ಧನುರ್ವಾತ
ಧನುರ್ವಾತ ಬ್ಯಾಕ್ಟೀರಿಯಾದಿಂದ ಹರಡುವ ರೋಗ. ಇದು ಕ್ಲಾಸ್ಟ್ರಿಡಿಯಮ್ ಟೆಟಾನೆ ಹೆಸರಿನ ಬ್ಯಾಕ್ಟೀರಿಯಾ ಉಂಟಾಗುವ ಬ್ಯಾಕ್ಟೀರಿಯ ಸೋಂಕು. ದವಡೆಯ ಸ್ನಾಯು ಸೆಳೆತ ಈ ಕಾಯಿಲೆಯ ಮುಖ್ಯ ಲಕ್ಷಣ. ಸಾಮಾನ್ಯವಾಗಿ ಸೆಳೆತವು ದವಡೆಯಲ್ಲಿ ಪ್ರಾರಂಭವಾಗುತ್ತದೆ ಮತ್ತು ನಂತರ ದೇಹದ ಉಳಿದ ಭಾಗಗಳಿಗೆ ಹರಡುತ್ತದೆ.
ಲಕ್ಷಣಗಳು
- ಮೊದಲನೆಯದಾಗಿ ವ್ಯಕ್ತಿಯ ದವಡೆಯ ಮಾಂಸಖಂಡ ಬಿಗಿದುಕೊಂಡು, ಬಾಯಿಯನ್ನು ತೆಗೆಯಲು ಅಶಕ್ತನಾಗುತ್ತಾನೆ.
- ಯಾರಿಗಾದರೂ ಗಾಯವಿಲ್ಲದೆ ಬಾಯಿ ಸರಿಯಾಗಿ ತೆರೆಯಲಾಗದಿದ್ದಲ್ಲಿ, ಧನುರ್ವಾತದ ಲಕ್ಷಣ ಎಂದು ತಿಳಿಯಬೇಕು.
- ಬೆನ್ನು,ಹೊಟ್ಟೆ,ಇತರೆ ಮಾಂಸಖಂಡಗಳು ಬಿಗಿದುಕೊಳ್ಳುವವು.
- ನಾಡಿವೇಗ ಹೆಚ್ಚುವುದು.
- ಸ್ವಲ್ಪ ಜ್ವರ ಬರುವುದು.
- ಉಗುಳು-ಬೆವರು ಬರುವುದು.
ಅವಧಿ
- ಸಾಮಾನ್ಯವಾಗಿ ೬ರಿಂದ ೧೫ದಿನಗಳ ಒಳಗಾಗಿ ರೋಗದ ಚಿಹ್ನೆಹಗಳು ಕಾಣಿಸಿಕೊಳ್ಳುತ್ತವೆ.
- ಕಡಿಮೆ ಅವಧಿಯಲ್ಲಿ ಲಕ್ಷಣಗಳು ಗೋಚರವಾದರೆ ರೋಗ ತೀವ್ರವಾಗಿದೆಯಿಂದರ್ಥ.
- ಮಾಂಸಖಂಡಗಳು ಬಿಗಿದುಕೊಂಡಿರುವು ಸಾಮಾನ್ಯವಾಗಿ ೨-೩ ವಾರದವರೆಗೂಇರೆಬಹುದು'
- ಒಂದು ತಿಂಗಳಿನತನಕ ಕೆಲವು ಮಾಂಸಖಂಡಗಳು ಬಿಗಿದುಕೊಂಡಿರಬಹುದು.
ಕಾರಣಗಳು
clostridium tetani ಎನ್ನುವ ಸೂಕ್ಷ್ಮಜೀವಾಣುಗಳೇ ಇದಕ್ಕೆ ಕಾರಣ[೧]
ಜಟಿಲತೆಗಳು
- ಶ್ವಾಸಕೋಶಗಳು ಸ್ಥಗಿತವಾಗುವುದು
- ನ್ಯುಮೋನಿಯಾ
ಮುನ್ನೆಚ್ಚರಿಕೆಗಳು ಮತ್ತು ಜಾಗರೂಕತೆ
- ಡಿಪಿಟಿ ಎಂದು ಕರೆಯಲ್ಪಡುವ ಲಸಿಕೆಯನ್ನು ಮಕ್ಕಳಿಗೆ ಮೊದಲನೆಯದನ್ನು ಮೂರನೇ ವರ್ಷದಲ್ಲಿ, ಎರಡನೆಯದನ್ನು ೪ನೇ ವರ್ಷದಲ್ಲಿ ಮತ್ತು ಮೂರನೆಯದನ್ನು ೫ನೇ ವರ್ಷದಲ್ಲಿ ನೀಡಬೇಕು.
- ಗಾಯವಾಗಲಿ, ಆಗದಿರಲಿ ಪ್ರತಿ ೫ವರುಷಕ್ಕೊಮ್ಮೆ ಟಿಟಿ ಇಂಜೆಕ್ಷನ್ ತೆಗೆದುಕೊಳ್ಳಲೇಬೇಕು.[೨]
- ಗಾಯವಾಗಿದ್ದು ಅದರಲ್ಲಿ ಮಣ್ಣು, ಧೂಳಿದ್ದರೆ, ಕೂಡಲೆ ಗಾಯವನ್ನುಸೋಪಿನಿಂದ ತೊಳೆದು ಸ್ವಚ್ಛಗೊಳಿಸಿ, ಟಿಟಿ ಇಂಜೆಕ್ಷನ್ ತೆಗೆದುಕೊಳ್ಳಬೇಕು.[೩]
ಉಲ್ಲೇಖ
<Reference />
🔥 Top keywords: ಶ್ರೀ ರಾಮ ನವಮಿಕನ್ನಡದ್ವಾರಕೀಶ್ಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಮುಖ್ಯ ಪುಟಕುವೆಂಪುರಾಮಬಿ. ಆರ್. ಅಂಬೇಡ್ಕರ್ಕನ್ನಡ ಅಕ್ಷರಮಾಲೆಸಂವತ್ಸರಗಳುಸಹಾಯ:ಲಿಪ್ಯಂತರಗಾದೆವಿಶೇಷ:Searchರಾಮಾಯಣಕನ್ನಡ ಗುಣಿತಾಕ್ಷರಗಳುದ.ರಾ.ಬೇಂದ್ರೆಬಸವೇಶ್ವರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಕರ್ನಾಟಕರಾಮ ಮಂದಿರ, ಅಯೋಧ್ಯೆಭಾರತದ ಸಂವಿಧಾನಶಿವರಾಮ ಕಾರಂತತಂತಿವಾದ್ಯಪಂಪಕನಕದಾಸರುಶಕುನಕರ್ನಾಟಕದ ಜಿಲ್ಲೆಗಳುಅಕ್ಕಮಹಾದೇವಿಕರ್ನಾಟಕ ಸಂಗೀತಕರ್ನಾಟಕದ ಇತಿಹಾಸಕರ್ನಾಟಕದ ಏಕೀಕರಣಪೂರ್ಣಚಂದ್ರ ತೇಜಸ್ವಿಭಾರತದಲ್ಲಿನ ಜಾತಿ ಪದ್ದತಿಜವಾಹರಲಾಲ್ ನೆಹರುವಚನಕಾರರ ಅಂಕಿತ ನಾಮಗಳುಕನ್ನಡ ಸಾಹಿತ್ಯಮಹಾತ್ಮ ಗಾಂಧಿಸಿದ್ದಲಿಂಗಯ್ಯ (ಕವಿ)ಭಾರತೀಯ ಸಂಸ್ಕೃತಿ