸೆ ಮತ್ತು ಕೀಳಾಗಿ ಕಾಣುವುದನ್ನು ನಿಲ್ಲಿಸಿ ಕಾನೂನು ಬಾಹಿರ ನರಹತ್ಯೆ ನಿಲ್ಲಲಿ, ನಿರಾಶ್ರಿತರ ಹಕ್ಕನ್ನು ಎತ್ತಿ ಹಿಡಿಯಿರಿ, ವಲಸೆಗಾರರು, ಮತ್ತುಶರಣು ಬಂದವರನ್ನು, ರಕ್ಷಿಸಿ ಮಾನವ ಕುಲದ ಗೌರವ ಕಾಪಾಡಿ ಎಂಬ ಸಂದೇಶ ಅದು ನೀಡಿತು.ಈ ಗುರಿಗಳಲ್ಲದೇ ಅಮ್ನೆಸ್ಟಿ ಇಂಟರ್ ನ್ಯಾಶನಲ್ ಜನಾಭಿಪ್ರಾಯ ಸಂಗ್ರಹಣೆ ಮತ್ತು ಪ್ರಚಾರಕ್ಕಾಗಿ ಹಲವಾರು ನೂತನ ತಂರಜ್ಞಾನವನು ಅಭಿವೃದ್ಧಿಪಡಿಸಿದೆ. ಪಕ್ಷಾತೀತ ಮತ್ತು ನಿಖರ ಮಾಹಿತಿ ವರದಿಗಳ ಒದಗಿಸುವುದೇ ಸಂಘಟನೆಯ ಮೂಲ ಉದ್ದೇಶವಾಗಿದೆ ಈ ವರದಿಗಳನ್ನು ಸಿದ್ದಪಡಿಸಿ ಸಂಶೋಧನೆಗೆ ಒಳಪಡಿಸಲು:ಅಪರಾಧಿಗಳು ಮತ್ತು ಅಧಿಕಾರಿಗಳ ಸಂದರ್ಶನ,ವಿಚಾರಣೆಗಳ ವೀಕ್ಷಣೆ,ಸ್ಥಳೀಯ ಮಾನವ ಹಕ್ಕುಗಳ ಕಾರ್ಯಕರ್ತರೊಂದಿಗೆ ಕಾರ್ಯ ನಿರ್ವಹಣೆ ಅಲ್ಲದೇ ಮಾಧ್ಯಮಗಳಲ್ಲಿ ಸರಿಯಾದ ಸಂಬಂಧ ಬೆಳೆಸುವುದು. ಸಮಯಕ್ಕೆ ಸರಿಯಾಗಿ ಪತ್ರಿಕಾ ಪ್ರಕಟಣೆಗಳನ್ನು ಬಿಡುಗಡೆ ಮಾಡುವುದು,ಮತ್ತು ಸುದ್ದಿ ಪತ್ರಿಕೆಗಳಲ್ಲಿ ವೆಬ್ ಸೈಟ್ ನಲ್ಲಿ ಸೂಕ್ತ ವಿವರ ನೀಡುವುದು ಕೂಡಾ ಅದರ ಗುರಿಯಾಗಿದೆ. ಅದು ತನ್ನ ಕಚೇರಿಯಿಂದ ಸದಸ್ಯರನ್ನು ಆಯಾ ದೇಶಗಳಿಗೆ ಕಳಿಸಿ ಸೌಜನ್ಯಪೂರ್ಣ ಮತ್ತು ನಿಖರ ವಿಚಾರಣೆ ನಡೆಸಲು ಮುಂದಾಗುತ್ತದೆ.ಸಾರ್ವಜನಿಕರ ಅಹಿಪ್ರಾಯ ಸಂಗ್ರಹೇಸುವ ಪ್ರಚಾರಗಳು ವೈಯಕ್ತಿಕ,ದೇಶೀಯ ಅಥವಾ ವಿಶೇಷ ವಿಷಯಕ್ಕೆ ಸಂಬಂಧಪಟ್ಟಿರುತ್ತವೆ. ಹಲವಾರು ತಂತ್ರಗಳ ಅಳವಡಿಕೆ ಮಾಡಲಾಗುತ್ತದೆ.(ಉದಾಹರಣೆಗೆ ಪತ್ರ ಬರೆಯುವುದು)ಮಾಧ್ಯಮಗಳ ಸಂಪರ್ಕ,ಪ್ರಚಾರ ಕಾರ್ಯ ಮತ್ತು ಸಾರ್ವಜನಿಕ ಪ್ರದರ್ಶನಗಳು. ಸಾಮಾನ್ಯವಾಗಿ ನಿಧಿ-ಸಂಗ್ರಹವು ಈ ಪ್ರಚಾರದಲ್ಲಿ ಸಮಗ್ರವಾಗಿ ಕೆಲಸ ಮಾಡುತ್ತದೆ.ಕೆಲವು ತುರ್ತು ಸಂದರ್ಭಗಳಲ್ಲಿ ಅದು ತಕ್ಷಣವೇ ತನ್ನ ಗಮನವನ್ನು ನೀಡಬೇಕಾಗುತ್ತದೆ.ಅಮ್ನೆಸ್ಟಿ ಇಂಟರ್ ನ್ಯಾಶನಲ್ ಆ ಕೂಡಲೇ ಸಂಬಂಧಪಟ್ಟ ಜಾಲಗಳ ಬಗ್ಗೆ ಕರೆಸಿ ಸಮಜಾಯಿಸಿ ಕೊಡವುದು ಅಗತ್ಯ ಬಿದ್ದರೆ ಸಮಸ್ಯೆ ಇರುವ ದೇಶಗಳ ಜೊತೆ ನೇರ ಮಾತುಕತೆ ಇತ್ಯಾದಿ. ಅದರ ದೊಡ್ಡ ಪ್ರಮಾಣದ ಮಾನವ ಸಂಪನ್ಮೂಲವು ಅದರ ಇನ್ನೊಂದು ದೊಡ್ಡ ಬಲವೆನಿಸಿದೆ.

ದೇಶದ ಮೇಲಿನ ಗಮನ

ಶ್ರೇಣಿದೇಶಪತ್ರಿಕಾ ಹೇಳಿಕೆ ಬಿಡುಗಡೆ.ಒಟ್ಟು
1ಅಮೆರಿಕಾ ಸಂಯುಕ್ತ ಸಂಸ್ಥಾನಗಳು1364.24
2ಇಸ್ರೇಲ್(inc.ಇಸ್ರೇಲ್ )ವೆಸ್ಟ್ ಬ್ಯಾಂಕ್ ಮತ್ತು ಗಾಜಾ ಪಟ್ಟಿ)1283.99
3ಇಂಡೋನೆಶಿಯಮತ್ತುಇಸ್ಟ್ ತೈಮೂರ್1193.71
3ಟರ್ಕಿ1193.71
4ಪೀಪಲ್ಸ್‌ ರಿಪಬ್ಲಿಕ್‌ ಆಫ್‌ ಚೀನಾ1153.58
5ಸೈಬೀರಿಯಾ ಮತ್ತು ಮಾಂಟೆನಿಗ್ರೋ1043.24
6ಯುನೈಟೆಡ್‌ ಕಿಂಗ್ಡಂ1033.21
7ಭಾರತ852.65
8ಯುಎಸ್ ಎಸ್ ಆರ್ ಮತ್ತು ರಶಿಯನ್ ಫೆಡ್ರೇಶನ್802.49
9ರವಾಂಡಾ642.00
10ಶ್ರೀಲಂಕಾ591.84
ಮೂಲ: ರೊನಾಂಡ್ ಎಟ್ ಆಲ್. (2005:568)[೫]1986–2000ರ ಅಂಕಿ ಅಂಶ
ಶ್ರೇಣಿದೇಶವರದಿಗಳುಒಟ್ಟು
1ಟರ್ಕಿ3943.91
2ಯುಎಸ್ ಎಸ್ ಆರ್ ಮತ್ತು ರಸಿಯನ್ ಫೆಡ್ರೇಶನ್3743.71
3ಪೀಪಲ್ಸ್‌ ರಿಪಬ್ಲಿಕ್‌ ಆಫ್‌ ಚೀನಾ3573.54
4ಅಮೆರಿಕಾ ಸಂಯುಕ್ತ ಸಂಸ್ಥಾನಗಳು3493.46
5ಒಸ್ರೇಲ್(inc. ವೆಸ್ಟ್ ಬ್ಯಾಂಕ್ ಮತ್ತು ಗಾಜಾ ಪಟ್ಟಿ )3233.21
6ದಕ್ಷಿಣ ಕೊರಿಯ3053.03
7ಇಂಡೊನೇಶಿಯಾ ಮತ್ತು ಪೂರ್ವ ತೈಮೂರ್2532.51
8ಕೊಲಂಬಿಯಾ1971.96
9ಪೆರು1921.91
10ಭಾರತ1781.77
ಮೂಲ: ರೊನಾಂಡ್ ಎಟ್ ಆಲ್. (2005:568)[೫]1986–2000 ರ ಅಂಕಿಅಂಶ

ಅಮ್ನೆಸ್ಟಿಯ ವರದಿಗಲು ದೇಶಕ್ಕೆ ಪೂರಕವಾಗಿ ಮತ್ತು ಹೆಚ್ಚು [೪೦] ಪ್ರಜಾಪ್ರಭುತ್ವವಾಗಿರುತ್ತವೆ.ಅದು ಅಕೇವಲ ಜಗತ್ತಿನಾದ್ಯಂತದ ಮಾನ್ವ ಹಕ್ಕುಗಳ ಉಲ್ಲಂಘನೆಯನ್ನೇ ಎತ್ತಿ ತೋರಿಸುವ ಕೆಲಸ ಮಾಡುತ್ತಿಲ್ಲ;ಆದರೆ ಇಅನ್ನು ನಿಲ್ಲಿಸಲು ಹೆಚ್ಚು ಒತ್ತಡ ತರುವ ಜನಾಭಿಪ್ರಾಯ ಮೂಡಿಸಬೇಕಾಗಿದೆ. ಪ್ರದರ್ಶನಾ ಪರಿಣಾಮವನ್ನು ಎರಡೂ ಪ್ರಮುಖ ಪಾಶ್ಚಿಮಾತ್ಯ ಮತ್ತು ಪಾಶ್ಚಿಮಾತ್ಯವಲ್ಲದ ರಾಜ್ಯಗಳಿಗೆ ಇದನ್ನು ಮಹತ್ವದ ಅಂಶವಾಗಿ ಪರಿಗಣಿಸಲಾಗುತ್ತದೆ.ಅಮ್ನೆಸ್ಟಿ ಪ್ರಧಾನ ಕಾರ್ಯದರ್ಶಿ ಹೇಳುವ ಪ್ರಕಾರ,"ಹಲವಾರು ದೇಶಗಳ ಮತ್ತು ದೊಡ್ಡ ಪ್ರಮಾಣದ ಜನಸಂಖ್ಯೆ ಯುನೈಟೆಡ್ ಸ್ಟೇಟ್ಸ್ ಒಂದು ಮಾದರಿಯಾಗಿದೆ."ಅಮ್ನೆಸ್ಟಿಮ್ಯಾನೇಜರ್ ಅವರ ಪಕಾರ ಸಣ್ಣ ದೇಶಗಳು ದೊಡ್ಡವುಗಳ ಮೂಲಕ [೫] ಪ್ರಭಾವಿತವಾಗುತ್ತವೆ. ಶೀತಲ್ ಯುದ್ದದ ಅಂತ್ಯದ ನಂತರ ಉತ್ತರ ಭಾಗದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಕುರಿತು ಹೆಚ್ಚಿನ ಗಮನ ಸೆಳೆಯಬೇಕಾಗಿದೆ ಎಂಬುದನ್ನು ಅಮ್ನೆಸ್ಟಿ ಮನಗಾಣಿತು.ಅದರ ಜಾಗತಿಕ ನಡವಳಿಕೆಯಲ್ಲಿ ತನ್ನನ್ನು ತೊಡಗಿಸಲು ಅದು ಆರಂಭಿಸಿತು.ಅದರ ಜನಪ್ರಿಯತೆಯನ್ನು ಇನ್ನಷ್ಟು ಸುಧಾರಿಸಲು ಅದು [೫] ಶ್ರಮಿಸುತ್ತದೆ.ಇತ್ತೀಚಿನ ಅಧ್ಯಯನದ ಪ್ರಕಾರ ಅಮ್ನೆಸ್ಟಿಯ ವರದಿಗಳು ಹಲವಾರು ಅಂಶಗಳಿಂದ ಪ್ರಭಾವಿತವಾಗಿರುತ್ತವೆ.ವಿಶ್ವದಾದ್ಯಂತ ಮಾನವ ಹಕ್ಕುಗಳ ಉಲ್ಲಂಘನೆಯು ತೀವ್ರ ಪ್ರಮಾಣದಲ್ಲಿ ಮತ್ತು ನಿರಂತರವಾಗಿ ನಡೆಯುವುದನ್ನು ಅದು ತಡೆಯುತ್ತದೆ. ಉದಾಹರಣೆಗೆ ಹೆಚ್ಚು ವರದಿ ತಯಾರಿಸುವುದೆಂದರೆ (ಮಾನವ ಹಕ್ಕುಗಳ ಉಲ್ಲಂಘನೆಯ ಊಹಿಸಿದ ಪ್ರಕರಣಗಳಿಗಿಂ ಹೆಚ್ಚು ಕ್ರಮ)ಆರ್ಥಿಕವಾಗಿ ಹೆಚ್ಚು ಪ್ರಬಲ ರಾಷ್ಟ್ರಗಳಲ್ಲಿನ ಮಾನವ ಹಕ್ಕುಗಳ ರಕ್ಷಣೆಗೆ ಅದು ಮುಂದಾಗುತ್ತದೆ.ಯಾವ ದೇಶಗಳಲ್ಲಿ US ಮಿಲಿಟರಿ ಕಾರ್ಯಾಚಾರಣೆ ಹೊಂದಿರುವ ದೇಶಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಹೆಚ್ಚಾಗಿರುತ್ತದೆ.ಅಥವಾ ಪಾಶ್ಚಿಮಾತ್ಯ ದೇಶಗಳಿಂದ ನೆರವು ಪಡೆಯುತ್ತಿರುವ ದೇಶಗಳಲ್ಲಾದರೆ ಇನ್ನೂ ಅಧಿಕ ಪ್ರಕರಣಗಳು ಬೆಳಕಿಗೆ ಬರುವುದನ್ನು ಅದು ಪತ್ತೆ [೫] ಹಚ್ಚಿದೆ. ಇದಲ್ಲದೇ,ಅಮ್ನೆಸ್ಟಿ 1993-94 ರಲ್ಲಿ ತನ್ನದೇ ಆದ ಮಾಧ್ಯಮ ಸಂಬಂಧಗಳನ್ನು ಬೆಳಸಿತು.ಹಿನ್ನೋಟದ ವರದಿಗಳಿಗಿಂತ ನೇರ ಪತ್ರಿಕಾಗೋಷ್ಟಿ ನಡೆಸಿ ಅದು ತನ್ನ ಪ್ರಚಾರಕ್ಕೆ ಚಾಲನೆ ನೀಡಿತು. ಈ ಪತ್ರಿಕಾ ಪ್ರಕಟಣೆಗಳು ಭಾಗಶ:ಸುದ್ದಿ ಹಾಗು ಸುದ್ದಿ ಬಿತ್ತರಿಕೆಯ ಸಾಧನಗಳಾಗಿವೆ.ಪ್ರಚಲಿತ ಸುದ್ದಿ ಸಂಗ್ರಹಗಲ ಪ್ರಕಟನೆ ಇದರ ಉದ್ದೇಶವಾಗಿದೆ.ಇದು ಮಾನವ ಹಕ್ಕುಗಳ ಅಮ್ನೆಸ್ಟಿ ಉದ್ದೇಶ ಸಾಫಲ್ಯಕ್ಕೆ ಅನುಕೂಲವಾಗುತ್ತದೆ. ಇದು ಅಮ್ನೆಸ್ಟಿಗೆ ಮಾಧ್ಯಮ ಹೆಚ್ಚು ಆಸಕ್ತಿ ತೋರುವ ದೇಶಗಳ ಮೇಲೆ ಹೆಚ್ಚು ತನ್ನ ಕಾರ್ಯಗಮನ ಸೆಳೆಯಲು [೫] ಸಾಧ್ಯವಾಗುತ್ತದೆ.ಅಮ್ನೆಸ್ಟಿಯಾದ ದೇಶಗಳ ಮೇಲಿನ ಗಮನವು ಇನ್ನಿತರ ಸರ್ಕಾರೇತರ ಸಂಸ್ಥೆಗಳಿಗೆ ಸಮರೂಪವಾಗಿದೆ:ಉದಾಹರಣೆಗಾಗಿ ಹುಮನ್ ರೈಟ್ಸ್ ವಾಚ್ :1991 ರಿಂದ 2000 ವರೆಗೆ,ಅಮ್ನೆಸ್ಟಿ ಮತ್ತು HRW ಹತ್ತು ದೇಶಗಳಲ್ಲಿನ ಎಂಟರಲ್ಲಿ ಅದು ಪಟ್ಟಿ ಮಾಡಿದ "ಟಾಪ್ ಟೆನ್ "(ಅಮ್ನೆಸ್ಟಿ ಪತ್ರಿಕಾ ಪ್ರಕಟನೆ;7 ಅದರಲ್ಲಿ ಅಮ್ನೆಸ್ಟಿ ವರದಿಗಳು)ಕೆಲಸ [೫] ಮಾಡಿದೆ. ಇನ್ನೂ ಹೆಚ್ಚೆಂದರೆ 10 ದೇಶಗಳಲ್ಲಿ ಆರು ದೇಶಗಳಲ್ಲಿ ಹುಮನ್ ರೈಟ್ಸ್ ವಾಚ್ ನಿಂದ 1990 ರಲ್ಲಿ ಅತ್ಯಧಿಕ ಕಾರ್ಯ ಮಾಡಿದ ಶ್ಲಾಘನೆಗೆ ಒಳಗಾಗಿದೆ.ದಿ ಎಕಾನಾಮಿಸ್ಟ್ ಮತ್ತು ನಿವ್ಸ್ ವೀಕ್ ನ ಪತ್ರಿಕೆಗಳಲ್ಲಿ ಅತ್ಯುತ್ತಮ ವರದಿಗಳನ್ನು ಪ್ರಕಟಿಸಲಾಗಿದೆ.ಈ ಅವಧಿಯಲ್ಲಿ ಈ ಸಂಸ್ಥೆಗಳಿಗೆ ಸಾಕಷ್ಟು ಪ್ರಚಾರ [೫] ಸಿಕ್ಕಿದೆ.

ಅಮ್ನೆಸ್ಟಿಗಾಗಿರುವ ಕಲಾವಿದರು (ಆರಟಿಸ್ಟ್ಸ್ ಫಾರ್ ಅಮ್ನೆಸ್ಟಿಯ)

ಅಮ್ನೆಸ್ಟಿ ಇಂಟರ್ ನ್ಯಾಶನಲ್ ತನ್ನ "ಆರ್ಟಿಸ್ಟ್ ಫಾರ್ ಅಮ್ನೆಸ್ಟಿ"ಕಾರ್ಯಕ್ರಮದಡಿ ಹಲವಾರು ಸಾಂಸ್ಕೃತಿಕ ಮತ್ತು ಮಾಧ್ಯಮ ಕಾರ್ಯಗಳಿಗೆ ಒತ್ತು ನೀಡಿದೆ.ಅದರ ನಾಯಕತ್ವವು ಶಿಕ್ಷಣ ಮತ್ತು ನಿಖರ ಮಾಹಿತಿಯಲ್ಲಿ ಜನಪ್ರಿಯವಾಗಿದೆ.ನಿಜ-ಜಗತ್ತಿನ ವಸ್ತು ವಿಷಯಗಳು ಅಮ್ನೆಸ್ಟಿಯ ಕಳಕಳಿಯ ವಿಷಯವಸ್ತುಗಳಾಗಿವೆ:

  • ಸಂಗೀತ ಕಾರ್ಯಕ್ರಮಗಳ ಅರ್ಪಣೆ
  • ಲಾರ್ಡ್ಸ್ ಆಫ್ ವಾರ್
  • ಎ ಈಸ್ ಫಾರ್ ಔಸ್ಚೆವಿಜ್
  • ಬ್ಲಡ್ ಡೈಮಂಡ್ [೪೧]
  • ಇನ್ ಪ್ರಿಜನ್ ಮೈ ಹೋಲ್ ಲೈಫ್
  • ಬಾರ್ಡರ್‌ಟೌನ್
  • ದಿ ಕಾನ್ ಸ್ಟಂಟ್ ಗಾರ್ಡ್ನರ್
  • ಟ್ರಬಲ್ ದಿ ವಾಟರ್
  • Tibet: Beyond Fear
  • ಇನ್ವಿಕ್ಟಸ್
  • ಕ್ಯಾಚ್ ಎ ಫೈರ್
  • ಎಟ್ ದಿ ಡೆತ್ ಹೊಸ್ ಡೋರ್

ಸಂಸ್ಥೆ

ಅಮ್ನಿಸ್ಟಿ ಇಂಟರ್ ನ್ಯಾಶನಲ್ ಸೆಕ್ಷನ್ಸ್ ,2005
ದಿ ಅಮ್ನಿಸ್ಟಿ ಕೆನಡಿಯನ್ ಹೆಡ್ ಕ್ವಾರ್ಟರ್ಸ್ ಇನ್ ಒಟ್ಟಾವಾ

ಅಮ್ನೆಸ್ಟಿ ಇಂಟರ್ ನ್ಯಾಶನಲ್ ವಿಶಾಲವ್ಯಾಪ್ತಿಯಲ್ಲಿ ಸ್ವಯಂಸೇವಾ ಮನೋವೃತ್ತಿಯ ಸದಸ್ಯರನ್ನು ಒಳಗೊಂಡಿದೆ.ಆದರೆ ಸಣ್ಣ ಪ್ರಮಾಣದ ವೃತ್ತಿಪರರನ್ನು ಸಂಬಳಕ್ಕಾಗಿ ಅದು ಉಳಿಸಿಕೊಂಡಿದೆ. ಅಮ್ನೆಸ್ಟಿ ಇಂಟರ್ ನ್ಯಾಸನಲ್ ಬಲವಾಗಿ ಅಸ್ತಿತ್ವದಲ್ಲಿರುವ ದೇಶಗಳಲ್ಲಿನ ಸದಸ್ಯರನ್ನು ಸಂಘಟಿತ 'ಸೆಕ್ಸೆನ್ಸ್ 'ಎಂಬ ವಿಭಾಗದ ಮೂಲಕ ಗುರುತಿಸಲಾಗುತ್ತದೆ. ಈ ಸೆಕ್ಸೆನ್ ಗಳು ಅಮ್ನೆಸ್ಟಿ ಇಂಟರ್ ನ್ಯಾಶನಲ್ ನ ಮೂಲತತ್ವಗಳು ಮತ್ತು ಕಾರ್ಯಗಳನ್ನು ಈ ಸದಸ್ಯರು ಕೈಗೆತ್ತಿಕೊಂಡು "ಗುಂಪುಗಳ"ಸೃಷ್ಟಿಸಿ ವೃತ್ತಿಪರ ಸಿಬ್ಬಂದಿಯೊಂದಿಗೆ ಕೆಲಸದಲ್ಲಿ ಸಹಕರಿಸುತ್ತಾರೆ. ಪ್ರತಿಯೊಂದು ಗುಂಪೂ ಒಬ್ಬ ನಿರ್ದೇಶಕ ಮಂಡಳಿಯ ಸದಸ್ಯರನ್ನು ಹೊಂದಿರುತ್ತಾರೆ. ಆಗ 2005 ರಲ್ಲಿ ವಿಶ್ವಾದ್ಯಾಂತ 52 ಸೆಕ್ಸೆನ್ಸ್ ಗಳಿದ್ದವು. 'ರಚನಾ ವಿಧಾನಗಳು' ಈ ಸೆಕ್ಸೆನ್ಸ್ ಗಳನ್ನು ಉತ್ತೇಜಿಸುತ್ತಿದ್ದವು. ಅವುಗಳೂ ಕೂಡಾ ಮೂಲ ಚಟುವಟಿಕೆಗಳಲ್ಲಿ ಪಾಲ್ಗೊಂಡರೂ ಅವುಗಳಿಗೆ ಸೀಮಿತ ಸಿಬ್ಬಂದಿ ಮತ್ತು ಸಣ್ಣ ಪ್ರಮಾಣದ ಸದಸ್ಯರ ಸಂಖ್ಯೆ ಇರುತ್ತದೆ. ಕೆಲವು ದೇಶಗಳಲ್ಲಿ ಸೆಕ್ಸೆನ್ ಅಥವಾ ರಚನಾ ಸಂಸ್ಥೆಗಳಿಲ್ಲದಿದ್ದರೆ ಅಲ್ಲಿನ ಜನರು'ಅಂತಾರಾಷ್ಟ್ರೀಯ ಸದಸ್ಯರಾಗಬಹುದು.' ಇನ್ನೆರಡು ಸಂಘಟನಾ ಮಾದರಿಗಳು ಅಸ್ತಿತ್ವದಲ್ಲಿವೆ:'ಇಂಟರ್ ನ್ಯಾಶನಲ್ ನೆಟ್ ವರ್ಕ್ಸ್ 'ಇದು ವಿಶೇಷ ಕಾರ್ಯಯೋಜನೆಗಳ ಅನುಷ್ಠಾನಕ್ಕೆ ಅಥವಾ ವಿಶಿಷ್ಟ ಕಾರ್ಯದ ಗುರುತಿಸುವಿಕೆ ಹೊಂದಿರುತ್ತವೆ;ಇವುಗಳು ಗುಂಪುಗಳಿಗೆ ಅಧೀನವಾಗಿ ಕೆಲಸ ಮಾಡುತ್ತವೆ.ಸೆಕ್ಸೆನ್ ಗುಂಪುಗಳು ಮಾಡುವ ಕೆಲಸಕನ್ನು ಮಾಡಿದರೂ ಸಹ ಅವು ದೂರ ಉಳಿದೇ ಈ ಕಾರ್ಯ ಮಾಡುತ್ತವೆ.ಈ ಮೇಲಿನ ಸಂಘಟನೆಗಳು ಇಂಟರ್ ನ್ಯಾಶನಲ್ ಕೌನ್ಸಿಲ್ (IC)ನಿಂದ ಪ್ರತಿನಿಧಿಸಲ್ಪಡುತ್ತವೆ.ಇದಕ್ಕೆ (IC)ಯ ಮುಖ್ಯಸ್ಥರು ನೇತೃತ್ವ ವಹಿಸಿರುತ್ತಾರೆ. ಸೆಕ್ಸೆನ್ಸ್ ಮತ್ತು ರಚನಾ ಸಂಘಟನೆಗಳು ಒಬ್ಬ ಅಥವಾ ಅದಕ್ಕಿಂತ ಹೆಚ್ಚು ಪ್ರತಿನಿಧಿಗಳನ್ನು ಈ ಕೌನ್ಸಿಲ್ ಗೆ ತಮ್ಮ ಸದಸ್ಯರ ಸಂಖ್ಯಾ ಬಲದ ಮೇಲೆ ಕಳಿಸಲು ಅವಕಾಶವಿದೆ. ಈ (IC)ಯು ಇಂಟರ್ ನ್ಯಾಶನಲ್ ನೆಟ್ ವರ್ಕ್ ಮತ್ತು ಇನ್ನಿತರ ಸದಸ್ಯರನ್ನು ಸಭೆಗಳಿಗೆ ಆವ್ಹಾನಿಸಬಹುದು.ಆದರೆ ಸೆಕ್ಸೆನ್ಸ್ ಮತ್ತು ರಚನಾವಿಭಾಗದ ಸದಸ್ಯರಿಗೆ ಮಾತ್ರ ಮತದಾನದ ಹಕ್ಕಿದೆ. ಮುಖ್ಯವಾಗಿ (IC) ದ ಕೆಲಸವೆಂದರೆ ಬದ್ದತೆ ಮೇರೆಗೆ ಆಂತರಿಕ ಸರ್ಕಾರಿ ಮಂಡಲಿಯ ರಚನೆ ಹಾಗು ಅವುಗಳ ಕಾರ್ಯದ ಮೇಲೆ ನಿಗಾವಹಿಸುವುದು ಅಲ್ಲದೇ ಅದರ ಚಲನಾ ದಿಕ್ಕನ್ನು ನಿರ್ದೇಶಿಸುವಲ್ಲಿಯೂ ಅದು ತನ್ನ ಪಾತ್ರ ನಿರ್ವಹಿಸುತ್ತದೆ. IC ಯು ಪ್ರತಿ ಎರಡು ವರ್ಷಕ್ಕೊಮ್ಮೆ ಸಮಾವೇಶಗೊಳ್ಳುತ್ತದೆ.ದಿ ಇಂಟರ್ ನ್ಯಾಶನಲ್ ಎಕ್ಸಿಕ್ಯುಟಿವ ಕಮೀಟಿ (IEC)ಇದರ ಚೇರ್ಮನ್ ರ ನೇತೃತ್ವದಲ್ಲಿ ಎಂಟು ಸದಸ್ಯರು ಮತ್ತು ಓರ್ವ ಕೋಶಾಧಿಕಾರಿಯನ್ನು ಒಳಗೊಂಡಿರುತ್ತದೆ. ಇದು ಚುನಾಯಿತಗೊಂಡು,ಪ್ರತಿನಿಧಿಸಿ,IC ಯೊಂದಿಗೆ ದ್ವೈವಾರ್ಷಿಕ ಸಭೆ ನಡೆಸುತ್ತದೆ. IEC ಯ ಪಾತ್ರವೆಂದರೆ ಅಮ್ನೆಸ್ಟಿ ಇಂಟರ್ ನ್ಯಾಶನಲ್ ಪರವಾಗಿ ನಿರ್ಧಾರ ತೆಗೆದುಕೊಳ್ಳುವುದು,IC ನಿಗದಿಪಡಿಸಿದ ಯೋಜನೆಗಳ ಜಾರಿಗೆ ಸಂಘಟನೆಯ ನೀತಿ-ನಿಯಮದ ಪ್ರಕಾರ ಅನುಷ್ಠಾನಗೊಳಿಸುವುದಾಗಿದೆ.ಇಂಟರ್ ನ್ಯಾಶನಲ್ ಸೆಕ್ರೆಟರಿಯೆಟ್ (IS)ಅಮ್ನೆಸ್ಟಿ ಇಂಟರ್ ನ್ಯಾಶನಲ್ ನ ದಿನನಿತ್ಯದ ಕೆಲಸ ಕಾರ್ಯಗಳ ಬಗ್ಗೆ ಹಾಗು ಅವುಗಳು ಸೂಕ್ತ ಸಮಯದಲ್ಲಿ ನೆರವೇರುವಂತೆ ನೋಡಿಕೊಳ್ಳುತ್ತದೆ.ಇವೆಲ್ಲವೂ IEC ಮತ್ತುIC ಗಳ ನಿರ್ದೇಶನದ ಮೇರೆಗೆ ಅದು ತನ್ನ ಕಾರ್ಯಸೂಚಿಯನ್ನು ತಯಾರಿಸುತ್ತದೆ. ಈ IS ಹಲವಾರು ಕಾರ್ಯಯೋಜನೆಗಳನ್ನು ನೋಡಿಕೊಳ್ಳುತ್ತದೆ;ಅಂತಾರಾಷ್ಟ್ರೀಯ ಕಾನೂನು ಮತ್ತು ಸಂಘಟನೆಗಳು;ಸಾಂಶೋಧನೆ;ಪ್ರಚಾರಾಂದೋಲನಗಳು;ಜನಬೆಂಬಲ ಪಡೆಯುವುದು ಮತ್ತು ಸಂಪರ್ಕ ಸಂವಹನವನ್ನು ಏರ್ಪಡಿಸುತ್ತದೆ. ಇದರ ಕಚೇರಿಗಳು ಅದರ ಸಂಸ್ಥಾಪನಾದಿನ ಮಧ್ಯದ-1960 ದಿಂದಲೂ ಲಂಡನ್ ನಲ್ಲಿಯೇ ಇವೆ.ಅಮ್ನೆಸ್ಟಿ ಇಂಟರ್ ನ್ಯಾಶನಲ್ ಸಾಮಾನ್ಯವಾಗಿ ತನ್ನ ಸದಸ್ಯರಿಂದ ಶುಲ್ಕಗಳು ಮತ್ತು ಕೊಡುಗೆಗಳ ದೇಣಿಗೆಯಿಂದ ತನ್ನ ಹಣಕಾಸಿನ ಅಗತ್ಯಗಳನ್ನು ಪೂರೈಸಿಕೊಳ್ಳುತ್ತದೆ. ಇದು ಸರ್ಕಾರ ಅಥವಾ ಸರ್ಕಾರಿ ಸಂಘ ಸಂಸ್ಥೆಗಳಿಂದ ದೇಣಿಗೆಗಳನ್ನು ಪಡೆಯುವುದಿಲ್ಲ.

  • ಅಮ್ನೆಸ್ಟಿ ಇಂಟರ್ ನ್ಯಾಶನಲ್ ಸೆಕ್ಸೆನ್ಸ್, 2005
    ಅಲ್ಜೇರಿಯಾ; ಅರ್ಜೈಂಟೈನ್; ಆಸ್ಟ್ರೇಲಿಯಾ; ಆಸ್ಟ್ರಿಯಾ; ಬೆಲ್ಜಿಯಮ್(ಡಚ್ ಮಾತನಾಡುವವರು); ಬೆಲ್ಜಿಯಮ್(ಫ್ರೆಂಚ್ ಮಾತನಾಡುವವರು); ಬೆನಿನ್; ಬರ್ಮುಡಾ; ಕೆನಡಾ(ಇಂಗ್ಲಿಷ್ ಮಾತನಾಡುವವರು); ಕೆನಡಾ(ಫ್ರೆಂಚ್ ಮಾತನಾಡುವವರು); ಚಿಲಿ; ಕೊಟೆ ಡಿ’ಐವೊರೆ; ಡೆನ್ಮಾರ್ಕ್; ಫಾರೊಸ್ ದ್ವೀಪ; ಫಿನ್ ಲ್ಯಾಂಡ್; ಫ್ರಾನ್ಸ್; ಜರ್ಮನಿ; ಗ್ರೀಸ್; ಗಯಾನಾ; ಹಾಂಗ್ ಕಾಂಗ್ ; ಐಸ್ ಲ್ಯಾಂಡ್; ಐರ್ಲೆಂಡ್; ಇಸ್ರೇಲ್; ಇಟಲಿ; ಜಪಾನ್; ಕೊರಿಯಾ(ಗಣರಾಜ್ಯ ); ಲಕ್ಸೆಂಬರ್ಗ್; ಮಾರ್ಶಿಸ್; ಮೆಕ್ಸಿಕೊ; ಮೊರ್ಯಾಕ್ಕೊ; ನೇಪಾಲ್; ನೆದರ್ ಲ್ಯಾಂಡ್; ನಿವ್ ಜಿಲ್ಯಾಂಡ್ ; ನಾರ್ವೆ; ಪೆರು; ಫಿಲ್ಪೈನ್ಸ್; ಪೊಲಂಡ್; ಪೊರ್ಚಗಲ್; ಪುಯ್ರೆಟೊ ರಿಕೊ; ಸೆನೆಗಲ್; ಸೈರಾ ಲಿಯೊನಾ; ಸ್ಲೊವೆನಿಯಾ; ಸ್ಪೇನ್; ಸ್ವೆಡನ್; ಸ್ವಿಜರ್ ಲ್ಯಾಂಡ್; ತೈವಾನ್; ಟೊಗೊ; ರುನಿಸಿಯಾ; ಯುನೈಟೆಡ್ ಕಿಂಗ್ಡಮ್ ; ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ; ಉರುಗ್ವೆ; ವೆನೆಜುವೆಲಾ
  • ಅಮ್ನೆಸ್ಟಿ ಇಂಟರ್ ನ್ಯಾಶನಲ್ ಸ್ಟ್ರಕ್ಚರ್ಸ್ (ರಚನಾಂಗಗಳು), 2005
    ಬೆಲಾರಸ್; ಬೊಲಿವಿಯಾ; ಬರ್ಕಿನಾ ಫಾಸೊ; ಕ್ರೊಯೇಶಿಯಾ; ಕುಯ್ರಾಕೊ; ಝೆಕ್ ರಿಪಬ್ಲಿಕ್; ಗಾಂಬಿಯಾ; ಹಂಗೇರಿ; ಮಲೆಷ್ಯಾ; ಮಾಲಿ; ಮೊಲ್ಡೊವಾ; ಮಂಗೊಲಿಯಾ; ಪಾಕಿಸ್ತಾನ್; ಪರುಗ್ವೆ; ಸ್ಲೊವೆಕಿಯಾ; ದಕ್ಷಿಣ ಆಫ್ರಿಕಾ ; ಥೈಲ್ಯಾಂಡ್; ಟರ್ಕಿ; ಉಕ್ರೇನ್; ಝಾಂಬಿಯಾ; ಜಿಂಬಾಬ್ವೆ
  • IEC ಮುಖ್ಯಸ್ಥರು
    ಸೀನ್ ಮ್ಯಾಕ್ ಬ್ರೈಡ್ , 1965–1974; ಡಿರ್ಕ್ ಬೊರ್ನರ್, 1974–1977; ಥಾಮಸ್ ಹ್ಯಾಮರ್ ಬರ್ಗ್, 1977–1979; ಜೊಸೆ ಝೆಲೆಕ್ವೆಟ್, 1979–1982; ಸುರಿಯಾ ವಿಕ್ರಮ್ ಸಿಂಘೆ, 1982–1985; ವೂಲ್ಫ್ ಗ್ಯಾಂಗ್ ಹಿಂಜ್ , 1985–1996; ಫ್ರಂಕಾ ಸಿಯಿಟೊ, 1986–1989; ಪೀಟರ್ ಡಫಿ , 1989–1991; ಅನ್ನೆಟೆ ಫೆಶ್ಚರ್, 1991–1992; ರೊಸ್ ಡ್ಯಾನಿಯಲ್ಸ್ , 1993–1997; ಸುಸನ್ ವಾಲ್ಜ್ , 1996–1998; ಮಹುಮುದ್ ಬೆನ್ ರೊಮ್ಧಾನೆ, 1999–2000; ಕೊಲ್ಮ್ ಒ ಕುನಾಚೇನ್, 2001–2002; ಪೌಲ್ ಹಾಫ್ ಮ್ಯಾನ್, 2003–2004; ಜಾಪ್ ಜಾಕೊಬ್ಸನ್ , 2005; ಹನ್ನಾ ರಾಬರ್ಟ್ಸ್ , 2005–2006; ಲಿಲಿಯನ್ ಗೊಂಕ್ಲೇವಸ್-ಹೊ ಕಾಂಗ್ ಯು, 2006–2007; ಪೀಟರ್ ಪ್ಯಾಕ್ , 2007–ಸದ್ಯ
  • ಪ್ರಧಾನ ಕಾರ್ಯದರ್ಶಿಗಳು
ಪೀಟರ್ ಬೆನೆಸನ್ ಪೀಟರ್ ಬೆನೆಸನ್ 1961–1966
ಎರಿಕ್ ಬೇಕರ್ ಎರಿಕ್ ಬೇಕರ್1966–1968
ಮಾರ್ಟಿನ್ ಎನ್ನಾಲ್ಸ ಮಾರ್ಟಿನ್ ಎನ್ನಾಲ್ಸ 1968–1980
ಥಾಮಸ್ ಹ್ಯಾಮರ್ ಬರ್ಗ್ ಥಾಮಸ್ ಹ್ಯಾಮರ್ ಬರ್ಗ್ 1980–1986
ಎವೆರಿ ಬ್ರಂಡೇಜ್ ಐವಾನ್ ಮಾರ್ಟಿನ್1986–1992
ಪಿಯೆರ್ ಸ್ಯಾನೆ ಪಿಯೆರ್ ಸ್ಯಾನೆ1992–2001
ಐರೆನೆ ಖಾನ ಐರೆನೆ ಖಾನ2001–2010
ಕ್ಲಾಯುಡಿಯೊ ಕೊರ್ಡೊನೆ ಕ್ಲಾಯುಡಿಯೊ ಕೊರ್ಡೊನೆ೨೦೦೫-೨೦೧೦
ಸಲೀಲ್ ಶೆಟ್ಟಿ ಸಲೀಲ್ ಶೆಟ್ಟಿ೨೦೧೦-೨೦೧೫
ಆಕಾರ್ ಪಟೇಲ್ ಆಕಾರ್ ಪಟೇಲ್೨೦೧೫ – ಪ್ರಸಕ್ತ

ವಿಮರ್ಶೆ

ಅಮ್ನೆಸ್ಟಿ ಇಂಟರ್ ನ್ಯಾಶನಲ್ ಹಲವಾರು ಬಾರಿ ಟೀಕೆಗೆ ಒಳಗಾಗಿದೆ.ಆಯ್ಕೆಯಲ್ಲಿ ವಕ್ರಗತಿ,ವಿದೇಶೀ ತತ್ವಗಳ ಗಲಬಿಲಿ,ವಿದೇಶಿ ನೀತಿಗಳಲ್ಲಿನ ಪಾಶ್ಚಿಮಾತ್ಯವಲ್ಲದ ದೇಶಗಳ ಬಗ್ಗೆ ತಾರತಮ್ಯ-ಅದಕ್ಕೆ ಬೆಂಬಲಿಸಿದ ಪಾಶ್ಚಿಮಾತ್ಯ [೪೨] ದೇಶಗಳ ಬಗ್ಗೆ ಸರಿಯಾದ ಗಮನ ನೀಡದಿರುವ ಬಗ್ಗೆ ಟೀಕೆ,[೪೩] ಗರ್ಭಪಾತದ ಬಗ್ಗೆ ಅಮ್ನೆಸ್ಟಿಯ ಅಭಿಪ್ರಾಯ, ಜಿಹಾದ್ ರಕ್ಷಣಾತ್ಮಕ ಎನ್ನುವ ಮನೋಭಾವ,ಇವೆಲ್ಲ ಮಾನವ [೪೪] ಹಕ್ಕುಗಳ ರಕ್ಷಣೆಗೆ ಮತ್ತು [೪೨] ಸಂಘಟನೆಗಳಲ್ಲಿ ಸೂಕ್ತವಾದ ಚಟುವಟಿಕೆಗಳಲ್ಲಿ ಇದು [೪೫] ತೊಡಗಿದೆ. ಅಮ್ನೆಸ್ಟಿಯನ್ನು ಟೀಕಿಸಿದ ಸರ್ಕಾರಗಳು ಇಸ್ರೇಲ್, ಇರಾನ್, ಸೌದಿ ಅರೇಬಿಯಾ , ದಿ ಡೆಮಾಕ್ರಾಟಿಕ್ ರಿಪಬ್ಲಿಕ್ ಆಫ್ ದಿ ಕಾಂಗೊ ,[೪೬] ದಿ ಪೀಪಲ್ಸ್ ರಿಪಬ್ಲಿಕ್ಸ್ ಆಫ್ ಚೀನಾ ,[೪೭] ವಿಯಟ್ನಾಮ್,[೪೮] ರಶಿಯಾ [೪೯] ಮತ್ತು ದಿ ಯುನೈಟೆಡ್ ಸ್ಟೇಟ್ಸ್,[೫೦] ಇವರೆಲ್ಲ ಹೇಳುವ ಪ್ರಕಾರ ಈ ಸಂಘಟನೆಯು ಹಲವಾರು ಗಂಭೀರ ವಿಷಯಗಳ ವರದಿ ಮಾಡುವಾಗ ವಿಫಲತೆ ಪಡೆದಿದೆ. ಇಂತಹ ಸರ್ಕಾರಗಳ ಈ ಪ್ರತಿಕ್ರಿಯೆಗಳು ಅಮ್ನೆಸ್ಟಿ ಇಂಟರ್ ನ್ಯಾಶನಲ್ ನ ಕಾರ್ಯ ಚಟುವಟಿಕೆಯ ಬಗ್ಗೆ ದೂರಿದಾಗ ಅದು ಅಮ್ನೆಸ್ಟಿ ತನ್ನ ಧ್ವನಿಯನ್ನು ಮತ್ತಷ್ಟು ಅಧಿಕಗೊಳಿಸಲು ಸಫಲವಾಗಿದೆ. ಹಲವಾರು ಸಂಘಟನೆಗಳಂತೆ ಕ್ಯಾಥೊಲಿಕ್ ಚರ್ಚ್ ಕೂಡಾ ಅತ್ಯಾಚಾರ,ರಕ್ತಸಂಬಂಧಿಗಳೊಡನೆ ದೈಹಿಕ ಸಂಬಂಧ,ಹಿಂಸಾಚಾರ ಅಥವಾ ಗರ್ಭಾನಾನುಕೂಲತೆ ಸೃಷ್ಟಿಸಿದ ಘಟನೆಗಳ ಪ್ರಕರಣಗಳಲ್ಲಿನ ಗರ್ಭಪಾತಗಳ ಅಮ್ನೆಸ್ಟಿ ಅಭಿಪ್ರಾಯಕ್ಕೆ ತನ್ನ ಅಪಸ್ವರ [೪೩] ಎತ್ತಿದೆ.ಅಮ್ನೆಸ್ಟಿ ಇಂತರ್ ನ್ಯಾಶನಲ್ ನ ಫಿನ್ನಿಶ್ ನ ನಿರ್ದೇಶಕ ಫ್ರಾಂಕ್ ಜೊನ್ಸನ್ ಇಸ್ರೇಲ್ ನ್ನು "ನಿಷ್ಪ್ರಯೋಜಕ ರಾಜ್ಯ "ಎಂದು ಹೇಳಿದ್ದು ಎಲ್ಲರ ಟೀಕೆಗೊಳಗಾಗಿತು. ಗೆರಾಲ್ಡ್ ಸ್ಟೆನ್ ಬರ್ಗ್ ಅವರ ಪ್ರಕಾರ ಜೊನ್ಸನ್ ಅವರ ಈ ಹೇಳಿಕೆಯು "ಸಂಪೂರ್ಣವಾಗಿ ಈ ಸಂಘಟನೆಯ ಕಾರ್ಯದಕ್ಷತೆಗೆ ವಿರುದ್ದವಾಗಿದೆ ಎಂದು ಅವರು ವಾದಿಸಿದ್ದಾರೆ.ಅಮ್ನೆಸ್ಟಿ ಹೇಲುತ್ತಿರುವ ಸಾರ್ವರ್ತ್ರಿಕ ಮಾನವ ಹಕ್ಕುಗಳ ರಕ್ಷಣೆ ಮತ್ತು ಅದರ ತತ್ವಗಳು ಅದರ ಹೇಳಿಕೆಗೆ ತದ್ವಿರುದ್ದವಾಗಿವೆ." ಅಮ್ನೆಸ್ಟಿ ಇಂಟರ್ ನ್ಯಾಶನಲ್ ನ ವಕ್ತಾರ ಲಂಡನ್ ನಲ್ಲಿ "ಅಮ್ನೆಸ್ಟಿ ಇಂತಹ ಅಭಿಪ್ರಾಯಗಳನ್ನು ಇಸ್ರೇಲ್ ಸಂಬಂಧಪಟ್ಟಂತೆ ಹೇಳಬಾರದಿತ್ತೆಂದು ಅವರು [೫೧] ಖಂಡಿಸಿದ್ದಾರೆ.

ಇವನ್ನೂ ಗಮನಿಸಿ

  • ಮಾನವ ಹಕ್ಕುಗಳು
  • ದಿ ಸಿಕ್ರೆಟ್ ಪೊಲೀಸ್ ಮನ್ಸ್ ಬಾಲ್ಸ್
  • 100 ದಿನಗಳ ಪ್ರಚಾರಾಂದೋಲನ
  • ಜಾನ್ ಎರ್ಕೆರ್ಟ್

ಟಿಪ್ಪಣಿಗಳು

ಉಲ್ಲೇಖಗಳು

ಹೆಚ್ಚಿನ ಓದಿಗಾಗಿ

  • Amnesty International (2005). Amnesty International Report 2006: The State of the World’s Human Rights. Amnesty International. ISBN 0-86210-369-X.
  • Clarke, Anne Marie (2001). Diplomacy of Conscience: Amnesty International and Changing Human Rights Norms. Princeton University Press. ISBN 0-691-05743-5.
  • Hopgood, Stephen (2006). Keepers of the Flame: Understanding Amnesty International. Cornell University Press. ISBN 0-8014-4402-0.
  • Power, Jonathan (1981). Amnesty International: The Human Rights Story. McGraw-Hill. ISBN 0-08-028902-9.
  • Sellars, Kirsten (2002). The Rise and Rise of Human Rights. Sutton Publishing Ltd. ISBN 978-0750927550. {{cite book}}: Unknown parameter |month= ignored (help)
  • ಮಾನವಹಕ್ಕುಗಳು ಮತ್ತು ನೈತಿಕ ಅನುಭವ:ಎ.ಪಿ. ಅಶ್ವಿನ್ ಕುಮಾರ್][೧] Archived 28 August 2016[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.

ಬಾಹ್ಯ ಕೊಂಡಿಗಳು